Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

- Advertisement -
- Advertisement -

ಕೆಲವು ಊರುಗಳಿಗೆ ಅವುಗಳದ್ದೇ ಆದ ವಿಶಿಷ್ಟ ಸಾಂಸ್ಕೃತಿಕ ಚರಿತ್ರೆಯಿರುತ್ತದೆ. ಆದರೆ ಅದು ಯಾವುದೊ ಒಂದು ಘಟನೆಯಿಂದ ಮಸಿಬಿದ್ದ ಚಿತ್ರದಂತಾಗುವುದು. ಭಟ್ಕಳ, ಮಂಗಳೂರು, ಶಿವಮೊಗ್ಗ, ಸೊಂಡೂರು, ಬಳ್ಳಾರಿ ಇಂತಹ ನತದೃಷ್ಟ ಊರುಗಳು. ಕನ್ನಡದ ಮೊದಲ ಪತ್ರಿಕೆ ಶುರುವಾದ, ಸಂಗನಕಲ್ ಎಂಬ ಪ್ರಾಗೈತಿಹಾಸಿಕ ಸ್ಥಳವಿರುವ, ಪ್ರಾಚೀನ ದೇವತೆ ದುರ್ಗಮ್ಮನಿರುವ, ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ರಂಜಾನ್ ಸಾಬ್ ಅವರ ಬಳ್ಳಾರಿ ಜಿಲ್ಲೆಯ ಚರಿತ್ರೆಯು ಅಕ್ರಮ ಗಣಿಗಾರಿಕೆ ಮತ್ತು ದುಂಡಾವರ್ತಿ ರಾಜಕಾರಣದಿಂದ ಬದಿಗೆ ಸರಿಯಿತು. ಬಯಲುಸೀಮೆಯ ಅದ್ಭುತ ಅರಣ್ಯವಿರುವ, ಅನೇಕ ಭೂಹೋರಾಟಗಳು ನಡೆದಿರುವ, ಪ್ರಾಚೀನ ಸ್ಕಂದಪಂಥದ ಕುಮಾರಸ್ವಾಮಿ ಗುಡಿಯಿರುವ, ಭೂಪತಿಯಂತಹ ಆದರ್ಶವಾದಿ ರಾಜಕಾರಣಿಯಿದ್ದ ಸೊಂಡೂರಿಗೂ ಹೀಗೇ ಆಗಿದೆ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಕಂಡು ಗಾಂಧೀಜಿ, ದಕ್ಷಿಣದ ಕಾಶ್ಮೀರ ಎಂದು ಕರೆದಿದ್ದರು. ರಾಜರು ಆಳ್ವಿಕೆ ಮಾಡುತ್ತಿದ್ದ ಮತ್ತು ರಾಜಮನೆತನದವರು ಶಾಸಕರಾಗಿದ್ದ ಸೊಂಡೂರಿಗೆ ’ಕೆಳಜಾತಿ’ಗೆ ಸೇರಿದ ಕಮ್ಯುನಿಸ್ಟ್ ಚಳವಳಿಯಲ್ಲಿ ಬೆಳೆದ ತರುಣನೊಬ್ಬರು ಶಾಸಕರಾಗಿದ್ದರು. ಅವರೇ ಭೂಪತಿ. ದುರದೃಷ್ಟವಶಾತ್ ಭೂಪತಿಯವರು ಎಳೆಯವಯಸ್ಸಿನಲ್ಲೇ ತೀರಿಕೊಂಡರು. ಹೀಗೆ ತೀರಿಕೊಂಡ ಮತ್ತೊಬ್ಬ ತರುಣ ರಾಜಕಾರಣಿ ಚಿಕ್ಕಮಗಳೂರಿನ ಸುಂದರೇಶ್.

ಈ ಪುಸ್ತಕವು ಭೂಪತಿಯವರು 1984-90ರವರೆಗೆ ಐದು ವರ್ಷಕಾಲ ಸಿಪಿಐ ಪಕ್ಷದಿಂದ ಶಾಸಕರಾಗಿದ್ದ ಕಾಲದಲ್ಲಿ ಸದನದಲ್ಲಿ ಮಾಡಿದ ಚರ್ಚೆ, ಎತ್ತಿದ ಪ್ರಶ್ನೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹೊಸ ಶಾಸಕರು ಸದನದಲ್ಲಿ ಹೆಚ್ಚು ಮಾತಾಡುವುದಿಲ್ಲ. ಅವರಿಗೆ ಮಾತಾಡುವ ಅವಕಾಶಗಳೂ ಸಿಗುವುದಿಲ್ಲ. ಆದರೆ ತಮ್ಮ ಒಂದು ಅವಧಿಯಲ್ಲಿ ಭೂಪತಿಯವರು ಮಾಡಿರುವ ಚರ್ಚೆಗಳನ್ನು ಕಂಡರೆ ಸೋಜಿಗವಾಗುತ್ತದೆ. ಗ್ರಾಮೀಣ ವಿದ್ಯುದೀಕರಣ, ಕುಡಿವ ನೀರು, ನೀರಾವರಿ, ಗುತ್ತಿಗೆ ಕಾರ್ಮಿಕರು, ಕರಡಿ ಹಾವಳಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ದರೋಡೆಕೋರರ ಸಮಸ್ಯೆ, ಜನತಾಮನೆ, ಆಸ್ಪತ್ರೆ-ಹಾಸ್ಟೆಲು ಸಮಸ್ಯೆ, ರಸ್ತೆ, ಗುತ್ತಿಗೆ ನೌಕರರು, ಬರಗಾಲದ ಕಾಮಗಾರಿ, ಪಠ್ಯಪುಸ್ತಕ, ಸ್ಮಶಾನದ ಭೂಮಿ, ಕಾಡಿನ ಒತ್ತುವರಿ, ವರದಕ್ಷಿಣೆ ಕೊಲೆ, ಪೋಲೀಸು ದೌರ್ಜನ್ಯ-ಹೀಗೆ ಹಲವಾರು ವಿಷಯಗಳನ್ನು ಕುರಿತು ಆ ಚರ್ಚೆಗಳಿವೆ. ಈ ಪ್ರಶ್ನೆ ಮತ್ತು ಚರ್ಚೆಗಳಲ್ಲಿ ಮೂರು ಆಯಾಮಗಳಿವೆ. 1. ಕ್ಷೇತ್ರದ ಕುಂದುಕೊರತೆಗಳಿಗೆ ಸಂಬಂಧಿಸಿ. 2. ಇಡೀ ಕರ್ನಾಟಕದ ಶಿಕ್ಷಣ ನೀರಾವರಿ ಮತ್ತು ಅಸ್ಪೃಶ್ಯತೆ ಸಮಸ್ಯೆ ಕುರಿತು. 3. ದೇಶದ ಸಮಸ್ಯೆಗಳನ್ನು ಕುರಿತು. ಈ ಮೂರೂ ಸ್ತರಗಳಲ್ಲಿ ಭೂಪತಿಯವರ ವಾದ ಮತ್ತು ಕಾಳಜಿ ಅಸಹಾಯಕರ ಮತ್ತು ತಬ್ಬಲಿಗಳ ಪರವಾಗಿದೆ. ಗಂಗಾವತಿಯಲ್ಲಿ ಪೋಲೀಸ್ ಠಾಣೆಯಲ್ಲಿ ಪೆಟ್ಟು ತಿಂದು ಮಡಿದ ಒಬ್ಬ ವ್ಯಕ್ತಿಯ ಕುಟುಂಬದ ಬಗ್ಗೆ ಅವರು ಹೃದಯ ಕರಗುವಂತೆ ಮಾತಾಡಿದ್ದಾರೆ. ಬಂಡಾಯ ಚಳವಳಿಗೆ ಬಳಕೆಯಾದ ಘೋಷವಾಕ್ಯವನ್ನು ತುಸು ಬದಲಿಸಿ ಹೇಳುವುದಾದರೆ, ಭೂಪತಿ ಜನತೆಯ ನೋವಿಗೆ ಮಿಡಿವ ಪ್ರಾಣಮಿತ್ರನ ಹಾಗೆ ಸದನದಲ್ಲಿ ಮಾತುಕತೆ ಮಾಡಿದ್ದಾರೆ. ಇಲ್ಲಿ ತಾಯ್ತನದ ಕಾಳಜಿಯಿದೆ. ಅಧ್ಯಯನವಿದೆ. ತಾತ್ವಿಕ ಸ್ಪಷ್ಟತೆಯಿದೆ. ನಿಷ್ಠುರತೆಯಿದೆ. ಅವರ ಎದುರು ಮಂತ್ರಿಗಳಾಗಿದ್ದವರು ರಾಮಕೃಷ್ಣ ಹೆಗಡೆ, ದೇವೇಗೌಡ ಮೊದಲಾದವರು.

ಆದರೆ ಈ ಪುಸ್ತಕದಲ್ಲಿರುವ ಚರ್ಚೆಗಳು ಶಾಸಕರೊಬ್ಬರ ಸಾರ್ವಜನಿಕ ಕಾಳಜಿಯನ್ನು ಮಾತ್ರ ಸೂಚಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜನಪರ ರಾಜಕಾರಣದಿಂದ ಉಳ್ಳವರ ಹಿತಾಸಕ್ತಿ ರಕ್ಷಿಸುವತ್ತ ಪ್ರಭುತ್ವಗಳ ಸ್ವರೂಪಕ್ಕೆ ಬದಲಾಗುತ್ತಿರುವುದನ್ನು ಸೂಚಿಸುತ್ತವೆ. ಭೂಪತಿಯವರು ಐದು ಕೋಟಿ ಸಾರ್ವಜನಿಕ ಹಣವನ್ನು ಹೂಡಿದ ಖಾಸಗಿ ಕಂಪನಿಯು ಉತ್ಪಾದನೆ ಮಾಡದೆ ಕೆಲಸ ನಿಲ್ಲಿಸಿದ್ದರ ಬಗ್ಗೆ ಅಪಾರ ಸಿಟ್ಟಿನಿಂದ ಮಾತಾಡುತ್ತಾರೆ. ಇದೇನು ದೊಡ್ಡ ಸಂಗತಿಯಲ್ಲ ಎಂದು ಜೆ.ಎಚ್. ಪಟೇಲರು ಉಡಾಫೆಯಿಂದ ಉತ್ತರಿಸುತ್ತಾರೆ. ಈ ಪುಸ್ತಕದಲ್ಲಿರುವ ಮಾತುಕತೆಗಳು ಕಳೆದುಹೋದ ಸಮಾಜವಾದಿ ದಿನಗಳ ಸುವರ್ಣಯುಗದ ಅಧ್ಯಾಯವೊಂದರಂತೆ ಭಾಸವಾಗುತ್ತವೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ಮಾದರಿಗಳಿವೆ. ಅ. ಕ್ಯಾಪಿಟೇಶನ್, ಲಿಕ್ಕರ್, ರಿಯಲ್ ಎಸ್ಟೇಟು, ಗಣಿಗಾರಿಕೆ, ಮೊದಲಾದ ಹಣದ ವಹಿವಾಟಿನ ನೆಲೆಯಿಂದ ರೂಪುಗೊಂಡ ರಾಜಕಾರಣ; ಆ. ದ್ವೇಷದ ಸಿದ್ಧಾಂತ, ಗಲಭೆ, ಕೊಲೆ, ರಕ್ತ, ವಿವಾದಗಳ ನೆಲೆಯ ರಾಜಕಾರಣ; ಇ. ಫ್ಯೂಡಲ್ ಪಕ್ಷಗಳಲ್ಲಿದ್ದರೂ, ತಮ್ಮ ಮುತ್ಸದ್ದಿತನ ಮತ್ತು ಮುಂಗಾಣ್ಕೆಯಿಂದ ನಾಡನ್ನು ಕಟ್ಟುವ ರಾಜಕಾರಣ- ದೇವರಾಜ ಅರಸು, ಬಸವಲಿಂಗಪ್ಪ, ನಜೀರ್‌ಸಾಬ್, ಗೋವಿಂದೇಗೌಡ, ಇಂತಹವರು; ಈ ಜನಪರ ಚಳವಳಿಗಳಿಂದ ಮೂಡಿದ ರಾಜಕಾರಣ- ವಾಟಾಳ್ ನಾಗರಾಜ್, ಶಾಂತವೇರಿ ಗೋಪಾಲಗೌಡ, ನಂಜುಂಡಸ್ವಾಮಿ, ಭೂಪತಿ ಮೊದಲಾದವರು.

ಕನ್ನಡದಲ್ಲಿ ಸಿದ್ಧಲಿಂಗಯ್ಯನವರನ್ನು ಒಳಗೊಂಡಂತೆ ಅನೇಕ ಶಾಸಕರ ಸದನದ ಮಾತುಕತೆಯ ಕೃತಿಗಳು ಬಂದಿವೆ. ಅವುಗಳ ಸಾಲಿನಲ್ಲಿ ಭೂಪತಿಯವರದೂ ಒಂದು. ಕನ್ನಡ ಸಾಹಿತ್ಯದ ವಿಶಾಲ ಪರಿಕಲ್ಪನೆಯಲ್ಲಿ ಸದನದ ಸಾಹಿತ್ಯವೂ ಒಂದು. ಈ ದಾಖಲು ಸಾಹಿತ್ಯವು ಬರೆದಿದ್ದಲ್ಲ. ಮಾತಿನ ಬರೆಹರೂಪ. ಇದನ್ನು ಕರ್ತೃಗಳು ಸಾಮಾನ್ಯವಾಗಿ ರಾಜಕಾರಣಿಗಳು. ಜನಪ್ರತಿನಿಧಿಗಳಾಗಿ ತಮ್ಮ ಕ್ಷೇತ್ರದ ನಾಡಿನ ಸಮಸ್ಯೆಗಳನ್ನು ಚರ್ಚಿಸುತ್ತ ಆಡಿದ ಮಾತುಗಳು. ಇವು ಮೂಲತಃ ರಾಜಕೀಯ ಆರ್ಥಿಕ ಸಾಮಾಜಿಕ ಚರ್ಚೆಯನ್ನು ಒಳಗೊಂಡಿರುವ ಈ ಕೃತಿಗಳಲ್ಲಿ ಸಾಹಿತ್ಯ ಕಲೆಗೆ ಸಂಬಂಧಿಸಿದ್ದು ಕಡಿಮೆ. ಜನರ ನೋವು ನಲಿವಿಗೆ ಸಂಬಂಧಿಸಿದ್ದೇ ಹೆಚ್ಚು. ಆದರೂ ಇವು ಕತೆ ಕಾದಂಬರಿಯಂತೆ ಓದಿಸಿಕೊಂಡು ಹೋಗಬಲ್ಲವು. ಇದು ಯಾರು ಸದನದಲ್ಲಿ ಮಾತಾಡಿದ್ದಾರೆ ಎಂಬುದರ ಮೇಲೆ ಹೋಗುತ್ತದೆ.

ಇಂತಹ ದಾಖಲು ಸಾಹಿತ್ಯದ ಕೃತಿಯನ್ನು ಮುಕುಂದರಾಜು ಮತ್ತು ಅವರ ಜೀವನಸಂಗಾತಿ ಪದ್ಮಾ ಚಿನ್ಮಯಿ ಅವರು ಸೇರಿ ಸಂಪಾದಿಸಿದ್ದಾರೆ. ಭೂಪತಿ ಟ್ರಸ್ಟ್ ಪ್ರಕಟಸಿದೆ. ಕನ್ನಡದ ರಾಜಕೀಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರವಲ್ಲ, ಕರ್ನಾಟಕದ ರಾಜಕಾರಣ, ಆರ್ಥಿಕತೆ, ಸಾಮಾಜಿಕತೆ ಬಗ್ಗೆ ಆಸ್ಥೆಯುಳ್ಳವರೆಲ್ಲರೂ ಓದುವ ಹಾಗೆ ಈ ಕೃತಿ ರೂಪುಗೊಂಡಿದೆ. ಸದ್ಯ ಕರ್ನಾಟಕದ ಶಾಸಕರ ಮನೆಗಳಲ್ಲಿ ಕಂತೆ ಹಣ, ಅಶ್ಲೀಲ ಸಿಡಿಗಳು, ದ್ವೇಷಸಾಧನೆಯ ಆಯುಧಗಳು ಸಿಗುತ್ತಿರುವ ವರದಿ ಬರುತ್ತಿವೆ. ಶಾಸಕಾಂಗ ಅಧಃಪತನಕ್ಕೆ ಇಳಿದುಹೋಗಿದೆ. ಇಂತಹ ಹೊತ್ತಲ್ಲಿ ಆದರ್ಶವಾದಿ ರಾಜಕಾರಣಿಯೊಬ್ಬರ ಜನಪರ ಕಾಳಜಿಯ ಮಾತುಕತೆಯ ಪುಸ್ತಕವು ಪ್ರಕಟವಾಗಿದೆ. ಇದನ್ನು ವೈರುಧ್ಯವೆನ್ನಬೇಕೊ ಅಗತ್ಯವೆನ್ನಬೇಕೊ ತಿಳಿಯದಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...