Homeಎಲೆಮರೆಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ

- Advertisement -
- Advertisement -

ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅದರ ಅರ್ಥ ವ್ಯವಸ್ಥಾದ ಬಗ್ಗೆ ಮಾತಾಡೋ ಮುಂದ ಅದು ಹಣದುಬ್ಬರ ಅಂತ ಅರ್ಥ.

ಅಂದರ ಏನು? ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.

ಖರೇ ಹೇಳಬೇಕಂದರ ಆ ಕಾಲ ಸೋವಿ ಕಾಲ ಅಲ್ಲ. ಅದು ಗಟ್ಟಿ ಕಾಲ. ಈಗಿನ ಕಾಲನೇ ಸೋವಿ.

ಈ ವಾರದ ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಭಾರತದ ಉಬ್ಬರದ ಪ್ರಮಾಣ 7.35 ಆಗೇದಂತ. ಹಂಗಂದರ ಏನು?

ಅಂದರ- ಹಿಂದಿನ ಯಾವುದೋ ಒಂದು ವರ್ಷವನ್ನು ಮೂಲ ಅಳತೆಯ ವರ್ಷ ಅಂತ ಹಿಡಕೊಂಡರ ಆ ಲೆಕ್ಕದ ಮ್ಯಾಲೆ ಈ ವರ್ಷ ಕೆಲವು ನಿರ್ದಿಷ್ಟ ಸಾಮಾನುಗಳ ಬೆಲೆ ಎಷ್ಟು ಹೆಚ್ಚಾಗೇದ ಅಂತ.

ಪಂತ ಪ್ರಧಾನ ನರೇಂದ್ರ ಮೋದಿ ಅವರ ಸರಕಾರ ಬರೋ ಮುಂಚೆ ಇದು 1999 ಆಗಿತ್ತು. ಈಗ ಅದು ಬದಲಾಗಿ ಬದಲಾಗಿ ಈಗ 2017- 18 ಆಗೇದ. ಅಂದರ ಒಂದು ವರ್ಷದಾಗ ವಸ್ತುಗಳ ಬೆಲೆ 7.35 ಶೇಕಡಾ ಆಗೇದ ಅಂತ ಅರ್ಥ.

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ.

ಹಂಗಾರ 10 ವರ್ಷದ ಉಬ್ಬರದ ಪ್ರಮಾಣ ಎಷ್ಟು ಅಂತ ನೀವು ಕೇಳಿದರ ಶಾಕ್ ಆಗ್ತೀರಿ. ಅದು ಸುಮಾರು 105 ಶೇ. ಅಂದರ ಹತ್ತು ವರ್ಷದ ಹಿಂದ ನೂರು ರೂಪಾಯಿಗೆ ಇದ್ದ ಬೆಲೆ ಈಗ 205 ರೂಪಾಯಿಗೆ.

ಹಂಗಂತ ನಿರ್ಮಲಾ ಸೀತಾರಾಮನ್ ಅವರ ಕಾಲಕ್ಕೆ ಮಾತ್ರ ಆಪತ್ಕಾಲ ಅಂತ ಅಲ್ಲ. ಹಿಂದಿನವರೂ ಹಿಂಗ ಇದ್ದರು. ನಮ್ಮ ದೇಶದಾಗ ಶೇಕಡಾ 10 ಕ್ಕಿಂತ ಹೆಚ್ಚು ಉಬ್ಬರ ಇದ್ದ ವರ್ಷಗಳು- 1983, 1990, 1996, 1998, 2009 ಹಾಗೂ 2012. ಮತ್ತು ಅತ್ಯಂತ ಹೆಚ್ಚು ಉಬ್ಬರ ಇದ್ದ ವರ್ಷಗಳು 1974 – (25 ಶೇ). 1973 -(21. ಶೇ).

ಈ ವರ್ಷ ಅಮೆರಿಕೆ ಉಬ್ಬರ ಶೇ. 2.1 ಇದ್ದರ ಚೈನಾದ್ದು 2 ಅದ. ಜಪಾನಿನದು 0.9 ಅದ. ಅತ್ಯಂತ ಹೆಚ್ಚು ಇರೋದು ವಿಶ್ವ ಸುಂದರಿಗಳ ನಾಡಾದ ವೆನೆಜೂವೆಲಾದಾಗ ಶೇ. 255 ಅದ. ನಂತರ ಸ್ಥಾನ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದ ದೇಶಗಳದು. ನಾವು ಸದ್ಯ ಈ ಬಡ ದೇಶಗಳ ಜೊತೆ ಸ್ಪರ್ಧೆ ಮಾಡಲಿಕ್ಕೆ ಹತ್ತೇವಿ.

ಇದರ ದುಷ್ಪರಿಣಾಮ ಏನಪಾ ಅಂದರ ರೂಪಾಯಿಯ ಬೆಲೆ ಕಮ್ಮಿ ಆದಂತೆಲ್ಲಾ ಜನಸಾಮಾನ್ಯರ ಖರೀದಿಸುವ ಶಕ್ತಿ ಕಮ್ಮಿ ಆಗತದ. ಇದು ದೇಶದ ಆರ್ಥಿಕ ವ್ಯವಸ್ಥೆಯ ಮ್ಯಾಲೆ ಕೆಟ್ಟ ಪರಿಣಾಮ ಬೀರತದ.

ಅದು ಹೆಂಗಂತ ಹೇಳತೇನಿ. ಇಡೀ ಜಗತ್ತಿನ್ಯಾಗ ಮೂರು ರೀತಿ ಜನ ಇರತಾರ. ಉತ್ಪಾದಕರು, ಮಾರಾಟಗಾರರು ಹಾಗೂ ಬಳಕೆದಾರರು. ಇನ್ನು ಉತ್ಪಾದಕರು ಅಂದರ ರೈತರ ಹಂಗ ಆಹಾರ ಉತ್ಪಾದಕರು ಇರಬಹುದು, ಯಂತ್ರ ತಯಾರಿಸೋ ಉದ್ದಿಮೆದಾರರು ಇರಬಹುದು. ಇವೆರಡೂ ಇರದ ಸೇವೆ ನೀಡುವವರು ಇರಬಹುದು. ನಮ್ಮ ಮನಿಗೆ ಬರೋ ನೀರು ಸರಕು ಅಂತ ಆದರ, ಆ ನೀರು ಬಿಡೋ ನೀರುಗಂಟಿ ಸೇವೆ ಪೂರೈಕೆದಾರ. ಇವರ ಪ್ರಯತ್ನಕ್ಕ ನಾವು ಹಣದೊಳಗ ಬೆಲೆ ಕಟ್ಟತೇವಿ. ಅದು ಅವರ ವರಮಾನ. ಅದನ್ನು ಅವರು ತಮಗ ಬೇಕಾದ್ದನ್ನ ತೊಗೊಳ್ಳಲಿಕ್ಕೆ ಬಳಸಿಕೊಳ್ಳತಾರ.

ಇನ್ನು ವ್ಯಾಪಾರಸ್ಥರು ಏನನ್ನೂ ಉತ್ಪಾದಿಸದಿದ್ದರೂ ಎಲ್ಲಾನೂ ಮಾರಾಟ ಮಾಡತಾರ. ಅವರಿಗೆ ತಮ್ಮ ಬಂಡವಾಳ ಬಿಟ್ಟು ಮಿಕ್ಕೊ ಹಣನ ಲಾಭ. ಅದನ್ನು ಬಳಸಿ ಅವರು ಸರಕನ್ನೋ, ಸೇವೆಯನ್ನೋ ಖರೀದಿ ಮಾಡತಾರ. ಕೆಲವರ ಸೇವೆ ಸೋವಿಯಾಗಿ, ಇನ್ನು ಕೆಲವರದು ತುಟ್ಟಿಯಾಗಿ ಇರತದ. ಇದ ಸಮಸ್ಯೆ.

ಹಂಗಂತ ಇದು ಉಳ್ಳವರಿಗೆ ಒಳ್ಳೆಯದು. ಯಾಕಂದರ ಅವರ ಹತ್ತರ ಆಸ್ತಿ ಇರತದ. ಉಳ್ಳವರಿಗೆ ಇರಂಗಿಲ್ಲ. ಅವರ ಹತ್ತಿರ ಇರೋ ರೂಪಾಯಿಯ ಬೆಲೆ ಸವಿಸಿಗೋತ ಹೋಗತದ. ಆಸ್ತಿ ಸವಿಯಂಗಿಲ್ಲ. ಅದು ಯಾವಾಗಲೂ ಸವಿ -ಸವಿಯಾಗೇ ಇರತದ.

ಉಬ್ಬರದ ಕಾರಣಗಳು ಹಲವು ಅದರಾಗ ಬೇಡಿಕೆ ಎಳೆಯುವಿಕೆ, ಬೆಲೆ ತಳ್ಳುವಿಕೆ ಹಾಗೂ ಸಾಂಸ್ಥಿಕ ಅಂತ ಮೂರು ಪ್ರಮುಖ. ಆ ಅರೇಬಿಯಾದ ಮಹಾರಾಜರೆಲ್ಲ ವರ್ಷಕ್ಕೊಮ್ಮೆ ಸಭೆ ಸೇರಿ ತಮ್ಮ ಪೆಟ್ರೊಲ್ – ಡೀಸಲ್ ಉತ್ಪನ್ನ ಕಮ್ಮಿ ಮಾಡಿ ಅದರ ಬೆಲೆ ಜಾಸ್ತಿ ಮಾಡತಾರಲ್ಲ, ಅದು ಬೇಡಿಕೆ ಎಳೆಯುವಿಕೆ ಉದಾಹರಣೆ. ಇನ್ನೊಂದು ಉದಾಹರಣೆ ಅಂದರ ಇಂಟರ ನೆಟ್ಟಿನ್ಯಾಗ ಹೊಸಾ ಮೊಬೈಲ್ ಫೋನ್ ಮಾರಾಟಕ್ಕ ಬಂದಾಗ ಹತ್ತು ಸೆಕೆಂಡಿನ್ಯಾಗ ಖಾಲಿ ಆಗಿ ಮುಂದಿನ ಬಾರಿ ಅದರ ಬೆಲೆ ಹೆಚ್ಚಾಗತದಲ್ಲಾ ಅದು.

ಬೆಲೆ ತಳ್ಳುವಿಕೆ ಅಂದರ ಯಾವುದೇ ವಸ್ತು ಅಥವಾ ಸೇವೆಯ ಬೇಡಿಕೆ ಕಮ್ಮಿ ಇದ್ದರೂ ಬೆಲೆ ಯಾವುದೇ ಕಾರಣಕ್ಕೆ ಹೆಚ್ಚಾಗುವುದು. ಕುಶಲಿ ವೈದ್ಯರೊಬ್ಬರು ಹೃದಯ ಚಿಕಿತ್ಸೆಗೆ ಜಾಸ್ತಿ ಹಣ ತೊಗೊಳ್ಳೋದು, ಯಾರೂ ಕೊಳ್ಳದೇ ಇದ್ದರೂ ಪ್ಲಾಟಿನಂ ಉಂಗುರದ ಬೆಲೆ ಹೆಚ್ಚಾಗೋದು, ಇದಕ್ಕೆ ಉದಾಹರಣೆ.

ಇನ್ನು ಸಾಂಸ್ಥಿಕ ಅಂದರ, ಒಂದು ದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ಕುಶಲ ಕೂಲಿ ಹಾಗೂ ಕೌಶಲ್ಯ ರಹಿತ ಕೂಲಿ ಹೆಚ್ಚಾಗುವುದು. ಇದನ್ನು ಅರ್ಥ ಶಾಸ್ತ್ರಜ್ಞರು ಆರೋಗ್ಯವಂತ ಉಬ್ಬರ ಅಂತ ಕರೀತಾರ. ಉದಾಹರಣೆಗೆ ಭಾರತದಾಗ ಮನೆ ಕೆಲಸ ಮಾಡೋರಿಗೆ ತಿಂಗಳಿಗೆ ಐನೂರೋ , ಸಾವಿರನೋ ಕೊಟ್ಟರೆ ಅದೇ ಕೆಲಸಕ್ಕೆ ಅಮೆರಿಕಾದಾಗ ತಾಸಿಗೆ ಏಳು ನೂರು ರೂಪಾಯಿ ಕೊಡೋದು. ಉಳಿದ ಎರಡೂ ಥರದ ಉಬ್ಬರಗಳು ಆರೋಗ್ಯಕರ ಅಲ್ಲ.

ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುವ ಉಬ್ಬರದ ಪ್ರಮಾಣ ಶೇ. 2- 4. ಇದರಿಂದ ಜನ ಉಳಿಕೆ ಮಾಡೋಕಿಂತಾ ಖರೀದಿ ಮಾಡಲಿಕ್ಕೆ ಆಸಕ್ತಿ ತೋರಸತಾರ. ಆದರ ಭಾರತದ ಅಭಿವೃದ್ಧಿ ದರ ಶೇ. 5 ಇದ್ದು, ಉಬ್ಬರ 7.35 ಇದ್ದರ ಅದರ ಅರ್ಥ ದೇಶ ಹಿಮ್ಮುಖವಾಗಿ ನಡದದ ಅಂತ. ಇದು ಒಳ್ಳೆಯದಲ್ಲ ಅಂತ ಕೆಲವರು ಹೇಳತಾರ.

ಒಂದು ದೇಶದ ಕೇಂದ್ರ ಬ್ಯಾಂಕು ಸರಕಾರ ಇ‌ಷ್ಟೇ ನೋಟು ಪ್ರಿಂಟು ಮಾಡಬೇಕು. ಇದಕ್ಕಿಂತ ಹೆಚ್ಚು ಮಾಡಿದರ ಅದು ಉಬ್ಬರಕ್ಕ ಕಾರಣವಾಗಿ ರೂಪಾಯಿಯ ಬೆಲೆ ಕಮ್ಮಿ ಆಗತದ ಅಂತ ಸಲಹೆ ಕೊಡತದ. ಬಡವರ ಖರೀದಿ ಶಕ್ತಿ ಹೆಚ್ಚುವಂತಹಾ ಇನ್ನೂ ಕೆಲವು ಕ್ರಮಗಳನ್ನೂ ಕೈಕೊಳ್ಳಬೇಕು.

ಆದರ ಈಗ ನಮ್ಮ ದೇಶದಾಗ ಸರಕಾರಕ್ಕ ಸಲಹೆ ಕೊಡೋವಷ್ಟು ಧೈರ್ಯವಂತರು ಯಾರಿಲ್ಲ. ಅವರು ಕೊಡೋ ಸ್ವಲ್ಪ ಸಲಹೆಯನ್ನೂ ಕೇಳೋ ಕಿವಿಗಳೂ ಇದ್ದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...