Homeಮುಖಪುಟಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

- Advertisement -
- Advertisement -

ಕೊರೊನಾ ವಿರುದ್ದದ ಹೋರಾಟದಲ್ಲಿ ಕೇರಳ ಎಂಬ ಭಾರತದ ಪುಟ್ಟ ರಾಜ್ಯ ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿ ನಿಂತಿಲ್ಲ. ಈ ಸೋಂಕಿನ ವಿರುದ್ದ ಕೇರಳ ನಡೆಸುತ್ತಿರುವ ಮಾದರಿಯೋಗ್ಯ ಹೋರಾಟದ ವರದಿಗಳು ಬಿಬಿಸಿಯಿಂದ ಹಿಡಿದು ನೈಜೀರಿಯಾ ಡೈಲಿಯವರೆಗಿನ ವಿಶ್ವದಾದ್ಯಂತ ಸುಮಾರು 30 ಕ್ಕಿಂತಲೂ ಹೆಚ್ಚು ಪತ್ರಿಕೆಗಳಲ್ಲಿ ವಿಶೇಷ ವರದಿಯಾಗಿವೆ.

ಭಾರತದ ಮೊದಲ ಕೊರೊನಾ ವೈರಸ್  ಪ್ರಕರಣದಲ್ಲಿ ಕೇರಳದಲ್ಲಿ ವರದಿಯಾದಾಗ ಬಿಬಿಸಿ ಮತ್ತು ಇತರ ಕೆಲವು ಮುಖ್ಯ ಸುದ್ದಿ ವಾಹಿನಿಗಳು ಸುದ್ದಿ ಮಾಡಿದ್ದವು. ಆದರೆ ಅಲ್ಲಿನ ಮಾದರಿಯೋಗ್ಯ ಆರೋಗ್ಯ ವ್ಯವಸ್ಥೆ ಸೋಂಕು ಹರಡುವುದನ್ನು ತಡೆಯಿತು. ನಂತರ ದೇಶದಾದ್ಯಂತದ ಇತರ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದ್ದಂತೆ, ಕೇರಳವು ಸೋಂಕಿನ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಕಾರ್ಯವಿಧಾನದಲ್ಲಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಂಡ ಪರಿಣಾಮ ಸೋಂಕು ರಾಜ್ಯದಲ್ಲಿ ಹತೋಟಿಗೆ ಬಂದಿದೆ. ಭಾರತಕ್ಕೆ ಕೊರೊನಾ ಕಾಲಿಟ್ಟ ನಂತರ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ಕೇರಳದಲ್ಲಿ ಪ್ರಸ್ತುತ ಸಕ್ರಿಯ ಸೋಂಕು ಪ್ರಕರಣಗಳು ಕೇವಲ 32.

ದೇಶ ಹಾಗೂ ವಿಶ್ವದಾದ್ಯಂತದ  ಕೊರೊನಾ ಹರಡಲು ಪ್ರಾರಂಭಿಸಿದಾಗ, ಜಗತ್ತಿನಾದ್ಯಂತ ಮಾಧ್ಯಮಗಳ ಕಣ್ಣುಗಳು ಕೇರಳದತ್ತ ನೆಟ್ಟಿತ್ತು. ಭಾರತದಲ್ಲೇ ಅತೀ ಹೆಚ್ಚು ಅನಿವಾಸಿಗಳಿರುವ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಕೊರೊನಾ ಸಾವಿನ ಪ್ರಕರಣಗಳು ನಾಲ್ಕು. ಕೊರೊನಾ ವಿರುದ್ದದ ಕೇರಳ ಮಾದರಿಯ ಹೋರಾಟವನ್ನು ವಿಶ್ವದ ಮುಂದುವರೆದ ದೇಶಗಳಾದ ಬ್ರಿಟನ್, ಅಮೆರಿಕಾ, ಕೆನಡಾ, ಇಟಲಿ, ಫ್ರಾನ್ಸ್ ಮತ್ತು ಅರಬ್ ರಾಷ್ಟ್ರಗಳ ಹಲವಾರು ಪತ್ರಿಕೆಗಳು ವರದಿಗಳನ್ನು ಮಾಡಿವೆ. ಅವುಗಳಲ್ಲಿ ಕೆಲವು ಇಲ್ಲಿವೆ…

ಬಿಬಿಸಿ (ಲಂಡನ್)

ಕೇರಳ ತನ್ನ ಕೊರೊನಾ ರೇಖೆಯನ್ನು ಹೇಗೆ ಚಪ್ಪಟೆಗೊಳಿಸಿದೆ ಎಂಬ ಬಗ್ಗೆ ಬಿಬಿಸಿ ವರದಿ ಸಿದ್ಧಪಡಿಸಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ. “ವರ್ಕ್ ಲೈಕ್ ಕೇರಳ” ಎಂಬ ಶೀರ್ಷಿಕೆಯ ತನ್ನ ದೂರದರ್ಶನ ಕಾರ್ಯಕ್ರಮದಲ್ಲಿ, ನಿಫಾ ಸೋಂಕಿನಿಂದ ಹಿಡಿದು ಕೊರೊನಾ ಮೊದಲನೇ ಪ್ರಕರಣ ವರದಿ ಮಾಡಿದವರೆಗಿನ ಕೇರಳದ ಹೋರಾಟವನ್ನು ಬಿಬಿಸಿ ತೋರಿಸಿತು.

ಟ್ರಿಬ್ಯೂನ್ ಮ್ಯಾಗಝಿನ್

ಗಾರ್ಡಿಯನ್ ತನ್ನ ಸುದ್ದಿಯಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರವು ಕೊರೊನಾ ವೈರಸ್ ತಗ್ಗಿಸುವ ಗುರಿಗಳನ್ನು ಹೇಗೆ ಸಾಧಿಸಿದೆ ಎಂಬುದನ್ನು ಹೇಳಿದೆ. ಸಾಂಕ್ರಾಮಿಕ ಸಮಯದಲ್ಲಿ ತನ್ನ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಜೊತೆಗೆ ರಾಜ್ಯದ ಆರ್ಥಿಕತೆ ಹೇಗೆ ನಿರ್ವಹಿಸಿತು ಎಂದು ಕೂಡಾ ವರದಿ ಮಾಡಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಆರ್ ಟಿ ಅಮೇರಿಕಾ ನ್ಯೂಸ್ (ಅಮೇರಿಕಾ)

ಕೇರಳ ಮಾದರಿಯನ್ನು ಕೇಂದ್ರೀಕರಿಸಿದ ಮಾತುಕತೆ ಕಾರ್ಯಕ್ರಮದಲ್ಲಿ, ಆರೋಗ್ಯ ತಜ್ಞರು ಕೇರಳದ ವೈದ್ಯಕೀಯ ವಿಧಾನ ಹೇಗೆ ವೈರಸ್ ಹರಡುವುದನ್ನು ತಡೆದಿದೆ ಎಂಬ ಬಗ್ಗೆ ಹೇಳಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ಎಕನಾಮಿಸ್ಟ್ (ಲಂಡನ್)

ಸಾಂಕ್ರಾಮಿಕ ರೋಗವನ್ನು ಅಸಾಧಾರಣ ಯಶಸ್ಸಿನೊಂದಿಗೆ ನಿಭಾಯಿಸಲು ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೃಡತೆ ಹೇಗೆ ಕಲಸ ಮಾಡಿದೆ ಎಂದು ತೋರಿಸಲು ವಿಯೆಟ್ನಾಂ ಮತ್ತು ಕೇರಳದಲ್ಲಿ ಅಳವಡಿಸಲಾಗಿರುವ ವೈರಸ್ ತಡೆ ಕ್ರಮಗಳನ್ನು ಲೇಖನವೊಂದು ತಿಳಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ವೋಗ್ (ಅಮೆರಿಕಾ)

ಕೇರಳದ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರು ಅಮೆರಿಕದ ಪ್ರಮುಖ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕ ದಿ ವೋಗ್ ಏಪ್ರಿಲ್ ಸಂಚಿಕೆಯಲ್ಲಿ ಕಾಣಿಸಿಕೊಂಡು, ಅವರು ಕೇರಳದಲ್ಲಿ ಸಾಂಕ್ರಮಿಕ ರೋಗದಿಂದ ಹೇಗೆ ಕೇರಳವನ್ನು ಹೊರತಂದರು ಎಂದು ಬರೆಯಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

Vogue Warriors: Meet Kerala’s health minister who is taking the state out of the pandemic

ಅರಬ್ ನ್ಯೂಸ್ (ಸೌದಿ ಅರೇಬಿಯಾ)

ಈ ವರದಿಯು ಕೇರಳದಲ್ಲಿ  ಕೊರೊನಾ ನಿರ್ವಹಣಾ ಚಿತ್ರಣವನ್ನು ಪರಿಶೀಲಿದಲ್ಲದೆ, ಕೇರಳವು ರಾಷ್ಟ್ರೀಯ 11 ಪ್ರತಿಶತದ ವಿರುದ್ಧ 50 ಪ್ರತಿಶತದಷ್ಟು ಚೇತರಿಕೆ ದರವನ್ನು ಹೇಗೆ ದಾಖಲಿಸಿದೆ ಎಂಬುದನ್ನು ತೋರಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಇಷ್ಟೇ ಅಲ್ಲದೆ ಕೇರಳ ಕೊರೊನಾ ವಿರುದ್ದ ಮಾದರಿ ಹೋರಾಟವನ್ನು ಹೇಗೆ ನಿಭಾಯಿಸಿತು ಎನ್ನುವುದು, ಇತರ ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯಾದ ಲಿಂಕುಗಳು ಇಲ್ಲಿವೆ :

 Voice of America(ಅಮೆರಿಕಾ)

MIT Technology Review (ಕೇಂಬ್ರಿಡ್ಜ್)

National Post (ಕೆನಡ)

The Diplomat (ಜಪಾನ್)

The National Middle East (ಅಬುದಾಬಿ, ದುಬೈ)

Gulf News(ದುಬೈ)

Khaleej Times(ದುಬೈ)

France Le Munde (ಫ್ರಾನ್ಸ್)

France Courier International (ಫ್ರಾನ್ಸ್)

France Science Souvenir (ಫ್ರಾನ್ಸ್)

Italy La Stump(ಇಟೆಲಿ)

Italy Republic (ಇಟೆಲಿ)

Germany Jungle Wealth(ಜರ್ಮನಿ)

South China Morning Post ‌(ಚೀನಾ)

Strait Times (ಸಿಂಗಾಪುರ್)

Nigeria Pungence (ನೈಜೀರಿಯಾ)

New Prime South Africa(ದಕ್ಷಿಣ ಆಫ್ರಿಕಾ)

Turkey Evergreen (ತುರ್ಕಿ)

Europe  Solidaire

Daka Tribunal(ಬಾಂಗ್ಲಾದೇಶ)

Path (Org)

Alternate (ಯು.ಎ.ಇ)

Presence(ಬ್ರಿಟನ್)

France Humanite (ಫ್ರಾನ್ಸ್)

Poland Strjk (ಪೋಲಾಂಡ್)

Brasildefato (ಬ್ರೆಜಿಲ್)


ಇದನ್ನೂ ಓದಿ: ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ


ವಿಡಿಯೋ ನೋಡಿ: ಸದ್ದು…ಈ ಸುದ್ದಿ ಏನಾಗಿದೆ 8ನೇ ಸಂಚಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೇರಳದ ಮಾದರಿಯನ್ನು ನಮ್ಮ ದೇಶದ ಎಲ್ಲ ರಾಜ್ಯಗಳು ಅನುಸರಿಸಬೇಕು.

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...