Homeಅಂಕಣಗಳುಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

- Advertisement -
- Advertisement -

ಏಪ್ರಿಲ್ 13, 1919. ಅದು ಪಂಜಾಬ್‍ನ ಅಮೃತಸರ ಜಿಲ್ಲೆಯ ಜಲಿಯನ್ ವಾಲಾಬಾಗ್ ವಾಲಾಬಾಗ್ ಉದ್ಯಾನವನ. ಅಲ್ಲಿ ಶಾಂತಿಯುತವಾಗಿ ಮತ್ತು ನಿಶಸ್ತ್ರವಾಗಿ ಸಭೆ ಸೇರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟೀಷ್ ಸೇನಾಧಿಕಾರಿ ಜನರಲ್ ಡಯರ್‍ನ ಆಜ್ಞಾನುಸಾರ ಗುಂಡಿನ ಮಳೆಗೆರೆಯಲಾಗುತ್ತದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಹೋರಾಟಗಾರರು ಪ್ರಾಣಾರ್ಪಣೆ ಮಾಡುತ್ತಾರೆ. ಆ ಸುದ್ದಿ ಜಲಿಯನ್ ವಾಲಾಬಾಗ್ ದುರಂತ ಎಂದು ಜಗತ್ತಿನಾದ್ಯಂತ ಪಸರಿಸುತ್ತದೆ.

ಏಪ್ರಿಲ್ 14, 1919. ಅಲ್ಲಿಗೆ ಪುಟ್ಟ ಬಾಲಕನೊಬ್ಬ ಬರುತ್ತಾನೆ. ರಕ್ತಸಿಕ್ತ ಮಣ್ಣ, ಹಳೇ ಬಟ್ಟೆ ಬರೆ ಚಪ್ಪಲಿಗಳನ್ನು ನೋಡಿ ಕ್ರುದ್ಧಗೊಳ್ಳುತ್ತಾನೆ. ಡಬ್ಬಿಯಲ್ಲಿದ್ದ ಊಟವನ್ನು ಚೆಲ್ಲಿ ಅದಕ್ಕೆ ರಕ್ತಸಿಕ್ತವಾದ ಮಣ್ಣನ್ನು ತುಂಬಿ, ನಿಮ್ಮ ಸಾವಿಗೆ ನ್ಯಾಯ ದೊರಕಿಸುತ್ತೇನೆಂದು ಶಪಥ ಮಾಡುತ್ತಾನೆ. ‘ಅಣ್ಣ ಏಕೆ ಸಪ್ಪಗಿದ್ದೀಯಾ, ಊಟ ಮಾಡೋಲ್ಲವೇ?’ ಮನೆಯಲ್ಲಿ ತಂಗಿ ಕೇಳುತ್ತಾಳೆ. ತನ್ನ ತಂಗಿಗೆ ನಿನ್ನೆ ನಡೆದಿದ್ದ ದುರಂತದ ಬಗ್ಗೆ ವಿವರಿಸುತ್ತಾನೆ. ನಮ್ಮ ದೇಶಕ್ಕೆ ನುಗ್ಗಿರುವ ದ್ರೋಹಿ ಬ್ರಿಟೀಷರನ್ನು ಸೆದೆಬಡಿಯಬೇಕೆಂದು ತಿಳಿಸುತ್ತಾನೆ.

ಏಪ್ರಿಲ್ 15, 1919. ಆ ಬಾಲಕನ ಚಿಕ್ಕಪ್ಪ ಮಾವಿನ ಬೀಜ(ವಾಟೆ)ವನ್ನು ಹಿತ್ತಲಿನಲ್ಲಿ ನೆಡುತ್ತಿರುತ್ತಾರೆ. ಅಲ್ಲಿಗೆ ಬಂದ ಬಾಲಕ ಕೇಳುತ್ತಾನೆ.
ಚಿಕ್ಕಪ್ಪ ಏನು ಮಾಡುತ್ತಿದ್ದೀರಿ?
ಮಾವಿನ ಬೀಜ ನೆಡುತ್ತಿದ್ದೇನೆ ಮಗು
ಏಕೆ ನೆಡುತ್ತಿದ್ದೀರಿ?
ಏಕೆಂದರೆ ಇದು ಮಾವಿನ ಸಸಿಯಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಮಾವಿನ ಹಣ್ಣುಗಳನ್ನು ನಮಗೆ ನೀಡುತ್ತದೆ.
ಇದನ್ನು ಕೇಳಿದ ಕೂಡಲೇ ಆ ಬಾಲಕ ಮನೆಗ ಓಡುತ್ತಾನೆ. ತನಗೆ ಆಡಲೆಂದು ತಂದಿದ್ದ ಪಿಸ್ತೂಲೊಂದನ್ನು ತಂದು ತಾನು ಸಹ ನೆಡಲು ಆರಂಭಿಸುತ್ತಾನೆ. ಆಗ ಪ್ರಶ್ನೆ ಕೇಳುವ ಸರದಿ ಆತನ ಚಿಕ್ಕಪ್ಪನದಾಗಿರುತ್ತದೆ.
ಏನು ಮಾಡುತ್ತಿದ್ದೀಯ ಮಗು?
ಕಾಣುತ್ತಿಲ್ಲವೇ, ಬಂದೂಕು ನೆಡುತ್ತಿದ್ದೇನೆ
ಏಕೆ ನೆಡುತ್ತಿದ್ದೀಯಾ?
ಏಕೆಂದರೆ ಇದು ಬಂದೂಕಿನ ಗಿಡವಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಬಂದೂಕೂಗಳನ್ನು ನಮಗೆ ನೀಡುತ್ತದೆ. ಆ ಬಂದೂಕುಗಳಿಂದ ನಮ್ಮನ್ನು ಹಿಂಸಿಸುತ್ತಿರುವ ಬ್ರೀಟಿಷರನ್ನು ಸುಟ್ಟು ಈ ದೇಶದಿಂದ ಓಡಿಸುತ್ತೇನೆ ಎನ್ನುತ್ತಾನೆ ಆ ಪುಟ್ಟ ಬಾಲಕ.
ಎದುರಿಗಿದ್ದ ಆತನ ಚಿಕ್ಕಪ್ಪನ ಬಾಯಲ್ಲಿ ಮಾತೇ ಬರುವುದಿಲ್ಲ. ಆ ಬಾಲಕನ್ನು ಅಪ್ಪಿ ಕಣ್ಣಿರಿಡುತ್ತಾರೆ.
ಆ ಬಾಲಕನ ಹೆಸರು ಭಗತ್ ಸಿಂಗ್. ಆಗ ಆತನ ವಯಸ್ಸು ಕೇವಲ 12 ವರ್ಷ. ಆತನ ಚಿಕ್ಕಪ್ಪನ ಹೆಸರು ಸರ್ದಾರ್ ಅಜಿತ ಸಿಂಗ್.

ಸ್ನೇಹಿತರೇ ಇದು ಸತ್ಯವೋ, ಸುಳ್ಳೋ ಎಂಬುದು ಮುಖ್ಯವಲ್ಲ. ಇಂದು ಬಹಳಷ್ಟು ಕಡೆ ಈ ದಂತಕಥೆ ಹಬ್ಬಿದೆ. ಭಗತ್ ಸಿಂಗ್ ಜೀವನ ಮತ್ತು ಹೋರಾಟ ಕುರಿತ ಸಿನಿಮಾಗಳಲ್ಲಿ ಇದು ಬರುತ್ತದೆ. ಇದರ ಸಾರಂಶ ಮಾತ್ರ ಎಂತವರನ್ನು ಸ್ಫೂರ್ತಿಗೊಳಿಸುತ್ತದೆ. 12 ವರ್ಷದ ಬಾಲಕ ಭಗತ್ ಸಿಂಗ್ ಗಿದ್ದ ದೇಶಪ್ರೇಮ, ಶತ್ರುಗಳ ವಿರುದ್ಧ ಇದ್ದ ಸಿಟ್ಟು, ಆಕ್ರೋಶ, ತಾನು ಹತಾತ್ಮನಾಗುವವರೆಗೂ ಇದ್ದ ಬದ್ಧತೆ, ಭಾರತದ ಭವಿಷ್ಯದ ಬಗ್ಗೆ ಇದ್ದ ಸ್ಪಷ್ಟತೆ ಭಗತ್ ಸಿಂಗ್‍ರನ್ನು ಪ್ರಪಂಪದ ಮೇರು ಹೋರಾಟಗಾರನ ಸ್ಥಾನಕ್ಕೆ ಏರಿಸಿದೆ.

ನೂರು ವರ್ಷಗಳ ಹಿಂದೆ ನಡೆದಿದ್ದ ಜಲಿಯನ್ ವಾಲಾಬಾಗ್ ದುರಂತದ ಹುತಾತ್ಮರಿಗೆ ನಾವು ಗೌರವ ಮತ್ತು ನ್ಯಾಯ ಸಲ್ಲಿಸಬೇಕಿದೆ. ಇಂದಿಗೂ ಕೂಡ ಜನರ ಹಕ್ಕುಗಳು ಅಪಾಯದ ಅಂಚಿನಲ್ಲಿವೆ. ಬಡವರು, ತಳಸಮುದಾಯದವರು, ಮಹಿಳೆಯರು ಆತಂಕದಲ್ಲಿದ್ದಾರೆ. ಅವರ ಪರವಾಗಿ ದಿಟ್ಟವಾಗಿ ದನಿಯೆತ್ತುವ ತುರ್ತು ಹಿಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ನೂರು ವರ್ಷದ ಹಿಂದೆ ಮಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಫೂರ್ತಿಯಾಗಿ ಪಡೆದು ಹೋರಾಟ ಮುಂದುವರೆಸೋಣ. ಅವರಿಗೆ ನಿಜವಾದ ಗೌರವ ಸಲ್ಲಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...