Homeಮುಖಪುಟದೆಹಲಿ ರೈತ ಚಳವಳಿಯ ಹಿನ್ನೆಲೆಯಲ್ಲಿ ಚಳವಳಿಗಳು ಮುಂದೇನು?: ಡಾ. ವಾಸು

ದೆಹಲಿ ರೈತ ಚಳವಳಿಯ ಹಿನ್ನೆಲೆಯಲ್ಲಿ ಚಳವಳಿಗಳು ಮುಂದೇನು?: ಡಾ. ವಾಸು

- Advertisement -
- Advertisement -

ಸೆಪ್ಟೆಂಬರ್ 2011ರ 17ನೇ ತಾರೀಕು ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಕೂತರು. ನಂತರ ಗೊತ್ತಾದದ್ದು ಅವರು ಸುಮ್ಮನೇ ಕೂತಿಲ್ಲ; ಅಲ್ಲೇ ಬೀಡುಬಿಟ್ಟಿದ್ದಾರೆಂದು. ನಿರ್ದಿಷ್ಟ ಒತ್ತಾಯಗಳನ್ನು ಮುಂದಿಟ್ಟುಕೊಂಡು ಸಾವಿರಾರು ಜನರು ಅಲ್ಲಿ ಪ್ರತಿಭಟನೆ ನಡೆಸಿದ್ದರು. ಅದನ್ನು ಕೇವಲ ಪ್ರತಿಭಟನೆಯೆಂದು ಅವರು ಕರೆಯಲಿಲ್ಲ. ಅದನ್ನವರು ’ಆಕ್ಯುಪೈ ವಾಲ್‌ಸ್ಟ್ರೀಟ್ ಮೂವ್‌ಮೆಂಟ್’ ಎಂದರು. ಅಂದರೆ ಪ್ರಪಂಚದ ಅತೀ ದೊಡ್ಡ ಷೇರು ಮಾರುಕಟ್ಟೆಯಿರುವ ವಾಲ್‌ಸ್ಟ್ರೀಟ್‌ಅನ್ನು ವಶಪಡಿಸಿಕೊಳ್ಳುವ ಚಳವಳಿ. ಅಮೆರಿಕದ ಇತರ ನಗರಗಳೂ ಸೇರಿದಂತೆ ವಿವಿಧ ದೇಶಗಳಲ್ಲಿ ’ಆಕ್ಯುಪೈ’ ಶುರುವಾಯಿತು. ಅದೇ ವರ್ಷ ಅಕ್ಟೋಬರ್ 15ರಂದು ನೀಡಲಾದ ಕರೆಗೆ 82 ದೇಶಗಳ 951 ನಗರಗಳು ಸ್ಪಂದಿಸಿ ಪ್ರತಿಭಟಿಸಿದ್ದವು. ಚುನಾವಣೆಗಳಲ್ಲಿ ಮತ್ತು ಸರ್ಕಾರದಲ್ಲಿ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಪ್ರಭಾವವನ್ನು ತಪ್ಪಿಸುವ ಘೋಷಣೆಯಿಂದ ಶುರುವಾಗಿ, ಎಲ್ಲ ಬಗೆಯ ಅಸಮಾನತೆಗಳ ವಿರುದ್ಧದ ಕೂಗನ್ನು ಆ ಚಳವಳಿಯು ಹಾಕಿತ್ತು.

ಅಂತಿಮವಾಗಿ ನವೆಂಬರ್ 15ರಂದು ಝುಕೊಟ್ಟಿ ಪಾರ್ಕ್‌ನಲ್ಲಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸುವುದರೊಂದಿಗೆ ಆ ಆಂದೋಲನವು ಮುಗಿದಿತ್ತು. ಆದರೆ ಅದರ ಪ್ರಭಾವವು ಹಲವು ರೀತಿಯಲ್ಲಿ ಬೇರೆ ಬೇರೆ ವಲಯಗಳನ್ನು ಮತ್ತು ಸಮುದಾಯಗಳನ್ನು ಪ್ರಭಾವಿಸಿತ್ತು. ದೆಹಲಿಯಲ್ಲಿ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುದಾನ ಕಡಿತಗೊಳಿಸುವುದರ ವಿರುದ್ಧ ಪ್ರತಿಭಟಿಸಿದ ಯುವಕ ಯುವತಿಯರು ’ಆಕ್ಯುಪೈ ಯುಜಿಸಿ’ ಅಂತ ಕರೆ ನೀಡಿ, ಹೋರಾಟ ನಡೆಸಿದ್ದರು.

ಹೀಗಿದ್ದೂ, ಆಕ್ಯುಪೈ ವಾಲ್‌ಸ್ಟ್ರೀಟ್‌ನ ಜನಕರಲ್ಲೊಬ್ಬ ಎಂದು ಹೇಳಿಕೊಳ್ಳುವ (ಆಡ್‌ಬಸ್ಟರ್‍ಸ್ ಎಂಬ ಪತ್ರಿಕೆಯೊಂದು ಈ ಚಳವಳಿಗೆ ಕರೆ ನೀಡಿತ್ತು ಮತ್ತು ಆ ಕರೆಯನ್ನು ನೀಡಿದವರಲ್ಲಿ ಒಬ್ಬನಾದ) ಮಿಕಾ ವೈಟ್, ಈ ಹೋರಾಟವು ವಿಫಲವಾದ ಪ್ರತಿಭಟನೆ ಎಂದು ಷರಾ ಬರೆದ. ಆತ ಬರೆದ ’ದಿ ಎಂಡ್ ಆಫ್ ಪ್ರೊಟೆಸ್ಟ್’ ಪುಸ್ತಕದಲ್ಲಿ ಇದರ ವೈಫಲ್ಯದ ಬಗ್ಗೆ ಬರೆದುದಷ್ಟೇ ಅಲ್ಲದೇ, ಇಂತಹ ಪ್ರತಿಭಟನಾ ಮಾದರಿಯೇ ಮುಗಿದು ಹೋಗಿದೆ ಎಂದುಬಿಟ್ಟ. ಅಲ್ಲಿಂದ ಮುಂದಕ್ಕೆ ಮಿಕಾ ವೈಟ್ ಏನಾದ ಎಂಬುದು ಇಲ್ಲಿ ಅಷ್ಟು ಪ್ರಸ್ತುತವಲ್ಲವಾದರೂ, ಹಳೆಯ ರೀತಿಯ ಪ್ರತಿಭಟನಾ ಮಾದರಿಯ ಕಥೆ ಮುಗಿದಿದೆ ಎಂಬ ಮಾತು ಬಹಳ ಮುಖ್ಯವಾದುದು.

Members of Occupy Wall Street stand in triumph after a court order allowed them to reenter Zuccotti Park late Tuesday afternoon. (Photo by Carolyn Cole/Los Angeles Times via Getty Images)

ಏಕೆಂದರೆ ಅಲ್ಲಿಂದ ಮುಂದಕ್ಕೆ ಪ್ರಪಂಚದಲ್ಲಿ ನಡೆದ ಗಮನ ಸೆಳೆದ ಪ್ರತಿಭಟನೆಗಳು ಯಾವುವು ಎಂದು ನೋಡಿದರೆ ಅರ್ಥವಾಗುತ್ತದೆ. ಅರಬ್ ಸ್ಪ್ರಿಂಗ್ ಎಂದು ಕರೆಯಲಾಗುವ ಇನ್ನೊಂದು ರೀತಿಯ ಆಕ್ಯುಪೈಗಳು – ಅಂದರೆ ಸಾವಿರ ಸಾವಿರ ಜನರು ಬಹುಮುಖ್ಯ ಪ್ರದೇಶದಲ್ಲಿ (ಬಹುತೇಕ ರಾಜಧಾನಿಗಳ ಪ್ರಮುಖ ವೃತ್ತಗಳಲ್ಲಿ) ಸೇರಿ ದಿನಗಟ್ಟಲೇ ಕೂತು ಮಹತ್ತರ ಬದಲಾವಣೆಯೊಂದಕ್ಕೆ ಕಾರಣವಾದವು. ಮತ್ತೊಂದು ಕಡೆ ಗ್ರೇಟಾ ಥನ್‌ಬರ್ಗ್ ಎಂಬೊಬ್ಬ 15 ವರ್ಷದ ಹುಡುಗಿ ಶಾಲೆಗೆ ಹೋಗದೇ ಸ್ವೀಡನ್‌ನ ಪಾರ್ಲಿಮೆಂಟಿನ ಮುಂದೆ ನಿಂತು ಪರಿಸರ ರಕ್ಷಣೆಗೆ ದನಿಯೆತ್ತಿದ್ದು ಬಹಳ ದೊಡ್ಡ ಸುದ್ದಿಯಾಯಿತು. ತೀರಾ ಈಚೆಗೆ ರಿಹನ್ನಾ ಎಂಬೊಬ್ಬ ಪಾಪ್ ಗಾಯಕಿ ಬರೆದ ಆರು ಪದಗಳ ಟ್ವೀಟ್ ಉಂಟು ಮಾಡಿದ ಅಲೆಗಳು ಇನ್ನೂ ಬೀಸುತ್ತಲೇ ಇವೆ.

ಅಂದರೆ ಕೆಲವು ನೂರು ಅಥವಾ ಹಲವು ಸಾವಿರ ಜನರು ಒಂದೆಡೆ ಸೇರಿ ಒಂದು ದಿನ ಪ್ರತಿಭಟನಾ ಪ್ರದರ್ಶನ ನಡೆಸಿ ಗಮನ ಸೆಳೆದು, ಪರಿಣಾಮ ಬೀರುವ ಕಾಲ ಮುಗಿದಿದೆಯೇ? ಸಾವಿರ ಸಾವಿರ ಜನರು ದಿನಗಳು-ತಿಂಗಳುಗಟ್ಟಲೇ ಒಂದೆಡೆ ಸೇರುವುದು ಅಥವಾ ವಿಶಿಷ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಅಲೆ ಅಲೆಯಾಗಿ ಬೀಸುವಂಥದ್ದೇನೋ ಆಗುವುದು ಮಾತ್ರವೇ ಹೊಸ ಕಾಲದ ಪ್ರತಿಭಟನಾ ಮಾದರಿಯೇ? ಹಾಗೆಂದು ಷರಾ ಬರೆಯಲಾಗದು. ಗುಜರಾತಿನ ಉನಾದಲ್ಲಿ ಸತ್ತದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರನ್ನು ತೀವ್ರವಾಗಿ ಬಡಿಯಲಾಯಿತು. ಅದನ್ನು ಪ್ರತಿಭಟಿಸಿ ಅಹಮದಾಬಾದ್‌ನಿಂದ ಉನಾದವರೆಗೆ ನಡೆದ ಪಾದಯಾತ್ರೆ ಮತ್ತು ಅಲ್ಲಿ ನಡೆದ ಒಂದು ದಿನದ ಪ್ರತಿಭಟನಾ ಪ್ರದರ್ಶನವು ಆ ಸಂದರ್ಭದಲ್ಲಂತೂ ಸಂಚಲನ ಮೂಡಿಸಿತ್ತು. ಅಲ್ಲಿಂದ 1600 ಕಿ.ಮೀ. ದೂರದಲ್ಲಿ ನಡೆದ ಚಲೋ ಉಡುಪಿ ಹೋರಾಟಕ್ಕೂ ಪ್ರೇರಣೆಯಾಯಿತು.

ಇಂತಹ ಇನ್ನೂ ಹಲವಾರು ಉದಾಹರಣೆಗಳನ್ನು ನೀಡಬಹುದು. ಒಟ್ಟಿನಲ್ಲಿ ನಿರ್ದಿಷ್ಟ ಬಗೆಯ ಪ್ರತಿಭಟನಾ ಮಾದರಿಯ ಕಥೆ ಮುಗಿಯಿತು ಎಂಬ ಅಂತಿಮ ತೀರ್ಪನ್ನು ನೀಡುವುದು ಸಾಧ್ಯವಿಲ್ಲ. ಏಕೆಂದರೆ ನಿರ್ದಿಷ್ಟ ಸಂದರ್ಭವು ಯಾವುದು ಪರಿಣಾಮಕಾರಿ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಹೀಗೆ ಹೇಳಿದ ಮೇಲೂ ರೊಟೀನ್ ಆಗಿ ನಡೆಯುವ ಒಂದೇ ಬಗೆಯ ಪ್ರತಿಭಟನೆಗಳ ಸಾಮಾಜಿಕ ಪರಿಣಾಮ ಕಡಿಮೆಯಾಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆಂದು ಪ್ರತಿಯೊಂದು ಸಣ್ಣ ಪ್ರತಿಭಟನೆಯೂ ದಿಕ್ಕು ಬದಲಿಸುವ ಮಹತ್ತರ ತಿರುವಾಗುವುದೂ ಸಾಧ್ಯವಿಲ್ಲ.

ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಚಾರಿತ್ರಿಕವಾದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ನೆನೆಯಲು ಕಾರಣವಿದೆ. ಈ ಹೋರಾಟ ಮುಂದೇನಾಗಬಹುದು? ಮುಂದೇನಾಗಬೇಕು? ಅದನ್ನು ಮುನ್ನಡೆಸುವ ಅತೀ ಕಷ್ಟದ ಜವಾಬ್ದಾರಿಯನ್ನು ಹೊತ್ತಿರುವವರಿಗೆ ಅಥವಾ ಅದನ್ನು ಮುರಿಯಲು ಅಹರ್ನಿಶಿ ಪ್ರಯತ್ನಿಸುತ್ತಿರುವವರಿಗೂ ಗೊತ್ತಿಲ್ಲದ ಭವಿಷ್ಯವದು.

ವಾಸ್ತವವೇನು ಗೊತ್ತೇ? ಈ ಹೋರಾಟದ ಆರಂಭದ ದಿಕ್ಕು ದೆಸೆಯನ್ನು ಅಲ್ಲಿನ ನಾಯಕರು ತೀರ್ಮಾನ ಮಾಡಲಿಲ್ಲ. ದೆಹಲಿಯ ಕಡೆಗೆ ಹೊರಡಬೇಕು, ಎಲ್ಲಿ ತಡೆದರೆ ಅಲ್ಲಿಯೇ ಕೂರಬೇಕು; ತಿಂಗಳುಗಟ್ಟಲೇ ಅಲ್ಲೇ ಕೂರಲು ಬೇಕಾದ ತಯಾರಿ ಮಾಡಿಕೊಂಡೇ ಹೋಗಬೇಕು ಎಂಬುದು ನಾಯಕರ ತೀರ್ಮಾನವಾಗಿತ್ತು. ದಾರಿಯಲ್ಲಿ ಹಾಕಲಾದ ಬ್ಯಾರಿಕೇಡುಗಳನ್ನು ಪಕ್ಕಕ್ಕೆ ಸರಿಸಿ, ಕಂದಕಗಳನ್ನು ದಾಟಿ ಹೋಗುವುದು ಜನರ ತೀರ್ಮಾನವಾಗಿತ್ತು. ದೆಹಲಿಯೊಳಕ್ಕೆ ಬಿಡದಾಗ ಪೊಲೀಸರು ಸೂಚಿಸಿದ ಮೈದಾನಕ್ಕೆ ತೆರಳಬೇಕೆಂಬುದು ಈ ಹೋರಾಟದ ಸಲುವಾಗಿ ರೂಪಿಸಿಕೊಂಡಿದ್ದ ಉನ್ನತ ಸಮಿತಿಯ ಸರ್ವಾನುಮತದ ನಿರ್ಧಾರವಾಗಿತ್ತು. ಆದರೆ, ಅದನ್ನು ಮನವರಿಕೆ ಮಾಡಿಕೊಡಲೆಂದು ಪ್ರತಿಭಟನೆಯ ಮುಂಚೂಣಿಗೆ ತೆರಳಿದ ನಾಯಕರಿಗೆ, ರೈತರನ್ನು ಒಪ್ಪಿಸುವುದು ದುಸ್ಸಾಧ್ಯವೆಂದು ಮನವರಿಕೆಯಾಗಿತ್ತು.

’ಹಿಂತಿರುಗಿ ನೋಡಿದರೆ, ಜನರ ನಿರ್ಧಾರ ಸರಿಯಿತ್ತು; ನಮ್ಮದಲ್ಲ’ ಎಂದು ವಿನಮ್ರವಾಗಿ ಆ ಹೋರಾಟದ ಉನ್ನತ ನಾಯಕರಲ್ಲೊಬ್ಬರು ಈಚೆಗೆ ನಮ್ಮೊಡನೆ ನಡೆಸಿದ ಚರ್ಚೆಯಲ್ಲಿ ಹೇಳಿದರು. ಈಗ ಅಲ್ಲಿ ಕುಳಿತಿರುವವರ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವುದು ಮತ್ತು ಬಹುತೇಕರಿಗೆ ಒಪ್ಪಿಗೆಯಾಗಬಹುದಾದ ಪರಿಹಾರದೊಂದಿಗೆ ಮಾತ್ರ ಮರಳುವುದಷ್ಟೇ ನಾಯಕರಿಗುಳಿದಿರುವ ಆಯ್ಕೆ. ಹಾಗಾಗಿ ದೂರದಲ್ಲೆಲ್ಲೋ ಕುಳಿತು ತೀರ್ಪುಗಳನ್ನು ಕೊಡುವುದು ಸುಲಭ; ಮೂವತ್ತು ಅಥವಾ ಮುನ್ನೂರು ಜನರ ಹೋರಾಟದ ಕುರಿತು ತೀರ್ಮಾನ ತೆಗೆದುಕೊಳ್ಳುವುದೂ ಸಲೀಸು. ಆದರೆ ಲಕ್ಷಾಂತರ ಜನರ ಹೋರಾಟವನ್ನು ಮುನ್ನಡೆಸುವವರು ಬಹಳ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಒಂದು ಹೆಜ್ಜೆ ಅತಿ ಮಾಡಿದರೆ ಎಡವಟ್ಟು, ಕಡಿಮೆ ಇಟ್ಟರೆ ಸ್ಥೈರ್ಯ ಉಳಿಸಿಕೊಳ್ಳುವುದು ಕಷ್ಟ.

ನನ್ನ ಪ್ರಕಾರ ಈ ಚಳವಳಿಯು ಈಗಾಗಲೇ ಮಹತ್ವದ ಗೆಲುವನ್ನು ಸಾಧಿಸಿದೆ. ನರೇಂದ್ರ ಮೋದಿ ಸರ್ಕಾರ ಬಂದ ನಂತರ, ಪ್ರಭುತ್ವದ ದುರಾಡಳಿತದ ವಿರುದ್ಧ ಮೊದಲ ಗೆಲುವು ಸಾಧಿಸಿದ್ದೂ ರೈತರೇ ಆಗಿದ್ದರು. 2014ರಲ್ಲಿ ಸುಗ್ರೀವಾಜ್ಞೆಯ ಮೂಲಕವೇ ಜಾರಿಯಾಗಿದ್ದ ಭೂಸ್ವಾಧೀನ ಕಾಯ್ದೆಯೂ ರೈತರ ಪ್ರತಿರೋಧದ ಕಾರಣಕ್ಕೆ ಹಿಂದಕ್ಕೆ ಹೋಗಿತ್ತು. ಅದನ್ನು ಬಿಟ್ಟರೆ ನಡೆದ ದೊಡ್ಡ ಹೋರಾಟವೆಂದರೆ ಸಿಎಎ ವಿರೋಧಿ ಆಂದೋಲನ. ಅಲ್ಲಿ ಅತ್ಯಂತ ಹೆಚ್ಚಾಗಿ ನಡೆದದ್ದು ಸಾವಿರ, ಲಕ್ಷಗಟ್ಟಲೇ ಜನರು ಒಂದಾದ ಮೇಲೊಂದರಂತೆ ದೇಶದೆಲ್ಲೆಡೆ ನಡೆಸಿದ ಪ್ರತಿಭಟನಾ ಸಮಾವೇಶಗಳೇ.

ಆದರೆ, ಅಲ್ಲಿಯೂ ನೂರು, ಸಾವಿರಗಟ್ಟಲೇ ಜನರು ಶಹೀನ್‌ಬಾಗ್‌ಗಳನ್ನು ನಿರ್ಮಿಸಿದ್ದರು. ನಿರಂತರವಾಗಿ ಮಹಿಳೆಯರು ಒಂದೆಡೆ ಕೂತು ತಮ್ಮ ವಿರೋಧವನ್ನು ಕಾಪಿಟ್ಟುಕೊಂಡಿದ್ದರು. ಆ ಹೋರಾಟದ ಮಹತ್ವವೇನೆಂದರೆ, ಬಹಳ ಅಂಚಿಗೆ ಸರಿಯಲ್ಪಟ್ಟಿದ್ದ ಮುಸ್ಲಿಂ ಸಮುದಾಯವು ಅದಕ್ಕೆ ನಾಯಕತ್ವ ಕೊಟ್ಟಿತ್ತು; ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದರು; ರಾಷ್ಟ್ರಧ್ವಜ ಮತ್ತು ಸಂವಿಧಾನದ ಪ್ರಣಾಳಿಕೆಗಳು ಸಂಕೇತಗಳಾಗಿ ಬಳಕೆಯಾದವು. ಇಂತಹದೊಂದು ಬೃಹತ್ ಹೋರಾಟವನ್ನು ಇನ್ನವರ ಕಥೆ ಮುಗಿಯಿತು ಎಂಬಂತೆ ಭಾವಿಸಲಾಗಿದ್ದ ಮುಸ್ಲಿಮರು ನಡೆಸಿದ್ದರು. ಅದೇ ರೀತಿ ಇನ್ನು ಇದು ಮುಗಿದಂತೆ ಎಂದು ಭಾವಿಸಲಾಗಿದ್ದ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದ ರೈತರು ಮತ್ತೊಂದು ಆಂದೋಲನಕ್ಕೆ ಕೈ ಹಾಕಿದ್ದಾರೆ. ಇದೂ ಅತ್ಯಂತ ವಿಶೇಷವೇ.

ಅಂದರೆ ಒಂದು ಸಿಎಎ ಆಂದೋಲನವು ಸೃಷ್ಟಿ ಮಾಡಿದ್ದ ಚೈತನ್ಯವು ’ಯಾರೂ ಎದುರಿಸಲಾಗದು’ ಎಂಬಂತೆ ಭಾವಿಸಲಾಗಿದ್ದ ಇಂದಿನ ಒಕ್ಕೂಟ ಸರ್ಕಾರದ ಪ್ರತಿಷ್ಠೆಯನ್ನು ಕೆಳಗಿಳಿಸುವಷ್ಟರಮಟ್ಟಿಗೆ ರೈತ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಇನ್ನೊಂದಕ್ಕೆ ದಾರಿ ತೋರಿಸಲಿದೆ. ಈಗಲೇ ಕೃಷಿ ಕಾನೂನುಗಳು ವಾಪಸ್ಸಾಗುತ್ತವೆಯೋ ಇಲ್ಲವೋ ಎಂಬುದು ಅಷ್ಟು ಮಹತ್ವದ ಸಂಗತಿಯೇನಲ್ಲ. ಪ್ರಬುದ್ಧರಾದ, ಹೋರಾಟದ ಕುಲುಮೆಯಲ್ಲಿ ಪುಟಕ್ಕಿಟ್ಟಂತಾಗಿರುವ ನಾಯಕರು ಇದರ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಯಾವ ರೀತಿಯಲ್ಲಿ ಇದು ಕೊನೆಗೊಂಡರೂ ಅದು ಆಂದೋಲನದ ಚೈತನ್ಯವನ್ನು ಮುಂದಕ್ಕೊಯ್ಯುವುದರಲ್ಲಿ ಸಂಶಯವಿಲ್ಲ.

ಈಗ ಜವಾಬ್ದಾರಿ ಇರುವುದು ದೆಹಲಿಯಲ್ಲಿ ಕುಳಿತ ರೈತರು ಅಥವಾ ಅದರ ನೇತಾರರದ್ದಲ್ಲ. ನಮ್ಮದು. ದೂರವಿದ್ದು ಈ ಪ್ರಜಾಪ್ರಭುತ್ವವನ್ನು ಯಾರೋ ಹೇಗೋ ಸರಿ ಮಾಡಲಿ ಎಂದು ಕಾಯುತ್ತಿರುವವರದ್ದು. ಇದೇ ಈ ಹೊತ್ತಿನಲ್ಲೇ ರೈತ ಚಳವಳಿಗೆ ಪೂರಕವಾಗಿ ಮತ್ತು ಒಟ್ಟಾರೆ ಪ್ರಜಾತಾಂತ್ರಿಕ ರಾಜಕೀಯ ಚಳವಳಿಯನ್ನು ಕಟ್ಟುವ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ಕಾಲಕ್ಕೆ ತಕ್ಕಂತೆ ಏನು ಮಾಡಬಹುದು ಎಂಬುದನ್ನು ಪ್ರಾಯೋಗಿಕವಾಗಿ ಪಾಲ್ಗೊಳ್ಳುತ್ತಲೇ ಕಂಡುಕೊಳ್ಳುವುದು ಯುಗಧರ್ಮವಾಗಿದೆ. ಅಂದರೆ ಕೇವಲ ಚರ್ಚೆಯಲ್ಲಿ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಚರ್ಚೆ, ಚಿಂತನೆ ಹಾಗೂ ಹಿನ್ನೋಟಗಳೆಲ್ಲವೂ ಶುರು ಮಾಡಲು ಬೇಕಾದ ಬಿಂದುವನ್ನು ಮತ್ತು ನಮ್ಮನ್ನು ಎಚ್ಚರದಲ್ಲಿಡುವ ಪಾಠಗಳಾಗಿ ಪ್ರಯೋಜನಕ್ಕೆ ಬರಬಹುದು ಅಷ್ಟೇ.


ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...