Homeಕರೋನಾ ತಲ್ಲಣಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

- Advertisement -
- Advertisement -

ಬೆಂಗಳೂರಿನಲ್ಲಿ ಆಮ್ಲಜನಕ, ಐಸಿಯುಗಳು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಜನರು ನೋವಿನಿಂದ ಸಾವನ್ನಪ್ಪುತ್ತಿರುವ ಚಿತ್ರಗಳು, ದೃಶ್ಯಗಳು ಮತ್ತು ಕಥನಗಳು ರಾಜ್ಯದ ಜನರನ್ನು ಕಾಡುತ್ತಾ ಮುಂದುವರೆದಿವೆ. ಈ ಸರ್ಕಾರ-ಪ್ರಾಯೋಜಿತ ದುರಂತಕ್ಕೆ ಸಾಕ್ಷಿಯಾಗಿ ನಾಗರಿಕರು ಕುಪಿತರಾಗಿದ್ದಾರೆ. ಇದನ್ನು ಅನೇಕ ಜನರು ಕೊಲೆ ಎಂದು ಬಗೆದಿದ್ದಾರೆ.

ಕೇಂದ್ರ ಸರ್ಕಾರವು ಜಾಗತಿಕ ವೇದಿಕೆಗಳಲ್ಲಿ ವೈರಸ್ ವಿರುದ್ಧ ವಿಜಯ ಎಂದು ಘೋಷಿಸುವ ಮೂಲಕ ಜನರನ್ನು ಹುಸಿ ಭದ್ರತೆಯ ಪ್ರಜ್ಞೆಗೆ ನೂಕಿತು. ಎಲ್ಲ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ನಂಬುವಂತೆ ಮಾಡಲಾಯಿತು. ಆದುದರಿಂದ ಬಾಕಿ ಉಳಿದಿದ್ದ ಸಂಭ್ರಮಾಚರಣೆಗಳು, ವೈಯಕ್ತಿಕ ಭೇಟಿಗಳು ಮತ್ತು ಕೂಟಗಳು ದೊಡ್ಡಮಟ್ಟದಲ್ಲಿ ಅಬ್ಬರದಿಂದ ವಾಪಸ್ ಬಂದಿದ್ದವು.

ಆದರೆ ಈ ಸಂಭ್ರಮ ಅಲ್ಪಕಾಲಿಕವಾಗಿತ್ತು. ಏಪ್ರಿಲ್ ಮಧ್ಯದ ವೇಳೆಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಮತ್ತು ಕೋವಿಡ್ ಸಾವುಗಳ ಹೆಚ್ಚಳಗೊಂಡಾಗ ಎಂದಿನಂತೆ ರಾಜ್ಯ ಸರ್ಕಾರ ಅಪಾಯದ ಸುಳಿವೇ ಇಲ್ಲದಂತೆ ಕುಳಿತಿತ್ತು. ಈ ಸರ್ಕಾರ ಒಂದು ಪ್ರಮಾದದಿಂದ ಇನ್ನೊಂದರತ್ತ ಎಡವುತ್ತಿರುವಾಗ, ನಾಗರಿಕರು ಮತ್ತು ಜನರ ವೇದಿಕೆಗಳು ತಮ್ಮ ಸಹ ಜೀವಿಗಳ ರಕ್ಷಣೆಗೆ ಧಾವಿಸಿದವು. ಅವರು ಆಮ್ಲಜನಕ, ವೆಂಟಿಲೇಟರ್‌ಗಳು, ಔಷಧಿಗಳು, ಹಾಸಿಗೆಗಳ ವ್ಯವಸ್ಥೆಯನ್ನು ತಮ್ಮ ಕೈಲಾದಷ್ಟು ಸಜ್ಜುಗೊಳಿಸಿದರು ಮತ್ತು ಈ ಸಂಪನ್ಮೂಲಗಳನ್ನು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಬೆಂಬಲವನ್ನು ನೀಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡರು. ಬೆಂಗಳೂರಿನಲ್ಲಿ ಸಂಭವಿಸಿದ ಹಿಂದೆಂದೂ ಕಾಣದ ಯಾತನೆ ಮತ್ತು ಸಾವುಗಳು ರಾಜ್ಯಾದ್ಯಂತ ಆಘಾತದ ಅಲೆಗಳನ್ನು ಸೃಷ್ಟಿಸಿತು. ಇದು ಎಲ್ಲ ಕಡೆ ಹೆಚ್ಚಿನ ಭೀತಿಯನ್ನು ಉಂಟು ಮಾಡಿದ್ದಲ್ಲದೆ, ಕೋವಿಡ್ರ19 ಸುತ್ತ ಬೆಳೆದಿದ್ದ ಕಳಂಕಿತ ಭಾವನೆಯನ್ನು ಹೆಚ್ಚಿಸಿತು.

ಈಗ, ಬೆಂಗಳೂರಿನಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿರುವಂತೆ ಕಂಡುಬಂದಾಗ, ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಈಗ ಎದ್ದಿರುವ ಪ್ರಶ್ನೆ ಏನೆಂದರೆ, ಬೆಂಗಳೂರಿಗೆ ಅಷ್ಟೊಂದು ತೀವ್ರ ಪೆಟ್ಟು ಬಿದ್ದಿದ್ದರೆ, ಮಾಹಿತಿಯ ಕೊರತೆ ಇರುವ ಮತ್ತು ಆರೋಗ್ಯ ವ್ಯವಸ್ಥೆಗಳು ಇನ್ನಷ್ಟು ದುರ್ಬಲವಾಗಿರುವ ಇತರ ಜಿಲ್ಲೆಗಳ ಭವಿಷ್ಯವೇನು?

PC : The Print

ಮಾಸ್ಕ್‌ಗಳನ್ನು ಧರಿಸುವುದು, ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು, ಜನಸಂದಣಿಯನ್ನು ತಪ್ಪಿಸುವುದು ಮತ್ತು ಕೈ ತೊಳೆಯುವುದು ಕೋವಿಡ್ ಸೋಂಕಿನ ವಿರುದ್ಧದ ಮೂಲಭೂತ ಸುರಕ್ಷತಾ ಕ್ರಮಗಳಾಗಿ ಮುಂದುವರಿದಿವೆ. ಪ್ರಾಥಮಿಕ ತಡೆಗಟ್ಟುವಿಕೆಯನ್ನು ಸರ್ಕಾರ ನಿರಂತರವಾಗಿ ನಿರ್ಲಕ್ಷ್ಯ ಮಾಡಿದೆ ಮತ್ತು ಕೋವಿಡ್19 ಸಾಂಕ್ರಾಮಿಕ ಇದಕ್ಕೆ ಅಪವಾದವೇನಲ್ಲ. ಹಲವಾರು ದಶಕಗಳಿಂದ ಸಾರ್ವಜನಿಕ ಆರೋಗ್ಯದಲ್ಲಿ ಹಸ್ತಕ್ಷೇಪ ಮಾಡಿದ್ದರೂ, ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ಆದ್ದರಿಂದ ಜನರು ಕೈ ತೊಳೆಯಬೇಕು ಅಥವಾ ಸ್ವಚ್ಛವಾದ ಮಾಸ್ಕ್‌ಗಳನ್ನು ಧರಿಸಬೇಕು ಎಂದು ನಿರೀಕ್ಷಿಸುವುದು ಅತಿಯಾದ ನಿರೀಕ್ಷೆ ಅನಿಸುತ್ತದೆ. ಸಮುದಾಯಗಳು ಕೋವಿಡ್-ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಮಾಡಲು, ಪೋಲಿಸ್ ಮತ್ತು ಲಾಠಿಗಳನ್ನು ಬಳಸುವುದರ ಹೊರತಾಗಿ, ಸರ್ಕಾರಗಳು ಬೇರೆ ಯಾವುದೇ ವಿಭಿನ್ನ ಪ್ರಯತ್ನಗಳನ್ನು ಮಾಡಲೇ ಇಲ್ಲ.

ಪರಿಸ್ಥಿಯನ್ನು ಇನ್ನಷ್ಟು ಹದಗೆಡಿಸಲು, ವಾಟ್ಸಾಪ್ ಯೂನಿವರ್ಸಿಟಿ ವಿಶೇಷವಾಗಿ ಸುಳ್ಳು ಮಾಹಿತಿ ಮತ್ತು ಅವೈಜ್ಞಾನಿಕ, ಮಾಂತ್ರಿಕ ಪರಿಹಾರಗಳನ್ನು ಹರಡುವಲ್ಲಿ ಸಕ್ರಿಯವಾಗಿದೆ. ಉದಾಹರಣೆಗೆ, ಜನಪ್ರಿಯ ಪ್ರಭಾವಿ ಉದ್ಯಮಿಯೊಬ್ಬರು ನಿಂಬೆರಸವನ್ನು ಒಬ್ಬರ ಮೂಗಿನ ಹೊಳ್ಳೆಗೆ ಹಾಕಿಕೊಳ್ಳುವುದರಿಂದ ಕೋವಿಡ್‌ನಿಂದ ರಕ್ಷಣೆ ಪಡೆಯಬಹದು ಎಂದು ಘೋಷಿಸಲು ಪತ್ರಿಕಾಗೋಷ್ಠಿ ನಡೆಸಿದರು. ಲಾಕ್‌ಡೌನ್ ನಿಯಮಗಳ ಉಲ್ಲಂಘನೆಗಾಗಿ ಜನರ ಮೇಲೆ ಲಾಠಿ ಬೀಸಿ ಓಡಿಸುವ ಸರ್ಕಾರವು ಇಂತಹ ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ಸಮಾಜಕ್ಕೆ ಹಾನಿ ಮಾಡಿದ ಈ ಸಂಭಾವಿತ ವ್ಯಕ್ತಿಗೆ ದಂಡ ವಿಧಿಸಲು ಏನನ್ನೂ ಮಾಡಲಿಲ್ಲ. ಅದೇ ರೀತಿ ಪ್ರಬಲ ರಾಜಕಾರಣಿಗಳು ಮತ್ತು ಸ್ವಯಂಘೋಷಿತ ದೇವಮಾನವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಬಿಡಿ, ಎಚ್ಚರಿಕೆಯನ್ನೂ ಈ ಸರ್ಕಾರ ರವಾನಿಸುತ್ತಿಲ್ಲ.

ಇನ್ನೊಂದು ಕಡೆ ಸ್ಪಷ್ಟವಾಗಿ ಜೀವ ಉಳಿಸುವ ಆಮ್ಲಜನಕದ ಲಭ್ಯತೆ, ಹಾಸಿಗೆಗಳು, ಐಸಿಯುಗಳು, ವೆಂಟಿಲೇಟರ್‌ಗಳಂತಹ ಮಾಹಿತಿಯನ್ನು ಒದಗಿಸಲು ಅಷ್ಟೇನೂ ಪ್ರಯತ್ನ ಮಾಡಲಾಗಿಲ್ಲ. ಆದ್ದರಿಂದ ಜನರು ಸುಳ್ಳು ಮಾಹಿತಿಯ ಪ್ರವಾಹ ಮತ್ತು ನಿಖರವಾದ ಪರಿಶೀಲಿಸಿದ ಮಾಹಿತಿಗಳ ನಡುವೆ ಗೊಂದಲಕ್ಕೆ ಈಡಾಗಿದ್ದಾರೆ.

PC : PressboltNews

ಹಾಸಿಗೆಗಳು, ಆಮ್ಲಜನಕ ಮತ್ತು ಐಸಿಯುಗಳ ವಿಷಯದಲ್ಲಿ, ಆಮ್ಲಜನಕಯುಕ್ತ ಹಾಸಿಗೆಗಳು ಮತ್ತು ಕೆಲವು ಐಸಿಯುಗಳನ್ನು ತಾಲ್ಲೂಕು ಮಟ್ಟದಲ್ಲಿ ಉನ್ನತೀಕರಿಸಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಎಷ್ಟು ಆಮ್ಲಜನಕಯುಕ್ತ ಹಾಸಿಗೆಗಳು ಹೈ ಡಿಪೆಂಡೆನ್ಸಿ ಯುನಿಟ್‌ಗಳು (ಎಚ್‌ಡಿಯು) ಎಂದು ಸ್ಪಷ್ಟವಾಗಿಲ್ಲ. ಆದರೆ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವೆಂಟಿಲೇಟರ್‌ಗಳ ಕೊರತೆ ಕಂಡುಬರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಜೀವ ಉಳಿಸುವ ಇತರೆಲ್ಲ ಸೌಲಭ್ಯಗಳನ್ನು ಸಾಧ್ಯವಾದಷ್ಟು ಜನರಿಗೆ ಹತ್ತಿರದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಇಲ್ಲಿ ಒಂದು ಪ್ರಮುಖ ವಿಷಯವಾಗಿದೆ. ಆಸ್ಪತ್ರೆಗಳಲ್ಲಿ ಜನರು ಸಾಯುತ್ತಿರುವ ಚಿತ್ರಗಳನ್ನು ಮಾಧ್ಯಮಗಳಲ್ಲಿ ನೋಡಿದ ನಂತರ, ರೋಗಿಗಳು ಆಸ್ಪತ್ರೆಗಳಿಗೆ ದಾಖಲಾದರೆ ಅವರು ಸಾಯುತ್ತಾರೆ ಎಂಬ ಒಂದು ರೀತಿಯ ವಿಚಿತ್ರ ತರ್ಕರಹಿತ ಭಯ ಜನರಲ್ಲಿ ಸೃಷ್ಟಿಯಾಗಿದೆ. ಆದ್ದರಿಂದ ಹಲವಾರು ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸಂಪರ್ಕಿಸುವ ಭಯ ಜನರಿಗಿದೆ. ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರಿಗೆ ಆತ್ಮವಿಸ್ವಾಸ ಮೂಡುವಂತೆ ಮಾಡಲು ಸಾಧ್ಯವಾದಷ್ಟು ಜನರಿಗೆ ಹತ್ತಿರವಿರುವ ಪ್ರದೇಶದಲ್ಲಿ ಹೆಚ್ಚೆಚ್ಚು ಸೌಲಭ್ಯಗಳನ್ನು ಹೊಂದಿರುವುದು ಬಹಳ ಮುಖ್ಯ.

ಎಲ್ಲಿ ವಿಫಲರಾಗುತ್ತಿದ್ದೇವೆ?

ಕೋವಿಡ್ ಚಿಕಿತ್ಸೆಯಲ್ಲಿ ಬಳಲುತ್ತಿರುವ ಒಂದು ಸಂಗತಿಯೆಂದರೆ ಸ್ಪಷ್ಟ ನೀತಿ ನಿರ್ದೇಶನಗಳ ಕೊರತೆ. ಎರಡನೆಯದಾಗಿ ಚಿಕಿತ್ಸೆಯ ಪ್ರೋಟೋಕಾಲ್‌ಅನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಕಳಪೆ ಮೇಲ್ವಿಚಾರಣೆ. ಅಂತಹ ಒಂದು ಉದಾಹರಣೆ ರೆಮ್ಡೆಸಿವಿರ್. ಕೆಲವು ದಿನಗಳ ಹಿಂದೆ ರೆಮ್ಡೆಸಿವಿರ್ ವಿರುದ್ಧ ನಿರ್ಣಾಯಕ ಸಾಕ್ಷ್ಯಗಳು ಬಂದವು. ಆದರೆ, ಅದರ ಬಳಕೆಯ ಪರಿಣಾಮಕಾರಿತ್ವದಲ್ಲಿ ಕಡಿಮೆ ಪುರಾವೆಗಳಿವೆ ಎಂಬ ಅಂಶವು ಮೊದಲಿನಿಂದಲೂ ತಿಳಿದಿತ್ತು. ಆದರೂ ಸರ್ಕಾರವು ರೆಮ್ಡೆಸಿವಿರ್ ಬಳಕೆಯನ್ನು ಯಾವುದೇ ಆಧಾರಗಳಿಲ್ಲದೇ ಸಮರ್ಥಿಸಿತು. ಕೋವಿಡ್ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಪ್ರಯೋಜನಾಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಗೊತ್ತಾದಾಗಲೂ, ಅದರ ಲಭ್ಯತೆಯ ಕೊರತೆಯು ಕಳವಳಕ್ಕೆ ಕಾರಣವಾಗಬಾರದು ಎಂಬ ಯಾವುದೇ ಸಂದೇಶವನ್ನು ಅಥವಾ ನಿರ್ದೇಶನವನ್ನು ಸರ್ಕಾರ ನೀಡಲಿಲ್ಲ. ಅಂತಹ ಯಾವುದೇ ಸಲಹೆಯ ಅನುಪಸ್ಥಿತಿಯಲ್ಲಿ, ಅದರ ಕೊರತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿತ್ತು, ಕಾಳಸಂತೆ ದಂಧೆಕೋರರು ರೋಗಿಗಳ ಕುಟುಂಬಗಳನ್ನು ಸುಲಿಗೆ ಮಾಡಿದರು ಮತ್ತು ಈಗಲೂ ಮಾಡುತ್ತಿದ್ದಾರೆ. ಅವರು ಸಾವಿರಾರು ರೂಪಾಯಿಗಳನ್ನು ಉಪಯೋಗವಿಲ್ಲದ ಔಷಧಕ್ಕಾಗಿ ಖರ್ಚು ಮಾಡಿದರು. ಅದು ಅವರ ಚಿಕಿತ್ಸೆಗೇನೂ ನೆರವು ನೀಡಲಿಲ್ಲ. ಸರ್ಕಾರ ಮಧ್ಯಪ್ರವೇಶಿಸುವ ಹೊತ್ತಿಗೆ ಹಾನಿ ಸಂಭವಿಸಿದೆ. ಪ್ಲಾಸ್ಮಾ ಚಿಕಿತ್ಸೆಯಲ್ಲಿ ಕೂಡ ಇದು ಅದೇ ತೆರನಾಗಿದೆ ಮತ್ತು ಇದು ಕೂಡ ತುಂಬಾ ಕಳಪೆ ಫಲಿತಾಂಶಗಳನ್ನು ತೋರಿಸಿದೆ.

ಆದರೆ ಪ್ಲಾಸ್ಮಾ ಚಿಕಿತ್ಸೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇಂದು (18 ಮೇ 2021) ತೆಗೆದುಕೊಂಡಿದೆ. ಅಂತೆಯೇ, ಐವರ್ಮೆಕ್ಟಿನ್ ಔಷಧಿಯನ್ನು ಬಳಸುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟ ಎಚ್ಚರಿಕೆ ನೀಡಿತು. ಅಂತಹ ಪುರಾವೆಗಳು ಹೊರಬಂದ ನಂತರವೂ ರಾಜ್ಯ ಸರ್ಕಾರ ಮುಂದೆ ಹೋಗಿ ಈ ಟ್ಯಾಬ್ಲೆಟ್‌ಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಆರ್ಡರ್ ನೀಡಿತು. ವೈಜ್ಞಾನಿಕ ಸಲಹೆಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಏಕೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಸಂಪೂರ್ಣವಾಗಿ ಗ್ರಹಿಸಲಾಗದ ಸಂಗತಿಯಾಗಿದೆ. ವಿಜ್ಞಾನವಲ್ಲದಿದ್ದರೆ ಸರ್ಕಾರದ ನಿರ್ಧಾರಗಳಿಗೆ ಯಾವುದು ಚಾಲನೆ ನೀಡುತ್ತದೆ?

ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೊಂದಿಗೆ, ಬಹುಪಾಲು ವೈದ್ಯರು ವಿವಿಧ ಔಷಧಿಗಳನ್ನು ಬೇಕಾಬಿಟ್ಟಿ ಬಳಸುವುದರಿಂದ ಅದು ಕೂಡ ಹೊರೆಯಾಗಿದೆ. ಪ್ರಸ್ತುತ ನಾವು ಬೇಜವಾಬ್ದಾರಿಯುತ ಕೃತ್ಯಗಳ ಪರಿಣಾಮಗಳನ್ನು ಮ್ಯೂಕರ್‌ಮೈಕೋಸಿಸ್ (ಕಪ್ಪು ಫಂಗಸ್, ಕಪ್ಪು ಶಿಲೀಂಧ್ರ ರೋಗ) ರೂಪದಲ್ಲಿ ನೋಡುತ್ತಿದ್ದೇವೆ. ಈ ರೋಗವು ಶೀಘ್ರವಾಗಿ ಮುಂದುವರಿಯುತ್ತದೆ ಮತ್ತು ಹೆಚ್ಚು ಮಾರಣಾಂತಿಕವಾಗಿದೆ. ಒಬ್ಬ ವ್ಯಕ್ತಿಯು ಬದುಕುಳಿದರೂ ಸಹ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ಆದ್ದರಿಂದ ಈ ತೊಡಕು ಅಪಾಯಕಾರಿ ಪರಿಣಾಮಗಳೊಂದಿಗೆ ಬರುತ್ತದೆ. ಈ ಕಾಯಿಲೆಗೆ ಮುಖ್ಯ ಕಾರಣವೆಂದರೆ ಕೋವಿಡ್ ಚಿಕಿತ್ಸೆಯಲ್ಲಿ ಸ್ಟಿರಾಯ್ಡ್‌ಗಳ ವಿವೇಚನೆಯಿಲ್ಲದ ಮತ್ತು ಅತಾರ್ಕಿಕ ಬಳಕೆ. ಮ್ಯೂಕರ್‌ಮೈಕೋಸಿಸ್ ಚಿಕಿತ್ಸೆಗಾಗಿ ಔಷಧಿಗಳನ್ನು ಹಠಾತ್ತನೆ ತರುವುದು ತುಂಬಾ ಕಷ್ಟ. ಇಂತಹ ಔಷಧಿ ಬಯಸುವವರಿಗೆ ಕೋವಿಡ್ ಸಹಾಯವಾಣಿಗಳಲ್ಲಿ ಈಗಾಗಲೇ ನೂರಾರು ವಿನಂತಿಗಳಿವೆ.

PC : USA Today

ಕೋವಿಡ್19 ಉಲ್ಬಣಗೊಂಡು ಉಂಟಾಗುವ ಮ್ಯೂಕರ್‌ಮೈಕೋಸಿಸ್‌ನ ನೂರಾರು ಪ್ರಕರಣಗಳು ಗುಜರಾತ್‌ನಲ್ಲಿ ಮೊದಲ ಕೋವಿಡ್ ಅಲೆಯಲ್ಲೇ ದಾಖಲಾಗಿದ್ದವು. ರಾಜ್ಯದ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಏನೂ ಮಾಡದೆ ಹೋದಂತೆಯೇ, ಈ ಸವಾಲನ್ನು ಎದುರಿಸಲು ರಾಜ್ಯ ಸರ್ಕಾರ ಸ್ವತಃ ಸಿದ್ಧವಾಗಲು ಏನನ್ನೂ ಮಾಡಲಿಲ್ಲ. ಆದ್ದರಿಂದ ಹಿಂದಿನ ಅನುಭವದಿಂದ ರಾಜ್ಯ ಸರ್ಕಾರ ಪಾಠ ಕಲಿತು ಇಂತಹ ಸಮಸ್ಯೆಗಳ ಬಗ್ಗೆ ಮುಂದಾಲೋಚಿಸಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮತ್ತೊಮ್ಮೆ ಮೂಡುತ್ತದೆ. ಮ್ಯೂಕರ್‌ಮೈಕೋಸಿಸ್ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಅದಕ್ಕೆ ಏನು ಅಡ್ಡಿಯಾಗಿತ್ತು?

ಕೋವಿಡ್‌ಅನ್ನು ನಿಯಂತ್ರಿಸುವಲ್ಲಿ ಇನ್ನೊಂದು ದೊಡ್ಡ ಅಡೆತಡೆ ಎಂದರೆ, ಎರಡನೇ ಅಲೆಗೆ ತುತ್ತಾಗಬಹುದಾದ 18-44 ವರ್ಷ ವಯಸ್ಸಿನವರಿಗೆ ಲಸಿಕೆಯನ್ನು ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರವು ಹಿಂದೆ ಸರಿದಿರುವುದು. ಈ ವಯಸ್ಸಿನ ಅಂತರದಲ್ಲಿರುವವರು ಈಗ ವಿಶೇಷವಾಗಿ ದುರ್ಬಲವಾಗಿರುವಂತೆ ತೋರುತ್ತದೆ. ಮಾರಣಾಂತಿಕ ವೈರಸ್ ಮತ್ತು ಅದರ ಪರಿಣಾಮಗಳಿಗೆ ಜನರು ತುತ್ತಾಗುವಂತೆ ಸಾಧ್ಯ ಮಾಡಲು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳು ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ ಎನಿಸುತ್ತಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಲೋಪ ಮತ್ತು ಅದಕ್ಷತೆಗಳು ಕ್ಷಮಿಸಲಾಗದ ಮತ್ತು ಮಾಫಿ ಮಾಡಲಾಗದ ವಿಷಯಗಳು. ಸಾವಿರಾರು ಜೀವಗಳನ್ನು ಕಳೆದುಕೊಂಡಿರುವುದಕ್ಕೆ ಸರ್ಕಾರ ನೇರವಾಗಿ ಕಾರಣವಾಗಿದೆ. ಈಗ ಅದು, ಮ್ಯೂಕರ್‌ಮೈಕೋಸಿಸ್ (ಕಪ್ಪು ಶೀಲಿಂಧ್ರ) ಕಾರಣಕ್ಕಾಗಿ ದೃಷ್ಟಿ ಕಳೆದುಕೊಂಡ ಅನೇಕ ರೋಗಿಗಳು ಅಂಗವಿಕಲರಾಗಲು ಕಾರಣವಾಗುತ್ತಿದೆ. ಇದಕ್ಕೆ ಸರ್ಕಾರವೇ ಜವಾಬ್ದಾರಿ. ಮಕ್ಕಳಿಗೆ ಸೋಂಕು ತಗಲುತ್ತದೆ ಎಂಬ ನಿರೀಕ್ಷೆಯಿರುವ ಮೂರನೇ ಅಲೆ ಕರ್ನಾಟಕಕ್ಕೆ ಶೀಘ್ರದಲ್ಲೇ ಕಾಲಿಡಲಿದೆ. ಸರ್ಕಾರವು ಈಗಲೂ ಕೋಮಾದಲ್ಲಿ ಅಥವಾ ಜಡತ್ವದಲ್ಲೇ ಇದ್ದರೆ, ಮೂರನೆಯ ಅಲೆಯ ಪರಿಣಾಮಗಳನ್ನು ಊಹಿಸಿಕೊಳ್ಳುವುದಕ್ಕೂ ಸಹ ಭಯ ಹುಟ್ಟಿಸುತ್ತದೆ. ನಾಗರಿಕರು ತಮ್ಮ ಸಹಜೀವಿಗಳ ಅಗತ್ಯಗಳಿಗೆ ಸ್ಪಂದಿಸುವಲ್ಲಿ ರಾಜ್ಯದ ಹೊರೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಕೈಲಾದ್ದನ್ನು ಅವರು ಮಾಡುತ್ತಿದ್ದಾರೆ. ಆದರೆ ಇದು ದೀರ್ಘಾವಧಿಯಲ್ಲಿ ನಡೆಯುವುದು ಕಷ್ಟ.

ಆದ್ದರಿಂದ, ಇದು ನಾಗರಿಕರಿಗೆ ಎಚ್ಚರಿಕೆಯ ಕರೆಗಂಟೆ. ಕೋವಿಡ್‌ನಿಂದ ನಮ್ಮ ಮಕ್ಕಳೂ ಬಾಧಿತರಾಗದಂತೆ ತಡೆಯಲು, ರಾಜ್ಯದ ನಾಗರಿಕರಾಗಿ ನಾವು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಪಂಚಾಯತ್ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ಎಲ್ಲ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಮೂಲಕ, ತಕ್ಷಣದ, ಪರಿಣಾಮಕಾರಿ ಮತ್ತು ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನಗಾಣಿಸಬೇಕಿದೆ.


ಇದನ್ನೂ ಓದಿ: ತೇಜಸ್ವಿ ಸೂರ್ಯ ಓದಿದ ಮುಸ್ಲಿಂ ಪಟ್ಟಿ: ಸಂತ್ರಸ್ತರು ಆರೋಪ ಮುಕ್ತರಾದರೂ ಇನ್ನೂ ಮರಳಿ ಸಿಗದ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...