Homeಕರ್ನಾಟಕಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಕೆಲವು ಬ್ರಾಹ್ಮಣರು ಮಾಂಸಾಹಾರ ತಿನ್ನುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವ ಹಳೆಯ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

- Advertisement -
- Advertisement -

ಉಡುಪಿಯ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ದಿವಂಗತ ವಿಶ್ವೇಶ ತೀರ್ಥರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೊ ಈಗ ವೈರಲ್ ಆಗಿದೆ. ಮಾಂಸಾಹಾರ ಹಾಗೂ ಸಸ್ಯಾಹಾರ ವಿವಾದಕ್ಕೆ ಹೊಸ ತಿರುವು ನೀಡಿದೆ.

ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ದಲಿತರ ಮನೆಗೆ ಹೋಗುವುದು ಮುಖ್ಯವಲ್ಲ, ದಲಿತರನ್ನು ತಮ್ಮ ಮನೆಗೆ ಬಲಿತರು ಕರೆಸಿಕೊಳ್ಳುವುದು ಮುಖ್ಯ ಎಂದಿದ್ದರು. ಆಗ ಮಾತನಾಡುತ್ತ, ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪ್ರಸ್ತಾಪವನ್ನು ಮಾಡಿದ್ದರು. “ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? ಕುರಿಯ ರಕ್ತ ಉರಿದುಕೊಟ್ಟರೆ ತಿನ್ನುತ್ತಾರಾ?” ಎಂದು ಪ್ರಾಸಂಗಿಕವಾಗಿ ಪ್ರಶ್ನಿಸಿದ್ದರು.

ವಿಡಿಯೊ ವೈರಲ್‌ ಆದ ಬಳಿಕ ಹಂಸಲೇಖರ ವಿರುದ್ಧ ಮುಗಿಬಿದ್ದ ಮತೀಯವಾದಿ ಟ್ರೋಲ್‌ ಪಡೆ, ಹಂಸಲೇಖ ಅವರ ಕುರಿತು ತುಚ್ಛವಾಗಿ ಮಾತನಾಡಲು ಆರಂಭಿಸಿತು. ಹಂಸಲೇಖ ಅವರು ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಂಬಿಸಿತು. ಹಂಸಲೇಖ ಅವರು ಕ್ಷಮೆ ಯಾಚಿಸಿದ ಬಳಿಕವೂ ವಿವಾದ ಮುಂದುವರಿದಿದೆ.

ಮೀರಾ ರಾಘವೇಂದ್ರ ಎಂಬವರು ಹಂಸಲೇಖ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ವೈವಿಧ್ಯಮಯ ಆಹಾರ ಸಂಸ್ಕೃತಿ ಕುರಿತು ಲಘುವಾಗಿ ಮಾತನಾಡಿ, ‘ಬಾಡೇ ನಮ್‌ ಗಾಡು’ ಎಂಬ ವಿನೂತನ ಅಭಿಯಾನ ಆರಂಭವಾಗಲೂ ಕಾರಣಕರ್ತರಾದರು. ಒಂದು ಸಪ್ತಾಹವಾಗಿ ನಡೆಯುತ್ತಿರುವ ‘ಬಾಡೇ ನಮ್‌ ಗಾಡು’ ಅಭಿಯಾನದ ಜೊತೆಜೊತೆಗೆ ಮಾಂಸಾಹಾರಿಗಳ ಕುರಿತು ಒಂದು ವರ್ಗದ ಜನಕ್ಕೆ ಯಾಕಿಷ್ಟು ಅಸಹನೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಹಾರ ಸಂಸ್ಕೃತಿಯನ್ನು ಅಣಕಿಸುವುದರ ವಿರುದ್ಧ ಜನರು ದನಿಎತ್ತಿದ್ದಾರೆ.

ಪೇಜಾವರ ಶ್ರೀಗಳು ಹಿಂದೊಮ್ಮೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕು ಈಗ, “ಮಾಂಸಾಹಾರ, ಸಸ್ಯಾಹಾರ” ವಿವಾದದ ಬೆನ್ನಲ್ಲೇ ವೈರಲ್ ಆಗಿದೆ. ಸಂದರ್ಶನದಲ್ಲಿ ಪೇಜಾವರ ಶ್ರೀಗಳು ಹಿರಿಯ ಪತ್ರಕರ್ತ ಎಚ್‌.ಆರ್‌.ರಂಗನಾಥ್ ಅವರಿಗೆ ಉತ್ತರಿಸುತ್ತಾ, “ಮಾಂಸಾಹಾರವನ್ನು ಕೆಲವು ಬ್ರಾಹ್ಮಣರು ಗುಟ್ಟುಗುಟ್ಟಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿರುವುದು ದಾಖಲಾಗಿದೆ.

“ಪುರಾಣ ಕಾಲದಿಂದಲೂ ಬಂದಿರುವ ಮಾಂಸದ ಭಕ್ಷಣೆ, ಪೇಜಾವರರು ಹೇಳಿದ ತಕ್ಷಣ ನಿಂತು ಹೋಗಿಬಿಡುತ್ತದೆಯೇ?” ಎಂದು ರಂಗನಾಥ್‌ ಅವರು ಕೇಳುತ್ತಾರೆ.

“ಪುರಾಣ ಕಾಲದಿಂದ ಬಂದದ್ದು ನಿಂತು ಹೋಗಿ ಸಾವಿರಾರು ವರ್ಷಗಳಾಗಿದೆ. ಪುರಾಣ ಕಾಲದಲ್ಲಿ ಇದ್ದದ್ದು ಕಲಿಯುಗ ಪ್ರಾರಂಭದ ಬಳಿಕ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ನಿಂತು ಹೋಗಿದೆ. ಇದು ಪೇಜಾವರರು ಹೇಳಿದ್ದಲ್ಲ. ಬ್ರಾಹ್ಮಣರಲ್ಲಿ ಮಾಂಸಾಹಾರಿ ಪದ್ಧತಿ ಇತ್ತು, ಇಲ್ಲ ಎಂಬ ಚರ್ಚೆ ಇದೆ. ಇತ್ತು ಎಂದು ಇಟ್ಟುಕೊಂಡರೂ ಕೂಡ ಅದನ್ನೆಲ್ಲ ನಿಲ್ಲಿಸಿದ್ದಾರೆ. ಮಾಂಸಾಹಾರ ಕೂಡದು, ಅದು ಬ್ರಾಹ್ಮಣರಲ್ಲಿ ಇರಬಾರದು ಎಂದು ಹಿಂದಿನವರು ಹಠ ತೊಟ್ಟು, ಅನೇಕ ಶತಮಾನಗಳ ಪ್ರಯತ್ನದಿಂದ ನಿಂತುಹೋಗಿದೆ” ಎಂದು ವಿಶ್ವೇಶತೀರ್ಥರು ಹೇಳುತ್ತಾರೆ.

“ಒಂದು ಅಭ್ಯಾಸವಾಗಿ…” ಎಂದು ರಂಗನಾಥ್‌ ಅವರು ಏನನ್ನೋ ಕೇಳಲು ಹೊರಡುತ್ತಾರೆ, ಅಷ್ಟರಲ್ಲಿ ಮಾತು ಮುಂದುವರಿಸುವ ಶ್ರೀಗಳು, “ನಿಂತು ಹೋಗಿದ್ದು, ಪುನಃ ಪ್ರಾರಂಭವಾಗಿದೆ. ಯಾಕೆಂದರೆ ಇವತ್ತಿನ ವಾತಾವರಣದಲ್ಲಿ ಬ್ರಾಹ್ಮಣರು ಕೂಡ ಗುಟ್ಟುಗುಟ್ಟಾಗಿ, ಕೆಲವರು ಬಹಿರಂಗವಾಗಿ ಮದ್ಯ ಮಾಂಸವನ್ನು ಸ್ವೀಕಾರ ಮಾಡುತ್ತಿದ್ದಾರೆ…. ಬ್ರಾಹ್ಮಣ್ಯವನ್ನು ಅವರು (ಬ್ರಾಹ್ಮಣರು) ಮತ್ತಷ್ಟು ಚೆನ್ನಾಗಿ ಉಳಿಸಿಕೊಳ್ಳಬೇಕು. ಇದು ಮೊದಲಿನಿಂದಲೂ ಇದೆ. ಆದರೆ ಶಿಥಿಲವಾಗುತ್ತಿದೆ. ಇದು ಶಿಥಿಲವಾಗಬಾರದು ಅಂತ ಎರಡು ಜವಾಬ್ದಾರಿ ಇದೆ. ಒಂದು: ಬ್ರಾಹ್ಮಣ್ಯದ ರಕ್ಷಣೆಯಾಗಬೇಕು. ಹಿಂದುತ್ವ ರಕ್ಷಣೆಯಾಗಬೇಕು. ಈ ಎರಡು ಜವಾಬ್ದಾರಿ…” ಎನ್ನುತ್ತಾರೆ.

“ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧ ಇದೆಯಾ?” ಎಂದು ರಂಗನಾಥ್‌ ಮರುಪ್ರಶ್ನಿಸುತ್ತಾರೆ. “ಸಂಬಂಧ ಇಲ್ಲ. ಎರಡೂ ಬೇಕು. ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಸೀಮಿತ, ಹಿಂದುತ್ವ ಎಲ್ಲರಿಗೂ ಸಂಬಂಧಪಟ್ಟಿರುವಂತಹದ್ದು” ಎಂದು ಶ್ರೀಗಳು ಪ್ರತಿಕ್ರಿಯಿಸುತ್ತಾರೆ.

ಶ್ರೀಗಳು ಬ್ರಾಹ್ಮಣವನ್ನು ಉಳಿಸಿಕೊಳ್ಳಬೇಕು ಎನ್ನುತ್ತಿರುವುದು, ಹಿಂದುತ್ವ ಹಾಗೂ ಬ್ರಾಹ್ಮಣ್ಯಕ್ಕೆ ಸಂಬಂಧ ಇಲ್ಲ ಎಂದು ಹೇಳುತ್ತಿರುವುದು ಹಾಗೂ ಮಾಂಸಾಹರದ ಕುರಿತು ಅವರು ಪ್ರಸ್ತಾಪಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

ಬರಹಗಾರ, ಚಿಂತಕ ನಾಗೇಗೌಡ ಕೀಲಾರ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ಅನ್ನು ಸುಮಾರು 300ಕ್ಕೂ ಹೆಚ್ಚು ಜನರು (ಈ ವರದಿ ಮಾಡುವ ವೇಳೆಗೆ) ಶೇರ್‌ ಮಾಡಿದ್ದಾರೆ. ಈ ಮೂಲಕ ವಿಡಿಯೊ ವೈರಲ್‌ ಆಗಿದೆ.


ಇದನ್ನೂ ಓದಿರಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಹಿಂದೂ ಧರ್ಮದಲ್ಲಿ ಜಾತಿ ಬೇಧ ಜಾಸ್ತಿ ಅಂದರೆ ಬೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಲ್ಲಾರು ಸಮಾನರು ನಮೋ ಬುದ್ಧ ಜೈ ಬಸವಣ್ಣ ಜೈ ಭೀಮ್ ✍️✍️✍️✍️🇪🇺🏳️‍🌈

  2. Bhudda dhrama ondhu dharma Kintha, Hindha Dharmada ondu Bhaga ಎಂದು nambiddene. Lord Budda adhu bereye Dharma ಎಂದು helalulla. ಎಂದು nanu nambiddene. Lord Budda🙏🙏🙏

  3. ಮಾಂಸ ತಿನ್ನುವುದು ಮೃಗೀಯ ಗುಣ. ಅದನ್ನೂ ಸಾಧಿಸಿಕೊಳ್ಳಬೇಡಿ. ಈ ಮೃಗೀಯ ಗುಣ ನನ್ನಲ್ಲೂ ಇದೆ. ನನ್ನಲ್ಲಿದೆ ಎಂದ ಮಾತ್ರಕ್ಕೆ ಸರಿಯಲ್ಲ. ಸಾತ್ವಿಕ ಗುಣವಿರುವವರನ್ನು ದೂಷಿಸುವುದು ಸರಿಯಲ್ಲ. ಕಾಡಿನಲ್ಲಿ ಜಿಂಕೆ ಬಳಿ ಹೋಗುತ್ತೀರೊ ಇಲ್ಲ ಹುಲಿಯ ಬಳಿ ಹೋಗುತ್ತೀರೊ.

  4. ಮಂಗನಿಂದ ಮಾನವರಾದ ಯಾವ ಜಾತಿ,ಯಾವ ಧರ್ಮ ಇರಲಿಲ್ಲ.ಯುಗಗಳು ಕಳೆಯುತ್ತಾ ಜಾತಿ ಧರ್ಮ ಸೃಷ್ಟಿ ಆಯ್ತು.ಆಹಾರ ಪದ್ಧತಿ ಬದಲಾಯಿತು,ಇಲ್ಲಿ ಯಾವ ಜಾತಿ ಮೇಲೆ ಅಲ್ಲಾ,ಕೀಳು ಅಲ್ಲಾ.ಎಲ್ಲಾರು ಒಂದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...