ಗುಜರಾತ್ನಲ್ಲಿ ಎಮ್ಮೆ ಸಾಗಿಸುತ್ತಿದ್ದ ಆರೋಪದ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಬಾವಿಗೆ ತಳ್ಳಿ, ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 22 ರಂದು ಘಟನೆ ನಡೆದಿದ್ದು, ಸಂತ್ರಸ್ತ ಉಮೇದ್ ಖಾನ್ ಬಲೋಚ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಹೋದರ ಸೊರಬಖಾನ್ ಬಲೋಚ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ ನಂತರ ನಾಲ್ವರು ಆರೋಪಿಗಳಾದ ಅಖೇರಾಜ್ಸಿನ್ಹ್ ಪರ್ಬತ್ಸಿನ್ಹ್ ವಘೇಲಾ, ಚೆಲ್ಸಿನ್ಹ್ ಸುಜನ್ಸಿನ್ಹ್ ಸೋಲಂಕಿ, ಈಶ್ವರಭಾಯಿ ಮುಲ್ಶಂಕರಭಾಯಿ ಪುರೋಹಿತ್ ಮತ್ತು ಮಹೇಂದ್ರಸಿಂಹ ವದನ್ಸಿನ್ಹ್ ಸೋಲಂಕಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಸಿಕ್ಕಿದೆ ಎನ್ನಲಾಗಿದೆ.
ತದನಂತರ ಮತ್ತೊಂದು ಪ್ರಕರಣ ದಾಖಲಾಗಿದ್ದು ಸಂತ್ರಸ್ತ ಉಮೇದ್ ಖಾನ್ ವೇಗದ ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇಂತಹ ಅಮಾನುಷ ಘಟನೆ ನಡೆದಿದ್ದರೂ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಇದನ್ನು ವರದಿ ಮಾಡಿಲ್ಲ ಎಂದು ಪತ್ರಕರ್ತ ಮೊಹಮ್ಮದ್ ಜುಬೇರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Cow vigilantes brutally thrashed Umed khan Baloch for transporting buffaloes in a pick-up van to Charotar, Gujarat, He was forced him to chant ‘Jai Shri Ram’. Incident from Gujarat, July 22. You'll hardly see any News Channel or News Anchor covering this Not so important news. pic.twitter.com/f3EHm2lNib
— Mohammed Zubair (@zoo_bear) August 4, 2023
ಇದನ್ನೂ ಓದಿ; ಕೋರ್ಟ್ ಆವರಣದಲ್ಲಿಯೇ ರಾಜೀನಾಮೆ ಘೋಷಿಸಿದ ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ರೋಹಿತ್ ಬಿ ದೇವ್