Homeಅಂಕಣಗಳುಎಚ್.ಐ.ವಿ-ಏಡ್ಸ್ ಪೀಡಿತರ ಮಹಾತಾಯಿ ಮಂಗಳೂರಿನ ತಬಸ್ಸುಂ

ಎಚ್.ಐ.ವಿ-ಏಡ್ಸ್ ಪೀಡಿತರ ಮಹಾತಾಯಿ ಮಂಗಳೂರಿನ ತಬಸ್ಸುಂ

ಎಚ್.ಐ.ವಿ-ಏಡ್ಸ್ ಪೀಡಿತ ಮಕ್ಕಳನ್ನು ತಬಸ್ಸುಂ ತಮ್ಮ ಮಡಿಲೇರಿಸಿಕೊಂಡು ಸ್ನೇಹದೀಪವೆಂಬ ಆಸರೆಯ ಮನೆಯನ್ನು ತೆರೆದು ಅವರೂ ಸಾವಿನವರೆಗೆ ನೆಮ್ಮದಿಯಿಂದ ಬದುಕಬೇಕೆಂದು ದುಡಿಯುತ್ತಿದ್ದಾರೆ.

- Advertisement -
- Advertisement -

ನಿರ್ಗತಿಕರಿಗೆ- ಬೀದಿಯಲ್ಲಿ ಬಿದ್ದು ನರಳುತ್ತಿದ್ದ ರೋಗಿಗಳಿಗೆ ಆಸರೆಯಾದ ಮದರ್ ಥೆರೇಸಾ, ಮಕ್ಕಳಿಲ್ಲವೆಂಬ ಕೊರಗನ್ನು ನೀಗಿಸಲು ಸಾಲು ಮರಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಪೋಷಿಸಿದ ಸಾಲುಮರದ ತಿಮ್ಮಕ್ಕರ ಬಗ್ಗೆ ನಾವು ಬಹಳಷ್ಟು ಓದಿದ್ದೇವೆ, ತಿಳಿದಿದ್ದೇವೆ. ನಮ್ಮ ಮಂಗಳೂರಿನಲ್ಲಿ ಇವೆಲ್ಲರಿಗಿಂತ ವಿಭಿನ್ನ ಮತ್ತು ಸವಾಲಿನ ಸೇವೆಯನ್ನು ಒಪ್ಪಿಕೊಂಡು ಅದನ್ನೇ ಬದುಕಾಗಿಸಿಕೊಂಡ ತಾಯಿಯೊಬ್ಬರಿದ್ದಾರೆ.

ಎಚ್.ಐ.ವಿ-ಏಡ್ಸ್ ಎಂದರೆ ನಮ್ಮ ವಿದ್ಯಾವಂತ ಜನರಲ್ಲೂ ಅದೊಂದು ಮುಟ್ಟಿಸಿಕೊಳ್ಳಬಾರದ ಕಾಯಿಲೆಯೆಂಬ ಭಾವವಿದೆ. ಪಾಪದ ಫಲವೆಂದು ತಿಳಿದುಕೊಂಡ ಜನರೂ ಇದ್ದಾರೆ. ಅವರಿಗೂ ಭಾವನೆಗಳಿವೆ, ಸಾವಿನವರೆಗೆ ಒಂದು ಬದುಕಿದೆ ಎಂದು ಅರ್ಥೈಸಿಕೊಳ್ಳುವವರು ಬಹಳ ಕಡಿಮೆ. ಅನಿಶ್ಚಿತವಾಗಿರುವ ಅಥವಾ ಸದಾ ಸಾವನ್ನೇ ಕಾಯುತ್ತಿರುವಂತಿರುವ ಅವರ ಬದುಕಲ್ಲಿ ನಗು ಚಿಮ್ಮಿಸಿ ಅವರೂ ಸಹಜವಾಗಿ ಬದುಕಬೇಕೆಂಬ ಮಹದುದ್ದೇಶ ಇಟ್ಟುಕೊಂಡು ಸೇವಾನಿರತರಾಗಿರುವ ಆ ಮಹಾತಾಯಿ ತಬಸ್ಸುಂ.

ಸಾಮಾನ್ಯವಾಗಿ ಏಡ್ಸ್ ರೋಗಿಗಳನ್ನು ಸಮಾಜವು ಅಸ್ಪೃಶ್ಯರೆಂಬ ದೃಷ್ಟಿಯಿಂದಲೇ ನೋಡುತ್ತದೆ. ಕುಟುಂಬದೊಳಗೂ ಅವರನ್ನು ಹತ್ತಿರ ಸೇರಿಸಲು ಹಿಂಜರಿಯುತ್ತಾರೆ. ಇದು ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುತ್ತದೆ. ಹೀಗೆ ಸಮಾಜದಿಂದ, ಕುಟುಂಬಿಕರಿಂದ ತಿರಸ್ಕಾರಕ್ಕೊಳಪಟ್ಟ ಎಚ್.ಐ.ವಿ-ಏಡ್ಸ್ ಪೀಡಿತ ಮಕ್ಕಳನ್ನು ತಬಸ್ಸುಂ ತಮ್ಮ ಮಡಿಲೇರಿಸಿಕೊಂಡು ಸ್ನೇಹದೀಪವೆಂಬ ಆಸರೆಯ ಮನೆಯನ್ನು ತೆರೆದು ಅವರೂ ಸಾವಿನವರೆಗೆ ನೆಮ್ಮದಿಯಿಂದ ಬದುಕಬೇಕೆಂದು ದುಡಿಯುತ್ತಿದ್ದಾರೆ.

ತಬಸ್ಸುಂ ಸ್ನೇಹದೀಪ ತೆರೆಯುವ ಮುನ್ನ ಎನ್‌ಜಿಒ ಒಂದರಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವ ಜನರಿಗೆ, ಎಚ್.ಐ.ವಿ.ಸೋಂಕಿತ ಗರ್ಬಿಣಿ ಸ್ತ್ರೀಯರಿಗೆ ಆಪ್ತಸಮಾಲೋಚಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಗಂಭೀರ ಸ್ಥಿತಿ ತಲುಪಿದ ಕೆಲ ತಾಯಂದಿರು ’ತಾವಿನ್ನು ಬದುಕಿರುತ್ತೇವೆಂಬ ಭರವಸೆಯಿಲ್ಲ, ನಮ್ಮ ನಂತರ ನಮ್ಮ ಮಕ್ಕಳ ಗತಿಯೇನು’ ಎಂದು ಗೋಳಾಡುತ್ತಿದ್ದಾಗ ತಬಸ್ಸುಂರ ಹೃದಯ ಸಂಕಟದಿಂದ ಮಿಡಿಯುತ್ತಿತ್ತು. ಅಂತಹ ಮಕ್ಕಳಿಗಾಗಿ ತಾನೇನು ಮಾಡಲು ಸಾಧ್ಯ ಎಂದು ಯೋಚನಾಮಗ್ನರಾಗುತ್ತಿದ್ದರು. ಆಗೆಲ್ಲಾ ಅವರ ಒಳಮನಸ್ಸು ಎಷ್ಟಾದರೂ ತಾನೊಬ್ಬಳು ಬಡ ಕುಟುಂಬದ ಹೆಣ್ಮಗಳು, ತನ್ನಿಂದೇನು ಸಾಧ್ಯ ಎಂದು ಪ್ರಶ್ನಿಸುತ್ತಿತ್ತು. ಆತ್ಮೀಯ ಸ್ನೇಹಿತೆಯೊಬ್ಬರು ಏಡ್ಸ್‌ನಿಂದ ಮೃತಪಟ್ಟಾಗ ಆಕೆಯ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕುಟುಂಬಸ್ಥರು ಹಿಂಜರಿದ ಘಟನೆ ಅವರನ್ನು ತೀವ್ರವಾಗಿ ಘಾಸಿಗೊಳಿಸಿತು. ಹಾಗಾಗಿ ಸಮಾಜದಿಂದ ತಿರಸ್ಕೃತಗೊಂಡ ಇಂತಹ ಮಕ್ಕಳಿಗೆ ಆಸರೆಯಾಗುವ ಪಣತೊಟ್ಟಿದ್ದರ ಫಲವಾಗಿ ಮಂಗಳೂರಿನಲ್ಲಿ 2011ರಲ್ಲಿ ’ಸ್ನೇಹದೀಪ’ ಹುಟ್ಟಿಕೊಂಡಿತು.

ಅದಾಗಲೇ ಎನ್‌ಜಿಒ ಒಂದರಲ್ಲಿ ಕಾರ್ಯನಿರ್ವಹಿಸಿದ್ದರಿಂದ ಈ ರೀತಿಯ ಸಂಸ್ಥೆಯನ್ನು ಸ್ಥಾಪಿಸಿ ಹೇಗೆ ಮುನ್ನಡೆಸಬಹುದೆಂಬ ಐಡಿಯಾ ಅವರಿಗಿತ್ತು. ನೋಂದಣಿಗಾಗಿ ವಕೀಲರೊಬ್ಬರ ಸಹಾಯವನ್ನು ಪಡೆದರೆಂಬುದನ್ನು ಬಿಟ್ಟರೆ ಮೊದಲ ಹೆಜ್ಜೆಯನ್ನು ಏಕಾಂಗಿಯಾಗೇ ಮುಂದಿಟ್ಟರು. ಬಾಡಿಗೆ ಕಟ್ಟಡವೊಂದರಲ್ಲಿ ಸ್ನೇಹದೀಪವನ್ನು ಪ್ರಾರಂಭಿಸುವಾಗ ತನ್ನ ಒಡವೆಗಳನ್ನು ಮಾರಿದರು. ನಂತರದಲ್ಲಿ ದಾನಿಗಳು, ಪರಿಚಯಸ್ಥರು ಕೈ ಜೋಡಿಸಲು ಮುಂದೆ ಬಂದರು. ಅದಾಗಲೇ ಎಚ್.ಐ.ವಿ ಸೋಂಕಿತ ತಾಯಂದಿರ ಪರಿಚಯವಿದ್ದುದರಿಂದ ಆಸರೆಯ ಅಗತ್ಯವಿರುವ ಮಕ್ಕಳನ್ನು ಹುಡುಕುವುದು ಕಷ್ಟವಾಗಲಿಲ್ಲ. ನಂತರ ಮಕ್ಕಳ ಕಲ್ಯಾಣ ಸಮಿತಿಯು ಕೆಲವು ಮಕ್ಕಳನ್ನು ಈ ಆಶ್ರಮಕ್ಕೆ ಕಳುಹಿಸಿಕೊಟ್ಟಿತು.

ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಹೆಣ್ಮಗಳೊಬ್ಬಳು ಈ ರೀತಿಯ ಸಾಹಸಕ್ಕೆ ಕೈ ಹಾಕಲು ಸಾಧ್ಯವಾದುದಾದರೂ ಹೇಗೆ ಎಂಬುದೇ ಅಚ್ಚರಿಯ ವಿಷಯ. ಈ ಪ್ರಶ್ನೆಯನ್ನು ನಾನು ಅವರ ಮುಂದಿಟ್ಟಾಗ, “ತಂದೆಯವರ ಸಂಪೂರ್ಣ ಬೆಂಬಲವು ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯಿಡಲು ಅನುವು ಮಾಡಿಕೊಟ್ಟಿತು. ಜೊತೆಗೆ ಅವಿದ್ಯಾವಂತೆಯಾದ ತಾಯಿಯೂ ಕೂಡಾ ಇಂತಹ ವಿಶಿಷ್ಟ ಮಾನವೀಯ ಸೇವೆಗೆ ಬೆನ್ನು ತಟ್ಟಿ ಹುರಿದುಂಬಿಸಿದರು. ಇನ್ನು ಸಮಾಜವೇನು ಹೇಳುತ್ತದೆ ಎಂಬುದನ್ನು ಕೇಳಿ ಕೂತರಾಗುವುದಿಲ್ಲ, ಸದುದ್ದೇಶದಿಂದ ಮಾಡುವ ಕೆಲಸದ ಜೊತೆಗೆ ಅಲ್ಲಾಹನಿರುತ್ತಾನೆ” ಎಂದು ನಿರಾಳವಾಗಿ ಉತ್ತರಿಸಿದರು.

ಬಡ ಕುಟುಂಬದ ತಬಸ್ಸಂ‌ಗೆ ಎಸ್ಸೆಸ್ಸೆಲ್ಸಿ ಬಳಿಕ ಆರ್ಥಿಕ ಅಡಚಣೆಯಿಂದಾಗಿ ಮುಂದಿನ ಓದು ಕಷ್ಟವಾದರೂ ಹೇಗೋ ಹಣ ಹೊಂದಿಸಿ ಪಿಯುಸಿ ಮುಗಿಸಿದರು. ಶಿಕ್ಷಣವನ್ನು ಅಲ್ಲಿಗೇ ಮೊಟಕುಗೊಳಿಸದೆ ಮದುವೆಯ ಬಳಿಕ ಪದವಿಯನ್ನೂ ಪೂರ್ಣಗೊಳಿಸಿದರು. ತದನಂತರ ಕೇವಲ ತನ್ನ ಹೊಟ್ಟೆ ತುಂಬಿಸುವ ಸಂಪಾದನೆಯತ್ತ ಮುಖಮಾಡದೇ ಸೇವೆಯ ಭಿನ್ನ ಹಾದಿಯನ್ನು ಆಯ್ಕೆಮಾಡಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಮೊದಲಿಗೆ ಆರು ಮಕ್ಕಳಿಗೆ ಆಸರೆಯಾದ ಈ ಸಂಸ್ಥೆಯಲ್ಲಿ ಇದೀಗ 28 ಮಕ್ಕಳಿದ್ದಾರೆ. ಜಾತಿ, ಧರ್ಮಗಳಾಚೆಗೆ ಮಾನವೀಯ ತಳಹದಿಯಲ್ಲಿ ನಿಂತಿರುವ ಈ ಆಶ್ರಮದಲ್ಲಿ 3ರಿಂದ 18 ವರ್ಷ ವಯಸ್ಸಿನ ಎಲ್ಲಾ ಧರ್ಮದ ಮಕ್ಕಳಿದ್ದಾರೆ. ರೋಗವು ಮನುಷ್ಯನ ಜಾತಿ ಧರ್ಮವನ್ನು ನೋಡಿ ಬರುವುದಿಲ್ಲ ಎನ್ನುತ್ತಾರೆ ತಬಸ್ಸುಂ. ಇಲ್ಲಿನ ಮಕ್ಕಳು ಮಂಗಳೂರು ನಗರದ ಬೇರೆಬೇರೆ ಕಡೆಗಳಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ವಯಸ್ಸಿಗೆ ಬಂದ ಹೆಣ್ಮಕ್ಕಳನ್ನು ಅವರ ಪಾಡಿಗೆ ಸ್ವತಂತ್ರವಾಗಿ ಬಿಡುವಂತೆಯೂ ಇಲ್ಲ, ಕುಟುಂಬಿಕರು ಸೇರಿಸಿಕೊಳ್ಳುವುದೂ ಇಲ್ಲ. ಅಲ್ಲದೇ ಇಂತಹ ನಿರ್ಗತಿಕ ಹೆಣ್ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಒಂದು ಕಡೆಯಾದರೆ, ಇದರಿಂದಾಗಿ ಸಮಾಜದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯೂ ಇರುವುದರಿಂದ ಆಶ್ರಮದಲ್ಲಿಯೇ ಆಶ್ರಯ ಒದಗಿಸುತ್ತಾ ಟೈಲರಿಂಗ್, ಬ್ಯೂಟಿಶಿಯನ್ ಮುಂತಾದ ವೃತ್ತಿ ಕೌಶಲ ತರಬೇತಿಗಳನ್ನು ನೀಡಲಾಗುತ್ತಿದೆ.

ಅವರಿಗೆ ಬೇಕಾದ ಲೈಫ್ ಲಾಂಗ್ ಚಿಕಿತ್ಸೆ, ಔಷಧಿಯನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ART ಸೆಂಟರ್‌ನಲ್ಲಿ ನೀಡಲಾಗುತ್ತದೆ. ಆಪ್ತ ಸಮಾಲೋಚನೆ, ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಲಾಗುವ ಆರೋಗ್ಯ ಸಂಬಂಧಿ ಪರೀಕ್ಷೆಗಳಿಗಾಗಿ ತಬಸ್ಸುಮ್ ಮಕ್ಕಳನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಮ್ಮನಿಂದ ಬೇರ್ಪಟ್ಟ ಪುಟ್ಟ ಮಕ್ಕಳು ಆಶ್ರಮ ಸೇರಿದಾಗ ಅವರನ್ನು ಸಂತೈಸುವುದು ಸುಲಭದ ಕೆಲಸವಲ್ಲ. ಅಳುವಾಗ, ಅಮ್ಮನಿಗಾಗಿ ಹಂಬಲಿಸುವಾಗ, ತಬಸ್ಸುಂ ಅವರತ್ತ ಮಮತೆಯ ಹೊನಲನ್ನೇ ಹರಿಸುತ್ತಾರೆ. ಸ್ವಂತ ಅಮ್ಮನಂತಾಗಲು ಸಾಧ್ಯವಿಲ್ಲವಲ್ಲ, ನನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಅವರಿಗೆ ನೆರವಾಗುತ್ತೇನೆ ಎನ್ನುತ್ತಾರೆ ತಬಸ್ಸುಂ. ಸ್ವಲ್ಪ ದೊಡ್ಡ ಮಕ್ಕಳಾದರೆ ಅವರು ಎಚ್‌ಐವಿ ಸೋಂಕಿತರು ಬದುಕುಳಿಯುವುದಿಲ್ಲ ಎಂದು ತಿಳಿದಿರುತ್ತಾರೆ. ಅವರ ಜೊತೆಗಿನ ಒಡನಾಡಿಗಳು ಮರಣ ಹೊಂದಿದಾಗ ಅವರೊಳಗಿನ ಆತಂಕ, ಭಯ ಇಮ್ಮಡಿಗೊಳ್ಳುತ್ತದೆ. ಹಾಗಾಗಿ ಅವರು ಖಿನ್ನರಾಗುವುದು, ಜೀವನೋತ್ಸಾಹವನ್ನು ಕಳೆದುಕೊಳ್ಳುವುದು ಸಾಮಾನ್ಯವಾದುದರಿಂದ ಅವರು ಅಂತಹ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಿರುತ್ತಾರೆ. ವಾಸ್ತವ ಗೊತ್ತಿದ್ದರೂ ಪ್ರತೀ ಮಗುವೂ ಪ್ರಾಣ ತ್ಯಜಿಸುವಾಗ “ಇದೇ ಸಾಯುವ ಕೊನೆಯ ಮಗುವಾಗಲಿ ಎಂದು ಹೃದಯ ಪ್ರಾರ್ಥಿಸುತ್ತದೆ” ಎನ್ನುತ್ತಾರೆ ತಬಸ್ಸುಂ.

ಆಶ್ರಮದಲ್ಲಿರುವ ಕೆಲವು ಮಕ್ಕಳು ಹೆತ್ತವರಿಬ್ಬರನ್ನೂ ಕಳಕೊಂಡವರಾದರೆ ಇನ್ನು ಕೆಲವರಿಗೆ ತಂದೆ/ ತಾಯಿ ಯಾರಾದರೊಬ್ಬರು ಬದುಕಿರುತ್ತಾರೆ. ಹೆತ್ತವರಲ್ಲಿ ಬದುಕಿರುವ ಕೆಲವರು ತಮ್ಮಿಂದ ಏನೂ ಸಹಾಯ ಮಾಡಲಾಗದಿದ್ದರೂ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ ಅಥವಾ ಕೆಲವೊಮ್ಮೆ ಭೇಟಿ ನೀಡುತ್ತಾರೆ. ಅನಾಥ ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಂಡ ತಬಸ್ಸುಂ ಕೆಲವೊಮ್ಮೆ ಆ ಮಕ್ಕಳನ್ನು ತನ್ನ ಮನೆಗೆ ಕರೆದೊಯ್ದು ಅವರ ನೋವನ್ನು ಮರೆಸಲು ಯತ್ನಿಸುತ್ತಾರೆ.

ಇಂದು ಭಾರತದಲ್ಲಿ ಏಡ್ಸ್ ಕಾಯಿಲೆಯ ಪ್ರಮಾಣ ಕಡಿಮೆಯಾಗುತ್ತಿರುವುದರ ಹಿಂದೆ ನಮ್ಮ ಮಂಗಳೂರಿನ ಈ ಮಹಾತಾಯಿಯ ಕೊಡುಗೆಯೂ ಇದೆ. ಮಂಗಳೂರಿನಂತಹ ಮಂಗಳೂರಿನಲ್ಲಿ ಮುಸ್ಲಿಂ ಆಗಿರುವ ಒಂದೇ ಕಾರಣಕ್ಕೆ ಸದಾ ಕಾಕ ದೃಷ್ಟಿಗೆ ಗುರಿಯಾಗುವ ಮತ್ತು ಇತರರಿಂದ ಅನ್ಯರಂತೆ ಪರಿಗಣಿಸಲ್ಪಡುವ ಸಮುದಾಯ ಮುಸ್ಲಿಂ ಸಮುದಾಯ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ನಿಷ್ಪಾಪಿ ಮಕ್ಕಳ ಬದುಕಿಗೆ ಆಸರೆಯಾಗುವ ಮೂಲಕ ತಬಸ್ಸುಂ ಎಂಬ ಹೆಸರು ಸಮುದಾಯಕ್ಕೆ ಅಭಿಮಾನ.

ಅವರನ್ನು ಹಲವಾರು ಪ್ರಶಸ್ತಿಗಳೂ ಅರಸಿಕೊಂಡು ಬಂದಿವೆ. ಅವೆಲ್ಲಕ್ಕಿಂತ ಮಿಗಿಲಾಗಿ ಇಂತಹ ವಿಶಿಷ್ಟ ಮಾನವೀಯ ಸೇವೆ ಸಾಂಗವಾಗಿ ಮುಂದುವರಿಯಲು ನಾಗರಿಕ ಸಮಾಜದ ಬೆಂಬಲ ಅಗತ್ಯವಾಗಿ ಬೇಕಿದೆ.

(ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಸ್ನೇಹದೀಪ ಸಂಸ್ಥೆಗೆ ನೆರವು ನೀಡಬಯಸುವವರು 099640-24655 ಇಲ್ಲಿಗೆ ಕರೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ)


ಇದನ್ನೂ ಓದಿ: ದಲಿತ ಬಾಲಕರ ಬರಿಗೈಯಲ್ಲಿ ಮಲ ಎತ್ತಿಸಿದ ಮೇಲ್ಜಾತಿಯ ಗುಂಪು – ಬಂಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...