Homeಮುಖಪುಟಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ 'ಬಾಡಿ ಲಾಂಗ್ವೇಜ್' ಹೇಗಿರಬೇಕು ಗೊತ್ತೆ?

ಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ ‘ಬಾಡಿ ಲಾಂಗ್ವೇಜ್’ ಹೇಗಿರಬೇಕು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ -14

ಸಂವಹನ ಕಲೆ –2 ಶಬ್ದಾತೀತ ಭಾಷೆ (ಬಾಡಿ ಲಾಂಗ್ವೇಜ್ – ನಾನ್ ವರ್ಬಲ್ ಕಮ್ಯುನಿಕೇಷನ್)

ಸಂವಹನ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಾಧ್ಯಮ ಶಬ್ದಾತೀತ ದೈಹಿಕ ಭಾಷೆ ಅಥವಾ ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಎಂದು ಕರೆಯಲ್ಪಡುತ್ತದೆ. ಇದು ಶಬ್ದ ಅಥವಾ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮ. ಶಬ್ದ ಮತ್ತು ಭಾಷೆಯ ಜೊತೆ ಸೇರಿದಾಗ ಇದು ಸಂಪೂರ್ಣ ಶಕ್ತಿಶಾಲಿ ವಾಕ್-ದೃಶ್ಯ ಮಾಧ್ಯಮವಾಗುತ್ತದೆ. ನಮ್ಮ ದಿನನಿತ್ಯದ ಸಂವಹನದಲ್ಲಿ ಸುಮಾರು 60-70% ಸಮಯ ಬಳಕೆಯಾಗುವ ಮಾಧ್ಯಮ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್, ಇ-ಮೇಲ್ ಮುಂತಾದವುಗಳಲ್ಲಿ ಇದರ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಾವನೆಗಳನ್ನು ಸ್ಥಬ್ದ ಅಥವಾ ಚಲಿಸುವ ಚಿತ್ರಗಳ ಮೂಲಕ ಬಿಂಬಿಸುವ ಇವನ್ನು ಎಮೋಟಿಕಾನ್ ಅಥವಾ ಎಮೋಜಿ ಎನ್ನುತ್ತಾರೆ.

ದೈಹಿಕ ಭಾಷೆ ನಾವು ಆಡುವ ಭಾಷೆಗಿಂತ 10-15 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಇದರ ಬಳಕೆಯಿಂದ ಸಂವಹನ ಸುಲಭವಾಗುತ್ತದೆ, ಆದರೆ ದೈಹಿಕ ಭಾಷೆ ಅಸಮರ್ಪಕವಾಗಿದ್ದಾಗ ಸಂದೇಶ ತನ್ನ ಅರ್ಥ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಶಬ್ದಾತೀತ ದೈಹಿಕ ಭಾಷೆಯಲ್ಲಿ ಬಳಕೆಯಾಗುವ ಅಂಶಗಳು:

·         ದೃಷ್ಟಿ ಸಂಪರ್ಕ (ಐ ಕಾಂಟ್ಯಾಕ್ಟ್)

·         ಮುಖ ತಿರುಚುವಿಕೆ

·         ಕಣ್ಣು ಮಿಟುಕಿಸುವುದು

·         ಮೈ-ಕೈ ಹಾವಭಾವ

·         ದೇಹದ ನಿಲುವು (ಪಾಷ್ಚರ್)

·         ಸಾಮೀಪ್ಯ (ಅಥವಾ ದೂರ)

·         ಸ್ಪರ್ಶ

·         ವಿನೋದ/ಅಣಕು

·         ಮೌನ

·         ಸಂಕೇತಗಳು

·         ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು

ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿದಲ್ಲಿ ಸಂವಹನ ಪ್ರಭಾವಶಾಲಿಯಾಗಿರುತ್ತದೆ. ದೈಹಿಕ ಸಂದೇಶಗಳು ಮಾತಿನ ಅರ್ಥಕ್ಕೆ ಪೂರಕವಾಗಿರಬೇಕು, ಅದರ ಮೌಲ್ಯವನ್ನು ವೃದ್ಧಿಸುವಂತಿರಬೇಕು, ಹಾಗಿಲ್ಲದಿದ್ದಾಗ  ಅನರ್ಥಕ್ಕೂ ಆಸ್ಪದವಿರುತ್ತದೆ. ಕೆಳಕಂಡ ಚಿತ್ರದಲ್ಲಿ ದೈಹಿಕ ಭಾಷೆಗೂ ಹೇಳಿರುವ ಮಾತಿಗೂ ತಾಳೆ ಇಲ್ಲದಿರುವುದನ್ನು ಕಾಣಬಹುದು.

ದೈಹಿಕ ಭಾಷೆಯನ್ನು ಬಳಸಿಕೊಳ್ಳುವುದು ಹೇಗೆ?

ದೃಷ್ಟಿ-ಸಂಪರ್ಕ: ನೀವು ಮಾತನಾಡುತ್ತಿರುವವರ ಜೊತೆ ದೃಷ್ಟಿ ಸಂಪರ್ಕದಿಂದಿರಿ. ಎಲ್ಲೋ ನೋಡಿಕೊಂಡು ಮಾತನಾಡಿದಲ್ಲಿ ನಿಮಗೆ ನಿಮ್ಮ ಮೇಲೆ ಅಥವಾ ಅವರ ಮೇಲೆ ನಂಬಿಕೆ/ಆಸಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ. ಗುಂಪನ್ನು ಸಂಬೋಧಿಸಿ ಮಾತನಾಡುವಾಗ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಡಿ, ಮಿಕ್ಕವರು ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಯಾರು ಹೆಚ್ಚು ಆಸಕ್ತಿ (ಪ್ರತ್ಯಾದಾನ) ನೀಡುತ್ತಿದ್ದಾರೋ ಅವರನ್ನು ಹೆಚ್ಚು ಸಲ ಗಮನಿಸುವುದರಲ್ಲಿ ತಪ್ಪಿಲ್ಲ ಅಥವಾ ಯಾರು ಋಣಾತ್ಮಕ ಪ್ರತ್ಯಾದಾನ ನೀಡುತ್ತಿದ್ದಾರೋ ಅವರನ್ನು ನಿರ್ಲಕ್ಷಿಸುವುದರಲ್ಲಿ ಅಡ್ಡಿಯಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಸ್ಥೈರ್ಯವೂ ಹೆಚ್ಚುತ್ತದೆ.

ಮುಖ ತಿರುಚುವಿಕೆ: ನಾವು ಮಾತನಾಡುತ್ತಿರುವ ವಿಷಯಕ್ಕೆ ತಕ್ಕ ಮುಖಚರ್ಯೆ ಇರಬೇಕು ಆದರೆ ಮುಖದಲ್ಲಿ ಮಂದಹಾಸ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮುಖಚರ್ಯೆಯಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ, ಎಂಬ (ಒಂಬತ್ತು) ನವರಸಗಳನ್ನು ಸಮರ್ಪಕವಾಗಿ ಬಿಂಬಿಸಬಹುದು. ಅದಕ್ಕೆ ನೀವು ಭರತನಾಟ್ಯ ಅಥವಾ ಮಿಕ್ಕ ಪ್ರದರ್ಶನ ಕಲೆಯ ತಜ್ಞರಾಗಿರಲೇಬೇಕೆಂದಿಲ್ಲ.

ನಿಮ್ಮ ಮಾತಿನ ಸಂದರ್ಭಕ್ಕೆ ತಕ್ಕಂತೆ ಮುಖಚರ್ಯೆ ಹೊಂದಿಸಿಕೊಳ್ಳಿ ಆದರೆ ಮಿಕ್ಕವರ ಬಗ್ಗೆ ಸೊಟ್ಟಮೂತಿ ಮಾಡುವುದನ್ನು ತಪ್ಪಿಸಿ.

ದೇಹದ ನಿಲುವು (ಪಾಷ್ಚರ್): ಇತರರೊಂದಿಗೆ ಮಾತನಾಡುವಾಗ ನೀವು ಸ್ವಲ್ಪ ಅವರ ಮುಂದಕ್ಕೆ ಬಗ್ಗಿದ್ದರೆ ಅವರ ಬಗ್ಗೆ ವಿನಯ/ಆಸಕ್ತಿ ತೋರಿಸುತ್ತದೆ, ತೀರಾ ಮುಂದಕ್ಕೆ ಬಗ್ಗಿದ್ದರೆ ಅದು ಅತಿ ವಿನಯ ಸೂಚಿಸುತ್ತದೆ ಅಥವಾ ಮುಗ್ಗರಿಸಿ ಮುಂದಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು: ದೃಷ್ಟಿ-ಸಂಪರ್ಕ ಮತ್ತು ನವರಸಕ್ಕೆ ಅನುಗುಣವಾಗಿಲ್ಲವಾದಾಗ ವೃಥಾ ಕಣ್ಣು ಮಿಟುಕಿಸುವುದು ಅಥವಾ ರೆಪ್ಪೆ ಬಡಿಯುವುದನ್ನು ಬಿಡಿ. ಇದೂ ಸಹ ತಪ್ಪು ಸಂದೇಶ ರವಾನಿಸುತ್ತದೆ.

ಮೈ-ಕೈ ಹಾವಭಾವ: ನಿಮ್ಮ ಭಾವನೆಗನುಗುಣವಾಗಿ ಕೈಗಳನ್ನು ಬಳಸಿ, ಅವನ್ನು ಕೋಟ್-ಪ್ಯಾಂಟ್ ಜೇಬಿನಲ್ಲಿ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಬೇಡಿ. ಅಂಗೈಗಳನ್ನು ಮೇಲಕ್ಕೆ ಮಾಡಿದ್ದಾಗ ಅದು ನಿಮ್ಮ ಮುಕ್ತ ವ್ಯಕ್ತಿತ್ವ ಸೂಚಿಸುತ್ತದೆ. ಕೈಗಳು ನಿಮ್ಮ ಕಡೆಗೇ ತೋರಿಸುತ್ತಿದ್ದಲ್ಲಿ ಇತರರಿಂದ ನಿಮ್ಮನ್ನು ನೀವೇ ದೂರ ಇರಿಸುತ್ತಿದ್ದೀರೆಂಬುದನ್ನು ತೋರಿಸುತ್ತದೆ.

ಸಾಮೀಪ್ಯ (ಅಥವಾ ದೂರ): ಇದು ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸಾಮೀಪ್ಯ ಅಥವಾ ದೂರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಎಲ್ಲೆ ಮೀರಬೇಡಿ. ಅದರಲ್ಲೂ ಲಿಂಗಬೇಧ ಗಮನದಲ್ಲಿಟ್ಟುಕೊಂಡು, ನಿಮ್ಮ ಲಕ್ಷ್ಮಣ ರೇಖೆ ನೀವೇ ಎಳೆದುಕೊಂಡು, ಅದನ್ನು ದಾಟದಂತೆ ಎಚ್ಚರಿಕೆ ವಹಿಸಿ.

ಸ್ಪರ್ಶ:ಇದು ಸಹ ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸ್ಪರ್ಷದ ಬಳಕೆ ಇರುವಂತೆ ನೋಡಿಕೊಳ್ಳಿ.

ವಿನೋದ/ಅಣಕು: ವಿನೋದ/ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವೂ ಸಹ ಹಾಸ್ಯ ಕಲಾವಿದರಾಗಿಲ್ಲದಿದ್ದರೆ, ಇತರರನ್ನು ಅಣಕಿಸಿ ಹಾಸ್ಯದ ಉತ್ಪನ್ನಕ್ಕೆ ಪ್ರಯತ್ನಿಸಬೇಡಿ. ಇದು ತೊಂದರೆಗೆ ಕಾರಣವಾಗುತ್ತದೆ.

ಮೌನ: ಮಾತು ಮುತ್ತಾದರೆ ಮೌನ ಚಿನ್ನ ಎನ್ನುತ್ತಾರೆ. ಸಮರ್ಪಕವಾಗಿ ಬಳಸಿಕೊಳ್ಳಿ. ಇನ್ನೊಬ್ಬರು ಪ್ರತಿಕ್ರಯಿಸುತ್ತಿರುವಾಗ ನೀವು ಮೌನವಾಗಿರಿ. ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಮೌನವೇ ಉತ್ತರವಾದಲ್ಲಿ ಅದನ್ನು ಮಿಕ್ಕವರು ತಪ್ಪಾಗಿ ಗ್ರಹಿಸಬಹುದು.

ಸಂಕೇತಗಳು: ಯಾವುದೇ ರೀತಿಯದ್ದಾಗಿರಬಹುದು. ಕೈ ಸಂಜ್ಞೆ ಅಥವಾ ಬೆರಳಸಂಜ್ಞೆ ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದಿರಿ. ಕೆಲವು ಬೆರಳು ಅಷ್ಟು ಗೌರಪೂರ್ವಕವಲ್ಲ. ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸುವಾಗ ಮೂರು ಬೆರಳು ನಮ್ಮ ಕಡೆಗೆ ಇರುತ್ತವೆ ಎಂಬುದನ್ನು ಮರೆಯಬೇಡಿ.

ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು:  ಇವು ನಿಮ್ಮ ಪೋಷಾಕು, ಅದರ ಬಣ್ಣ ಅಥವಾ ಅದರೊಂದಿಗೆ ಧರಿಸಿರುವ ಇತರ ಸಾಧನ ಸಾಮಗ್ರಿಗಳಾಗಿರಬಹುದು. ಯೋಚಿಸಿ ಧರಿಸಿ. ಅಪಾರ್ಥಕ್ಕೆ ಎಡೆಯಾಗದಂತೆ ನೋಡಿಕೊಳ್ಳಿ. ಚಿತ್ರದ ಎಡಬದಿಯಲ್ಲಿರುವ ಟಿ-ಶರ್ಟ್ ಬದಲಿಗೆ ಬಲಬದಿಯಲ್ಲಿರುವ ಟಿ-ಶರ್ಟ್ ಧರಿಸಿ, ಜನರ ಪ್ರತಿಕ್ರಿಯೆ ಗಮನಿಸಿ.

ನೀವು ಇನ್ನೊಬ್ಬರಿಗೆ ಹೇಳಿಕೊಳ್ಳಬೇಕೆಂದಿರುವುದನ್ನು ಇತರರು ತಾವೇ ನಿಮಗೆ ಓದಿ ಹೇಳುತ್ತಾರೆ.

ನಿಮ್ಮ ಬಾಡಿ ಲಾಂಗ್ವೇಜ್ ಸುಧಾರಿಸಿಕೊಳ್ಳಲು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ಅಥವಾ ಯಾವುದಾದರೂ ಸಂದರ್ಭದಲ್ಲಿ ವೀಡಿಯೋ ತೆಗೆದಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಕೇಳಿ ಫೀಡ್-ಬ್ಯಾಕ್ ಪಡೆಯಿರಿ. ನಿಮ್ಮ ದೈಹಿಕ ಭಾಷೆ ಉತ್ತಮಗೊಂಡಷ್ಟೂ ನಿಮ್ಮ ಸಂವಹನ ಕಲೆಯೂ ಉತ್ತಮಗೊಳ್ಳುತ್ತದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...