ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಉತ್ತರಪ್ರದೇಶದ ಮಾಜಿ ಮುಖಯಮಂತ್ರಿ ಕಲ್ಯಾಣಸಿಂಗ್ ಅವರಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿರುವ ಸಿಬಿಐ ಸೋಮವಾರ ಕೋರ್ಟಿಗೆ ಈ ಸಂಬಂಧಿತ ಅರ್ಜಿಯನ್ನು ಹಾಕಿದೆ.
ಮಸೀದಿ ಧ್ವಂಸದ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣಸಿಂಗ್, ಮುಂದೆ ರಾಜ್ಯಪಾಲರಾಗಿ ಸಾಂವಿಧಾನಿಕ ಹುದ್ದೆಯಲ್ಲಿ ಇದ್ದ ಕಾರಣ ವಿಚಾರಣೆಯಿಂದ ರಕ್ಷಣೆ ಪಡೆದಿದ್ದರು. ಸೋವವಾರವಷ್ಟೇ ಅವಧಿ ಮುಗಿದ ಪರಿಣಾಮವಾಗಿ ರಾಜಸ್ಥಾನದ ರಾಜ್ಯಪಾಲ ಹುದ್ದೆಯಿಂದ ಕಲ್ಯಾಣಸಿಂಗ್ ನಿರ್ಗಮನಗೊಂಡಿದ್ದಾರೆ. 87 ವರ್ಷದ ಕಲ್ಯಾಣಸಿಂಗ್ ಸೋಮವಾರವೇ ಲಕ್ನೋದ ಬಿಜೆಪಿ ಕಚೇರಿಯಲ್ಲಿ ಮತ್ತೆ ಪಕ್ಷಕ್ಕೆ ಸೇರಿದ್ದು ಪುನಃ ಅಧಿಕಾರ ರಾಜಕಾರಣದಲ್ಲಿ ಸಕ್ರಿಯರಾಗುವ ಬಯಕೆ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಕ್ನೋದ ಸಿಬಿಐ ಕೋರ್ಟಿಗೆ ಅರ್ಜಿ ಸಲ್ಲಿಸಿರುವ ಸಿಬಿಐ ಕಲ್ಯಾಣಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಮನ್ಸ್ ನೀಡುವಂತೆ ಕೋರಿದೆ.
ಲಾಲ್ಕೃಷ್ಣ ಅದ್ವಾನಿ, ಮುರಳಿ ಮನೋಹರ ಜೋಶಿ ಮತ್ತು ಉಮಾಭಾರತಿ ಸೇರಿದಂತೆ ಹಲವು ನಾಯಕರು ಮಸೀದಿ ಧ್ವಂಸದಲ್ಲಿ ಪಾಲುದಾರರು ಎಂಬ ಆರೋಪ ಕುರಿತು ಸಿಬಿಐ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಡಿಸೆಂಬರ್ 6, 1992ರಂದು ಮಸೀದಿ ಧ್ವಂಸದ ನಂತರ ಕಲ್ಯಾಣಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. 1993ರಲ್ಲಿ ಸಲ್ಲಿಸಲಾದ ಚಾರ್ಜ್ಶೀಟಿನಲ್ಲಿ ಅವರ ಹೆಸರಿತ್ತು.
ಅಪೆಕ್ಸ್ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಕೋರ್ಟು ಪ್ರತಿದಿನವೂ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಸಂಚಿನ ಆರೋಪಿಗಳೆಲ್ಲ ಜಾಮೀನು ಪಡೆದುಕೊಂಡಿದ್ದಾರೆ. ಕಲ್ಯಾಣಸಿಂಗ್ ಪುನಃ ಅಧಿಕಾರ ರಾಜಕಾರಣಕ್ಕೆ ಬರುವುದನ್ನು ತಡೆಯಲು ಬಿಜೆಪಿ ಹೈಕಮಾಂಡ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಸೂಚನೆ ನೀಡಿರಬಹುದು ಎನ್ನಲಾಗುತ್ತಿದೆ.
Nam Govt Idare Navu Political pressure HakAsi Navu Tapiskolbhudu and Tapiskodiruteve adare bere party bandre ide agodu and Nima Hage bareyorige Onda news aste
ಒಳ್ಳೆಯ ನಿರ್ಧಾರ ಕೈಗೊಂಡರು ಸಿಬಿಐ