ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿರುವ ಕಾಂಗ್ರೆಸ್ ತನ್ನ ಅದೀಕೃತ ಟ್ವಿಟರ್ ಖಾತೆಯಲ್ಲಿ, ಉರಿಯುತ್ತಿರುವ ಆರೆಸ್ಸೆಸ್ ಚಡ್ಡಿಯ ಚಿತ್ರವನ್ನು ಪೋಸ್ಟ್ ಮಾಡಿದೆ. ಚಿತ್ರದಲ್ಲಿ, ‘145 ದಿನಗಳು ಬಾಕಿಯಿದೆ’ ಎಂದು ಬರೆದಿದ್ದು, ಪೋಸ್ಟ್ನಲ್ಲಿ ‘ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ’ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ, #BharatJodoYatra ಎಂಬ ಹ್ಯಾಶ್ಟ್ಯಾಗ್ನೊಂದಿಗೆ,“ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್ಎಸ್ಎಸ್ ಮಾಡಿದ ಹಾನಿಯನ್ನು ಸರಿಪಡಿಸಲು. ಹಂತ ಹಂತವಾಗಿ, ನಾವು ನಮ್ಮ ಗುರಿಯನ್ನು ತಲುಪುತ್ತೇವೆ” ಎಂದು ಬರೆದುಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನಗಳ ಯಾತ್ರೆಯನ್ನು ಆರಂಭಿಸಿದ ಸಮಯದಲ್ಲಿಯೇ ಆರೆಸ್ಸೆಸ್ ವಿರುದ್ಧ ಸ್ಪಷ್ಟ ಮತ್ತು ಕಠಿಣವಾದ ನಿಲುವಿಗೆ ಪಕ್ಷವೂ ಬಂದಿದೆ. ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿದೆ. 150 ದಿನಗಳ ಅವಧಿಯಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ 3,570 ಕಿ.ಮೀ. ಕ್ರಮಿಸಲಿದೆ.
To free the country from shackles of hate and undo the damage done by BJP-RSS.
Step by step, we will reach our goal.#BharatJodoYatra 🇮🇳 pic.twitter.com/MuoDZuCHJ2
— Congress (@INCIndia) September 12, 2022
ಇದನ್ನೂ ಓದಿ: ರಾಹುಲ್ ಗಾಂಧಿ ತಮಿಳು ಹುಡುಗಿಯನ್ನು ಮದುವೆಯಾಗುತ್ತಾರೆ: ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯ ಅಭಿಲಾಷೆ
ಕಾಂಗ್ರೆಸ್ ಟ್ವೀಟ್ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಚಿತ್ರವನ್ನು ತಕ್ಷಣ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಕಾಂಗ್ರೆಸ್ ಈ ಚಿತ್ರವನ್ನು ಸಮರ್ಥಿಸಿಕೊಂಡಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ನಾನು ಟಿ-ಶರ್ಟ್ಗಳು, ಒಳ ಉಡುಪುಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಬಿಜೆಪಿ ಕಂಟೈನರ್, ಶೂ ಅಥವಾ ಟಿ-ಶರ್ಟ್ಗಳ ಬಗ್ಗೆ ವಿವಾದ ಮಾಡಲು ಬಯಸಿದರೆ ಅದು ಅವರು ಭಯಪಟ್ಟಿರುವುದನ್ನು ತೋರಿಸುತ್ತದೆ.‘ಸುಳ್ಳಿನ ಕಾರ್ಖಾನೆ’ ಸಾಮಾಜಿಕ ಮಾಧ್ಯಮದಲ್ಲಿ ಓವರ್ಟೈಮ್ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ,“ಈ ಚಿತ್ರವು ದೇಶದಲ್ಲಿ ಬೆಂಕಿ ಹಚ್ಚುತ್ತೇವೆ ಎಂಬ ಕಾಂಗ್ರೆಸ್ ರಾಜಕೀಯದ ಸಂಕೇತವಾಗಿದೆ. ಅವರು ಈ ಹಿಂದೆ ಹಚ್ಚಿದ ಬೆಂಕಿಯು ಭಾರತದ ಹೆಚ್ಚಿನ ಭಾಗಗಳಲ್ಲಿ ಅವರನ್ನು ಸುಟ್ಟುಹಾಕಿದೆ. ರಾಜಸ್ಥಾನ ಮತ್ತು ಛತ್ತೀಸ್ಗ್ರಾದಲ್ಲಿ ಉಳಿದಿರುವ ಉರಿಗಳು ಸಹ ಶೀಘ್ರದಲ್ಲೇ ಬೂದಿಯಾಗುತ್ತವೆ. ಈ ಟ್ವೀಟ್ ಅನ್ನು ಉಳಿಸಿಟ್ಟುಕೊಳ್ಳಿ” ಎಂದು ಸವಾಲೆಸೆದಿದ್ದಾರೆ.
This picture is symbolic of Congress politics – of lighting fires in the country.
Fires they lit in the past has burnt them in most of India.
The remaining embers in Rajasthan & Chattisgrah will also reduce to ashes very soon.
Save this tweet. https://t.co/28qbFvKkbI
— Tejasvi Surya (@Tejasvi_Surya) September 12, 2022
ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕೂಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು,“ಇದು ಭಾರತ ಜೋಡಿಸುವ ಯಾತ್ರೆ ಅಲ್ಲ, ಭಾರತ ಒಡೆಯುವ ಮತ್ತು ಬೆಂಕಿ ಹಚ್ಚುವ ಯಾತ್ರೆ. ಕಾಂಗ್ರೆಸ್ ಪಕ್ಷವು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ನಾನು ರಾಹುಲ್ ಗಾಂಧಿಯನ್ನು ಕೇಳಲು ಬಯಸುತ್ತೇನೆ. ನಿಮಗೆ ಈ ದೇಶದಲ್ಲಿ ಹಿಂಸಾಚಾರ ಬೇಕೇ? ಕಾಂಗ್ರೆಸ್ ಕೂಡಲೇ ಈ ಚಿತ್ರವನ್ನು ತೆಗೆಯಬೇಕು” ಎಂದು ಆಗ್ರಹಿಸಿದ್ದಾರೆ.
Delhi | It's not 'Bharat Jodo Yatra' but 'Bharat Todo' and 'Aag Lagao Yatra'. This is not the first time Congress Party has done so. I want to ask Rahul Gandhi do you want violence in this country? Congress should take down this picture immediately: BJP's Sambit Patra pic.twitter.com/5nnK8y2GyW
— ANI (@ANI) September 12, 2022