ಗುಜರಾತ್ ಸರ್ಕಾರದ ಯೋಜನೆಯೊಂದರ ಫ್ಲೆಕ್ಸ್ನಲ್ಲಿ ಕೇರಳದ ಸಿಪಿಐ(ಎಂ) ಪಕ್ಷದ ನಾಯಕಿ, ತಿರುವನಂದಪುರಂ ಪಾಲಿಕೆಯ ಮೇಯರ್ ಆರ್ಯ ರಾಜೇಂದ್ರನ್ ಅವರ ಚಿತ್ರ ಕಾಣಿಸಿಕೊಂಡಿದ್ದು, ಬಿಜೆಪಿ ವ್ಯಾಪಕ ವ್ಯಂಗಕ್ಕೀಡಾಗಿದೆ. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಮೂಲಕ ಸಬಲೀಕರಣದ ಜಾಹೀರಾತಿನಲ್ಲಿ ಆರ್ಯ ಕಾಣಸಿಕೊಂಡಿದ್ದಾರೆ.
ಮೇಯರ್ ಆರ್ಯ ಅವರ ಜೊತೆಗೆ ತಿರುವನಂದಪುರಂನ ಅಂದಿನ ಜಿಲ್ಲಾಧಿಕಾರಿ ಡಾ.ನವಜೋತ್ ಖೋಸ್ ಕೂಡಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲೆಕ್ಸ್ನ ಮೇಲ್ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಚಿತ್ರಗಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಅವರು ಫ್ಲೆಕ್ಸ್ನಲ್ಲಿ ಮುಷ್ಟಿ ಹಿಡಿದ ಕೈಯನ್ನು ಮೇಲಕ್ಕೆ ಎತ್ತಿ ಹಿಡಿದಿರುವುದು ಕಂಡುಬರುತ್ತದೆ. ಫ್ಲೆಕ್ಸ್ ಗುಜರಾತಿ ಭಾಷೆಯಲ್ಲಿದ್ದು, ಅದನ್ನು ಎಲ್ಲಿ ಹಾಕಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ದಿ ವೀಕ್ ವರದಿ ಹೇಳಿದೆ. ಚಿತ್ರದ ಸತ್ಯಾಸತ್ಯತೆಯನ್ನು ಕೂಡಾ ದ ವೀಕ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಕುತೂಹಲಕಾರಿ ವಿಚಾರವೇನೆಂದರೆ ಕೇರಳ ಬಿಜೆಪಿಯು ಮೇಯರ್ ಆರ್ಯ ಅವರನ್ನು ಹಲವಾರು ವಿಷಯಗಳ ಮೇಲೆ ಗುರಿಯಾಗಿಸಿಕೊಂಡಿದ್ದು, ಇತ್ತೀಚೆಗೆ ತಿರುವನಂತಪುರಂ ಪಾಲಿಕೆಯಲ್ಲಿ ತಾತ್ಕಾಲಿಕ ನೇಮಕಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಿನಗಟ್ಟಲೆ ಪ್ರತಿಭಟನೆ ನಡೆಸಿತ್ತು.
ಗುಜರಾತ್ ಬಿಜೆಪಿಯ ಮಾಧ್ಯಮ ಸಂಚಾಲಕ ಯಜ್ಞೇಶ್ ದವೆ ಅವರು ಪೋಸ್ಟರ್ಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾಗಿ ದಿ ವೀಕ್ ವರದಿ ಹೇಳಿದೆ.
ಇದನ್ನೂ ಓದಿ: ಮೋದಿ ಹುಬ್ಬಳ್ಳಿ ಭೇಟಿ: ಪ್ರಾಂಶುಪಾಲರಿಗೆ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಟಾರ್ಗೆಟ್ ನೀಡಿದ ಶಿಕ್ಷಣ ಇಲಾಖೆ!