Homeಮುಖಪುಟ78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಕ್ವೀನ್ ಆಶಾ ಪರೇಖ್

78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಕ್ವೀನ್ ಆಶಾ ಪರೇಖ್

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಆಶಾ ಪರೇಖ್ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ನೃತ್ಯ ಅಕಾಡೆಮಿ `ಕಲಾ ಭವನ್' ಸ್ಥಾಪಿಸಿ,,ನೃತ್ಯದೊಂದಿಗೆ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ.

- Advertisement -
- Advertisement -

ಹಿಂದಿ ಚಿತ್ರರಂಗದ 60, 70 ದಶಕದ ಜನಪ್ರಿಯ ನಾಯಕನಟಿ ಆಶಾ ಪರೇಖ್ ಅವರಿಗೆ ಇಂದು 78ರ ಸಂಭ್ರಮ. ಬಾಲಿವುಡ್ ಸಿನಿಮಾಗಳ ದೊಡ್ಡ ಯಶಸ್ಸಿನೊಂದಿಗೆ ಜ್ಯುಬಿಲಿ ಹಿರೋಯಿನ್ ಎಂದೇ ಕರೆಸಿಕೊಂಡಿದ್ದ ಅವರು ‘ಶರವೇಗದ ಸರದಾರ’ ಎಂಬ ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಅರವತ್ತರ ದಶಕದ ಡ್ಯಾನ್ಸಿಂಗ್ ಕ್ವೀನ್ ಎಂದು ಕರೆಸಿಕೊಂಡವರು ಆಶಾ ಪರೇಖ್. ಅವರು ಚಿತ್ರರಂಗಕ್ಕೆ ಪರಿಚಯವಾದ ಸಂದರ್ಭದಲ್ಲಿ ಸಾಧನಾ, ನೂತನ್, ವಹೀದಾ ರೆಹಮಾನ್ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದರು. ಇವರೆಲ್ಲರ ನಡುವಿನ ಪೈಪೋಟಿಯನ್ನು ದಿಟ್ಟತನದಿಂದ ಎದುರಿಸಿದವರು ಆಶಾ.

ಆಶಾ ಪರೇಖ್ ಹುಟ್ಟಿದ್ದು 1942, ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ. ತಂದೆ ಗುಜರಾತಿ ಮತ್ತು ತಾಯಿ ಮುಸ್ಲಿಂ ಸಮುದಾಯದವರು. ಮಧ್ಯಮ ವರ್ಗದ ಕುಟುಂಬದ ಏಕೈಕ ಪುತ್ರಿಯಾದ ಅವರಿಗೆ ಅಕ್ಕರೆಯ ಬಾಲ್ಯ ಸಿಕ್ಕಿತು. ಚಿಕ್ಕಂದಿನಲ್ಲೇ ಅವರಿಗೆ ನೃತ್ಯದ ತರಬೇತಿಯಾಗಿತ್ತು. ಶಾಲೆಯ ಕಾರ್ಯಕ್ರಮವೊಂದರಲ್ಲಿ ಆಶಾ ನೃತ್ಯ ಕಾರ್ಯಕ್ರಮ ನೀಡುತ್ತಿದ್ದಾಗ, ನಿರ್ದೇಶಕ ಬಿಮಲ್ ರಾಯ್ ಕಣ್ಣಿಗೆ ಬಿದ್ದರು. ಒಮ್ಮೆಗೇ ಆಕರ್ಷಿತರಾದ ರಾಯ್ ತಮ್ಮ`ಬಾಪ್ ಬೇಟಿ’ (1954) ಚಿತ್ರದಲ್ಲಿ ಬಾಲನಟಿಯಾಗುವಂತೆ ಆಶಾರನ್ನು ಕೇಳಿದರು. ಅಲ್ಲಿಂದ ಮುಂದೆ ವಿದ್ಯಾಭ್ಯಾಸದ ಜೊತೆಗೆ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು.

ಇದನ್ನೂ ಓದಿ: ನಿರಾಶ್ರಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಐದು ಚಲನಚಿತ್ರಗಳು

ಖ್ಯಾತ ನಿರ್ದೇಶಕ ವಿಜಯ್ ಭಟ್ ತಮ್ಮ `ಗೂಂಜ್ ಉಠಿ ಶೆಹನಾಯ್’ ಚಿತ್ರದ ನಾಯಕಿ ಪಾತ್ರಕ್ಕೆ ಆಶಾರನ್ನು ಆಯ್ಕೆ ಮಾಡಿದರು. ಆಗಿನ್ನೂ ಆಶಾಗೆ ಹದಿನಾರರ ಹರೆಯ. ಆಶಾ ಪರೇಖ್ ಸ್ಟಾರ್ ನಾಯಕಿಯಲ್ಲ ಎಂದು ಚಿತ್ರದ ನಿರ್ಮಾಪಕರು ಆಕೆಯನ್ನು ಬೇಡವೆಂದರು. ಇದರಿಂದ ನಿರಾಶರಾದ ಆಶಾ ಒಂದಷ್ಟು ಸಮಯ ಸಿನಿಮಾದಿಂದ ದೂರವುಳಿದು, ತಮ್ಮ ನೆಚ್ಚಿನ ಹವ್ಯಾಸ ನೃತ್ಯದಲ್ಲಿ ತೊಡಗಿಸಿಕೊಂಡರು.

1959ರಲ್ಲಿ ಆಶಾಗೆ ಸಿನಿ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ರೊಮ್ಯಾಂಟಿಕ್ ಹೀರೋ ಶಮ್ಮಿ ಕಪೂರ್ ಜೊತೆಗಿನ `ದಿಲ್ ದೇಕೆ ದೇಖೋ’ ಚಿತ್ರ ಅವರಿಗೆ ಹೆಸರು ತಂದುಕೊಟ್ಟಿತು. ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದ ಸಿನಿಮಾ ಬಾಕ್ಸ್ ಆಫೀಸಲ್ಲಿ ಮೋಡಿ ಮಾಡಿತು. ಈ ಚಿತ್ರದ ನಂತರ ಆಶಾ ಹಿಂದಿರುಗಿ ನೋಡಲೇ ಇಲ್ಲ. `ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ’, `ಫಿರ್ ವೊಹಿ ದಿಲ್ ಲಾಯಾ ಹೂ’, `ಜಿದ್ದಿ’, `ಮೇರೆ ಸನಂ’, `ತೀಸ್ರಿ ಮಂಜಿಲ್’ ಸೇರಿದಂತೆ ಮ್ಯೂಸಿಕಲ್ ಹಿಟ್ ಚಿತ್ರಗಳೊಂದಿಗೆ ಆಶಾ ಸ್ಟಾರ್ ನಾಯಕಿಯಾದರು.

ಆಶಾಗೆ ಹಟ್ಟಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಬೇಕೆನ್ನುವ ಅಪೇಕ್ಷೆಯಿತ್ತು. ಆದರೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ಆಶಾಗೆ ಗಂಭೀರ ಪಾತ್ರಗಳಿರಲಿಲ್ಲ. ಮನೋಜ್ ಕುಮಾರ್ ಜೊತೆಗಿನ `ದೋ ಬದನ್’ (1966) ಚಿತ್ರದೊಂದಿಗೆ ಗಂಭೀರ ಪಾತ್ರಗಳತ್ತ ಹೊರಳಿದರು.


ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ


ಮುಂದೆ ಅವರು ಹತ್ತಾರು ಅರ್ಥಪೂರ್ಣ ಪ್ರಯೋಗಗಳಲ್ಲಿ ಕಾಣಿಸಿಕೊಂಡದ್ದು ವಿಶೇಷ. ಇವುಗಳ ಪೈಕಿ `ಕನ್ಯಾದಾನ್’, `ಚಿರಾಗ್’, `ಪಗ್ಲಾ ಕಹೀ ಕಾ’, `ಕಟೀ ಪಂತಗ್’, `ಮೇ ತುಲ್ಸಿ ತೇರೇ ಆಂಗನ್ ಕಿ’ ಪ್ರಮುಖ ಪ್ರಯೋಗಗಳು. ನಟನೆಯ ಜೊತೆಗೆ ಚಿತ್ರ ವಿತರಣೆಯಲ್ಲೂ ಆಶಾಗೆ ಯಶಸ್ಸು ಸಿಕ್ಕಿತ್ತು. ಸುಮಾರು ಎರಡು ದಶಕಗಳ ಕಾಲ ಅವರು ಚಿತ್ರ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜ ಸೇವಾಕಾರ್ಯಗಳಲ್ಲೂ ಅವರದು ಮುಂಚೂಣಿ ಹೆಸರು.

1971, ಅವರ ಸಿನಿಮಾ ಜೀವನದ ಅದೃಷ್ಟದ ವರ್ಷ. ಆ ವರ್ಷದಲ್ಲಿ ತೆರೆಕಂಡ ಅವರ `ಕಟಿ ಪಂತಗ್’, `ಆನ್ ಮಿಲೋ ಸಜ್ನಾ’, `ಮೇರಾ ಗಾವೋ ಮೇರಾ ದೇಶ್’, `ಕಾರವಾನ್’ ಚಿತ್ರಗಳು ಸೂಪರ್‌ ಹಿಟ್ ಎನಿಸಿದವು. `ಕಟಿ ಪತಂಗ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರು ಫಿಲಂಫೇರ್‌ ಪುರಸ್ಕಾರಕ್ಕೂ ಪ್ರಾಪ್ತರಾದರು. ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ನೃತ್ಯ ಪ್ರದರ್ಶನಕ್ಕೆಂದು ಆಶಾ ವಿದೇಶಕ್ಕೆ ತೆರಳಿದ್ದರು.

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆಶಾ ನೃತ್ಯ ಅಕಾಡೆಮಿ `ಕಲಾ ಭವನ್’ ಸ್ಥಾಪಿಸಿದ್ದಾರೆ. ಇಲ್ಲಿ ವಿವಿಧ ಪ್ರಕಾರಗಳ ನೃತ್ಯಗಳನ್ನು ಕಲಿಸಲಾಗುತ್ತದೆ. ನೃತ್ಯದೊಂದಿಗೆ ಈ ಹೊತ್ತಿಗೂ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. 1995ರಲ್ಲಿ ನಟನೆಯಿಂದ ದೂರ ಉಳಿದ ನಟಿ ಟೆಲಿವಿಷನ್ ಧಾರಾವಾಹಿಗಳ ನಿರ್ದೇಶನ ಮತ್ತು ನಿರ್ಮಾಣಕ್ಕೆ ಕೈ ಹಾಕಿದರು.

Iconic Actress: Asha Parekh - Sentinelassam

1992ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಪರೇಖ್ 2002 ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.  2004 ರಲ್ಲಿ ಕಲಾಕರ್ ಪ್ರಶಸ್ತಿ, 2006 ರಲ್ಲಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು, 2007 ರಲ್ಲಿ ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಮತ್ತು2007ರಲ್ಲಿ ಒಂಬತ್ತನೇ ವಾರ್ಷಿಕ ಬಾಲಿವುಡ್ ಪ್ರಶಸ್ತಿ ಲಾಂಗ್ ಐಲ್ಯಾಂಡ್ ಪ್ರಶಸ್ತಿ, ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ (ಎಫ್‌ಐಸಿಸಿಐ) ಅವರು ಲಿವಿಂಗ್ ಲೆಜೆಂಡ್ ಪ್ರಶಸ್ತಿಯನ್ನು ಪಡೆದಿದ್ದಾರೆ.

2017ರಲ್ಲಿ ಖಾಲಿದ್ ಮೊಹಮದ್ ಬರೆದಿರುವ ಆಶಾ ಪರೇಖ್ ಅವರ ಆತ್ಮಕತೆ ‘ದಿ ಹಿಟ್‌ ಗರ್ಲ್‌’ ಬಿಡುಗಡೆಯಾಗಿದೆ.


ಇದನ್ನೂ ಓದಿ: ನಟಿ, ನೃತ್ಯಗಾರ್ತಿ ಜೊಹ್ರಾ ಸೆಹಗಲ್‌ಗೆ ಗೂಗಲ್ ಡೂಡಲ್ ನಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...