Homeಮುಖಪುಟಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

ಸೆಂಟ್ರಲ್ ವಿಸ್ತಾ: ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು

- Advertisement -
- Advertisement -

“ಪ್ರಶ್ನೆ ಭವನದ್ದಲ್ಲ, ಭಾವನೆಯದ್ದು”. ನನಗೆ ಸಂಸತ್ತಿನ ಹೊಸ ಭವನದ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಕೇಳಿದಾಗ, ನನ್ನ ಗಂಟಲಿನಿಂದ ಹೊರಬಂದದ್ದು ಇದೊಂದೇ ಮಾತು.

ಭಾರತೀಯ ಸಂಸತ್ತಿಗೆ ಹೊಸದೊಂದು ಕಟ್ಟಡ ಬೇಕಿತ್ತೋ ಇಲ್ಲವೋ ಎಂಬುದು ಪ್ರಶ್ನೆ ಅಲ್ಲ. ಹಳೆಯ ಕಟ್ಟಡವು ಈಗ ಕಾರ್ಯ ನಿರ್ವಹಿಸಲು ಸೂಕ್ತವಾಗಿಲ್ಲ ಹಾಗೂ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿಲ್ಲ ಎಂದು ಹಲವಾರು ಸಂಸದರು ಹೇಳಿದ್ದರು. ನಾನಾದರೋ, ಈಗಲೂ ಮಿತವ್ಯಯಿ ಮನೋಭಾವದವನು, ಯಾವಾಗಲೂ ದುಂದುಗಾರಿಕೆ ತಪ್ಪಿಸಲು ಪ್ರಯತ್ನಿಸುತ್ತಿರುತ್ತೇನೆ. ಹಳೆಯ ಕಟ್ಟಡ ರಿಪೇರಿ ಮಾಡಿ ನವೀಕರಿಸಬಹುದಿತ್ತು ಎಂದು ನನಗೆ ಅನಿಸುತ್ತಿತ್ತು. ಹೇಗೂ ಬಡಜನರ ಈ ಪ್ರಜಾಪ್ರಭುತ್ವದ ಪ್ರತೀಕವಾಗಿ ಯಾವುದೇ ಒಂದು ಅತ್ಯಂತ ಭವ್ಯವಾದ ಕಟ್ಟಡ ಇರುವ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟವೇ. ಆದರೆ ನಾನು ಎಂದೂ ಈ ಕಟ್ಟಡವನ್ನು ಬಳಸಿದವನಲ್ಲವಾದ್ದರಿಂದ, ಅಲ್ಲಿ ಪ್ರತಿದಿನ ಹೋಗುವ ಸಂಸದರ ಮಾತು ಸರಿ ಇರಬಹುದು. ಹೊಸದೊಂದು ಭವನವೊಂದೇ ಪರ್ಯಾಯವಾಗಿರಬಹುದು. ಮೊದಲಿನ ಭವನಕ್ಕಿಂತ ಈ ಹೊಸ ಭವನವೇ ಚೆನ್ನಾಗಿರಬಹುದು. ಇದು ನಿಸ್ಸಂಶಯವಾಗಿಯೂ ಸೌಲಭ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಸಜ್ಜಾಗಿರುತ್ತದೆ. ಆದರೆ ಇದು ಅಸಲಿ ಪ್ರಶ್ನೆಯಲ್ಲ. ಪ್ರಶ್ನೆ ಇರುವುದು, ಈ ಹೊಸ ಭವನ ಯಾವ ಭಾವನೆಯನ್ನು ಪ್ರತಿನಿಧಿಸುತ್ತಿದೆ ಎಂಬುದು.

ಸರಕಾರಿ ಮತ್ತು ಭಟ್ಟಂಗಿ ಜನರ ಮಾತು ಕೇಳಿದರೆ, ಸಂಸತ್ತಿನ ಈ ಹೊಸ ಭವನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಶಕ್ತಿಯ ಭವ್ಯ ಪ್ರತೀಕವಾಗಿದೆ. ಸ್ವಾಭಾವಿಕವಾಗಿಯೇ ವಿರೋಧ ಪಕ್ಷಗಳು ಈ ಹೇಳಿಕೆಗಳನ್ನು ಒಪ್ಪುತ್ತಿಲ್ಲ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳು ಏನೇ ಇದ್ದರೂ, ಅವರ ಸಮರ್ಥಕರು ಕೂಡ ಮೋದಿಯವರು ಪ್ರಜಾಸತ್ತಾತ್ಮಕ ಪ್ರತಿಷ್ಠೆ ಮತ್ತು ಸಂಸದೀಯ ಪರಂಪರೆಗಳಿಗೆ ಗೌರವ ನೀಡಿದ್ದಾರೆ ಎಂದು ಹೇಳಲು ಸಂಕೋಚಪಟ್ಟುಕೊಳ್ಳುತ್ತಾರೆ. ಅವರ ಕಾರ್ಯಾವಧಿಯಲ್ಲಿ ಸಂಸತ್ತಿನ ಕಲಾಪಗಳ ಅವಧಿ ಕಿರಿದಾದವು, ಯಾವುದೇ ಚರ್ಚೆಯಿಲ್ಲದೇ ಜಾರಿಗೊಳಿಸಲಾದ ಕಾನೂನುಗಳ ಸಂಖ್ಯೆ ಹೆಚ್ಚಿತು. ಮೊದಲ ಬಾರಿ ರಾಜ್ಯಸಭೆಯಲ್ಲಿ ಮತದಾನ ಮಾಡದೇ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಮೊದಲ ಬಾರಿ ಬಜೆಟ್ ಮತ್ತು ವಿತ್ತೀಯ ಮಸೂದೆಗಳ ನೆಪದಲ್ಲಿ ಸಾಮಾನ್ಯ ಕಾನೂನುಗಳನ್ನು ಮೇಲ್ಮನೆಯಿಂದ ಬೈಪಾಸ್ ಮಾಡಲಾಯಿತು. ಮೊದಲ ಬಾರಿ ವಿರೋಧ ಪಕ್ಷದ ನಾಯಕರು ಮಾತನಾಡುವ ಸಮಯದಲ್ಲಿ ಕ್ಯಾಮರಾಗಳನ್ನು ಬಂದ್ ಮಾಡಿಸಲಾಯಿತು, ಅವರ ಮೈಕ್‌ಗಳೂ ಬಂದ್ ಆದವು. ಮೊದಲ ಬಾರಿ ಆಡಳಿತಾರೂಢ ಪಕ್ಷವೇ ಹುಯಿಲೆಬ್ಬಿಸಿ ಸಂಸತ್ತಿನ ಕಾರ್ಯಕಲಾಪವನ್ನು ಬಂದ್ ಮಾಡಿಸಿತು. ಮೊದಲ ಬಾರಿ ವಿರೋಧ ಪಕ್ಷದ ಪ್ರಮುಖ ಸಂಸದನ ಸದಸ್ಯತ್ವ ರದ್ದುಪಡಿಸುವ ಆಟ ಆಡಲಾಯಿತು. ಹಾಗಾಗಿ, ಯಾವ ಸಂಸತ್ತಿನ ಹಿರಿಮೆ ಕುಸಿಯುತ್ತಿದೆಯೋ, ಅದಕ್ಕಾಗಿ ಭವ್ಯ ಭವನದ ನಿರ್ಮಾಣವು ಪ್ರಶ್ನೆಗಳನ್ನು ಹುಟ್ಟುಹಾಕುವುದು ಸ್ವಾಭಾವಿಕವಾಗಿದೆ.

ಭವನದ ಉದ್ಘಾಟನೆಯೊಂದಿಗೆ ಸಂಬಂಧಿಸಿದ ವಿವಾದವನ್ನು ಇದೇ ಬೆಳಕಿನಲ್ಲಿ ನೋಡಬೇಕಿದೆ. ಹಾಗೆ ನೋಡಿದರೆ, ಉದ್ಘಾಟನೆಯು ರಾಷ್ಟ್ರಪತಿಯ ಕೈಯಿಂದಲೇ ಆಗಬೇಕು ಎಂಬ ಕಡ್ಡಾಯವೇನಿಲ್ಲ. ಹಾಗೆಯೇ, 26ನೆಯ ಜನವರಿಯಂದು ನಡೆಯುವ ಪರೇಡ್‌ನ ಸಲಾಮಿ/ಗೌರವವಂದನೆ ರಾಷ್ಟ್ರಪತಿಗಳೇ ಸ್ವೀಕರಿಸಬೇಕು ಎಂತಲೂ ಎಲ್ಲಿಯೂ ಬರೆದಿಲ್ಲ. ಇವೆಲ್ಲ ಪ್ರಜಾಪ್ರಭುತ್ವದ ಸಂಪ್ರದಾಯಗಳು ಹಾಗೂ ನಿಸ್ಸಂದೇಹವಾಗಿ ಈ ಬಾರಿ ಆ ಗೌರವದ ಉಲ್ಲಂಘನೆಯಾಗಿದೆ. ವಿರೋಧ ಪಕ್ಷಗಳು ಈ ಉದ್ಘಾಟನಾ ಸಮಾರಂಭವನ್ನು ಬಾಯ್ಕಾಟ್ ಮಾಡುವ ನಿರ್ಧಾರವನ್ನು ಮುಂಚೆಯೇ ತೆಗೆದುಕೊಂಡಿರುವ ಸಾಧ್ಯತೆಯೂ ಇದೆ ಹಾಗೂ ಈ ತಾಂತ್ರಿಕ ಆಕ್ಷೇಪಣೆಯನ್ನೂ ಮಾಡಿರಬಹುದು; ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನೂತನ ಸಂಸತ್ತಿನಲ್ಲಿ ನಡೆಯಲಿದ್ದ ಆಚರಣೆಗಳನ್ನು ತಮ್ಮ ವ್ಯಕ್ತಿಗತ ಇಮೇಜ್ ಕಟ್ಟಿಕೊಳ್ಳಲು ಬಳಸಲು ಬಯಸಿದ್ದರು ಹಾಗೂ ಆ ಫೋಟೋದಲ್ಲಿ ಅಥವಾ ಚಿತ್ರಣದಲ್ಲಿ ಬೇರೆ ಯಾರೂ, ಅವರು ಮಹಾಮಹಿಮ ರಾಷ್ಟ್ರಪತಿಯೇ ಆಗಿರಲಿ, ಯಾರೂ ಅಡ್ಡಬರುವುದು ಅವರಿಗೆ ಇಷ್ಟವಿರಲಿಲ್ಲ ಎಂಬುದೂ ನಿಚ್ಚಳ ಸತ್ಯ. ನಿನ್ನೆಯ ತನಕ ಯಾವ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಇಡೀ ದೇಶದ ಹೆಮ್ಮೆಯ ಪ್ರತೀಕ ಎಂದು ಬಿಂಬಿಸಲಾಗುತ್ತಿತ್ತೋ, ಅವರನ್ನು ಈ ಐತಿಹಾಸಿಕ ಸಂದರ್ಭದಲ್ಲಿ ಮೂಲೆಗುಂಪು ಮಾಡುವ ಈ ಕೆಲಸವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಈ ಸರಕಾರಕ್ಕೆ ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಿಂದ ಏನಾದರೂ ತೊಂದರೆ ಇದೆಯೇ?

ಇದನ್ನೂ ಓದಿ: ‘ಹಳೆಯ’ ಸಂಸತ್ ಭವನದ ಗತವೈಭವದ ಕುರಿತು ಒಂದಿಷ್ಟು

ಈ ಸಮಾರಂಭಕ್ಕೆ ಸಂಬಂಧಿಸಿದ ಅನೇಕ ಪ್ರತೀಕಗಳು ಸರಕಾರದ ನಿಯತ್ತಿನ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇದನ್ನು ವಿನಾಯಕ ದಾಮೋದರ ಸಾವರ್ಕರ್‌ನ ಜನ್ಮದಿನ ಮೇ, 26ರಂದು ಆಯೋಜಿಸಿರುವುದು ಒಂದು ಆಳವಾದ ಸೂಚಕವಾಗಿದೆ. ನೆನಪಿಡಿ ಸಾವರ್ಕರ್ ಪ್ರಜಾಪ್ರಭುತ್ವದ ಬೆಂಬಲಿಗರಾಗಿದ್ದಿಲ್ಲ, ಅವರು ಹಿಟ್ಲರ್ ಮತ್ತು ಮುಸೊಲಿನಿಯ ಪ್ರಶಂಸಕರಾಗಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳ ಉಪಸ್ಥಿತಿ ಹಾಗೂ ಸ್ವಯಂ ಒಂದು ಧಾರ್ಮಿಕ ಸಮುದಾಯದ ಆಚರಣೆಯನ್ನು ಬಳಸಿರುವುದು ಭಾರತದ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಸೆಂಗೋಲ್ ರೂಪದಲ್ಲಿರುವ ರಾಜದಂಡವನ್ನು ವಸ್ತುಸಂಗ್ರಹಾಲಯದಿಂದ ಹೊರತಂದು ಅದಕ್ಕೆ ಪೌರಾಣಿಕ ಮಹತ್ವ ನೀಡಿ, ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೈಗೆ ಅರ್ಪಿಸುವುದು, ಇವೆಲ್ಲ ಈ ಸಮಾರಂಭಕ್ಕೆ ರಾಜ್ಯಾಭಿಷೇಕದ ಸ್ವರೂಪ ನೀಡುತ್ತವೆ, ಪ್ರಜಾಪ್ರಭುತ್ವದ ಬದಲಿಗೆ ರಾಜತಂತ್ರದ ಇಮೇಜ್ ಸೃಷ್ಟಿಸುತ್ತವೆ.

ಒಂದು ವೇಳೆ ಮೇ 28ರಂದು ಘಟಿಸಿದ ಈ ಅಪೂರ್ವ ಘಟನೆಯ ಭಾವನೆಯನ್ನು ತಿಳಿದುಕೊಳ್ಳುವಲ್ಲಿ ಇನ್ನೂ ಯಾವುದೇ ಸಂದೇಹ ಬಾಕಿ ಇದ್ದರೆ, ಅದನ್ನು ಮಹಿಳಾ ಕುಸ್ತಿಪಟುಗಳೊಂದಿಗೆ ಆದ ಅನುಚಿತ ವರ್ತನೆಯು ಪೂರ್ಣಗೊಳಿಸಿತು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಜೀವವಿದ್ದಂತೆ. ಪ್ರಜಾಪ್ರಭುತ್ವದ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಆ ಮಂದಿರವನ್ನು ಮೈಲಿಗೆ ಮಾಡಿದಂತೆ. ಇಂತಹ ಅನುಚಿತ ವರ್ತನೆ ಯಾವ ಪ್ರಜೆಯೊಂದಿಗೂ ಆಗಬಾರದಿತ್ತು, ಆದರೆ ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾದ ಇಂತಹ ಒಲಿಂಪಿಕ್ ಆಟಗಾರರೊಂದಿಗೆ ಹೀಗೆ ಮಾಡುವುದು ಅಧಿಕಾರದ ನಿರಂಕುಶತೆಯನ್ನು ಪರಿಚಯಿಸುತ್ತದೆ. ಅದೂ ಕೂಡ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಒಬ್ಬ ನಾಯಕನನ್ನು ಉಳಿಸಲು. ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ಚಿತ್ರಣಗಳು ವಿಶ್ವದಾದ್ಯಂತ ಭಾರತೀಯ ಪ್ರಜಾಪ್ರಭುತ್ವದ ಹೆಸರನ್ನು ಕಳಂಕಿತಗೊಳಿಸಿವೆ.

ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬ್ಬರ್ ಸ್ಟಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ. ಆದರೆ ಇತಿಹಾಸ ಮತ್ತೊಂದನ್ನೂ ನೆನಪಿಸುತ್ತದೆ, ಕೊನೆಯಲ್ಲಿ ಜನರ ಭಾವನೆಗಳು ಆಡಳಿತದಲ್ಲಿರುವವರ ಭಾವನೆಗಳಿಗಿಂತಲೂ ಪ್ರಬಲವೆಂದು ಸಾಬೀತಾಗಿದೆ ಎಂದು. ಒಂದು ವೇಳೆ ಭಾರತೀಯ ಪ್ರಜಾಪ್ರಭುತ್ವವು ಬ್ರಿಟಿಷರಿಂದ ನಿರ್ಮಿಸಲಾದ ಸಂಸತ್ತಿನ ಭವನವನ್ನು ಪ್ರಜಾಸತ್ತಾತ್ಮಕ ಭಾವನೆಗಳಿಂದ ತುಂಬಿಸಲು ಸಾಧ್ಯವಾಗಿದೆಯೆಂದರೆ, ಸಂಸತ್ತಿನ ಹೊಸ ಭವನದ ಮೇಲೆ ಸ್ಥಾಪಿಸಲಾಗಿರುವ ಇಂದಿನ ಆಡಳಿತಗಾರರ ಭಾವನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದರ ಮೇಲೆಯೂ ಭರವಸೆ ಇರಿಸಬೇಕಾಗುತ್ತದೆ. ನಿರಂಕುಶ ಆಡಳಿತದ ಉದ್ದೇಶಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಲಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...