Homeಅಂಕಣಗಳುತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

- Advertisement -
- Advertisement -

ಐಪಿಸಿ, ಸಿಆರ್‌ಪಿಸಿ ಮತ್ತು ಐಇಎ ಕಾನೂನುಗಳಲ್ಲಿದ್ದ ವಸಾಹತು ಕುರುಹುಗಳನ್ನು ತೆಗೆದಿದ್ದೇವೆ ಎಂದು ಪ್ರತಿಪಾದಿಸಿಕೊಂಡು, ಬದಲಾದ ಮಸೂದೆಗಳನ್ನು ಸಂಸ್ಕೃತ ಶೀರ್ಷಿಕೆಗಳಿಂದ ಮರುನಾಮಕರಣ ಮಾಡಿ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು. ಬದಲಾದ ಈ ಮೂರು ಮಸೂದೆಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಕಳುಹಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ದೇಶದಾದ್ಯಂತ ಹಲವು ತಜ್ಞರು ಈ ಕಾನೂನುಗಳ ಬದಲಾವಣೆಗಳ ಬಗ್ಗೆ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಆಡಿದ ವಸಾಹತುಶಾಹಿ ಕಾನೂನನ್ನು ಸರಿಪಡಿಸಿದ್ದೇವೆ ಎಂಬ ಮಾತುಗಳ ಮರ್ಮದ ಸತ್ಯಾಸತ್ಯತೆಯನ್ನು ಈ ಒಂದು ಉದಾಹರಣೆಯ ಮೂಲಕ ಅವಲೋಕಿಸಬಹುದು. ಸೆಡಿಷನ್ ಅಥವಾ ಐಪಿಸಿಯ 124ಎ ಅಡಿಯ ದೇಶದ್ರೋಹ ಕಾನೂನು ಅಂತಹ ಒಂದು ವಸಾಹತು ಪಳೆಯುಳಿಕೆ. ಇದರ ದುರುಪಯೋಗದ ಬಗ್ಗೆ ದೇಶದಾದ್ಯಂತ ನೂರಾರು ಟೀಕೆಗಳು ಬಂದಿದ್ದವು. ಜಗತ್ತಿನಾದ್ಯಂತ (ಭಾರತದಲ್ಲಿ ಅದನ್ನು ಪರಿಚಯಿಸಿದ ಬ್ರಿಟನ್ ಸೇರಿದಂತೆ) ಹಲವು ದೇಶಗಳು ದೇಶದ್ರೋಹ ಕಾನೂನನ್ನು ತೊಡೆದುಹಾಕಿರುವ ಹಿನ್ನೆಲೆಯಲ್ಲಿ ಭಾರತಲ್ಲೂ ಅದನ್ನು ನಿರ್ಮೂಲನೆ ಮಾಡುವ ಕೂಗು ಹೆಚ್ಚಿತು. ಮೇ 2022ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ ದೇಶದ್ರೋಹ ಕಾನೂನನ್ನು ಅಮಾನತ್ತಿನಲ್ಲಿಟ್ಟು, ಇದರ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಕೇಂದ್ರ ಸರ್ಕಾರ ರಚಿಸಿದ್ದ ರಿತುಲಾಲ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗ ’124ಎ’ಅನ್ನು ಉಳಿಸಿಕೊಳ್ಳುವಂತೆ ಆಘಾತಕಾರಿ ಶಿಫಾರಸ್ಸು ನೀಡಿತು. ಕರ್ನಾಟಕದ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದಾಗ, ಕರ್ನಾಟಕ ಬಿಜೆಪಿ ಸರ್ಕಾರ ಆದೇಶಿಸಿದ್ದ, ’ಶಾಲೆಗಳಲ್ಲಿ ಹಿಜಾಬ್ ನಿಷೇಧ’ವನ್ನು ಎತ್ತಿಹಿಡಿದಿದ್ದವರು ಅವಸ್ಥಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಮುಖ್ಯವಾದೀತು. ಈಗ ವಸಾಹತು ಪಳೆಯುಳಿಕೆ ಸೆಡಿಶನ್‌ಅನ್ನು ತೆಗೆದುಹಾಕಿದ್ದೇವೆ ಎಂದು ಘೋಷಿಸಿಕೊಂಡಿರುವ ಅಮಿತ್ ಶಾ, ಐಪಿಸಿ ಬದಲು ಮಂಡಿಸಿರುವ ಭಾರತೀಯ ನ್ಯಾಯಸಂಹಿತಾ 2023ನ ಸೆಕ್ಷನ್ 150ರಲ್ಲಿ ’ದೇಶದ್ರೋಹ’ ಹೆಸರನ್ನಷ್ಟೇ ಕೈಬಿಟ್ಟು, ಅದರ ಕರಾಳತೆಯನ್ನು ಇನ್ನಷ್ಟು ವಿಸ್ತರಿಸಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ! ಹೀಗೆ ದೇಶವನ್ನು ಕರಾಳತೆಯತ್ತ ಒಯ್ಯಲು ಮಾಡುತ್ತಿರುವ ಕಾನೂನು ತಿದ್ದುಪಡಿಗಳ ಪರ್ವವನ್ನು ಈ ಸರ್ಕಾರ ಮುಂದುವರಿಸಿದೆ. ಇದರ ಬೆನ್ನಲ್ಲೇ ಸಂಘಪರಿವಾರದ ದೀರ್ಘಕಾಲದ ಯೋಜನೆಯಾದ ಸಂವಿಧಾನ ಬದಲಾವಣೆಯ ಮಾತುಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದವರು ಮತ್ತೆ ಮುನ್ನಲೆಗೆ ತಂದಿದ್ದಾರೆ.

ಅಮಿತ್ ಶಾ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ವಿವಾದಾತ್ಮಕ ಮತ್ತು ಬಿಜೆಪಿಗೆ ಸಹಾಯವಾಗುವಂತಹ ತೀರ್ಪು ನೀಡಿದ ಪೀಠದಲ್ಲಿದ್ದ ಅಂದಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಈಗ ಬಿಜೆಪಿ ಪಕ್ಷ ನಾಮನಿರ್ದೇಶನ ಮಾಡಿರುವ ರಾಜ್ಯಸಭಾ ಸದಸ್ಯ. ಮುಂಗಾರು ಸಂಸತ್ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ರಂಜನ್ ಗೊಗೊಯ್ ಅವರು ಆಗಸ್ಟ್ 8ರಂದು “ಭಾರತದ ಸಂವಿಧಾನದ ಮೂಲ ರಚನೆಯ ಸಿದ್ಧಾಂತ ನ್ಯಾಯದಾನ ವ್ಯವಸ್ಥೆಯ ಆಧಾರದಲ್ಲಿ ಚರ್ಚಾಸ್ಪದವಾದುದು” ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಈಗಿರುವ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಂವಿಧಾನಕ್ಕೆ ತರಲಾಗುವ ಯಾವುದೇ ತಿದ್ದುಪಡಿ ಭಾರತದ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ. ಈ ತೀರ್ಪು, ಮಾನವ ಹಕ್ಕುಗಳಿಗೆ ಕವಡೆ ಕಿಮ್ಮತ್ತು ನೀಡದ ಸಂಘಪರಿವಾರಕ್ಕೆ ಮನುಧರ್ಮಶಾಸ್ತ್ರದ ಕುಟಿಲ ನೀತಿಗಳನ್ನು ಸಂವಿಧಾನಕ್ಕೆ ತರಲು ಕೈಕಟ್ಟಿಹಾಕಿದೆ. ಆದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಸಂವಿಧಾನವನ್ನು ಬದಲಿಸುವ ಮಾತನ್ನಾಡುವುದರ ಜೊತೆಗೆ ಅದು ಏನೋ ಸಾಮಾನ್ಯ ಸಂಗತಿ ಎಂಬಂತೆ ಜನರ ಮನಸ್ಸಿನಲ್ಲಿ ಭಾವನೆ ಮೂಡಿಸುವುದಕ್ಕೆ, ಅವರಲ್ಲಿ ಅದರ ಬಗ್ಗೆ ಒಪ್ಪಿಗೆಯನ್ನು ಉತ್ಪಾದಿಸುವುದಕ್ಕೆ ನಾಗಪುರದ ಗಿಡುಗಗಳು ಸದಾ ಪ್ರಯತ್ನಿಸುತ್ತಿರುತ್ತವೆ. ಇದು ರಂಜನ್ ಗೊಗೊಯ್ ಅವರ ಹೇಳಿಕೆಗೆ ಮಾತ್ರ ನಿಲ್ಲದೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಬಿಬೇಕ್ ದೇಬರಾಯ್ ಎನ್ನುವ ವ್ಯಕ್ತಿ ’ಮಿಂಟ್’ ದಿನಪತ್ರಿಕೆಯಲ್ಲಿ ಬರಹವೊಂದನ್ನು ಬರೆದು ’ನಾವು ಜನಗಳು’ ಹೊಸ ಸಂವಿಧಾನವನ್ನು ಅಪ್ಪಿಕೊಳ್ಳಬೇಕೆಂದು ವಾದಮಾಡಿ ಕರೆ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದೆ ಭಾರತದ ಸಂವಿಧಾನ ಮುಖ್ಯವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಆಧಾರದಲ್ಲಿ ರೂಪಿತವಾಗಿದೆ ಎಂಬ ಅರ್ಧಸತ್ಯವನ್ನು ಹೇಳಿ ಅದಕ್ಕೆ ವಸಾಹತುಶಾಹಿ ಪರಂಪರೆಯ ಸಂಬಂಧವಿದೆ ಎನ್ನುವ ಮೂಲಕ ಬದಲಾವಣೆ ಮಾಡಲು ಸಜ್ಜಾಗಿರುವ ಬಗ್ಗೆ ಹಿಂಟ್ ಕೂಡ ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನ ಬದಲಿಸುವ ಬಗ್ಗೆ ಕರೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಈಗ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ದೇಬರಾಯ್ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದರೂ, ಸಂಘ ಪರಿವಾರ ಮತ್ತು ಬಿಜೆಪಿ ಎರಡು ನಾಲಗೆಯಲ್ಲಿ ಮಾತನಾಡುವ ಗುಣ ಇಂದು ನಿನ್ನೆಯದೇನಲ್ಲ ಎಂಬುದು ತಿಳಿದಿರುವ ಸಂಗತಿಯೇ!

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

ಸಂವಿಧಾನದ ಪ್ರಮುಖ ರೂವಾರಿ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ದೇಶದ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂವಿಧಾನವನ್ನು ಭಾರತಕ್ಕೆ ನೀಡಿದ ಬಾಬಾಸಾಹೇಬ ಅಂಬೇಡ್ಕರ್ ಅವರು ಈಗಾಗಲೇ, ಈ ದೇಬರಾಯ್ ಈಗ ಎತ್ತುತ್ತಿರುವ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹೀಗಿದ್ದರೂ, ಇಂತಹ ದಾರ್ಷ್ಟ್ಯತನವನ್ನು ಮೆರೆಯುವ ಈ ಸಂಘಪರಿವಾರದವರಿಗೆ ಬಾಬಾಸಾಹೇಬರ ಮಾತುಗಳನ್ನೇ ಮುಖಕ್ಕೆ ಹಿಡಿಯಬೇಕಿದೆ. ಭಾರತ ಸಂವಿಧಾನದ ಮೊದಲ ಕರಡನ್ನು ಅರ್ಪಿಸಿ ಮಾಡುವ ಭಾಷಣದಲ್ಲಿ ಅಂಬೇಡ್ಕರ್ ಹೇಳುವ ಈ ಮಾತುಗಳನ್ನು ನೋಡೋಣ: “ಜಗತ್ತಿನ ಇತಿಹಾಸದ ಈ ಸಂದರ್ಭದಲ್ಲಿ ರಚಿಸಲಾದ ಸಂವಿಧಾನದಲ್ಲಿ ಏನಾದರೂ ಹೊಸದು ಇರಬಹುದೇ ಎಂದು ಯಾರಿಗಾದರೂ ಪ್ರಶ್ನೆ ಮೂಡಬಹುದು. ಮೊದಲ ಲಿಖಿತ ಸಂವಿಧಾನದ ಕರಡು ರಚನೆಯಾಗಿ ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚುಕಾಲ ಸರಿದಿದೆ. ಬಹಳಷ್ಟು ದೇಶಗಳು ತಮ್ಮ ಸಂವಿಧಾನಗಳನ್ನು ಲಿಖಿತ ಸಂವಿಧಾನವನ್ನಾಗಿಸಿಕೊಂಡಿವೆ. ಸಂವಿಧಾನದ ಆಳ-ಅಗಲವನ್ನು ನಿಶ್ಚಯಿಸಲಾಗಿದೆ. ಅದೇರೀತಿ ಜಗತ್ತಿನಾದ್ಯಂತ ಸಂವಿಧಾನದ ಮೂಲ ಗುಣಗಳನ್ನು ಕೂಡ ಗುರುತಿಸಲಾಗಿದೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ಮುಖ್ಯ ಅಂಶಗಳಲ್ಲಿ ಸಂವಿಧಾನ ಒಂದೇ ರೀತಿ ಕಾಣುವುದು ಸಾಮಾನ್ಯ. ಇಷ್ಟು ತಡವಾಗಿ ರೂಪುಗೊಂಡ ಸಂವಿಧಾನದಲ್ಲಿ ಏನಾದರೂ ಹೊಸತು ಇರುವುದಾದರೆ, ಹಿಂದಿನ ತಪ್ಪುಗಳನ್ನು ಸರಿಪಡಿಸಿರುವ ಬದಲಾವಣೆಗಳು ಮತ್ತು ದೇಶದ ಅಗತ್ಯಗಳಿಗೆ ತಕ್ಕಂತೆ ಅದನ್ನು ಅಳವಡಿಸಿಕೊಂಡಿರುವುದು. ಬೇರೆ ದೇಶಗಳ ಸಂವಿಧಾನಗಳನ್ನು ಕುರುಡಾಗಿ ನಕಲು ಮಾಡಲಾಗಿದೆ ಎಂಬ ಆರೋಪ, ಸಂವಿಧಾನವನ್ನು ಸರಿಯಾಗಿ ಆಧ್ಯಯನ ಮಾಡದೆ ಇರುವುದರಿಂದ ಮೂಡಿರುವಂಥದ್ದು ಎಂದು ನಾನು ಖಂಡಿತವಾಗಿ ಹೇಳಬಲ್ಲೆ” ಎನ್ನುತ್ತಾರೆ. ಅಲ್ಲದೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಆರೋಪಕ್ಕೆ “ನಾನು ಇದಕ್ಕೆ ಯಾವ ವಿಶಾದವನ್ನೂ ವ್ಯಕ್ತಪಡಿಸುವುದಿಲ್ಲ. ಒಂದರಿಂದ ತೆಗೆದುಕೊಳ್ಳುವುದಕ್ಕೆ ಯಾವ ನಾಚಿಕೆಯೂ ಇರಬೇಕಿಲ್ಲ. ಇದು ನಕಲು ಅಲ್ಲ. ಸಂವಿಧಾನದ ಮೂಲ ಚಿಂತನೆಗಳಿಗೆ ಯಾರೂ ಪೇಟೆಂಟ್ ಹೊಂದಿಲ್ಲ” ಎನ್ನುತ್ತಾರೆ ಬಾಬಾಸಾಹೇಬರು.

ಇಲ್ಲಿಯವರೆಗೂ ಮನುಧರ್ಮಶಾಸ್ತ್ರವೇ ತಮ್ಮ ಸಂವಿಧಾನ ಎಂದು ಪ್ರತಿಪಾದಿಸಿಕೊಂಡು ಬಂದು, ಭಾರತದ ಸಂವಿಧಾನದ ಬಗ್ಗೆ ಹಾಗೂ ಸಾಂವಿಧಾನಿಕ ನೈತಿಕತೆಯ ಬಗ್ಗೆ ಮೂರು ಪೈಸೆಯ ಗೌರವವನ್ನೂ ತೋರದ ಸಂಘ ಪರಿವಾರಿಗಳು ಈಗ ಸಂವಿಧಾನ ಬದಲಿಸುವ ಮಾತನ್ನಾಡುತ್ತಿರುವುದು ಕುಚೋದ್ಯವೇ ಸರಿ. ಮೇಲೆ ಹೇಳಿದ ಭಾಷಣದ ಕೊನೆಗೆ ಬಾಬಾಸಾಹೇಬರು ಹೇಳುವ ಮಾತುಗಳನ್ನು, ಸಂವಿಧಾನ ಬದಲಾವಣೆಯನ್ನು ಪ್ರತಿಪಾದಿಸುವವರ ಮುಖಕ್ಕೆ ಹಿಡಿಯಬೇಕಿದೆ: “ನನಗೆ ಇದು ಕಾರ್ಯಗತವಾಗುವ, ಹೊಂದಾಣಿಕೆಗೆ ಸಾಧ್ಯ ಮಾಡಿಕೊಡುವ ಮತ್ತು ಶಾಂತಿ ಹಾಗೂ ಯುದ್ಧದ ಸಮಯದಲ್ಲಿಯೂ ದೇಶವನ್ನು ಒಟ್ಟಿಗೆ ಹಿಡಿದಿಡುವುದಕ್ಕೆ ಬಲಶಾಲಿಯಾಗಿದೆ (ಸಂವಿಧಾನ). ಬಹುಶಃ ನಾನು ಹೀಗೆ ಹೇಳಬಹುದಾದರೆ, ಹೊಸ ಸಂವಿಧಾನದಡಿಯಲ್ಲಿ ಅಂದುಕೊಳ್ಳದಂತೆ ಆಗದೆ, ಹಳ್ಳ ಹಿಡಿದರೆ, ಅದಕ್ಕೆ ಕಾರಣ ನಾವು ಕೆಟ್ಟ ಸಂವಿಧಾನ ಹೊಂದಿದ್ದೆವು ಅಂತಲ್ಲ. ನಾವು ಏನು ಹೇಳಬೇಕಾಗಬಹುದು ಅಂದರೆ ಮನುಷ್ಯ ಕೆಟ್ಟವನಾಗಿದ್ದ ಎಂದು”.

ಹೀಗೆ ಉದಾತ್ತವಾದ ನಮ್ಮ ಭಾರತ ಸಂವಿಧಾನವನ್ನು ಬಳಸಿಕೊಂಡು ದೇಶಕ್ಕೆ ಸರಿಯಾದ ಮಾರ್ಗವನ್ನು ಕಲ್ಪಿಸಿಕೊಡಲು ಸಾಧ್ಯವಾಗದ ’ಕೆಟ್ಟ’ ಮನುಷ್ಯರಷ್ಟೇ ಸಂವಿಧಾನದ ಮೂಲ ರಚನೆಯನ್ನು ಬದಲಿಸುವ ಮಾತುಗಳನ್ನಾಡಬಲ್ಲರು. ಒಳ್ಳೆಯ ಉದ್ದೇಶವಿದ್ದವರು ಎಂದಿಗೂ ಆಡುವ ಮಾತುಗಳಲ್ಲ ಅವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...