Homeಅಂಕಣಗಳುಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

ಬಂಗಾಳದಲ್ಲಿ ಕೇಕೆ ಹಾಕಿದೆ ಕೋಮುವಾದೀ ರಕ್ತದಾಹ

- Advertisement -
- Advertisement -

ಗುಜರಾತಿನಿಂದ ತೆವಳಿದ ಕೋಮು ಗಲಭೆಯ ವಿಖ್ಯಾತ ವಿಕರಾಳ ಮಾದರಿ ದೆಹಲಿಯ ಸಾವುಗಳನ್ನು ಅರ್ಧ ಶತಕದತ್ತ ಒಯ್ಯತೊಡಗಿದೆ. ನೈಋತ್ಯ ದೆಹಲಿಯ ಭಾರೀ ಚರಂಡಿಗಳಲ್ಲಿ ಕೊಳೆತ ಹೆಣಗಳು ತೇಲತೊಡಗಿವೆ. ರಣಕೇಕೆ, ರಕ್ತಪಾತ, ಅಟ್ಟಹಾಸ, ಅಕ್ರಂದನಗಳು ಅಡಗಿವೆ. ದಿಕ್ಕುಗಾಣದ ತಬ್ಬಲಿತನ, ದುಃಖ, ಆಘಾತಗಳು ಮಡುಗಟ್ಟಿವೆ. ಬದುಕುಗಳನ್ನು ಬಂಧು ಮಿತ್ರರನ್ನು ಕಳೆದುಕೊಂಡು ಬರಿಗೈಯಾಗಿರುವವರು ತಮ್ಮ ನೆಲದಲ್ಲೇ ಅನಾಥರಾಗಿದ್ದಾರೆ. ಪರಕೀಯತೆ ಮುತ್ತಿ ಕಾಡಿದೆ. ಬೆಂದ ಬದುಕುಗಳನ್ನು ಎಲ್ಲಿಂದ ಪುನಃ ಕಟ್ಟಬೇಕೋ ಕಾಣದಾಗಿದ್ದಾರೆ.

ಹದ್ದುಬಸ್ತುಗಳಿಲ್ಲದೆ ಹೂಂಕರಿಸಿದ ಕ್ರೌರ್ಯ ಅಮಾನುಷತೆ ಪೈಶಾಚಿಕ ನಗ್ನ ನರ್ತನದ ನಡುವೆ ಮಾನವೀಯತೆ ಮತ್ತು ಬಂಧುತ್ವದ ಪ್ರೀತಿ ಹರಿಸಿ ಜೀವಗಳನ್ನು ಕಾಪಾಡಿದ ಅನೇಕ ಉದಾಹರಣೆಗಳು ಕಾರ್ಮೋಡದ ನಡುವಿನ ಕೋಲ್ಮಿಂಚಿನಂತೆ ಗೋಚರಿಸಿವೆ.

ದೇಶದ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಮೂಗಿನ ಕೆಳಗೆ ಮೂರು ದಿನಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಸಂಪೂರ್ಣ ಕುಸಿದು ಗಲಭೆಕೋರರ ಕಾಲ ಕೆಳಗೆ ನರಳಿದ ಪರಿ ಸೋಜಿಗ ಮತ್ತು ಖೇದ ಉಂಟು ಮಾಡಿದೆ. ದೆಹಲಿ ಪೊಲೀಸ್ ವ್ಯವಸ್ಥೆ ಖುದ್ದಾಗಿ ಮುಂದೆ ನಿಂತು ಕೊಲೆಗಡುಕ ಗಲಭೆಕೋರ ಗುಂಪುಗಳಿಗೆ ಉತ್ತೇಜನ ನೀಡಿದ ಅನೇಕ ಕರಾಳ ನಿದರ್ಶನಗಳು ಹೊರಬಿದ್ದಿವೆ.

ಇಂತಹ ಪೊಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯೊಬ್ಬರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ದಂಡಿಸಬೇಕಾದವರ ರಕ್ಷಣೆಗೆ ಮುಂದಾಗಿದೆ ಕೇಂದ್ರ ಸರ್ಕಾರ. ಪೊಲೀಸರನ್ನು ದಂಡಿಸುವುದು ಬಿಟ್ಟು ನ್ಯಾಯವನ್ನು ನೇಣಿಗೇರಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಬಿಜೆಪಿ ತಲೆಯಾಳುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆಯ ಕಿರುಬೆರಳು ಕೂಡ ಇದುವರೆಗೆ ಕದಲಲಿಲ್ಲ.

ವರ್ಗಾವಣೆಯಾದ ನ್ಯಾಯಮೂರ್ತಿಯವರ ಜಾಗದಲ್ಲಿ ಕುಳಿತು ವಿಚಾರಣೆ ನಡೆಸಿದ ಮತ್ತೊಂದು ನ್ಯಾಯಪೀಠ ದೆಹಲಿ ಪೊಲೀಸರ ನಿಷ್ಕ್ರಿಯತೆ ಕುರಿತ ಕೇಸಿನ ವಿಚಾರಣೆಯನ್ನು ಒಂದೂವರೆ ತಿಂಗಳ ಕಾಲ ಮುಂದಕ್ಕೆ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಶಾಂತಿಯಾತ್ರೆಯಲ್ಲೂ ಕೋಮುವಾದವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ ಕುರಿತು ಆಳುವ ವ್ಯವಸ್ಥೆ ಮೌನ ಕಿವಿಗಡಚಿಕ್ಕಿದೆ. ಜೈಲಿಗೆ ಅಟ್ಟಬೇಕಾದ ವ್ಯಕ್ತಿಗೆ ವೈ ಕೆಟಗರಿಯ ಸರ್ಕಾರಿ ಮೈಗಾವಲನ್ನು ಒದಗಿಸಿರುವುದು ವಿಕೃತಿಯ ಪರಮಾವಧಿ.

ದೆಹಲಿಯ ನರಮೇಧದ ಬೂದಿ ಇನ್ನೂ ಪೂರ್ಣ ತಣಿದಿಲ್ಲ. ರಕ್ತದಾಹದ ರಣಕೇಕೆ ಬಂಗಾಳದಲ್ಲಿ ಮೊಳಗಿದೆ. ದೆಹಲಿ ವಿಧಾನಸಭಾ ಚುನಾವಣೆಗಳ ಪ್ರಚಾರವನ್ನು ದ್ವೇಷ ಮತ್ತು ಧೃವೀಕರಣದಿಂದ ತುಂಬಿಸಿದ ಗೃಹಮಂತ್ರಿಯವರು ಕೊಲ್ಕತ್ತಾಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಯೂ ಚುನಾವಣೆಗಳು ಕದ ಬಡಿಯುತ್ತಿವೆ. ‘ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ’ ಘೋಷಣೆಗಳು ಬಂಗಾಳದಲ್ಲಿಯೂ ಕೇಳಿ ಬಂದಿವೆ. ದೆಹಲಿಯ ನರಮೇಧ ಬಂಗಾಳಕ್ಕೆ ಪಯಣಿಸದಿರಲಿ. ಈಶಾನ್ಯ ಭಾರತ ಮತ್ತೊಮ್ಮೆ ಭುಗಿಲೇಳತೊಡಗಿದೆ. ದೆಹಲಿಯಂತೆ ಮೇಘಾಲಯದಲ್ಲೂ ಎನ್.ಆರ್.ಸಿ. ಮತ್ತು ಸಿ.ಎ.ಎ. ಜನರ ಪ್ರಾಣಗಳನ್ನು ಬಲಿ ಪಡೆಯತೊಡಗಿವೆ. ಇರಿತಗಳಿಂದ ಮೂವರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ ಹೊತ್ತಿಸಿರುವ ಪೌರತ್ವದ ಕಿಚ್ಚು ಬಗೆಬಗೆಯ ಧೃವೀಕರಣಗಳನ್ನು ಬಿತ್ತಿ ಬೆಳೆಸತೊಡಗಿದೆ.

ಬುಡಕಟ್ಟುಗಳ ಭಾರತವಾಗಿರುವ ಈಶಾನ್ಯದಲ್ಲಿ ಅಸ್ಮಿತೆಯ ಪ್ರಶ್ನೆ ಬಲು ಸೂಕ್ಷ್ಮದ್ದು. ಅಸ್ಸಾಮಿನಲ್ಲಿ ಎನ್.ಆರ್.ಸಿ. ಮತ್ತು ಆನಂತರದ ಸಿ.ಎ.ಎ. ಈ ಸೀಮೆಯ ಶಾಂತಿಯನ್ನು ಗಾಢವಾಗಿ ಕದಡಿವೆ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಈ ಅಶಾಂತಿಯ ಭೂತವನ್ನು ಬಡಿದೆಬ್ಬಿಸಿ ಹಬ್ಬಿಸಿರುವವರು ರಾಜಕಾರಣಿಗಳು. ಈ ಭೂತ ತಮ್ಮ ಮುಷ್ಠಿಯ ಬಂಧಿ ಎಂಬ ಭ್ರಮೆಯಲ್ಲಿ ಮುಳುಗಿದ್ದಾರೆ. ಈ ಹಿಡಿತದಿಂದ .ಬಿಡಿಸಿಕೊಂಡು ಅಕರಾಳ ವಿಕರಾಳ ರೂಪ ಧರಿಸಿ ಅಮಾಯಕರ ಬೇಟೆಯಲ್ಲಿ ತೊಡಗಿದೆ. ತನ್ನನ್ನು ಬಡಿದೆಬ್ಬಿಸಿದವರನ್ನೂ ಇಂದಲ್ಲ ನಾಳೆ ಬಲಿ ತೆಗೆದುಕೊಂಡೀತು. ಹಚ್ಚಲಾಗುವ ಕಿಚ್ಚಿಗೆ ಹಿಂದೂಗಳು- ಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿಯಾಗಿಸುವುದೊಂದೇ ಅದರ ನಿಜ ಧರ್ಮ. ಸಿ.ಎ.ಎ. ಮತ್ತು ಎನ್.ಆರ್.ಸಿ. ಈಶಾನ್ಯ ಭಾರತದಲ್ಲಿ ಎಬ್ಬಿಸಿರುವ ಶಂಕೆ ಮತ್ತು ಭಯ ಬೇರೆಯದೇ ಆದದ್ದು. ಸಿ.ಎ.ಎ. ಅಡಿಯಲ್ಲಿ ಹಿಂದೂ-ಬೌದ್ಧ-ಕ್ರೈಸ್ತರ ಹೆಸರಿನಲ್ಲಿ ‘ಹೊರಗಿನವರು’ ಬಂದು ಬೀಡು ಬಿಟ್ಟು, ತಮ್ಮ ನೆಲ ಜಲ ಸಂಸ್ಕೃತಿ ಅಸ್ಮಿತೆಯ ಮೇಲೆ ದಾಳಿ ನಡೆಸಿ ರಾಜಕೀಯ ಅಧಿಕಾರವನ್ನೂ ಕಿತ್ತುಕೊಂಡಾರು, ತಮ್ಮ ನೆಲದಲ್ಲಿ ತಾವೇ ಪರಕೀಯರಂತೆ ಬದುಕಬೇಕಾದೀತು ಎಂಬುದು ಈಶಾನ್ಯ ರಾಜ್ಯಗಳ ಜನಸಮುದಾಯಗಳ ಆಶಂಕೆ. ನೆಲದ ಮಕ್ಕಳಾದ ಬುಡಕಟ್ಟುಗಳು ಮತ್ತು ಪರಕೀಯರು ಎಂಬ ರೂಪವನ್ನು ಸಿ.ಎ.ಎ.- ಎನ್.ಆರ್.ಸಿ. ಧರಿಸಿದೆ. ಇಬ್ಬರ ನಡುವೆ ರಕ್ತಸಿಕ್ತ ಕದನವನ್ನು ಹುಟ್ಟಿ ಹಾಕಿದೆ. ಮೊನ್ನೆ ಮೇಘಾಲಯದಲ್ಲಿ ನಡೆದ ಇಂತಹ ಘರ್ಷಣೆಗಳಲ್ಲಿ ಸತ್ತ ಮೂವರ ಪೈಕಿ ಇಬ್ಬರು ಅಸ್ಸಾಮಿನವರು. ಬುಡಕಟ್ಟು ಜನಾಂಗಗಳು ಪರಕೀಯರು ಎಂದು ಭಾವಿಸುವ ‘ಇತರರು’. ಇವರು ಹಿಂದೂಗಳೇ ಇರಬಹುದು, ಮುಸಲ್ಮಾನರೂ ಆಗಿರಬಹುದು.

ಸಿ.ಎ.ಎ.-ಎನ್.ಆರ್.ಸಿ. ತರಲೇಬೇಕೆಂಬ ಜಿದ್ದು ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಬಿಗುವಿನ ಭಾವಗಳನ್ನು ದಟ್ಟಗೊಳಿಸತೊಡಗಿವೆ ಎಂಬ ವಾಸ್ತವವನ್ನು ಸರ್ಕಾರ ಗುರುತಿಸಿ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡರೆ ಹೊರದಾರಿ ತಾನಾಗಿಯೇ ಗೋಚರಿಸೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...