ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಯಡಿಯೂರಪ್ಪ ಕುಟುಂಬದ ಹಸ್ತಕ್ಷೇಪ. ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಭ್ರಷ್ಟಾಚಾರ. ಶಾಸಕರಿಗೆ ಅನುದಾನ ನೀಡದೆ ಅನ್ಯಾಯ. ಮುಖ್ಯಮಂತ್ರಿಗಳ ಸರ್ವಾಧಿಕಾರಿ ನೀತಿ. ಯತ್ನಾಳ್ ಅವರ ಆರೋಪಗಳನ್ನು ಸಚಿವ ಈಶ್ವರಪ್ಪ ಅನುಮೋದಿಸುತ್ತಿದ್ದಾರೆ” ಎಂದು ಹೇಳಿರುವ ಕಾಂಗ್ರೆಸ್, ಬಿಜೆಪಿಯನ್ನು ಉಲ್ಲೇಖಿಸಿ, ನಿಮಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ, ಬಿಜೆಪಿಯ ವಿರುದ್ದ ಬಿಜೆಪಿ, ಎಂದು ಲೇವಡಿ ಮಾಡಿದೆ.
★@BSYBJP ಕುಟುಂಬದ ಹಸ್ತಕ್ಷೇಪ.
★#VijayendraServiceTax ಭ್ರಷ್ಟಾಚಾರ
★ಶಾಸಕರಿಗೆ ಅನುದಾನ ನೀಡದೆ ಅನ್ಯಾಯ
★ ಮುಖ್ಯಮಂತ್ರಿಗಳ ಸರ್ವಾಧಿಕಾರಿ ನೀತಿಯತ್ನಾಳ್ ಅವರ ಆರೋಪಗಳನ್ನು ಸಚಿವ @ikseshwarappa ಅನುಮೋದಿಸುತ್ತಿದ್ದಾರೆ.@BJP4Karnataka
ನಿಮಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ.#BJPvsBJP— Karnataka Congress (@INCKarnataka) March 31, 2021
ಇದನ್ನೂ ಓದಿ: ಮೈತ್ರಿ ಸರ್ಕಾರದ ಶಾಸಕರಿಗೆ ಯಡಿಯೂರಪ್ಪ ಹಣದ ಆಮಿಷ: ತನಿಖೆಗೆ ಆದೇಶಿಸಿದ ಕೋರ್ಟ್
“ಯಡಿಯೂರಪ್ಪ vs ಈಶ್ವರಪ್ಪ\ ಯತ್ನಾಳ್ vs ವಿಜಯೇಂದ್ರ\ ಸುಧಾಕರ್ vs ರೇಣುಕಾಚಾರ್ಯ\ ಸಚಿವರು vs ಶಾಸಕರು\ ಆಪರೇಷನ್ ಆದವ್ರು vs ಮೂಲದವ್ರು\ ಅತೃಪ್ತರು vs ಸಂತೃಪ್ತರು. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ, ಬಿಜೆಪಿ ವಿರುದ್ದದ ಬಿಜೆಪಿ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ. ಅಧಿಕಾರದ ಪೈಪೋಟಿ, ಭ್ರಷ್ಟಾಚಾರದ ಲೂಟಿ ಅಷ್ಟೇ ಬಿಜೆಪಿಯ ಆಡಳಿತದಲ್ಲಿ ಇರುವುದು” ಎಂದು ಕಾಂಗ್ರೆಸ್ ಹೇಳಿದೆ.
ಯಡಿಯೂರಪ್ಪ vs ಈಶ್ವರಪ್ಪ
ಯತ್ನಾಳ್ vs ವಿಜಯೇಂದ್ರ
ಸುಧಾಕರ್ vs ರೇಣುಕಾಚಾರ್ಯ
ಸಚಿವರು vs ಶಾಸಕರು
ಆಪರೇಷನ್ ಆದವ್ರು vs ಮೂಲದವ್ರು
ಅತೃಪ್ತರು vs ಸಂತೃಪ್ತರುಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ, #BJPvsBJP ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ.
ಅಧಿಕಾರದ ಪೈಪೋಟಿ, ಭ್ರಷ್ಟಾಚಾರದ ಲೂಟಿ@BJP4Karnataka ಆಡಳಿತದಲ್ಲಿರುವುದಿಸ್ಟೇ
— Karnataka Congress (@INCKarnataka) March 31, 2021
ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ರಾಜ್ಯಪಾಲರಿಗೆ ದೂರು ನೀಡಿದ್ದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಭಾರಿ ಮುಜುಗರ ತಂದೊಡ್ಡಿದೆ. ಈಶ್ವರಪ್ಪ ಅವರು ರಾಜ್ಯಪಾಲರಿಗೆ ಮಾತ್ರವಲ್ಲದೆ ಬಿಜೆಪಿ ಹೈಕಮಾಂಡ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರಿಗೂ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ವಿರುದ್ದವೇ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ!