Homeಮುಖಪುಟಶೇನ್‌ ವಾರ್ನ್ ವಿದಾಯಕ್ಕೆ ಕಂಬನಿ ಮಿಡಿದ ಕ್ರಿಕೆಟ್‌ ಪ್ರೇಮಿಗಳು

ಶೇನ್‌ ವಾರ್ನ್ ವಿದಾಯಕ್ಕೆ ಕಂಬನಿ ಮಿಡಿದ ಕ್ರಿಕೆಟ್‌ ಪ್ರೇಮಿಗಳು

- Advertisement -
- Advertisement -

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಲೆಗ್ ಸ್ಪಿನ್ನರ್ ಶೇನ್ ವಾರ್ನ್ (52) ಹೃದಯಾಘಾತದಿಂದ ನಿಧನರಾಗಿದ್ದು, ಕ್ರಿಕೆಟ್ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಥಾಯ್ಲೆಂಡ್‌ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಸ್ಪಿನ್‌ ಮಾಂತ್ರಿಕ ಶೇನ್‌ವಾರ್ನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಶುಕ್ರವಾರ ಬೆಳಗಿನ ಜಾವ ಆಸ್ಟ್ರೇಲಿಯಾದ ಕ್ರಿಕೆಟಿಗ  ರಾಡ್ನಿ ಮಾರ್ಷ್ (74) ಹೃದಯಾಘಾತದಿಂದ ನಿಧನರಾದರು. ಗೆಳೆಯನ ವಿದಾಯಕ್ಕೆ ಶೇನ್‌ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ರಾತ್ರಿ ವೇಳೆಗೆ ಶೇನ್‌ ನಿಧನದ ಸುದ್ದಿ ಕ್ರಿಕೆಟ್ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿತು.

ಹದಿನೈದು ವರ್ಷಗಳ ಕಾಲ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ ತೋರಿದ ಪ್ರದರ್ಶನ ಕ್ರಿಕೆಟ್‌ ಪ್ರೇಮಿಗಳ ಮನಸೂರೆಗೊಂಡಿದೆ. ಅತಿಹೆಚ್ಚು ವಿಕೆಟ್‌ ಪಡೆದವರ ಪೈಕಿ ಶ್ರೀಲಂಕಾ ಆಟಗಾರ ಮುತ್ತಯ್ಯ ಮುರಳೀಧರನ್‌ ಮೊದಲ ಸ್ಥಾನದಲ್ಲಿದ್ದರೆ ಶೇನ್‌ ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ.

ವಾರ್ನ್‌ ತೆಗೆದುಕೊಂಡ ಮೊದಲ ವಿಕೆಟ್‌ ರವಿಶಾಸ್ತ್ರಿಯವರದ್ದಾಗಿತ್ತು. 1992, ಜನವರಿ 2ರಂದು ಸಿಡ್ನಿಯಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್‌ ಪಂದ್ಯದ ಮೂಲಕ ಶೇನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 145 ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಗಳನ್ನಾಡಿದ್ದ ಅವರು 708 ವಿಕೆಟ್ ಪಡೆದಿದ್ದರು.  71 ರನ್‌ಗಳಿಗೆ 8 ವಿಕೆಟ್‌ ಪಡೆದದ್ದು ಶೇನ್‌ನ ಶ್ರೇಷ್ಠ ಸಾಧನೆ. 194 ಅಂತಾರಾಷ್ಟ್ರೀಯ ಏಕದಿನಗಳನ್ನು ಆಡಿದ್ದು 293 ವಿಕೆಟ್ ಪಡೆದಿದ್ದಾರೆ.

1993ರಲ್ಲಿ ನಡೆದ ಆಷಸ್ ಸರಣಿಯಲ್ಲಿ ವಾರ್ನ್ ಎಸೆದ ಸ್ಪಿನ್‌ಗೆ ಇಂಗ್ಲೆಂಡ್‌ನ ಮೈಕ್‌ ಗ್ಯಾಟಿಂಗ್‌ ಔಟಾಗಿದ್ದರು. ಈ ಎಸೆತವನ್ನು ‘ಶತಮಾನದ ಎಸೆತ’ ಎಂದು ಕ್ರಿಕೆಟ್ ಜಗತ್ತು ಬಣ್ಣಿಸಿದೆ.

ಕ್ರಿಕೆಟ್‌ ದಿಗ್ಗಜನ ವಿದಾಯಕ್ಕೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ಶೇನ್‌ ವಾರ್ನ್‌ ಅವರ ಕ್ರೀಡಾ ಲೋಕವನ್ನು ಸ್ಮರಿಸಿದ್ದಾರೆ. (ಆಯ್ದ ಬರಹಗಳು ಇಲ್ಲಿವೆ.)

***

ಟೆಸ್ಟ್‌ ಕ್ರಿಕೆಟ್‌ ಸೊಬಗು ಹೆಚ್ಚಿಸಿದ ಮಾಂತ್ರಿಕ

ಟೆಸ್ಟ್ ಕ್ರಿಕೆಟ್ ಆಟದ ಸೊಬಗನ್ನು ಬರಪೂರ ನಮಗೆ ಉಣಬಡಿಸುದವನು ಶೇನ್ ವಾರ್ನ್, ಮೂರು ನಾಲ್ಕು ಹೆಜ್ಜೆಗಳನ್ನು ಸಾವಧಾನವಾಗಿ ನೆಡೆದುಕೊಂಡು ಬಂದವನಂತೆ ಇಡೀ ದೇಹದ ಬಾರವನ್ನು ಬಾಲಿನ ಮೇಲೆ ಹಾಕಿ ಲೆಗ್ ಸ್ಪಿನ್ ಮಾಡುತ್ತಿದ್ದ ಶೇನ್ ವಾರ್ನ್ ನನ್ನು ನೋಡುವುದೇ ಹಬ್ಬದಂತಿರುತ್ತಿತ್ತು. ಬಾಲನ್ನು ಅಷ್ಟೊಂದು ಸ್ಪಿನ್ ಹೇಗೆ ಮಾಡುತ್ತಾನಪ್ಪನೆಂದು ಆಶ್ಚರ್ಯವಾಗುತ್ತಿತ್ತು.ಬಾಲನ್ನು ತಿರುತಿರುಗಿಸಿ ಬಿಡುತ್ತಿದ್ದರೆ ಬ್ಯಾಟ್ಸ್‌ಮನ್ ಕಂಗಾಲಾಗಿ ವಿಕೆಟ್ ಒಪ್ಪಿಸುತ್ತಿದ್ದ…

ಶೇನ್‌ ವಾರ್ನ್ ಬದುಕಲ್ಲಿ ಹಲವಾರು ಏರುಪೇರುಗಳಿವೆ. ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು ಒಂದು ವರ್ಷ ಆಟದಿಂದ ನಿಷೇದಕ್ಕೊಳದಾರು. ಮತ್ತೆ ಬೂದಿಯಿಂದ ಮೇಲೆದ್ದವನಂತೆ 700 ಟೆಸ್ಟ್ ವಿಕೆಟ್‌‌ಗಳ ಸಾಧನೆ ಮಾಡಿದ. ನಮ್ಮನ್ನು ರಂಜಿಸಿದ ಶೇನ್ ವಾರ್ನ್‌‌ಗೆ ಭಾವಪೂರ್ಣ ವಿದಾಯಗಳು.

– ಕಾಂತರಾಜು ಕೆ. ಗೊಲ್ಲರಹಟ್ಟಿ

***

‘2008ರ ಐಪಿಎಲ್‌ ಸೀಸನ್‌ ನೆನಪಾಗುತ್ತದೆ’

ಶೇನ್ ವಾರ್ನ್ ಅಂದರೆ ನನಗೆ ನೆನಪಾಗೋದೇ 2008ರ ಮೊದಲ ಐಪಿಎಲ್ ಸೀಸನ್. ರಾಜಾಸ್ಥಾನ್ ರಾಯಲ್ಸ್‌ ತಂಡದ ಕ್ಯಾಪ್ಟನ್ ಆಗಿದ್ದದ್ದು ಶೇನ್ ವಾರ್ನ್. ಟೂರ್ನಿ ಶುರುವಾದಾಗ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ಗೆಲ್ಲಬಹುದೆಂದು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ಕಾರಣ ಅಲ್ಲಿದ್ದದ್ದು ಕೆಲವೇ ಕೆಲವು ಅನುಭವಸ್ಥ ಆಟಗಾರರು. ಉಳಿದವರೆಲ್ಲ ಅನನುಭವಿ ಯುವಕರೇ.

ಆರಂಭದ ಪಂದ್ಯಗಳನ್ನು ಒಂದರ ಹಿಂದೊಂದು ಸೋತು ಹೋಗುವಾಗ, ಲೀಗ್ ರೌಂಡಿನಿಂದಲೇ ಹೊರಬಿದ್ದು ಇನ್ನೇನು ಟೂರ್ನಿಯಿಂದಲೇ ಹೊರ ಹೋಗಬಹುದು ಅಂತ ಅಂದಾಜಿಸಲಾಗಿತ್ತು. ನನಗೆ ನೆನಪಿದ್ದಂತೆ ರಾಜಸ್ಥಾನ್ ರಾಯಲ್ಸ್ ಆಗ ಕಡೆಯ ಸ್ಥಾನದಲ್ಲಿತ್ತು. ಮುಂದಿನ ಹಂತಕ್ಕೆ ಹೋಗಬೇಕೆಂದರೆ ಉಳಿದ ಆರೇಳು ಪಂದ್ಯಗಳಲ್ಲಿ ಒಂದರಲ್ಲಿಯೂ ಸೋಲದೆ ಎಲ್ಲವನ್ನು ಗೆಲ್ಲಬೇಕಿತ್ತು.

ಆಗ ಆ ಯುವಕರನ್ನೇ ಕಟ್ಟಿಕೊಂಡು, ಅವರ ಸಾಮರ್ಥ್ಯವನ್ನು ಬಳಸಿಕೊಂಡು ಅತ್ಯುತ್ತಮ ಗೇಮ್‌ಪ್ಲಾನ್‌ನಿಂದ ಗೆದ್ದದ್ದು ಶೇರ್ನ್ ವಾರ್ನ್. ಸೋತ ಪಂದ್ಯವೊಂದರ ನಂತರದ ಸಂದರ್ಶನದಲ್ಲಿ ಸಂದರ್ಶನಕಾರ ಕೇಳಿದಾಗ ಶೇನ್ ವಾರ್ನ್ ಹೇಳಿದ್ದೊಂದೇ…..” ಟೂರ್ನಿ ಗೆಲ್ಲುವುದು ಎರಡನೇ ವಿಷಯ. ಈಗ ನಮ್ಮೆಲ್ಲರ ಮುಂದಿರುವ ಗುರಿ ಉಳಿದ ಪಂದ್ಯಗಳನ್ನು ಗೆಲ್ಲುವುದಷ್ಟೇ. ಹಾಗಾಗಿ ಟೂರ್ನಿಯ ಬಗ್ಗೆ ಆಲೋಚಿಸದೆ ಮುಂದೆ ಆಡಲಿರುವ ಒಂದೊಂದು ಪಂದ್ಯದ ಬಗ್ಗೆ ಮಾತ್ರ ಗಮನಹರಿಸಿ, ನಮ್ಮ ಶ್ರಮಹಾಕಿ ಅವುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ” ಅಂತ. ಅಕ್ಷರಶಃ ಉಳಿದ ಏಳೂ ಪಂದ್ಯಗಳೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ “ಮಾಡು ಇಲ್ಲವೇ ಮಡಿ” ಎಂಬಂತಾಗಿತ್ತು. ಆ ಕ್ಷಣದಲ್ಲೂ ಯಾರಿಗೂ ಆ ತಂಡದ ಬಗ್ಗೆ ನಂಬಿಕೆ ಇರಲಿಲ್ಲ.

ಆಗಲೇ ನೋಡಿ ನಡೆದದ್ದು ಪವಾಡ. ಒಂದೊಂದೇ…. ಒಂದೊಂದೇ ಪಂದ್ಯವನ್ನು ಶೇನ್ ವಾರ್ನ್ ನಾಯಕತ್ವದ ತಂಡ ಗೆಲ್ಲುತ್ತಲೇ ಹೋಯಿತು. ಬ್ಯಾಟಿಂಗ್ ಕೈಕೊಟ್ಟಾಗ ಬೌಲರ್‌ಗಳು ಆಸರೆಯಾದರು. ಬೌಲಿಂಗ್ ಕೈಕೊಟ್ಟಾಗ ಬ್ಯಾಟ್ಸ್‌ಮನ್‌ಗಳೇ ಆಸರೆಯಾದರು. ಹೀಗೆ ಪಂದ್ಯದಿಂದ ಪಂದ್ಯಕ್ಕೆ ರಾಜಾಸ್ಥಾನ್ ರಾಯಲ್ಸ್ ತಾನೆಷ್ಟು ಬಲಿಷ್ಠ ಅನ್ನುವುದನ್ನು ಸಾಬೀತುಪಡಿಸುತ್ತಲೇ ಹೋಯಿತು. ಲೀಗ್ ಹಂತ ಮುಗಿಯುವಷ್ಟರಲ್ಲಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆಗಲೂ ಅತಿಯಾದ ಆತ್ಮವಿಶ್ವಾಸದಿಂದ ಏಕಾಗ್ರತೆ ಕಳೆದುಕೊಳ್ಳಲಿಲ್ಲ. Knockout ಹಂತದಲ್ಲೂ ಅದೇ ಪ್ರದರ್ಶನ ಮುಂದುವರೆಸಿ ಫೈನಲ್‌ ಪಂದ್ಯವನ್ನು ಸಹ ಗೆದ್ದುಕೊಂಡಿತು.

ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿದ್ದಾಗ್ಯೂ ಅಂಥ ಅನನುಭವಿ ಯುವಕರ ತಂಡಕ್ಕೆ ಮಾನಸಿಕ ಸ್ಥೈರ್ಯ ತುಂಬಿ, ಎಲ್ಲರನ್ನು ಹುರಿದುಂಬಿಸುತ್ತ ಸರಣಿ ಗೆಲ್ಲಲು ಕಾರಣವಾದ ಶೇನ್ ವಾರ್ನ್ ಸಹಜವಾಗಿ ಎಲ್ಲರ ಪಾಲಿಗೆ ಹೀರೋ ಆದರು. ಅದ್ಭುತ ಆಟಗಾರರಿರುವ ತಂಡವನ್ನು ಮುನ್ನಡೆಸುವುದು ಸುಲಭ. ಆದರೆ ಹೆಸರೇ ಗೊತ್ತಿಲ್ಲದ ಆಟಗಾರರ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ತಂಡವನ್ನು ಮುನ್ನಡೆಸಿ ಪಂದ್ಯ ಗೆಲ್ಲಿಸುವುದಿದೆಯಲ್ಲ, ಅದು ನಿಜವಾದ ನಾಯಕನಿಗೆ ಮಾತ್ರ ಸಾಧ್ಯ. ನಾಯಕತ್ವದ ಗುಣ ಹೇಗಿರಬೇಕೆಂದು ಶೇನ್ ವಾರ್ನ್ ಆ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದನ್ನು ನೋಡಿದರೆ ಅರ್ಥವಾಗುತ್ತಿತ್ತು.

ಇಷ್ಟೆಲ್ಲ ಆವೃತ್ತಿಗಳು ಮುಗಿದಿದ್ದರೂ ಆ ಮೊದಲನೇ ಆವೃತ್ತಿ ನೆನಪಿರುವುದೇ ಶೇನ್ ವಾರ್ನ್ ಅನ್ನುವ ಲಿಜೆಂಡ್ ಕ್ರಿಕೆಟಿಗನ ಕಾರಣಕ್ಕಾಗಿ. ಅಂಥ ಶೇರ್ನ್ ವಾರ್ನ್….. ಇಂದು ನಮ್ಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಅಂತ ಕಳುಹಿಸಿಕೊಡುವುದೊಂದೇ ನಮಗಿರುವ ಆಯ್ಕೆ….. ಅವರಾತ್ಮಕ್ಕೆ ಶಾಂತಿ ಸಿಗಲಿ…

– ಸಂತೋಷ್‌ಕುಮಾರ್‌ ಎಲ್.ಎಂ.

***

‘ಅವಸರದ ಗೂಗ್ಲಿ’

ಇದೇನಾಗೋಯ್ತು, ಉತ್ಕಟ ಜೀವನ ಪ್ರೀತಿಯ ಶೇನ್ ಇಷ್ಟು ಬೇಗ ಜೀವ ಚೆಲ್ಲಿ ಹೊರಟೋದ ಅಂದ್ರೆ ನಂಬೋಕೆ ಆಗ್ತಿಲ್ಲ. ಲಂಕೇಶ್ ಮೇಷ್ಟ್ರು ಹಲವು ಬಾರಿ ಕ್ರಿಕೆಟ್ ಜಗತ್ತಿನ ಜಂಟಲ್ ಮನ್ ಶೇನ್ ವಾರ್ನ್ ಬಗ್ಗೆ ಬರೆದದ್ದು ನೆನಪಾಗ್ತಿದೆ. ಜಗತ್ತಿನ ಶ್ರೇಷ್ಠ ಲೆಗ್ ಸ್ಪಿನ್ನರುಗಳಲ್ಲೊಬ್ಬನಾದ ಶೇರ್ನ್ ಅವನನ್ನು ಇಷ್ಟ ಪಡುವವರಿಗೆ ಹೀಗೊಂದು ಅವಸರದ ಗೂಗ್ಲಿ ಎಸೆದು ತಬ್ಬಿಬ್ಬಾಗಿಸಿ ಹೊರಟೋಗಬಹುದೆಂದು ಯಾರೂ ಎಣಿಸಿರಲು ಸಾಧ್ಯವಿಲ್ಲ. What a shock..!

– ದಾದ ಕಲಂದರ್‌

***

‘ಕ್ರಿಕೆಟ್ ಜ್ವರ ತೀವ್ರವಾಗಿದ್ದ ದಿನಗಳವು….’

ನಮಗೆ ನಮ್ಮ ಹೈಸ್ಕೂಲ್ ದಿನಗಳಲ್ಲಿ ಕ್ರಿಕಿಟ್ ಜ್ವರ ತೀವ್ರವಾಗಿದ್ದ ದಿನಗಳಲ್ಲಿ ಶೇನ್ ವಾರ್ನ್ ಬಗ್ಗೆ ಮಾತಾಡದ ದಿನಗಳೇ‌ ಇರುತ್ತಿರಲಿಲ್ಲ.

ಆಸ್ಟ್ರೇಲಿಯಾ ಬಾರತ ಆಟ ಅಂದರೆ ಹುಚ್ಚು ಹಿಡಿಸಿಕೊಂಡು ಕೂರಲು ಆ ಕಡೆ ಶೇನ್ ವಾರ್ನ್ ರ ಮ್ಯಾಜಿಕಲ್ ಲೆಗ್ ಸ್ಪಿನ್ ಬೌಲಿಂಗ್ ಆದರೆ ಅದಕ್ಕೆ ಎದುರಾಗಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್…‌ ಬರೀ ಒನ್ ಡೇ ಅಲ್ಲ ಐದು ದಿನಗಳ ಟೆಸ್ಟ್ ಮ್ಯಾಚುಗಳನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾವೊಂದಿಶ್ಟು ಒಂದೇ ವಾರಗೆಯ ಗೆಳೆಯರು ಕೆಲ ವರ್ಶ ಕಾಲ ಕುಂತ್ರೂ ಕ್ರಿಕೆಟ್, ನಿಂತ್ರೂ ಕ್ರಿಕೆಟ್, ಮಲಗಿದ್ರೂ ಕ್ರಿಕೆಟ್ ಅನ್ನುವಂಗೆ ಕ್ರಿಕೆಟ್ ಮಯ ಆಗೋಗಿದ್ವಿ. ಹತ್ತನೇ‌‌ ತರಗತಿ ಪಾಸಾದ ಮೇಲೆ ಊರಲ್ಲೇ ಕಾಲೇಜಿದ್ರೂ ಶಿವಮೊಗ್ಗ ಕಾಲೇಜಿಗೆ ನನ್ನನ್ನು ಸೇರಿಸಲು ಈ ಕ್ರಿಕೆಟ್ ಕೂಡಾ ಕಾರಣವಾಗಿತ್ತು. ಶಿವಮೊಗ್ಗ ಹೋದ ಮೇಲೆ ಕ್ರಿಕೆಟ್ ಏನೋ ಬಿಟ್ಟರೂ ಅದಕ್ಕಿಂತ ದೊಡ್ಡ ಹುಚ್ಚು “ಸಮಾಜ, ಕ್ರಾಂತಿ, ಹೋರಾಟ” ಅಂಟಿಕೊಂಡಿದ್ದು ಬ್ಯಾರೆ ಕತೆ. ಅದರ ಬಗ್ಗೆ ಕೊಂಚವೂ ಬೇಸರವಿಲ್ಲ.

ಈ ಐಪಿಎಲ್, ಟ್ವೆಂಟಿ ಟ್ವೆಂಟಿ ಬಂದ ಮೇಲೆ ನಮ್ಮ ಕ್ರಿಕೆಟ್ ಹುಚ್ಚೂ ಕಡಿಮೆ ಆಗಿತ್ತು..‌ ಶೇನ್ ವಾರ್ನ್ ತೀರಿಕೊಂಡ ಸುದ್ದಿ ಕೇಳಿ ಒಮ್ಮೆ ಆ ಕ್ರಿಕೆಟ್ ಪ್ರೇಮದ ದಿನಗಳು ನೆನಪಾದವು.

– ಹರ್ಷಕುಮಾರ್‌ ಕುಗ್ವೆ

***

‘ಶೇನ್‌ ವಾರ್ನ್ ಲೇಸರ್‌ ಟ್ರೀಟ್ಮೆಂಟ್‌’

ಆದರೆ ಶೇನ್ ವಾರ್ನ್ ಅವರನ್ನು ವಯಕ್ತಿಕ ಕಾರಣಕ್ಕಾಗಿ ಸ್ವಲ್ಪ ದಿನ ಫಾಲೋ ಮಾಡ್ತಿದ್ದೆ. ವಾರ್ನ್ ತನ್ನ ತಲೆಗೂದಲು ಉದರದ ಹಾಗೇ ‘ಲೇಸರ್ ಟ್ರೀಟ್ಮೆಂಟ’ ತಗೊಂಡ್ರು… ಈ ಟ್ರೀಟ್ಮೆಂಟ್ ಎಷ್ಟು ಫಲಕಾರಿ ಅಂತ ಅಗಾಗ ಅವರ ತಲೆ ಗಮನಿಸುತ್ತಿದ್ದೆ. ಶೇನ್ ವಾರ್ನ್ ಗೆ ಪ್ರೀತಿಯ ವಿದಾಯ

 – ಯದುನಂದನ್ ಕೀಲಾರ

***

– ಹೀಗೆ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳು ಶೇನ್‌ ವಾರ್ನ್ ಅವರ ಕ್ರಿಕೆಟ್‌ ಜಗತ್ತನ್ನು ಮೆಲುಕು ಹಾಕಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...