Homeಬಹುಜನ ಭಾರತಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! - ಡಿ.ಉಮಾಪತಿ

ಬಹುಜನ ಭಾರತ: ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ! – ಡಿ.ಉಮಾಪತಿ

ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.

- Advertisement -
- Advertisement -

ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕವಾಗಿ ಅಥವಾ ತಿಳಿದೋ ತಿಳಿಯದೆಯೋ ನುಸುಳುವ ಪೂರ್ವಗ್ರಹಗಳು ಪತ್ರಿಕೆಗಳು- ಚಾನೆಲ್‍ಗಳು- ನವಮಾಧ್ಯಮಗಳಲ್ಲಿ ದೋಷಗಳಿಗೆ ದಾರಿ ಮಾಡಿಕೊಡುತ್ತವೆ. ವಿದೇಶಗಳಲ್ಲಿನ ಮಾಧ್ಯಮಗಳು ಹೆಚ್ಚು ಹೆಚ್ಚು ಕಪ್ಪು ಪತ್ರಕರ್ತರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಹೌದು. ಆದರೆ ಬಿಳಿಯ ಪತ್ರಕರ್ತರಿಗೆ ಹೋಲಿಸಿದರೆ ಸಂಪಾದಕೀಯ ವಿಭಾಗದ ಇಲ್ಲವೇ ನೀತಿ ನಿರ್ಧಾರ ಕೈಗೊಳ್ಳುವ ಕ್ರಿಯೆಯಲ್ಲಿ ಅವರ ಪಾತ್ರ ಅಷ್ಟಕ್ಕಷ್ಟೇ.

ಪತ್ರಿಕೆಯೊಂದು ಜೀವಂತಿಕೆಯಿಂದ ಸಮಾಜಕ್ಕೆ ಸ್ಪಂದಿಸಬೇಕಿದ್ದರೆ ಅದರ ಸುದ್ದಿ ಕಾರ್ಯಸೂಚಿಯಲ್ಲಿ ಹೊಸ ಹೊಸ ಸುದ್ದಿ ಕಥಾನಕಗಳಿಗೆ ಅವಕಾಶವಿರಬೇಕು. ಹೊಸ ಹೊಸ ಸುದ್ದಿ ಕಥಾನಕಗಳು ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಪತ್ರಕರ್ತರ ಒಳನೋಟಗಳಿಂದ ಹುಟ್ಟುತ್ತವೆ. ಮೇಲಿನಿಂದ ಕಾಣುವ ನೋಟ ಬೇರೆಯಾದರೆ, ಕೆಳಗಿನಿಂದ, ಪಾರ್ಶ್ವಗಳಿಂದ ಕಾಣುವ ನೋಟವೇ ಬೇರೆ. ಉದಾಹರಣೆಗೆ ಹಸಿವಿನ ಗ್ರಹಿಕೆ, ಅವಮಾನದ ಗ್ರಹಿಕೆ, ನೋವಿನ ಗ್ರಹಿಕೆಗಳು ಏಣಿಶ್ರೇಣಿಯ ಸಮಾಜದಲ್ಲಿ ತುಳಿದವರು ಮತ್ತು ತುಳಿಸಿಕೊಂಡವರು, ಹಸಿದವರು ಮತ್ತು ಉಂಡವರು, ಅವಮಾನಿತರು ಮತ್ತು ಅವಮಾನ ಮಾಡುವವರಲ್ಲಿ ಏಕರೂಪವಾಗಿರುವುದು ಸಾಧ್ಯವಿಲ್ಲ. ವಿದೇಶಗಳ ಪತ್ರಿಕಾ ಕಚೇರಿಗಳಲ್ಲಿ ನೆಲೆಸಿರುವ ವರ್ಣಭೇದಕ್ಕಿಂತ ಅಗಾಧ ಆಳಕ್ಕೆ, ಅಪಾರ ಅಗಲಕ್ಕೆ ನಮ್ಮ ದೇಶದ ಪತ್ರಿಕೋದ್ಯಮವನ್ನು ಆವರಿಸಿಕೊಂಡಿದೆ ಜಾತೀಯತೆ. ಕಳೆದ ಕೆಲವು ದಶಕಗಳಲ್ಲಿ ಅದರ ಹೊರರೂಪದ ಉಗ್ರತೆ ಕುಗ್ಗಿರಬಹುದು. ಆದರೆ ಒಳಗಣ ಕುದಿ ಕಿಚ್ಚಿನಲ್ಲಿ ವ್ಯತ್ಯಾಸವಿಲ್ಲ. ನವಿರಾಗಿ ಆದರೆ ನಿಶ್ಚಿತವಾಗಿ ಕೆಲಸ ಮಾಡುತ್ತಿರುವುದು ನಿಚ್ಚಳ.

ಬ್ರಿಟಿಷ್ ಮೀಡಿಯಾ ಈಗಲೂ ಶೇ.94ರಷ್ಟು ಶ್ವೇತವರ್ಣೀಯ. ಅತಿಗಣ್ಯ ಪತ್ರಿಕೋದ್ಯಮ ಶಾಲೆಗಳಲ್ಲಿ ಓದಿದವರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದ್ದಿದ್ದರಲ್ಲಿ ಬಿ.ಬಿ.ಸಿ. ಪರವಾಗಿಲ್ಲ. ಕಪ್ಪು ವರ್ಣೀಯರು ಮತ್ತು ಹೆಣ್ಣುಮಕ್ಕಳ ಜನಸಂಖ್ಯೆಯನ್ನೂ ಬಿಂಬಿಸುವ ಪ್ರಯತ್ನ ಕಾಣಬಹುದು. ಆದರೆ ಸರ್ವರಿಗೂ ಸಮಾನ ಪ್ರಾತಿನಿಧ್ಯ ನೀಡಿಕೆ ಇನ್ನೂ ಸಾಧ್ಯವಾಗಿಲ್ಲ. ಶ್ವೇತವರ್ಣೀಯರಲ್ಲದವರು ಯಾರೇ ಇರಲಿ ಅವರನ್ನು ಕಪ್ಪು, ಏಷ್ಯನ್, ಅಲ್ಪಸಂಖ್ಯಾತ ಬುಡಕಟ್ಟಿನ ಸಾಮಾನ್ಯ ಛತ್ರಿಯಡಿ ಸಾರಾಸಗಟಾಗಿ ಲೆಕ್ಕ ಹಿಡಿಯಲಾಗುತ್ತಿದೆ. ಇದರಾಚೆಗಿನ ತೃತೀಯಲಿಂಗಿಗಳು ಮುಂತಾದವರನ್ನು ಒಳಗೊಳ್ಳುವ ವೈವಿಧ್ಯಕ್ಕೆ ಬ್ರಿಟಿಷ್ ಮಾಧ್ಯಮ ಇನ್ನೂ ವಿಸ್ತರಿಸಬೇಕಿದೆ.

ಇಷ್ಟೆಲ್ಲ ಅರಿವು ಜಾಗೃತಿ ಆಂದೋಲನದ ನಂತರವೂ ಶ್ವೇತವರ್ಣೀಯರಲ್ಲದವರು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವ ದುಸ್ಥಿತಿ. ಭಾರತದಲ್ಲಿ ಶ್ವೇತವರ್ಣೀಯರ ಜಾಗದಲ್ಲಿ ಮೇಲ್ಜಾತಿಗಳನ್ನು ಮತ್ತು ಕಪ್ಪುವರ್ಣೀಯರು-ಹೆಣ್ಣುಮಕ್ಕಳು, ಏಷ್ಯನ್ನರು ಹಾಗೂ ಅಲ್ಪಸಂಖ್ಯಾತ ಬುಡಕಟ್ಟಿನ ಜಾಗದಲ್ಲಿ ದಲಿತರನ್ನೂ, ಹೆಣ್ಣುಮಕ್ಕಳನ್ನೂ, ಅಲ್ಪಸಂಖ್ಯಾತರನ್ನೂ, ಹೆಚ್ಚು ಹಿಂದುಳಿದ ಜಾತಿಗಳನ್ನೂ ಇಟ್ಟು ನೋಡಿದರೆ ಕಹಿ ವಾಸ್ತವ ಕಣ್ಣಿಗೆ ರಾಚುವುದು. ಈ ಎಲ್ಲ ವರ್ಗಗಳು ನಮ್ಮ ಸುದ್ದಿಮನೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇತ್ತೀಚಿಗೆ ಕರೋನಾ ವೈರಾಣುವಿನ ನೆಪವೊಡ್ಡಿ ಇವರನ್ನು ಆಟದಿಂದಲೂ ತೆಗೆದು ಮನೆಗೆ ಕಳಿಸಲಾಗುತ್ತಿದೆ.

ಹಿಂಸೆಯಿಂದ ಕೂಡಿದ ಶ್ವೇತವರ್ಣೀಯ ಶ್ರೇಷ್ಠತೆ ಮತ್ತು ದ್ವೇಷ ಬಿತ್ತುವ ಭಾಷಣಗಳು ವಿದೇಶಗಳಲ್ಲಿ ಹೆಚ್ಚುತ್ತಿವೆ. ಅದರ ತದ್ರೂಪಿನಂತೆ ಭಾರತದಲ್ಲಿ ಹಿಂಸಾವಾದೀ ಸವರ್ಣೀಯ ಶ್ರೇಷ್ಠತೆ ಮತ್ತು ದ್ವೇಷಬಿತ್ತನೆಯ ಭಾಷಣಗಳು ವಾತಾವರಣಕ್ಕೆ ವಿಷ ಕಕ್ಕುತ್ತಿವೆ. ಈ ಬಾಬತ್ತಿನಲ್ಲಿ ದೇಶವನ್ನು ಆಳುವವರೇ ಮುಂಚೂಣಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಷ್ಟು ಕಾಲ ಸುದ್ದಿಮನೆಗಳನ್ನು ಆಳಿಕೊಂಡು ಬಂದಿರುವ ಏಕಗ್ರಹಿಕೆಯೇ ಈಗಲೂ ಮುಂದುವರೆದಿದೆ. ಹೀಗಾಗಿಯೇ ನಮ್ಮ ಸುತ್ತಮುತ್ತಲ ಬಹುತೇಕ ಪತ್ರಿಕೆಗಳು ಸವರ್ಣೀಯ ಪಾರಮ್ಯದ ಏಕಗ್ರಹಿಕೆಯನ್ನೇ ಉನ್ಮಾದದಿಂದ ಬಿಂಬಿಸತೊಡಗಿವೆ. ಆರೋಗ್ಯಕರ ಮಾಧ್ಯಮಗಳು ತಲೆಯೆತ್ತಬೇಕಿದ್ದರೆ ಪತ್ರಿಕೆಗಳ ಅರ್ಥವ್ಯವಸ್ಥೆಯ ಮಾದರಿಯು ಮಾರುಕಟ್ಟೆ ನಿರ್ದೇಶಿತ ಬಂಡವಾಳಶಾಹಿ ಆತ್ಮವನ್ನು ತ್ಯಜಿಸುವ ಜೊತೆ ಜೊತೆಗೆ ಬಹುತ್ವದ ಬಹುಗ್ರಹಿಕೆಗಳಿಗೆ ಸುದ್ದಿಮನೆಯಲ್ಲಿ ಜಾಗ ದೊರೆಯಬೇಕಿದೆ. ಸರ್ವರನ್ನೂ ಒಳಗೊಳ್ಳುವ ಸುದ್ದಿಮನೆಗಳು ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿ ರೂಪು ತಳೆಯಬೇಕಿದೆ. ಆದರೆ ವಿಶೇಷವಾಗಿ ಭಾರತೀಯ ಸಮಾಜದ- ಸುದ್ದಿಮನೆಗಳ ಪಯಣ ಹಿಂದೆಂದಿಗಿಂತಲೂ ಹೆಚ್ಚು ವಿರುದ್ಧ ದಿಕ್ಕಿನಲ್ಲಿ ಸಾಗಿರುವುದು ಏಕಕಾಲಕ್ಕೆ ಬಹುದೊಡ್ಡ ವಿಡಂಬನೆಯೂ, ಗಂಡಾಂತರಕಾರಿಯೂ ಆಗಿದೆ.

ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ |

ಆ ಪರಮಾತ್ಮ ನಮ್ಮನ್ನು ಜೊತೆಯಾಗಿ ರಕ್ಷಿಸಲಿ, ಜೊತೆಯಾಗಿ ಆಹಾರ ಸೇವಿಸುವಂತೆ ಮಾಡಲಿ, ಜೊತೆಯಾಗಿ ಧೀರ ಕಾರ್ಯ ಮಾಡುತ್ತೇವೆ. ನಮ್ಮ ಅಧ್ಯಯನ ತೇಜಸ್ಸಿನಿಂದ ಕೂಡಿರಲಿ, ದ್ವೇಷವೆಂಬುದು ಎಂದೆಂದಿಗೂ ನಮ್ಮನ್ನು ಆವರಿಸಿಕೊಳ್ಳದಿರಲಿ ಎಂಬ ಅರ್ಥದ ಶ್ಲೋಕವಿದು. ವಸುಧೈವಕ ಕುಟುಂಬಕಂ ತತ್ವವನ್ನು ಸಾರುವ ದೇಶ ನಮ್ಮದೆಂದು ಎದೆ ತಟ್ಟಿಕೊಳ್ಳುತ್ತೇವೆ. ಆದರೆ ಅಸಲು ಆಚರಣೆಯಲ್ಲಿರುವುದೇನು? ಇದೆಲ್ಲವೂ ನೂರಾರು ವರ್ಷಗಳಿಂದ ಕಾಗದದ ಮೇಲೆಯೂ, ಹೆಚ್ಚೆಂದರೆ ಬಾಯಿ ಮಾತಿನ ಬಡಾಯಿಯಾಗಿಯೂ ಉಳಿದಿರುವುದು ಸುಳ್ಳೇನು?

ಭಾರತೀಯ ಮಾಧ್ಯಮದಲ್ಲಿ ಮೇಲ್ಜಾತಿಗಳದೇ ಪ್ರಾಬಲ್ಯ. ಮೀಡಿಯಾ ಸಂಸ್ಥೆಗಳು ತಮ್ಮ ಸುದ್ದಿಮನೆಗಳನ್ನು, ಸುದ್ದಿ ಸಂಗ್ರಹದ ವಿಧಾನಕ್ಕೆ ವಿವಿಧತೆಯನ್ನು ತಂದು ತುಂಬುವಲ್ಲಿ ಸೋತಿವೆ ಎಂಬುದು ಕಾಲ ಕಾಲಕ್ಕೆ ರುಜುವಾತಾಗುತ್ತ ಬಂದಿರುವ ವಾಸ್ತವ. ಈ ವಾಸ್ತವವನ್ನು ಆಕ್ಸ್ ಫ್ಯಾಮ್ ಇಂಡಿಯಾ ಮತ್ತು ನ್ಯೂಸ್ ಲಾಂಡ್ರಿ ಇತ್ತೀಚಿನ ಅಧ್ಯಯನ ವರದಿಯಲ್ಲಿ ಸಾರಿ ಹೇಳಿವೆ.

ಸುದ್ದಿ ಮಾಧ್ಯಮದಲ್ಲಿ ಯಾರಿಗೆ ಎಷ್ಟು ಜಾಗ ನೀಡಬೇಕು, ಎಂತಹ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ತೀರ್ಮಾನಿಸುವ ನಾಯಕತ್ವದ ಸ್ಥಾನಮಾನಗಳಲ್ಲಿ ದಲಿತರು- ಆದಿವಾಸಿಗಳಂತಹ ಅಂಚಿನಲ್ಲಿ ಜೀವಿಸಿರುವ ಸಮುದಾಯಗಳು ಇಲ್ಲವೇ ಇಲ್ಲ ಎಂದು ಈ ವರದಿ ಬೊಟ್ಟು ಮಾಡಿ ತೋರಿದೆ.

ಸುದ್ದಿಮನೆಗಳಲ್ಲಿ ಹೆಚ್ಚು ದನಿಗಳಿಗೆ ಅವಕಾಶ ಒದಗಿಸಲು ಮತ್ತು ಸಮಾನ ಪ್ರಾತಿನಿಧ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನಗಳು ಸಾಮೂಹಿಕವಾಗಿ ನಡೆದೇ ಇಲ್ಲ. ಜನತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾದ ಸುದ್ದಿ ಮಾಧ್ಯಮವು ದಲಿತರು-ಆದಿವಾಸಿಗಳು ಮತ್ತು ಅಂಚಿಗೆ ನೂಕಲ್ಪಟ್ಟ ಇತರೆ ಸಮುದಾಯಗಳು-ಗುಂಪುಗಳನ್ನು ಕೈ ಬಿಟ್ಟಿರುವುದು ಅತ್ಯಂತ ನಿರಾಶಾದಾಯಕ ಎಂದಿದೆ.

ಆರು ಇಂಗ್ಲಿಷ್, ಏಳು ಹಿಂದೀ ಪತ್ರಿಕೆಗಳು, 14 ಟೆಲಿವಿಷನ್ ಚಾನೆಲ್ಲುಗಳ ಡಿಬೇಟ್ ಶೋಗಳು, ಹನ್ನೊಂದು ಡಿಜಿಟಲ್ ಮಾಧ್ಯಮಗಳು, ಹನ್ನೆರಡು ನಿಯತಕಾಲಿಗಳನ್ನು ಆರಿಸಿಕೊಂಡು 2018ರ ಅಕ್ಟೋಬರ್ ನಿಂದ 2019ರ ಮಾರ್ಚ್ ಅವಧಿಯಲ್ಲಿ ಪರಿಶೀಲಿಸಲಾಯಿತು. ಸುಮಾರು 65 ಸಾವಿರ ಲೇಖನಗಳು ಮತ್ತು ನ್ಯೂಸ್ ಡಿಬೇಟುಗಳನ್ನು ವಿಶ್ಲೇಷಿಸಲಾಯಿತು.

ನಾನಾ ಪತ್ರಿಕೆಗಳು, ಚಾನೆಲ್ಲುಗಳು, ಅಂತರ್ಜಾಲ ತಾಣಗಳು ಹಾಗೂ ನಿಯತಕಾಲಿಕಗಳ ಸುದ್ದಿಮನೆಗಳ ಒಟ್ಟು 121 ನಾಯಕತ್ವ ಹುದ್ದೆಗಳನ್ನು (ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್ಪುಟ್-ಔಟ್ಪುಟ್ ಎಡಿಟರ್) ಅವಲೋಕಿಸಲಾಯಿತು. 121ರ ಪೈಕಿ 106 ಹುದ್ದೆಗಳಲ್ಲಿದ್ದವರು ಮೇಲ್ಜಾತಿಗಳಿಗೆ ಸೇರಿದವರು. ಹಿಂದುಳಿದ ವರ್ಗಗಳಿಗೆ ಸೇರಿದವರು ಐವರು. ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರು ಆರು ಮಂದಿ. ನಾಲ್ಕು ಮಂದಿಯ ಜಾತಿ ಹಿನ್ನೆಲೆಯನ್ನು ಪತ್ತ ಮಾಡುವುದಾಗಲಿಲ್ಲ.

ಹಿಂದೀ ಚಾನೆಲ್ಲುಗಳ 40 ಮತ್ತು ಇಂಗ್ಲಿಷ್ ಚಾನೆಲ್ಲುಗಳ 47 ನಿರೂಪಕರ ಹಿನ್ನೆಲೆಯನ್ನು ಪರಿಶೀಲಿಸಲಾಯಿತು. ಡಿಬೇಟುಗಳನ್ನು ನಡೆಸುವ ಪ್ರತಿ ನಾಲ್ವರು ನಿರೂಪಕರಗಳ ಪೈಕಿ ಮೂವರು ಮೇಲ್ಜಾತಿಗಳಿಗೆ ಸೇರಿದವರು. ದಲಿತ-ಆದಿವಾಸಿ-ಓಬಿಸಿ ಒಬ್ಬರೂ ಇಲ್ಲ. ನ್ಯೂಸ್ ಚಾನೆಲ್ಲುಗಳು ತಮ್ಮ ಶೇ.70ರಷ್ಟು ಪ್ರೈಮ್ ಟೈಮ್ ಡಿಬೇಟುಗಳಿಗೆ ಆರಿಸುವ ಪ್ಯಾನಲಿಸ್ಟುಗಳು ಮೇಲ್ಜಾತಿಗಳಿಗೆ ಸೇರಿದವರು. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳ ಪೈಕಿ ದಲಿತರು ಆದಿವಾಸಿಗಳು ಬರೆದ ಲೇಖನಗಳ ಪ್ರಮಾಣ ಶೇ.ಐದನ್ನು ಮೀರುವುದಿಲ್ಲ. ಹಿಂದೀ ಪತ್ರಿಕೆಗಳಲ್ಲಿ ಈ ಪ್ರಮಾಣ ಶೇ.10. ಸುದ್ದಿ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುವ ಶೇ.72ರಷ್ಟು ಬೈಲೈನ್ ವರದಿಗಳು-ಲೇಖನಗಳು ಮೇಲ್ಜಾತಿಯವರು ಬರೆದಂತಹವು.

ಈ ಎಲ್ಲ ಸಂಗತಿಗಳು ಕನ್ನಡದ ಪತ್ರಿಕೋದ್ಯಮಕ್ಕೂ ಅನ್ವಯಿಸುತ್ತವೆ ಶೇ.99ರಷ್ಟು ಅಥವಾ ಇನ್ನೂ ಹೆಚ್ಚು. ಬಹುಜನರನ್ನೂ, ಬಹುಗ್ರಹಿಕೆಗಳನ್ನೂ ದೂರ ಇರಿಸಿರುವ ನಮ್ಮ ಸುದ್ದಿ ಮನೆಗಳು ರೋಗಗ್ರಸ್ತವೂ ಹೃದಯಶೂನ್ಯವೂ ಆತ್ಮಸಾಕ್ಷಿರಹಿತವೂ ಆಗಿ ಹೋಗಿವೆ. ಹೀಗಾಗಿಯೇ ಬಹುಜನರ ಪಾಲಿಗೆ ಅವು ಕ್ರೂರವೂ ಶಾಪವೂ ಆಗಿ ಹೋಗಿವೆ.


ಇದನ್ನು ಓದಿ: ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...