Homeಅಂಕಣಗಳುಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

ಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಓದುಗರಿಗೆ ಕಟ್ಟಿಕೊಟ್ಟಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ಜನರು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತವೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿ ಜನರ ಮನ ಪರಿವರ್ತಿಸುವುದಲ್ಲ; ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು ಸೊಪ್ಪಿನಹಳ್ಳಿ ಎಂಬ ಗ್ರಾಮ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿದೆ. ಹಳೆ ಮೈಸೂರು ಜಿಲ್ಲೆಯಲ್ಲಿರುವ ಒಕ್ಕಲಿಗರ ಪ್ರಾಬಲ್ಯ ಇಲ್ಲಿಯೂ ಇದೆ. ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದಿರುವ ಒಕ್ಕಲಿಗ ಸಮಾಜ, ಸಾಮಾಜಿಕವಾಗಿಯೂ ಇಂದು ಮೇಲ್ಮುಖ ಚಲನೆಯನ್ನು ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ ದಲಿತ ಸಮಾಜ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಒಂದಷ್ಟು ಸ್ಥಾನಮಾನ ಗಿಟ್ಟಿಸಿಕೊಂಡಿದ್ದರೂ ಸಾಮಾಜಿಕವಾಗಿ ಬಹಳ ಹಿಂದೆಯೇ ಉಳಿಯುವಂದತೆ ನೋಡಿಕೊಳ್ಳಲಾಗಿದೆ. ಈ ಚಿತ್ರಣವನ್ನೇ ಹೊದ್ದುಕೊಂಡಿರುವ ಸೊಪ್ಪಿನಹಳ್ಳಿಯಲ್ಲಿ ಶಿವಮ್ಮ ವಾಸಿಸುತ್ತಿದ್ದಳು. ಒಬ್ಬಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಸಾಕಿ ಸಲುಹಿ ತಕ್ಕಮಟ್ಟಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿದಳು. ಹಿರಿಯ ಮಗ ಮಧು ಪದವಿ ಓದುತ್ತಿದ್ದ. ಕಿರಿಯವನಾದ ಮನು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದ.

ಶಿವಮ್ಮ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಾ ತನ್ನ ಮಕ್ಕಳನ್ನು ಸಾಕಿದ್ದಳು. ತನ್ನ ಊರಿನಲ್ಲಿ ತಮಗಿರುವ ಸ್ಥಾನ ಯಾವುದೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಜೀವಿಸುತ್ತಾ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದಳು.

ಇದನ್ನೂ ಓದಿ: ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಆಗ ತಾನೇ ಹದಿಹರೆಯವನ್ನು ದಾಟಿದ್ದ 20 ವರ್ಷದ ಮಧುವಿಗೆ ವಯೋಸಹಜ ಪ್ರೇಮ ಮೂಡಿತು. ಅದೇ ಊರಿನ ಒಕ್ಕಲಿಗ ಕುಟುಂಬದ ರೇಖಾ ಅವನ ಮನದರಸಿ. ಆಕೆಯು ಸಹ ಮಧುವಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಇಬ್ಬರೂ ಪ್ರಕೃತಿ ಸಹಜ ಪ್ರೇಮದಲ್ಲಿ ಮುಳುಗಿದರು. ಈ ಪ್ರೇಮಕ್ಕೆ ರೇಖಾಳ ವಯಸ್ಸು ಅಡ್ಡಗಾಲಾಕಿ ನಿಂತಿತ್ತು. ರೇಖಾಳಿಗೆ ಇನ್ನೂ 17 ವರ್ಷವೆಂದು ಈ ’ಪ್ರೇಮ’ಕ್ಕೆ ಹೇಳುವವರಾರು? ಹಾಗಿದ್ದರೂ ಎಲ್ಲಾ ಪ್ರೇಮಿಗಳೂ ಮಾಡುವಂತೆ ’ಮುಂದೇನಾಗತ್ತೋ ನೋಡಿಯೇ ಬಿಡೋಣ’ ಎಂದುಕೊಂಡು ಮುಂದುವರೆದಿದ್ದಾರೆ.

ಇವರಿಬ್ಬರ ಪ್ರೇಮದ ವಿಚಾರ ರೇಖಾಳ ಮನೆಯವರಿಗೆ ತಿಳಿದಂತಿದೆ. ಪ್ರೇಮಿಗಳಿಬ್ಬರಿಗೂ ಪರಸ್ಪರ ಪ್ರತ್ಯೇಕಗೊಳ್ಳುವ ಭೀತಿ ಶುರುವಾಗಿದೆ. ಮುಖ ನೋಡದೇ ಒಂದು ದಿನವೂ ಇರಲಾಗದವರಿಗೆ ಶಾಶ್ವತವಾಗಿ ಬೇರೆಯಾಗುವುದು ಭಯ ಮೂಡಿಸಿರಲೇಬೇಕಲ್ಲವೆ? ಇಬ್ಬರೂ ಮನೆ ಬಿಟ್ಟು ಹೊರನಡೆದಿದ್ದಾರೆ. ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತೆಯನ್ನು ಜೊತೆ ಕರೆದೊಯ್ಯುವುದು ಗಂಭೀರ ಅಪರಾಧವಾಗಿದೆ. ಹಾಗಾಗಿ ಪೋಕ್ಸೋ ಕಾಯ್ದೆಯಲ್ಲಿ ರೇಖಾಳ ಮನೆಯವರು ಮಧುವಿನ ಮೇಲೆ ದೂರು ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಮಧುವನ್ನು ಬಂಧಿಸಿದರು. ಮಧು ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿಯೇ ಉಳಿಯಬೇಕಾಯಿತು.

ತಾಯಿ ಮತ್ತು ಇತರ ಕುಟುಂಬ ಸದಸ್ಯರು (PC: The Hindu)

ಇಂತಹ ಪರಿಸ್ಥಿತಿಯಲ್ಲಿ ಮಧುವಿನ ಪರವಾಗಿ ಗಟ್ಟಿಯಾಗಿ ನಿಂತುಕೊಂಡ ಅವನ ತಾಯಿ ಮತ್ತು ತಮ್ಮ, ಇದ್ದಬದ್ದ ಹಣವನ್ನೆಲ್ಲ ನ್ಯಾಯಾಲಯದ ವಿಚಾರಣೆಗೆ ಸುರಿದು ಕೊನೆಗೂ ಮಗನನ್ನು ಜಾಮೀನಿನ ಮೇಲೆ ಹೊರತಂದರು. ಅಲ್ಲಿಗೆ ಶಿವಮ್ಮನ ಮನಸ್ಸು ಒಂದಷ್ಟು ನಿರಾಳವಾಯಿತು. ಊರಿನಲ್ಲಿಯೇ ಇದ್ದರೆ ಮಧುವಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಶಿವಮ್ಮ ಮತ್ತು ಮನು, ಮಧುವನ್ನು ಬೆಂಗಳೂರಿಗೆ ಕಳಿಸಿದರು. ಮನಸ್ಸಿಲ್ಲದಿದ್ದರೂ ಅಮ್ಮನ ಮಾತಿಗೆ ಇಲ್ಲವೆನ್ನದೆ ಬೆಂಗಳೂರಿಗೆ ತೆರಳಿದ ಮಧು, ತಿಂಗಳುಗಳ ಕಾಲ ಸುತ್ತಾಡಿ ಒಂದು ಕೆಲಸ ಗಿಟ್ಟಿಸಿಕೊಂಡನು. ಬರುವ ಸಂಬಳದಲ್ಲಿ ಒಂದಷ್ಟು ಮನೆಗೂ ಕಳಿಸುತ್ತಿದ್ದನು.

ಎಲ್ಲವೂ ಸರಿ ಹೋಯಿತು ಎಂದುಕೊಂಡು ಶಿವಮ್ಮ ನಿಟ್ಟುಸಿರುಬಿಡುವಷ್ಟರಲ್ಲಿ ಕೋವಿಡ್ 19 ಭಾರತಕ್ಕೆ ಲಗ್ಗೆ ಇಟ್ಟಿತು. ಮಾರ್ಚ್ 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದಾದ್ಯಂತ ಲಾಕ್‌ಡೌನ್ ಹೇರಿದರು. ದೇಶದಾದ್ಯಂತ ಕೆಲಸ ಮಾಡುತ್ತಿದ್ದ ಕಾರ್ಮಿಕ ವರ್ಗದಂತೆ ಮಧುವೂ ಕೆಲಸವಿಲ್ಲದೆ ಬೆಂಗಳೂರು ಬಿಟ್ಟು ತವರೂರು ಸೊಪ್ಪಿನಹಳ್ಳಿಗೆ ಬಂದನು. ಅದೇ ಗ್ರಾಮದ ವರ್ಕ್‌ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡನು. ಅಂತೂ ಇಂತು ನನ್ನಿಬ್ಬರು ಮಕ್ಕಳೂ ಈಗ ನನ್ನೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಶಿವಮ್ಮ ತೇಲುತ್ತಿದ್ದಳು. ಇತ್ತ ಸೊಪ್ಪಿನಹಳ್ಳಿಗೆ ಬಂದ ಮಧುವಿನ ಹೃದಯದಲ್ಲಿ ಮಲಗಿದ್ದ ರೇಖಾಳ ನೆನಪಿಗೆ ಜೀವ ಬಂದಿತು. ರೇಖಾಳನ್ನು ಬಂಧಿಸಿಟ್ಟುಕೊಳ್ಳುವಲ್ಲಿ ಸಫಲವಾಗಿದ್ದೇವೆಂದು ನಂಬಿಕೊಂಡಿದ್ದ ಆಕೆಯ ಸಂಬಂಧಿಕರಿಗೆ ಒಳಗೊಳಗೇ ಪ್ರತಿಷ್ಠೆಯ ಅಮಲು ನೆತ್ತಿಗೇರಿ ಸುಖ ನೀಡುತ್ತಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಶಿವಮ್ಮ ಮತ್ತು ಮನು ಇಬ್ಬರೂ ಮಧುವಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ರೇಖಾಳ ಸಹವಾಸಕ್ಕೆ ಹೋಗಬೇಡ, ಆಕೆಯೊಂದಿಗೆ ಮತ್ತೆ ಸಂಪರ್ಕ ಬೆಸೆಯಬೇಡ ಎಂದು ತಾಕೀತು ಮಾಡುತ್ತಿದ್ದರು. ಆದರೇನು ಮಾಡುವುದು? ಅದು ಪ್ರೇಮವಲ್ಲವೇ? ಎಂಟು ದಿಕ್ಕುಗಳಲ್ಲೂ ಯೋಚಿಸಿ ಮುಂದುವರೆಯಲು ಅದೇನು ಯುದ್ಧತಂತ್ರವೇ?

ಅಂದು ಜುಲೈ 15. ಮಧು ತನ್ನ ಸ್ನೇಹಿತರೊಡನೆ ಊರಿನ ದೇಗುಲಕ್ಕೆ ಹೋಗಿ ವಾಪಸ್ಸು ಬರುತ್ತಿದ್ದನು. ಅಚಾನಕ್ಕಾಗಿ ಅವರೆಲ್ಲರ ಎದುರಿಗೆ ರೇಖಾಳ ಚಿಕ್ಕಪ್ಪ ರೂಪೇಶ್ ಬಂದು ನಿಂತನು. ಅವನ ಕೈಯಲ್ಲಿ ಡಬಲ್ ಬ್ಯಾರೆಲ್ ಕಂಟ್ರಿ ಮೇಡ್ ಬಂದೂಕು ಇತ್ತು. ಆಗ ಸಮಯ ಮಧ್ಯಾಹ್ನ 3 ಗಂಟೆ. ಕ್ಷಣಹೊತ್ತೂ ಕಾಯದೇ, ರೇಖಾಳ ನೆನಪನ್ನೇ ತುಂಬಿಕೊಂಡಿದ್ದ ಮಧುವಿನ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದನು. ಮಿಸುಕಾಡುತ್ತಲೇ ಮಧುವಿನ ದೇಹ ತಣ್ಣಗಾಯಿತು. ಅವನ ಕಣ್ಣ ತುಂಬ ತುಂಬಿಕೊಂಡಿದ್ದ ರೇಖಾಳನ್ನು ನೋಡಿಯೇ ರೂಪೇಶ್ ಕೆಲಸ ಮುಗಿಸಿ ಹೋಗಿರಬೇಕು. ರೂಪೇಶ್ ಎಂಬ ಜಾತಿ ಮೃಗಗಳು ಇಂದಿಗೂ ಜೀವಂತ ಇವೆ. ಮರ್‍ಯಾದೆ ಹೆಸರಿನಲ್ಲಿ ಕೊಲೆಯನ್ನೂ ಮಾಡಿಸಿಬಿಡುವ ಜಾತಿವ್ಯವಸ್ಥೆ ಜೀವಂತ ಇರುವವರೆಗೂ ಇಂತಹ ನಾಡುಮೃಗಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಇಂತಹ ನಾಡುಮೃಗಗಳ ಹೆಡೆಮುರಿ ಕಟ್ಟಬೇಕಿದ್ದ ಕಾನೂನಿನ ಆಯಕಟ್ಟಿನ ಸ್ಥಾನದಲ್ಲಿಯೂ ಮೃಗಗಳೇ ತುಂಬಿಕೊಂಡಿರುವಾಗ ಕಟಕಟೆಯಲ್ಲಿಯಾದರೂ ಮಧು-ರೇಖಾಳ ಪ್ರೇಮಕ್ಕೆ ಗೆಲುವು ಸಿಗುವುದೇ ಕಾದು ನೋಡಬೇಕಿದೆ.

2019ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಲಿತರ ಮೇಲೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ. ಆದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ದರ ಉತ್ತರಪ್ರದೇಶಕ್ಕಿಂತಲೂ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.5.6ರಷ್ಟು ದೌರ್ಜನ್ಯಗಳು ದಲಿತರ ಮೇಲೆ ಘಟಿಸಿದರೆ, ಕರ್ನಾಟಕದಲ್ಲಿ ಅದರ ಪ್ರಮಾಣ ಶೇ.12.8. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ಪ್ರಮಾಣವೂ ಸಹ ಕರ್ನಾಟಕದಲ್ಲಿ ಅತ್ಯಂತ ಕಡಿಮೆ. ಅದು ಕೇವಲ ಶೇ.0.4.

ನಾಡುಮೃಗ ರೂಪೇಶ್ ಜೈಲಿನಲ್ಲಿದ್ದಾನೆ. ಶಿವಮ್ಮ ಮತ್ತೆ ನ್ಯಾಯಾಲಯದ ಸುತ್ತಾ ಸುತ್ತುತ್ತಿದ್ದಾರೆ. ಸೊಪ್ಪಿನಹಳ್ಳಿ ಮಧುವನ್ನು ಬಹುತೇಕ ಮರೆತಂತಿದೆ. ಆದರೆ ರೇಖಾಳ ಹೃದಯ ಮರೆತಿರುವುದಕ್ಕೆ ಸಾಕ್ಷಿ ಇನ್ನೂ ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...