HomeUncategorizedದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ದೆಹಲಿ ಚುನಾಚಣಾ ನೋಟ: ಇಳಿಕೆಯಾದ ಮತಚಲಾವಣೆ ಏನನ್ನು ಸೂಚಿಸುತ್ತಿದೆ?

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

- Advertisement -
- Advertisement -

ಅನೀಶ್ ನಾಯರ್, ದೆಹಲಿ 
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾನುವಾರ ಸಂಜೆಯ ಹೊತ್ತಿಗೆ ದೆಹಲಿಯ ಮತದಾನದ ಪ್ರಮಾಣ 60% ಆಗಿತ್ತು, ಇದು 2014ರ ಲೋಕಸಭೆಯ ಚುನಾವಣೆಯ ಪ್ರಮಾಣಕ್ಕಿಂತ 5% ಕಡಿಮೆ ಹಾಗೂ 2015 ರ ವಿಧಾನಸಭೆ ಚುನಾವಣೆಗಿಂತ 7% ಕಡಿಮೆ. ಮತದಾನ ಭಾನುವಾರದಂದು ಇದ್ದರೂ ಮತದಾನದ ಪ್ರಮಾಣ ಕಡಿಮೆಯಾಗಿದ್ದು ಚಕಿತಗೊಳಿಸುವಂಥದ್ದು.

ಮತದಾನದ ಪ್ರಮಾಣದಲ್ಲಿ ಕಂಡುಬಂದ ಕಡಿತದ ಬಗ್ಗೆ ಎಲ್ಲರೂ ಪದೇ ಪದೇ ಹೇಳುತ್ತಿರುವುದೇನೆಂದರೆ, ಇದು ಆಡಳಿತಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತೆ ಎನ್ನುವುದು. ಆದರೆ ಪ್ರಶ್ನೆ ಇರುವುದು, ಯಾವ ಆಡಳಿತ ಪಕ್ಷಕ್ಕೆ ಲಾಭ ಆಗುತ್ತಿದೆ?

ಇದು ಜಟಿಲ ಪ್ರಶ್ನೆ. ದೆಹಲಿಗೆ ಸಂಬಂಧಪಟ್ಟ ವಿಷಯಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ ವಿಷಯಗಳು. ರಾಷ್ಟ್ರದ ರಾಜಧಾನಿಯೂ ಆಗಿದ್ದು ದೆಹಲಿಗೆ ತನ್ನದೇ ಆದ ಸ್ಥಳೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳಿವೆ. ಇದು ಸಂಪೂರ್ಣ ರಾಜ್ಯವೂ ಅಲ್ಲ ಅಥವಾ ಕೇಂದ್ರಾಡಳಿತ ಪ್ರದೇಶವೂ ಅಲ್ಲ. ಅದರೊಂದಿಗೆ, ದೆಹಲಿಯ ನಿವಾಸಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡನ್ನೂ ಜವಾಬ್ದಾರರನ್ನಾಗಿ ಕಾಣುತ್ತಾರೆ.ಅಂದರೆ ಈಗಿರುವ ಹಾಲಿ ಸರಕಾರ ಯಾವುದು? ರಾಜ್ಯ ಸರಕಾರವನ್ನು ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯೋ ಅಥವಾ ಕೇಂದ್ರದ ಭಾರತೀಯ ಜನತಾ ಪಕ್ಷವೋ? ಅರವಿಂದ್ ಕೇಜ್ರಿವಾಲೋ ಅಥವಾ ನರೇಂದ್ರ ಮೋದಿಯೋ? ಈ ಪ್ರಶ್ನೆಗೆ ಸಮರ್ಪಕ ಸಿಕ್ಕಿಲ್ಲ.

ಮೊದಲು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಮೂರು ಪ್ರಮುಖ ಪಕ್ಷಗಳ ಪ್ರಚಾರವನ್ನು ನೋಡುವ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯನ್ನು ಇಡೀ ಭಾರತದ ಒಂದು ಚಿಕ್ಕ ಪ್ರತಿರೂಪ ಎಂದು ಪರಿಗಣಿಸಿ ಪ್ರಚಾರ ಮಾಡಿದರೆ, ಆಮ್ ಆದ್ಮಿ ಪಾರ್ಟಿಯು ಸ್ಥಳೀಯ ವಿಷಯಗಳ ಮೇಲೇ ಗಮನವನ್ನು ಕೇಂದ್ರೀಕರಿಸಿ ಪ್ರಚಾರ ಮಾಡಿದೆ.

ಬಿಜೆಪಿಯ ನಾಯಕರು ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಮಾತನಾಡಿದರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ‘ಯಶಸ್ಸು’ಗಳ ಆಧಾರದ ಮೇಲೆ ಮತಯಾಚಿಸಿದರು. ಅದಕ್ಕೆ ಉತ್ತರವಾಗಿ ಕಾಂಗ್ರೆಸ್ ಪ್ರಧಾನ ಮಂತ್ರಿಯ ವೈಫಲ್ಯಗಳ ಬಗ್ಗೆ ಮಾತನಾಡಿ, ತನ್ನ ಯೋಜನೆ ‘ನ್ಯಾಯ’ನ ಭರವಸೆಗಳ ಆಧಾರದ ಮೇಲೆ ಮತ ನೀಡುವಂತೆ ಅಪೀಲ್ ಮಾಡಿತು. ಆದರೆ ಆಮ್ ಆದ್ಮಿ ಪಾರ್ಟಿ ಬೇರೆ ಹಾದಿಯನ್ನು ತುಳಿಯಿತು. ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆಗಾಗಿ ಕೆಲಸ ಮಾಡುವುದಾಗಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಸುಧಾರಣೆಗಳ ಬಗ್ಗೆ ಒತ್ತು ನೀಡಿ ಮತ್ತು ಉನ್ನತ ಶಿಕ್ಷಣದಲ್ಲಿ ಹಾಗೂ ಸರಕಾರಿ ಉದ್ಯೋಗಗಳಲ್ಲಿ ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ ತಮ್ಮ ಪ್ರಚಾರ ಮಾಡಿತು.

ದೆಹಲಿಯನ್ನು ಪರಿಗಣಿಸಿದ ಈ ರೀತಿಯು ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಹೊಸತಲ್ಲ. ಶಬರಿಮಲಾ ಪ್ರಕರಣವನ್ನಿಟ್ಟುಕೊಂಡು ಕೇರಳದಲ್ಲಿ ಎಡಪಕ್ಷದ ಸರಕಾರವನ್ನು ಉರುಳಿಸಲು ಈ ಪಕ್ಷಗಳು ಪ್ರಯತ್ನಿಸಿದರೆ, ಒರಿಸ್ಸಾದಲ್ಲಿ ಫನಿ ಸೈಕ್ಲೋನ್‍ದ ಪರಿಹಾರ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿ ಆದ ಸಮಸ್ಯೆಗಳನ್ನು ಇಷ್ಯೂ ಮಾಡಿ ನವೀನ್ ಪಟ್ನಾಯಕ್ ಸರಕಾರದ ವಿರುದ್ಧ ಮಾತನಾಡುತ್ತವೆ. ಆದರೆ ಲೋಕಸಭೆ ಚುನಾವಣೆಗಳ ಸಮಯದಲ್ಲಿ ದೆಹಲಿಯ ಸ್ಥಳೀಯ ವಿಷಯಗಳಿಗೆ ಗಮನ ಕೊಡುವ ಗೋಜಿಗೆ ಹೋಗುವುದಿಲ್ಲ ಈ ಎರಡೂ ಪಕ್ಷಗಳು.

ದೆಹಲಿಗೆ ಸಂಪೂರ್ಣ ರಾಜ್ಯದ ಮಾನ್ಯತೆ ಸಿಗಬೇಕು ಎನ್ನುವ ಬೇಡಿಕೆ ಹಳೆಯದಾದರೂ, ದೆಹಲಿಯ ನಿವಾಸಿಗಳು ‘ಎರಡನೇ ದರ್ಜೆ’ಯ ಪ್ರಜೆಗಳು ಎನ್ನುವಂತಹ ಭಾಷೆ ಹೊಸದು. ಅದರೊಂದಿಗೆ, ದೆಹಲಿಯ ನಿವಾಸಿಗಳಿಗೆ ಮೀಸಲಾತಿ ಕಲ್ಪಿಸುವುದು, ನಗರದ ಮೂಲಸೌಕರ್ಯಗಳ ಬಗ್ಗೆ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದು ಇತ್ಯಾದಿಗಳೂ ಹೊಸದಾಗಿ ಕಂಡುಬಂದಿದ್ದು. ಇದು ಒಂದು ರೀತಿಯ ಪ್ರಾದೇಶಿಕತ್ವದೆಡೆಗೆ ಇಟ್ಟ ಹಜ್ಜೆಯಾಗಿ ಕಾಣಿಸಿಕೊಳ್ಳುತ್ತಿದೆ.

2014ರಲ್ಲಿ ಮತ್ತು ಈಗಿನ ಆಮ್ ಆದ್ಮಿ ಪಾರ್ಟಿಯ ಪ್ರಚಾರದಲ್ಲಿ ಕಂಡುಬರುವ ವ್ಯತ್ಯಾಸಗಳೂ ಗಮನಾರ್ಹವಾಗಿವೆ. 2014ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ತಾನೊಂದು ರಾಷ್ಟ್ರೀಯ ಪರ್ಯಾಯ ಎಂದು ಆಪ್ ಬಿಂಬಿಸಿತ್ತು. ಆದರೆ ಇಂದು ಐದು ವರ್ಷಗಳ ನಂತರ ಅದು ಪಂಜಾಬ್, ಹರಿಯಾಣ ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿಸಿಕೊಂಡಿದೆ. ಬೇರೆಡೆ ವಿಸ್ತರಿಸಲು ಪ್ರಯತ್ನಿಸಿದರೂ ವಾಸ್ತವದಲ್ಲಿ ಈ ಮೂರು ರಾಜ್ಯಗಳನ್ನು ಬಿಟ್ಟರೆ ಬೇರೆಲ್ಲೂ ಈ ಪಕ್ಷದ ಅಸ್ತಿತ್ವ ಇಲ್ಲ. ರಾಷ್ಟ್ರೀಯ ಪಕ್ಷಕ್ಕಿಂತಲೂ ತಾನೊಂದು ಪ್ರಾದೇಶಿಕ ಪಕ್ಷ ಎನ್ನುವುದನ್ನು ಆಮ್ ಆದ್ಮಿ ಪಕ್ಷ ಒಪ್ಪಿಕೊಂಡಂತಿದೆ.

1993ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳೇ ಕೇಂದ್ರವಾಗಿದ್ದವು. ಈ ಸ್ಥಳೀಯ ವಿಷಯಗಳ ಆಧಾರದ ಮೇಲೆಯೇ ಶೀಲಾ ದೀಕ್ಷಿತ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದು. ಆಮ್ ಆದ್ಮಿ ಪಾರ್ಟಿಯ ಈ ಸ್ಥಳೀಯ, ಪ್ರಾದೇಶಿಕ ನಿಲುವಿನಿಂದ ಇತರ ಪಕ್ಷಗಳೂ ತಮ್ಮ ರಾಜಕೀಯದಲ್ಲಿ ಬದಲಾವಣೆ ಮಾಡಿಕೊಂಡಂತಿವೆ. 2013ರ ಸೋಲಿನ ನಂತರ ನಿವೃತ್ತರಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಮತ್ತೇ ಕಣಕ್ಕಿಳಿಸುವುದು ಹಾಗೂ ಬಿಜೆಪಿಯ ಜನರಿಂದ ಹರಡಲಾಗುತ್ತಿರುವ ‘ಕೇಂದ್ರದಲ್ಲಿ ಮೋದಿ, ದೆಹಲಿಯಲ್ಲಿ ಕೇಜ್ರಿವಾಲ್’ ಎನ್ನುವಂತಹ ವಾಟ್ಸ್‍ಆಪ್ ಸಂದೇಶಗಳು ಮತ್ತು ಘೋಷಣೆಗಳು ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಸೂಚಿಸುತ್ತವೆ.

ಆದರೆ ಈ ಬೆಳವಣಿಗೆಗಳು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಆತಂಕ ಹುಟ್ಟಿಸಿಲ್ಲ ಎಂದಿಲ್ಲ. ಏಕೆಂದರೆ, ಇದು ದೆಹಲಿ ಅಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲಿ ಈ ರಾಷ್ಟ್ರೀಯ ಪಕ್ಷಗಳಿಗೆ ಹುಟ್ಟಿಕೊಳ್ಳುತ್ತಿರುವ ಪರ್ಯಾಯ ಅಥವಾ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಬಹುತೇಕ ಇವುಗಳು ಕಾಂಗ್ರೆಸ್ಸಿನ ಮತಗಳನ್ನು ತಮ್ಮೆಡೆ ಸೆಳೆಯುತ್ತವೆ, ಕೆಲವೊಮ್ಮೆ ನಾಯಕರನ್ನು ಕೂಡ. ಅದರೊಂದಿಗೆ, ಭಾಷೆ ಮತ್ತು ಜಾತಿ ಜನಾಂಗಗಳನ್ನು ಮೀರಿ ಮತದಾರರನ್ನು ತನ್ನೆಡೆಗೆ ಸೆಳೆದುಕೊಂಡು ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಗಳೂ ಇರುತ್ತವೆ. ದೆಹಲಿಯಲ್ಲಂತೂ ಆಮ್ ಆದ್ಮಿ ಪಕ್ಷವು ಬಿಜೆಪಿಯ ವಿರುದ್ಧ ನಿಂತಿರುವ ಒಂದು ಪ್ರಬಲ ಶಕ್ತಿಯಾಗಿದೆ.

2013, 2014 ಮತ್ತು 2015ರ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಮತಗಳು ನಿರಂತರವಾಗಿ ಕುಸಿದಿವೆ; 2013ರಲ್ಲಿ 25%, 2014ರಲ್ಲಿ 15% ಮತ್ತು 2015ರಲ್ಲಿ 9%. ಹಾಗೂ 2014 ಮತ್ತು 15 ರಲ್ಲಿ ಯಾವ ಸೀಟಲ್ಲೂ ಕಾಂಗ್ರೆಸ್ ಗೆಲುವನ್ನು ಕಂಡಿಲ್ಲ. ಆದರೆ ಆಮ್ ಆದ್ಮಿ ಪಕ್ಷದ ಮತಗಳು 30% ರಿಂದ 33%ಕ್ಕೆ ಏರಿ 2015ರಲ್ಲಿ 54%ಕ್ಕೆ ಏರಿತ್ತು. ಅದೇ ಸಮಯದಲ್ಲಿ ಬಿಜೆಪಿಯ ಮತಗಳ ಪ್ರಮಾಣ 33%, 46% ಮತ್ತು 32% ಆಗಿತ್ತು.

‘ಮೋದಿ ಅಲೆ’ ಇದ್ದ 2014 ರ ಚುನಾವಣೆ ಹೊರತುಪಡಿಸಿ, ಬಿಜೆಪಿಯು ದೆಹಲಿಯಲ್ಲಿ ಹೆಚ್ಚುಕಡಿಮೆ ಒಂದನೇ ಮೂರರಷ್ಟು ಮತದಾರರನ್ನು ತನ್ನೊಂದಿಗೆ ಉಳಿಸಿಕೊಂಡೇ ಬಂದಿದೆ. ಈ ಸಲ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೂ 40%ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇಲ್ಲ. ಆದರೆ ಬಿಜೆಪಿಯು ಪ್ರದರ್ಶನ ಹೇಗಿರುತ್ತೆ ಎನ್ನುವುದು ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯು ಇತರ ಮತಗಳನ್ನು ತನ್ನೆಡೆಗೆ ಕ್ರೋಢಿಕರಿಸಬಲ್ಲರೋ ಇಲ್ಲವೋ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೀಲಾ ದೀಕ್ಷಿತ್ ಅವರನ್ನು ಕರೆತಂದು ತನ್ನ ಉತ್ಸಾಹವನ್ನು ಹೆಚ್ಚಿಸಿದರೂ, ವಾಸ್ತವದಲ್ಲಿ ಸೀಟುಗಳನ್ನು ಗೆಲ್ಲುವುದು ಕಷ್ಟ ಹಾಗೂ ಆಮ್ ಆದ್ಮಿ ಪಾರ್ಟಿಯ ಗೆಲ್ಲುವ ಸಾಧ್ಯತೆಗಳನ್ನು ಕಡಿತಗೊಳಿಸಿ ಬಿಜೆಪಿ ಮತ್ತೊಮ್ಮೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು. 2014 ಮತ್ತು 2015ರಲ್ಲಿ ಕಾಂಗ್ರೆಸ್ ತೋರಿಸಿದ ಕಳಪೆ ಪ್ರದರ್ಶನ ಮರುಕಳಿಸಿದರೆ ಆಮ್ ಆದ್ಮಿ ಪಾರ್ಟಿ 3-4 ಸೀಟು ಅಥವಾ ಅದಕ್ಕಿಂತ ಹೆಚ್ಚೂ ಗೆಲ್ಲಬಹುದು.

ಇದನ್ನು ಓದಿ: ದೆಹಲಿಯ ಸರ್ಕಾರಿ ಶಾಲೆಗಳ ಮಕ್ಕಳು ಕಾನ್ವೆಂಟ್ ಗಳನ್ನ ಮೀರಿಸಿದ್ದು ಹೇಗೆ?

ಇದು 2017ರ ಮುನಿಸಿಪಲ್ ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು. ಆಗ ಕಾಂಗ್ರೆಸ್ 21% ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆಮ್ ಆದ್ಮಿ ಪಾರ್ಟಿಗೆ 26% ಮತಗಳು ಬಂದಿದ್ದವು ಮತ್ತು ಬಿಜೆಪಿಯ ಹೆಚ್ಚಳ ಕಡಿಮೆಯಿದ್ದ 37% ಮತಗಳನ್ನು ಪಡೆದರೂ ಎಲ್ಲೆಡೆ ಜಯಭೇರಿ ಬಾರಿಸಿತು. ವೋಟುಗಳ ವಿಭಜನೆಯಿಂದ ಬಿಜೆಪಿ 2ನೇ ಮೂರರಷ್ಟು ಪಡೆಯಿತು.

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳು ಭಿನ್ನ ಎಂದು ಒಪ್ಪಿಕೊಂಡರೂ ಇಲ್ಲಿ ಕಾಣಿಸುತ್ತಿರುವ ಚಿತ್ರಣವನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೂ ಕಾಂಗ್ರೆಸ್‍ನ ಮತಗಳ ಪ್ರಮಾಣ ಹೆಚ್ಚಾದಷ್ಟು, ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಿದಷ್ಟು ಬಿಜೆಪಿಗೇ ಅನುಕೂಲವಾಗಿ 5 ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಬಹುದು. ಇದರಿಂದ ಆಗುವ ಒಂದು ಸಾಧ್ಯತೆಯೆಂದರೆ, ಬಿಜೆಪಿ ವಿರೋಧಿ ಪಕ್ಷಗಳ ರಾಜಕೀಯ ಕಥನ ಬದಲಾಗಬಹುದು. ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ತಂತ್ರ ಮಾರ್ಪಡಿಸಿ ದೆಹಲಿ ಎನ್ನುವುದು ರಾಷ್ಟ್ರದ ಚಿಕ್ಕ ಪ್ರತಿರೂಪವೆಂದು ಪರಿಗಣಿಸದೇ ದೆಹಲಿಗೇ ಮೀಸಲಾದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...