ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಅಖಿಲ ಭಾರತ ಮುಸ್ಲಿಂ ಮಹಾಪಂಚಾಯತ್ ನಡೆಸಲು ಎನ್ಒಸಿ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಇದೇ ಸಮಯದಲ್ಲಿ ಹಿಂದೂ ಹಬ್ಬಗಳು ಇರುವ ಕಾರಣ ಕೋಮು ಉದ್ವಿಗ್ನತೆಯಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಬಾರ್ ಮತ್ತು ಬೆಂಚ್ ಪ್ರಕಾರ, ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಈ ಕಾರ್ಯಕ್ರಮದ ಪೋಸ್ಟರ್ ಕೋಮಿಗೆ ಸಂಬಂಧಿಸಿದ ಅಂಶಗಳನ್ನು ಹೊಂದಿದೆ. ಸಭೆಯು ಹಳೆ ದೆಹಲಿ ಪ್ರದೇಶದಲ್ಲಿ ನಡೆಯುತ್ತದೆ. ಇದು ಕೋಮು ಸೂಕ್ಷ್ಮ ಪ್ರದೇಶವಾಗಿದೆ ಎಂದು ಹೇಳಿದ್ದಾರೆ.
ಸಭೆಗೆ ದೆಹಲಿ ಪೊಲೀಸರು ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಮೊದಲು ಅನುಮತಿ ನೀಡಿತ್ತು. ನಂತರ ಅದನ್ನು ಹಿಂತೆಗೆದುಕೊಂಡಿತ್ತು.
ಅನುಮತಿ ಹಿಂಪಡೆದ ನಿರ್ಧಾರವನ್ನು ನ್ಯಾಯಾಲಯವೂ ಎತ್ತಿ ಹಿಡಿದಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ, ನವರಾತ್ರಿ ಮತ್ತು ದೀಪಾವಳಿಯ ನಡುವೆ ಕರ್ವಚೌತ್, ಧನ್ತೇರಸ್ ಮುಂತಾದ ಹಲವಾರು ಹಬ್ಬಗಳಿವೆ. ದೀಪಾವಳಿಯವರೆಗಿನ ಅವಧಿಯು ಹಿಂದೂ ಸಮುದಾಯಕ್ಕೆ ಅತ್ಯಂತ ಮಂಗಳಕರವಾಗಿದೆ. ಕಾರ್ಯಕ್ರಮವನ್ನು ಜನರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವ ಉದ್ದೇಶದಿಂದ ಆಯೋಜನೆಯ ಉದ್ದೇಶ ಇಟ್ಟುಕೊಂಡಿದ್ದರೂ ಇದು ಜನರ ಸೂಕ್ಷ್ಮ ಪ್ರದೇಶವಾಗಿರುವ ಹಳೆ ದೆಹಲಿ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ವಿವಿಧ ಸಮುದಾಯಗಳ ಜನರು ಅಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೋಮು ಹಿಂಸಾಚಾರ ಈ ಪ್ರದೇಶಗಳಲ್ಲಿ ಹೊಸತೇನಲ್ಲ ಎಂದು ಹೇಳಿದ್ದಾರೆ.
ಹಿಂದೂ ಹಬ್ಬಗಳು ಮುಗಿದ ನಂತರ ಅರ್ಜಿದಾರ ಸಂಘಟನೆಯು ಕಾರ್ಯಕ್ರಮವನ್ನು ನಡೆಸಬಹುದು ಮತ್ತು ಅನುಮತಿಗಾಗಿ ಮತ್ತೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿ: ಚಿಕ್ಕಬಳ್ಳಾಪುರ: ಭೀಕರ ಅಪಘಾತಕ್ಕೆ 13 ಜನ ದುರ್ಮರಣ