ಸಂಸತ್ನ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಇಂದು ಡಿಎಂಕೆ ಸಂಸದ ಡಾ.ಡಿವಿಎನ್ ಸೆಂಥಿಲ್ ಕುಮಾರ್ ಹೇಳಿಕೆ ವಿಚಾರ ಗದ್ದಲಕ್ಕೆ ಕಾರಣವಾಯಿತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿಕೆ ಮಾಡಿದರು.
ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಡಿಎಂಕೆ ಸಂಸದ ಟಿ.ಆರ್ ಬಾಲು ಅವರು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಕುರಿತು ಮಾತು ಆರಂಭಿಸಿದರು. ಈ ವೇಳೆ ಬಾಲು ಭಾಷಣಕ್ಕೆ ಅಡ್ಡಿಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಂಗಳವಾರ ಸಂಸದ ಸೆಂಥಿಲ್ಕುಮಾರ್ ಮಾಡಿದ ಟೀಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಜೋಶಿ ಜೊತೆ ಧ್ವನಿಗೂಡಿಸಿದ ಕೇಂದ್ರ ಆಹಾರ ಮತ್ತು ಗ್ರಾಹಕ ಇಲಾಖೆ ಸಚಿವ ಪಿಯೂಷ್ ಗೋಯಲ್ ಮತ್ತು ಇತರ ಬಿಜೆಪಿ ಸಂಸದರು, ಸೆಂಥಿಲ್ ಕುಮಾರ್ ಕ್ಷಮೆಯಾಚಿಸಲೇಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರ ನಡುವೆ ವಾಗ್ವಾದ ನಡೆಯಿತು.
“ನೀವು ಹಿರಿಯ ಮಂತ್ರಿಯಾಗಿದ್ದೀರಿ, ಸಂಸತ್ತಿನಲ್ಲಿ ವಿವಾದ ಸೃಷ್ಟಿಸಬಾರದು. ನೀವು ತೊಂದರೆ ಕೊಡುವವರಾಗಬಾರದು, ಟ್ರಬಲ್ಶೂಟರ್ ಆಗಿರಬೇಕು” ಎಂದು ಸಚಿವ ಪಿಯೂಷ್ ಗೋಯಲ್ಗೆ ಡಿಎಂಕೆ ಸಂಸದ ಬಾಲು ಹೇಳಿದರು. ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸ್ಪೀಕರ್ ಪೀಠದತ್ತ ತೆರಳಿದರು.
“ಪ್ರತಿಪಕ್ಷಗಳು ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ವಿಭಜನೆ ಮಾಡಲು ಪ್ರಯತ್ನಿಸುತ್ತಿವೆ” ಎಂದು ಸಚಿವರಾದ ಗೋಯಲ್ ಮತ್ತು ಜೋಶಿ ಇಬ್ಬರೂ ಆರೋಪಿಸಿದರು. ಈ ಆರೋಪವನ್ನು ತೀವ್ರವಾಗಿ ವಿರೋಧಿಸಿದ ಪ್ರತಿಪಕ್ಷ ಸದಸ್ಯರು ಪ್ರತಿಭಟಿಸಿದರು. ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
Lok Sabha adjourned till 12 noon amid ruckus in the House. pic.twitter.com/T8bjnXoDGe
— ANI (@ANI) December 6, 2023
ಡಿಎಂಕೆಯ ಧರ್ಮಪುರಿ ಸಂಸದ ಸೆಂಥಿಲ್ಕುಮಾರ್ ಹಿಂದಿ ಭಾಷಿಕ ರಾಜ್ಯಗಳ ಕುರಿತು ಮಂಗಳವಾರ ಲೋಕಸಭೆಯಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನಂತರ ಸಂಸತ್ತಿನ ಕಡತಗಳಿಂದ ಅವರ ಹೇಳಿಕೆಯನ್ನು ತೆಗೆದು ಹಾಕಲಾಗಿದೆ.
ಸೆಂಥಿಲ್ ಕುಮಾರ್ ಹೇಳಿದ್ದೇನು?
ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023 ಕುರಿತು ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಸೆಂಥಿಲ್ ಕುಮಾರ್, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪ್ರಸ್ತಾಪಿಸಿ “ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ’ ಎಂದಿದ್ದರು.
#WATCH | Winter Session of Parliament | DMK MP DNV Senthilkumar S says "…The people of this country should think that the power of this BJP is only winning elections mainly in the heartland states of Hindi, what we generally call the 'Gaumutra' states…" pic.twitter.com/i37gx9aXyI
— ANI (@ANI) December 5, 2023
ಈ ಹೇಳಿಕೆಗೆ ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸೆಂಥಿಲ್ ಕುಮಾರ್ ಕ್ಷಮೆಯಾಚಿಸಿದ್ದರು. ಇಂದು ಸಂಸತ್ನಲ್ಲಿ ಕೂಡ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಹಿಂಪಡೆದಿದ್ದಾರೆ.
#WATCH | Winter Session of Parliament | DMK MP DNV Senthilkumar S expresses regret over his 'Gaumutra' remark and withdraws it.
"The statement made by me yesterday inadvertently, if it had hurt the sentiments of the Members and sections of the people, I would like to withdraw… pic.twitter.com/S0cjyfb7HU
— ANI (@ANI) December 6, 2023
ಇದನ್ನೂ ಓದಿ : ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಹೆಡಗೇವಾರ್ ಮ್ಯೂಸಿಯಂ ಪ್ರವೇಶಕ್ಕೆ ನಿರಾಕರಣೆ: ಗೂಳಿಹಟ್ಟಿ ಶೇಖರ್