ಸಂಸದ ಬ್ರಿಜೇಂದ್ರ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನನ್ನ ನಿರ್ಧಾರದ ಹಿಂದೆ ‘ಬಲವಾದ ರಾಜಕೀಯ ಕಾರಣಗಳಿವೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಅವರು, ‘ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷಕ್ಕೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಬಿಜೇಂದ್ರ ಸಿಂಗ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು.
‘ಅಕ್ಟೋಬರ್ 2ರಂದು ಜಿಂದ್ನಲ್ಲಿ ನಡೆದ ರ್ಯಾಲಿಯಲ್ಲಿ ಹರಿಯಾಣದಲ್ಲಿ ಬಿಜೆಪಿ-ಜೆಜೆಪಿ ಮೈತ್ರಿ ಬಗ್ಗೆ ಪ್ರಸ್ತಾಪಿಸಲಾಯಿತು. ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಅದು ಕೂಡ (ಬಿಜೆಪಿ ತೊರೆಯಲು) ಒಂದು ಕಾರಣ’ ಎಂದು ಸಿಂಗ್ ತಿಳಿಸಿದ್ದಾರೆ.
I have resigned from the primary membership of BJP,due to compelling political reasons.
I extend gratitude to the party, National President Sh. JP Nadda, Prime Minister Sh. Narendra Modi, & Sh Amit Shah for giving me the opportunity to serve as the Member of Parliament for Hisar.— Brijendra Singh (@BrijendraSpeaks) March 10, 2024
ಬ್ರಿಜೇಂದ್ರ ಸಿಂಗ್ ಯಾರು?
ಬ್ರಿಜೇಂದ್ರ ಸಿಂಗ್ ಹರಿಯಾಣದ ಹಿಸಾರ್ನಿಂದ ಸಂಸದರಾಗಿದ್ದಾರೆ. ಅವರು ಅನೇಕ ಸಂಸದೀಯ ಸಮಿತಿಗಳ ಸದಸ್ಯರೂ ಆಗಿದ್ದಾರೆ. ಬ್ರಿಜೇಂದ್ರ ಸಿಂಗ್ ಅವರು ಮಾಜಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದು, ಅವರು 21 ವರ್ಷಗಳ ಕಾಲ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಸ್ವಯಂ ನಿವೃತ್ತಿ ಪಡೆದರು.
1998 ರಲ್ಲಿ, ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 9 ನೇ ರ್ಯಾಂಕ್ ಪಡೆದರು. ಬ್ರಿಜೇಂದ್ರ ಸಿಂಗ್ ಜೆಎನ್ಯುನಿಂದ ಆಧುನಿಕ ಇತಿಹಾಸದಲ್ಲಿ ಎಂಎ ವ್ಯಾಸಂಗ ಮಾಡಿದ್ದರು. ಇವರು ಹರಿಯಾಣದ ಜಿಂದ್ ಮೂಲದವರು. ಅವರು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಿರೇಂದರ್ ಸಿಂಗ್ ಅವರ ಪುತ್ರ. ಅವರು ಜಾಟ್ ಐಕಾನ್ ಛೋಟು ರಾಮ್ ಅವರ ಮರಿ ಮೊಮ್ಮಗ.
ಬ್ರಿಜೇಂದ್ರ ಸಿಂಗ್ ಅವರು 2019 ರಲ್ಲಿ ಚುನಾವಣಾ ಪಾದಾರ್ಪಣೆ ಮಾಡಿದರು. ಅವರ ಪ್ರಚಾರದ ಸಮಯದಲ್ಲಿ, ಅವರು ಸ್ವಜನಪಕ್ಷಪಾತದ ಉತ್ಪನ್ನವಲ್ಲ ಎಂದು ಹೇಳಿದ್ದರು.
‘ನನ್ನನ್ನು ಸ್ವಜನಪಕ್ಷಪಾತದ ಉತ್ಪನ್ನವಾಗಿ ನೋಡಬಾರದು. ನಾನು ಒಂದು ಶತಮಾನಕ್ಕೂ ಹೆಚ್ಚು ಕಾಲ ಅಸ್ತಿತ್ವದಲ್ಲಿದ್ದ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವನು. ಆದರೆ, ನಾನು ಹೋಗಲು ಎಲ್ಲಿಯೂ ಇಲ್ಲದ ಕಾರಣ ನಾನು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರುತ್ತಿದ್ದೇನೆ ಎಂದು ಅಲ್ಲ. ನಾನು ತಕ್ಕಮಟ್ಟಿಗೆ ಯಶಸ್ಸನ್ನು ಸಾಧಿಸಿದ ಸ್ವಂತ ಮಾರ್ಗವಾಗಿದೆ’ ಎಂದು ಸಿಂಗ್ 2019 ರ ಲೋಕಸಭೆ ಚುನಾವಣೆಗೆ ಮೊದಲು ತಿಳಿಸಿದ್ದರು.
ಬಿಜೇಂದ್ರ ಸಿಂಗ್ ಅವರು ಜೆಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್ನಲ್ಲಿದ್ದ ಭವ್ಯಾ ಬಿಷ್ಣೋಯ್ ಅವರನ್ನು ಸೋಲಿಸಿದರು.
ಕಳೆದ ವರ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಿಗೆ ಬ್ರಿಜೇಂದ್ರ ಸಿಂಗ್ ಸಾರ್ವಜನಿಕವಾಗಿ ಬೆಂಬಲ ನೀಡಿದ್ದರು. 2022 ರಲ್ಲಿ, ಬ್ರಿಜೇಂದ್ರ ಸಿಂಗ್ ಆಮ್ ಆದ್ಮಿ ಪಕ್ಷವನ್ನು ಸೇರಲು ಯೋಚಿಸುತ್ತಿದ್ದಾರೆ ಎಂಬ ಊಹಾಪೋಹವಿತ್ತು. ಆದರೆ, ನಂತರ ವದಂತಿಗಳನ್ನು ತಳ್ಳಿಹಾಕಿದ ಅವರು, ಪಕ್ಷ ಸೇರುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
‘ಬ್ರಿಜೇಂದ್ರ ಸಿಂಗ್ ಅವರು ಹರಿಯಾಣದಿಂದ ಇಂಡಿಯಾ ತಂಡದ ಭಾಗವಾಗುವುದನ್ನು ನೋಡಲು ಸಂತೋಷವಾಗಿದೆ. ಅವರು ಒಬ್ಬ ನಿಪುಣ ಮಾಜಿ ಅಧಿಕಾರಿ, ಯಶಸ್ವಿ ಸಂಸದ, ಅವರ ಉಪಸ್ಥಿತಿಯು ಖಂಡಿತವಾಗಿಯೂ ಮೈತ್ರಿಗೆ ಮೌಲ್ಯವನ್ನು ನೀಡುತ್ತದೆ’ ಎಂದು ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ;