- Advertisement -
- Advertisement -
ವಿಶ್ವಾಸಮತ ಪ್ರಕ್ರಿಯೆಯಲ್ಲಿ ಸೋಲುಂಡ ಎಚ್.ಡಿ ಕುಮಾರಸ್ವಾಮಿ ಇಂದು ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಬಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಆಗ ರಾಜ್ಯಪಾಲ ವಜುಬಾಯಿ ವಾಲರವರು ಕ್ಷಣದಲ್ಲೇ ರಾಜೀನಾಮೆ ಸ್ವೀಕರಿಸಿ ಅಂಗೀಕರಿಸಿದ್ದಾರೆ. ಅಂಗೀಕಾರ ಪತ್ರವನ್ನು ಸಹ ಕುಮಾರಸ್ವಾಮಿಯವರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಜೊತೆ ಕಾಂಗ್ರೆಸ್ ನ ಡಿ.ಕೆ ಶಿವಕುಮಾರ್, ಜಿ.ಪರಮೇಶ್ವರ್, ಜೆಡಿಎಸ್ ನ ಬಂಡೆಪ್ಪ ಕಾಶಂಪೂರ್, ಎಚ್.ಡಿ ರೇವಣ್ಣ, ಶಿವಲಿಂಗೇಗೌಡ, ಜಿ.ಟಿ ದೇವೇಗೌಡ, ಸಾ.ರ ಮಹೇಶ್ ಜೊತೆಗಿದ್ದರು.