ಚುನಾವಣಾ ಬಾಂಡ್ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದ ಬೆನ್ನಲ್ಲಿ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ‘ರಾಷ್ಟ್ರಕ್ಕೆ ಸಂಪೂರ್ಣವಾಗಿ ಸುಳ್ಳು ಹೇಳಿದ್ದಾರೆ’ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ‘ತಂತಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವನ್ನು ಭಾನುವಾರ ಪ್ರಸಾರ ಮಾಡಲಾಗಿತ್ತು.
ಪ್ರತಿದಿನವೂ, ಪ್ರಧಾನಮಂತ್ರಿ ಬೂಟಾಟಿಕೆಗಳನ್ನು ಮುಂದುವರಿಸುತ್ತಾರೆ ಮತ್ತು ಅಪ್ರಾಮಾಣಿಕತೆಯಲ್ಲಿ ಮತ್ತಷ್ಟು ಆಳಕ್ಕೆ ಇಳಿಯುತ್ತಾರೆ. ನಿಧಿ ಎಲ್ಲಿಂದ ಬಂದಿದೆ, ಹೇಗೆ ಬಳಕೆಯಾಗುತ್ತಿದೆ ಎಂಬುವುದು ಅವರೇ ಸ್ಥಾಪಿಸಿದ ಚುನಾವಣಾ ಬಾಂಡ್ ಯೋಜನೆಯಿಂದ ಗೊತ್ತಾಗಿದೆ ಎಂದು ಜೈರಾಮ್ ರಮೇಶ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಹಣ ಬಂದಿದೆ ಎಂಬ ವಿವರಗಳನ್ನು ಸಾರ್ವಜನಿಕರಿಂದ ಮರೆಮಾಡಲು ಮೋದಿ ಬಯಸಿದ್ದರು, 2018ರಿಂದ 2024 ರವರೆಗೆ ಆರು ವರ್ಷಗಳ ಕಾಲ ಯಾವ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
2018ರ ಜನವರಿಯಲ್ಲಿ ಮೋದಿ ಸರ್ಕಾರವು ಚುನಾವಣಾ ಬಾಂಡ್ಗಳನ್ನು ಪರಿಚಯಿಸಿದೆ. ಫೆಬ್ರವರಿ 2024ರಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ‘ಅಸಂವಿಧಾನಿಕ’ ಎಂದು ತೀರ್ಪು ನೀಡಿ ರದ್ದುಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(ಎಸ್ಬಿಐ) ಚುನಾವಣಾ ಬಾಂಡ್ ಖರೀದಿದಾರರ ಬಗ್ಗೆ ಸಂಫೂರ್ಣ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಸುಪ್ರೀಂಕೋರ್ಟ್ನ ನಿರ್ದೇಶನದ ಮೇರೆಗೆ, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡಲಾಗಿದೆ.
ರಮೇಶ್ ಅವರು ತಮ್ಮ ಪೋಸ್ಟ್ನಲ್ಲಿ, ‘ರಿಮೋಟ್ ಕಂಟ್ರೋಲ್’ ಎಸ್ಬಿಐ ನ್ಯಾಯಾಲಯಕ್ಕೆ ‘ಸುಳ್ಳು’ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ದಾನಿಗಳ ಡೇಟಾವನ್ನು ಹೊಂದಿಸಲು 3 ತಿಂಗಳ ಕಾಲಾವಾಕಾಶವನ್ನು ಕೋರಿದಾಗ ಎಸ್ಬಿಐ ಸುಪ್ರೀಂ ಕೋರ್ಟ್ನಲ್ಲಿ ಸುಳ್ಳು ಹೇಳಿದೆ. ನಮ್ಮ ತಂಡವು ಪೈಥಾನ್ ಕೋಡ್ನ ಐದು ಸಾಲುಗಳನ್ನು ತೆಗೆದುಕೊಂಡಿದೆ ಮತ್ತು ಪ್ರತಿ ದಾನಿಯನ್ನು ಅವರು ದೇಣಿಗೆ ನೀಡಿದ ರಾಜಕೀಯ ಪಕ್ಷದೊಂದಿಗೆ ಹೊಂದಿಸಲು ಹದಿನೈದು ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದೆ ಎಂದು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣಾ ಬಾಂಡ್ಗಳಿಂದಾಗಿ ಆಡಳಿತಾರೂಢ ಬಿಜೆಪಿ ಹಿನ್ನೆಡೆಯನ್ನು ಕಾಣಲಿದೆ ಎಂಬುವುದನ್ನು ನಿರಾಕರಿಸುವ ಪ್ರಧಾನಿಗೆ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, 8,000 ಕೋಟಿಗೂ ಹೆಚ್ಚು ಮೌಲ್ಯದ ದೇಣಿಗೆಯೊಂದಿಗೆ ಬಿಜೆಪಿಯು ಚುನಾವಣಾ ಬಾಂಡ್ ಯೋಜನೆಯ ಅತಿ ದೊಡ್ಡ ಫಲಾನುಭವಿಯಾಗಿದೆ. ಈ ದತ್ತಾಂಶವು ನಿಮ್ಮ ಪಕ್ಷ ಮತ್ತು ಸರ್ಕಾರದ ಬೃಹತ್ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
Every single day the Prime Minister scales new heights of hypocrisy and plumbs new depths of dishonesty.
The Prime Minister has fully lied to the nation in his latest interview to a Tamil television channel. He claims that “where funds have come from, how they are being used” is… pic.twitter.com/OO67NaKgm7
— Jairam Ramesh (@Jairam_Ramesh) April 1, 2024
ಇದನ್ನು ಓದಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕೇಸ್ ದಾಖಲು: ‘ಮೋದಿ ಪರಿವಾರ’ದ ವಿರುದ್ಧ ಎಫ್ಐಆರ್ ಎಂದ ಕಾಂಗ್ರೆಸ್