ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಭಾರೀ ಮಳೆ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಗರದ ಹಲವೆಡೆ ನೀರು ನಿಂತಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುಂದಿನ 4-5 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು ಬೆಂಗಳೂರಿನ ಗ್ರಾಮಾಂತರ ಮತ್ತು ನಗರಗಳ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಳೆಗೆ ಮೃತಪಟ್ಟ ಇಬ್ಬರು ಉಳ್ಳಾಲ ಉಪನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ವರಿದಿಯಾಗಿದೆ. ಮೃತಪಟ್ಟಿರುವವರಲ್ಲಿ ಒಬ್ಬರು ಬಿಹಾರದಿಂದ ಮತ್ತು ಇನ್ನೊಬ್ಬರು ಉತ್ತರ ಪ್ರದೇಶದದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ. ಇಬ್ಬರ ಶವಗಳು ಪೈಪ್ಲೈನ್ ಕಾಮಗಾರಿ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮೃತರನ್ನು ಬಿಹಾರದ ದೇವಭಾರತ್ ಮತ್ತು ಉತ್ತರ ಪ್ರದೇಶದ ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮಳೆ ತೀವ್ರಗೊಂಡಿತು. ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಇದ್ದರು. ಸಂಜೆ 7 ರ ಸುಮಾರಿಗೆ ನೀರಿನ ಮಟ್ಟ ಏರಿತು. ನಾವು ಅಲ್ಲಿ ಪ್ರತಿನಿತ್ಯ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಆರೆಂಜ್ ಅಲರ್ಟ್ ಘೋಷಣೆ: ಏನಿವು ಅಲರ್ಟ್ಗಳು?
ವರದಿಗಳ ಪ್ರಕಾರ, ನಗರದಲ್ಲಿ ನಿನ್ನೆ 24 ಗಂಟೆಯಲ್ಲಿ 114.6 ಮಿಮೀ ಮಳೆಯಾಗಿದೆ. ಸಂಜೆ ಪ್ರಾರಂಭವಾದ ಮಳೆಯು ತಡರಾತ್ರಿ ತೀವ್ರಗೊಂಡಿತ್ತು. ಮಳೆಯಿಂದಾಗಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಹಲವಾರು ವಾಹನಗಳು ಮುಳುಗಿಹೋಗಿವೆ.
“ಮಳೆ ಬಂದರೆ ನಮಗೆ ಪ್ರಯಾಣಿಸಲು ತುಂಬಾ ಕಷ್ಟವಾಗುತ್ತದೆ. ಪ್ರತಿ ವರ್ಷವೂ ಇದೇ ಪರಿಸ್ಥಿತಿ ಇದೆ” ಎಂದು ಕಳೆದ ಐದು ವರ್ಷಗಳಿಂದ ಕೆ.ಆರ್. ಪುರಂ ಅಂಡರ್ಪಾಸ್ ಬಳಸುತ್ತಿರುವ ಬ್ಯಾಂಕ್ ಉದ್ಯೋಗಿ ಗ್ರೇಸ್ ಡಿಸೋಜಾ ಹೇಳಿದ್ದಾರೆ.
ಗುಡುಗು ಸಿಡಿಲಿನಿಂದ ಉಂಟಾದ ವಿದ್ಯುತ್ ವೈಫಲ್ಯದಿಂದಾಗಿ ಗ್ರೀನ್ ಲೈನಿನ ಮೆಟ್ರೋವನ್ನು ನಿಲ್ಲಿಸಬೇಕಾಗಿ ಬಂದು ಮೆಟ್ರೋ ಸೇವೆಗಳು ಸಹ ಅಲ್ಪಾವಧಿಗೆ ಪರಿಣಾಮ ಬೀರಿದವು.
ಇದನ್ನೂ ಓದಿ: ವಿಡಿಯೊ ; ಯುವಕನನ್ನು ಹೆಗಲ ಮೇಲೆ ಹೊತ್ತು ರಕ್ಷಣೆಗೆ ನಿಂತ ಮಹಿಳಾ ಇನ್ಸ್ಪೆಕ್ಟರ್!
ಬೆಂಗಳೂರಿನ ಜೆಪಿ ನಗರ, ಜಯನಗರ, ಲಾಲ್ಬಾಗ್, ಚಿಕ್ಕಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಸೇರಿದಂತೆ ಹಲವಾರು ಪ್ರದೇಶದಲ್ಲಿ ಜನರು ಸಂಕಷ್ಟಕ್ಕೆ ಒಳಗಾದರು.
I listen what happened in bangalore so sad..