Homeಮುಖಪುಟಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

ಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

- Advertisement -
- Advertisement -

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.

ಕೃಪೆ: ದಿ ವೈರ್‌

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಗೌತಮ್ ನವಲಖರ “ಅವಸರದ ವರ್ಗಾವಣೆ”ಯ ವಿವರಗಳನ್ನು ದಿಲ್ಲಿ ಹೈಕೋರ್ಟಿಗೆ ನೀಡಲು ವಿಫಲವಾದ ಎಎನ್‌ಐಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ!. ಹಿಂದೆಯೇ ಈ ವಿಷಯದ ಕಾರ್ಯವ್ಯಾಪ್ತಿಯ ಪ್ರಶ್ನೆಯನ್ನು ಎತ್ತಲು ವಿಫಲವಾಗಿ, ನಂತರ ತಾನು ಈ ವಿಷಯವನ್ನು ನಿಭಾಯಿಸಿದ ಕುರಿತು ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದ ಸರಕಾರವೀಗ ದಿಲ್ಲಿ ಹೈಕೋರ್ಟಿನ ಏಕ ಸದಸ್ಯ ಪೀಠಕ್ಕೆ ಎನ್ಐಎ ಕಾಯಿದೆಯನ್ವಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಕಾರ್ಯವ್ಯಾಪ್ತಿಯಿಲ್ಲವೆಂದು ವಾದಿಸುತ್ತಿದೆ.

ಒಂದು ಸಾಂವಿಧಾನಿಕ ನ್ಯಾಯಾಲಯವನ್ನು ಇನ್ನೊಂದು ಸಾಂವಿಧಾನಿಕ ನ್ಯಾಯಾಲಯದ ಎದುರು ಎತ್ತಿಕಟ್ಟುವ ಕ್ರಮವೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಿಲ್ಲಿ ಹೈಕೋರ್ಟಿನ ನ್ಯಾಯಮೂರ್ತಿ ಅನೂಪ್ ಭಂಭಾನಿ ಅವರ ಏಕಸದಸ್ಯ ಪೀಠದ ನಿರ್ದೇಶನವನ್ನು ಪಾಲಿಸುವುದಕ್ಕೆ ಬದಲಾಗಿ ಅವಸರವಸರದಲ್ಲಿ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟಿನ ಮೊರೆಹೋಗಲು ನಿರ್ಧರಿಸಿತು. ಗೌತಮ್ ನವಲಖ ಅವರನ್ನು ತರಾತುರಿಯಲ್ಲಿ ಮುಂಬಯಿಗೆ ವರ್ಗಾಯಿಸಿದ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ನೀಡುವಂತೆ ಈ ಪೀಠ ಎನ್‌ಐಎಗೆ ನಿರ್ದೇಶನ ನೀಡಿತ್ತು.

ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖ ಅವರನ್ನು ಅವರ ಮಧ್ಯಂತರ ಜಾಮೀನು ಅರ್ಜಿ ಇನ್ನೂ ದಿಲ್ಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಮೇ 25ರಂದು ಕೇವಲ ಐದು ನಿಮಿಷಗಳ ಅವಧಿಯಲ್ಲಿ ಮುಂಬಯಿಗೆ ಹೋಗುವ ರೈಲಿನಲ್ಲಿ ಕುಳ್ಳಿರಿಸಲಾಗಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಜೂನ್ 2ರಂದು ಆರೋಪಿಯ ಅನುಪಸ್ಥಿತಿಯಲ್ಲಿ ನಡೆಸಿದ ವಿಚಾರಣೆಯಲ್ಲಿ- ದಿಲ್ಲಿ ಹೈಕೋರ್ಟಿಗೆ ಈ ವಿಷಯದಲ್ಲಿ ಕಾರ್ಯವ್ಯಾಪ್ತಿಯಿಲ್ಲವೆಂಬ ಎನ್ಐಎಯ ವಾದವನ್ನು ಜೂನ್ ಮಧ್ಯ ಭಾಗದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿಶೇಷವೆಂದರೆ ಸುಪ್ರೀಂಕೋರ್ಟ್ ದಾಖಲೆ ಪುಸ್ತಕದಲ್ಲಿ ದಾಖಲೆ ಅವಧಿಯಲ್ಲಿ ನಮೂದಾಗಿದ್ದರೂ ಎನ್‌ಐಎಯ ವಿಶೇಷ ತೆರವು ಅರ್ಜಿಯ ಪ್ರತಿಯನ್ನು ನವಲಖ ಅವರ ವಕೀಲರಿಗೆ ನೀಡಲಾಗಿಲ್ಲ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವಲಖ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಎಪ್ರಿಲ್ 14ರಂದು ಎನ್‌ಐಎಯು ಕರಾಳ ಕಾನೂನುಬಾಹಿರ ಕೃತ್ಯ (ತಡೆ) ಕಾಯಿದೆಯನ್ವಯ ದಿಲ್ಲಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು.

ಎನ್‌ಐಎಯ ಮುಂಬಯಿ ಕಚೇರಿಯು ಈ ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಗೆ ಸಾಗಿಸುವ ಬದಲು ದಿಲ್ಲಿಯ ತಿಹಾರ್ ಜೈಲಿನಲ್ಲಿ ತಾತ್ಕಾಲಿಕವಾಗಿ, ಆದರೆ ಅನಿರ್ದಿಷ್ಟಾವಧಿಗೆ ಇರಿಸಲಾಗಿತ್ತು.

ಮುಂಬಯಿಯಲ್ಲಿ ಕೊರೋನ ಪ್ರಕರಣಗಳು ವ್ಯಾಪಕವಾಗಿ ಹಬ್ಬಿರುವ ಮತ್ತು ಅಲ್ಲಿನ ಜೈಲುಗಳಲ್ಲಿಯೂ ಸೋಂಕಿತರು ಇರುವ ಕಾರಣದಿಂದ 68 ವರ್ಷ ಪ್ರಾಯದ ನವಲಖ ಅವರ ವೈದ್ಯಕೀಯ ಪರಿಸ್ಥಿತಿ ಮತ್ತು ಅವರು ಎದುರಿಸಬೇಕಾಗಿ ಬರಬಹುದಾದ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಅವರ ವಕೀಲರು ಮಧ್ಯಂತರ ಜಾಮೀನು ಕೋರಿ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಯುಎಪಿಎ ಮತ್ತು ಎನ್‌ಐಎ ಕಾಯಿದೆ ಪ್ರಕಾರ ಸಾಮಾನ್ಯವಾಗಿ ಜಾಮೀನು ಅರ್ಜಿಯ ವಿಚಾರಣೆಯನ್ನು ನಿಯೋಜಿತ ವಿಶೇಷ ನ್ಯಾಯಾಲಯ ನಡೆಸಬೇಕಾಗಿದ್ದರೂ, ದಿಲ್ಲಿಯಲ್ಲಿ ಯಾವುದೇ ಎನ್ಐಎ ವಿಶೇಷ ನ್ಯಾಯಾಲಯ ಕಾರ್ಯಾಚರಿಸದೇ ಇರುವುದರಿಂದ ಮತ್ತು ನವಲಖ ಅವರ ರಿಮಾಂಡ್ ವಿಷಯವನ್ನು ಕೂಡಾ ಸಾಮಾನ್ಯ ನ್ಯಾಯಾಲಯವೇ ನಡೆಸಿರುವುದರಿಂದ ಹೈಕೋರ್ಟ್ ಮಾತ್ರ ಅವರಿಗೆ ಉಳಿದಿರುವ ಏಕೈಕ ದಾರಿಯಾಗಿತ್ತು.

ಹೈಕೋರ್ಟ್ ವ್ಯಾಪ್ತಿಯನ್ನು ಎನ್‌ಐಎ ಒಪ್ಪಿತ್ತು

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಮೇ 22ರಂದು ನಡೆದಾಗ ಎನ್‌ಐಎಯು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲ್ಲ ಮತ್ತು ಉತ್ತರ ನೀಡಲು ಸಮಯಾವಕಾಶ ಕೇಳಿತ್ತು. ಅದರಂತೆ ಮುಂದಿನ ವಿಚಾರಣೆ ನಡೆಯುವ ಮೇ 27ರ ತನಕ ಸಮಯಾವಕಾಶ ನೀಡಲಾಗಿತ್ತು. ವಿಮಾನಯಾನ ಆರಂಭವಾಗುವ ಹಿನ್ನೆಲೆಯಲ್ಲಿ ಎನ್‌ಐಎಯು ನವಲಖ ಅವರನ್ನು ಮುಂಬಯಿಗೆ ವರ್ಗಾಯಿಸುವ ಉದ್ದೇಶ ಹೊಂದಿದೆ ಎಂದು ಮನಗಂಡ ಹೈಕೋರ್ಟ್, ಸೂಕ್ತ ನ್ಯಾಯಾಲಯದಿಂದ ಆದೇಶ ಪಡೆದ ಮೇಲೆಯೇ ಹಾಗೆ ಮಾಡಬೇಕೆಂದು ನಿರ್ದೇಶಿಸಿತ್ತು.

ಆದರೂ ಮೇ 25ರಂದು ಎನ್‌ಐಎಯು ಅವರನ್ನು ರೈಲಿನಲ್ಲಿ ಮುಂಬಯಿಗೆ ಕೊಂಡೊಯ್ದು, ಮರುದಿನ ಅಲ್ಲಿನ ಎನ್‌ಐಎ ನ್ಯಾಯಾಲಯದಿಂದ ನ್ಯಾಯಾಂಗ ವಶದ ಆದೇಶ ಪಡೆಯಿತು. ಅಂದಿನಿಂದ ಅವರು ಮುಂಬಯಿಯ ಪೂರ್ವ ಭಾಗದಲ್ಲಿರುವ ತಲೋಜ ಜೈಲಿನಲ್ಲಿ ಇದ್ದಾರೆ.

ನವಲಖ ಅವರನ್ನು ಮುಂಬಯಿಗೆ ಕೊಂಡೊಯ್ದ ತರಾತುರಿಯ ಕ್ರಮದಿಂದ ಕಿರಿಕಿರಿಗೆ ಒಳಗಾದ ದಿಲ್ಲಿ ಹೈಕೋರ್ಟ್, ವರ್ಗಾವಣೆಯ ಸಂಪೂರ್ಣ ದಾಖಲೆ ಮತ್ತು ಮುಂಬಯಿಯ ಎನ್‌ಐಎ ನ್ಯಾಯಾಲಯ ನೀಡಿದ ವಾರಂಟ್ ಮಾತ್ರವಲ್ಲ, ದಿಲ್ಲಿಯ ಎನ್ಐಎ ನ್ಯಾಯಾಲಯ ನೀಡಿದ ವರ್ಗಾವಣೆ ಆದೇಶ ಮತ್ತು ಈ ನ್ಯಾಯಾಲಯಗಳಿಗೆ ಅವರ ವೈದ್ಯಕೀಯ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಾಗಿದೆಯೇ ಎಂಬ ಮಾಹಿತಿ ಸಲ್ಲಿಸುವಂತೆ ಆದೇಶಿಸಿತ್ತು.

ಇದಕ್ಕೆ ಜೂನ್ 3ರ ದಿನವನ್ನು ಹೈಕೋರ್ಟ್ ನಿಗದಿಪಡಿಸಿತ್ತು. ಆದರೆ, ಎನ್‌ಐಎಯು ಜೂನ್ 2ರಂದೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ದಿಲ್ಲಿ ಹೈಕೋರ್ಟಿನ ಪೀಠದ ವಿಚಾರಣೆಗೆ ತಡೆಯಾಜ್ಞೆ ಪಡೆಯಿತು. ಸುಪ್ರೀಂಕೋರ್ಟಿನ ಈ ತಡೆಯಾಜ್ಞೆಯು ದಿಲ್ಲಿ ಹೈಕೋರ್ಟ್ ತನ್ನ ಕಾರ್ಯವ್ಯಾಪ್ತಿಯ ಅಧೀನ ನ್ಯಾಯಾಲಯಗಳ ಮೇಲೆ ಹೊಂದಿರುವ ಅಧಿಕಾರವನ್ನೇ ಪ್ರಶ್ನಿಸಿರುವುದರಿಂದ ಕಾನೂನು ವಲಯದಲ್ಲಿ ಅನೇಕರ ಹುಬ್ಬುಗಳನ್ನು ಮೇಲೇರಿಸಿದೆ!

“ಭಾರತೀಯ ಸಂವಿಧಾನದ ಪ್ರಕಾರ ಹೈಕೋರ್ಟ್‌ಗಳೂ ಸಾಂವಿಧಾನಿಕ ನ್ಯಾಯಾಲಯಗಳಾಗಿದ್ದು, ಅವುಗಳ ಆಜ್ಞೆಗಳನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವಾಗ ಎರಡೂ ಕೋರ್ಟ್‌ಗಳು ಒಂದು ಸ್ಥಾನಮಾನ ಹೊಂದಿರುತ್ತವೆ ಮತ್ತು ಯಾವುದೇ ರೀತಿಯಲ್ಲಿ ಹೈಕೋರ್ಟ್‌ಗಳು ಸುಪ್ರೀಂಕೋರ್ಟ್‌ಗಿಂತ ಕೆಳಗೆ ಇಲ್ಲ. ತನ್ನ ಅಧೀನ ನ್ಯಾಯಾಲಯವು ಕಾನೂನು ನಿಯಮಗಳನ್ನು ಪಾಲಿಸಿದೆಯೇ, ಇಲ್ಲವೇ ಎಂದು ವಿಚಾರಿಸುವುದರಿಂದ ಹೈಕೋರ್ಟನ್ನು ತಡೆಯುವಂತಿಲ್ಲ” ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.


ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ತೇಲ್ತುಂಬ್ಡೆ ಹಾಗೂ ನವಲಖ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...