Homeಮುಖಪುಟಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

ಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

- Advertisement -
- Advertisement -

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.

ಕೃಪೆ: ದಿ ವೈರ್‌

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಗೌತಮ್ ನವಲಖರ “ಅವಸರದ ವರ್ಗಾವಣೆ”ಯ ವಿವರಗಳನ್ನು ದಿಲ್ಲಿ ಹೈಕೋರ್ಟಿಗೆ ನೀಡಲು ವಿಫಲವಾದ ಎಎನ್‌ಐಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ!. ಹಿಂದೆಯೇ ಈ ವಿಷಯದ ಕಾರ್ಯವ್ಯಾಪ್ತಿಯ ಪ್ರಶ್ನೆಯನ್ನು ಎತ್ತಲು ವಿಫಲವಾಗಿ, ನಂತರ ತಾನು ಈ ವಿಷಯವನ್ನು ನಿಭಾಯಿಸಿದ ಕುರಿತು ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದ ಸರಕಾರವೀಗ ದಿಲ್ಲಿ ಹೈಕೋರ್ಟಿನ ಏಕ ಸದಸ್ಯ ಪೀಠಕ್ಕೆ ಎನ್ಐಎ ಕಾಯಿದೆಯನ್ವಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಕಾರ್ಯವ್ಯಾಪ್ತಿಯಿಲ್ಲವೆಂದು ವಾದಿಸುತ್ತಿದೆ.

ಒಂದು ಸಾಂವಿಧಾನಿಕ ನ್ಯಾಯಾಲಯವನ್ನು ಇನ್ನೊಂದು ಸಾಂವಿಧಾನಿಕ ನ್ಯಾಯಾಲಯದ ಎದುರು ಎತ್ತಿಕಟ್ಟುವ ಕ್ರಮವೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಿಲ್ಲಿ ಹೈಕೋರ್ಟಿನ ನ್ಯಾಯಮೂರ್ತಿ ಅನೂಪ್ ಭಂಭಾನಿ ಅವರ ಏಕಸದಸ್ಯ ಪೀಠದ ನಿರ್ದೇಶನವನ್ನು ಪಾಲಿಸುವುದಕ್ಕೆ ಬದಲಾಗಿ ಅವಸರವಸರದಲ್ಲಿ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟಿನ ಮೊರೆಹೋಗಲು ನಿರ್ಧರಿಸಿತು. ಗೌತಮ್ ನವಲಖ ಅವರನ್ನು ತರಾತುರಿಯಲ್ಲಿ ಮುಂಬಯಿಗೆ ವರ್ಗಾಯಿಸಿದ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ನೀಡುವಂತೆ ಈ ಪೀಠ ಎನ್‌ಐಎಗೆ ನಿರ್ದೇಶನ ನೀಡಿತ್ತು.

ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖ ಅವರನ್ನು ಅವರ ಮಧ್ಯಂತರ ಜಾಮೀನು ಅರ್ಜಿ ಇನ್ನೂ ದಿಲ್ಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಮೇ 25ರಂದು ಕೇವಲ ಐದು ನಿಮಿಷಗಳ ಅವಧಿಯಲ್ಲಿ ಮುಂಬಯಿಗೆ ಹೋಗುವ ರೈಲಿನಲ್ಲಿ ಕುಳ್ಳಿರಿಸಲಾಗಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಜೂನ್ 2ರಂದು ಆರೋಪಿಯ ಅನುಪಸ್ಥಿತಿಯಲ್ಲಿ ನಡೆಸಿದ ವಿಚಾರಣೆಯಲ್ಲಿ- ದಿಲ್ಲಿ ಹೈಕೋರ್ಟಿಗೆ ಈ ವಿಷಯದಲ್ಲಿ ಕಾರ್ಯವ್ಯಾಪ್ತಿಯಿಲ್ಲವೆಂಬ ಎನ್ಐಎಯ ವಾದವನ್ನು ಜೂನ್ ಮಧ್ಯ ಭಾಗದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿಶೇಷವೆಂದರೆ ಸುಪ್ರೀಂಕೋರ್ಟ್ ದಾಖಲೆ ಪುಸ್ತಕದಲ್ಲಿ ದಾಖಲೆ ಅವಧಿಯಲ್ಲಿ ನಮೂದಾಗಿದ್ದರೂ ಎನ್‌ಐಎಯ ವಿಶೇಷ ತೆರವು ಅರ್ಜಿಯ ಪ್ರತಿಯನ್ನು ನವಲಖ ಅವರ ವಕೀಲರಿಗೆ ನೀಡಲಾಗಿಲ್ಲ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವಲಖ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಎಪ್ರಿಲ್ 14ರಂದು ಎನ್‌ಐಎಯು ಕರಾಳ ಕಾನೂನುಬಾಹಿರ ಕೃತ್ಯ (ತಡೆ) ಕಾಯಿದೆಯನ್ವಯ ದಿಲ್ಲಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು.

ಎನ್‌ಐಎಯ ಮುಂಬಯಿ ಕಚೇರಿಯು ಈ ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಗೆ ಸಾಗಿಸುವ ಬದಲು ದಿಲ್ಲಿಯ ತಿಹಾರ್ ಜೈಲಿನಲ್ಲಿ ತಾತ್ಕಾಲಿಕವಾಗಿ, ಆದರೆ ಅನಿರ್ದಿಷ್ಟಾವಧಿಗೆ ಇರಿಸಲಾಗಿತ್ತು.

ಮುಂಬಯಿಯಲ್ಲಿ ಕೊರೋನ ಪ್ರಕರಣಗಳು ವ್ಯಾಪಕವಾಗಿ ಹಬ್ಬಿರುವ ಮತ್ತು ಅಲ್ಲಿನ ಜೈಲುಗಳಲ್ಲಿಯೂ ಸೋಂಕಿತರು ಇರುವ ಕಾರಣದಿಂದ 68 ವರ್ಷ ಪ್ರಾಯದ ನವಲಖ ಅವರ ವೈದ್ಯಕೀಯ ಪರಿಸ್ಥಿತಿ ಮತ್ತು ಅವರು ಎದುರಿಸಬೇಕಾಗಿ ಬರಬಹುದಾದ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಅವರ ವಕೀಲರು ಮಧ್ಯಂತರ ಜಾಮೀನು ಕೋರಿ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಯುಎಪಿಎ ಮತ್ತು ಎನ್‌ಐಎ ಕಾಯಿದೆ ಪ್ರಕಾರ ಸಾಮಾನ್ಯವಾಗಿ ಜಾಮೀನು ಅರ್ಜಿಯ ವಿಚಾರಣೆಯನ್ನು ನಿಯೋಜಿತ ವಿಶೇಷ ನ್ಯಾಯಾಲಯ ನಡೆಸಬೇಕಾಗಿದ್ದರೂ, ದಿಲ್ಲಿಯಲ್ಲಿ ಯಾವುದೇ ಎನ್ಐಎ ವಿಶೇಷ ನ್ಯಾಯಾಲಯ ಕಾರ್ಯಾಚರಿಸದೇ ಇರುವುದರಿಂದ ಮತ್ತು ನವಲಖ ಅವರ ರಿಮಾಂಡ್ ವಿಷಯವನ್ನು ಕೂಡಾ ಸಾಮಾನ್ಯ ನ್ಯಾಯಾಲಯವೇ ನಡೆಸಿರುವುದರಿಂದ ಹೈಕೋರ್ಟ್ ಮಾತ್ರ ಅವರಿಗೆ ಉಳಿದಿರುವ ಏಕೈಕ ದಾರಿಯಾಗಿತ್ತು.

ಹೈಕೋರ್ಟ್ ವ್ಯಾಪ್ತಿಯನ್ನು ಎನ್‌ಐಎ ಒಪ್ಪಿತ್ತು

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಮೇ 22ರಂದು ನಡೆದಾಗ ಎನ್‌ಐಎಯು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲ್ಲ ಮತ್ತು ಉತ್ತರ ನೀಡಲು ಸಮಯಾವಕಾಶ ಕೇಳಿತ್ತು. ಅದರಂತೆ ಮುಂದಿನ ವಿಚಾರಣೆ ನಡೆಯುವ ಮೇ 27ರ ತನಕ ಸಮಯಾವಕಾಶ ನೀಡಲಾಗಿತ್ತು. ವಿಮಾನಯಾನ ಆರಂಭವಾಗುವ ಹಿನ್ನೆಲೆಯಲ್ಲಿ ಎನ್‌ಐಎಯು ನವಲಖ ಅವರನ್ನು ಮುಂಬಯಿಗೆ ವರ್ಗಾಯಿಸುವ ಉದ್ದೇಶ ಹೊಂದಿದೆ ಎಂದು ಮನಗಂಡ ಹೈಕೋರ್ಟ್, ಸೂಕ್ತ ನ್ಯಾಯಾಲಯದಿಂದ ಆದೇಶ ಪಡೆದ ಮೇಲೆಯೇ ಹಾಗೆ ಮಾಡಬೇಕೆಂದು ನಿರ್ದೇಶಿಸಿತ್ತು.

ಆದರೂ ಮೇ 25ರಂದು ಎನ್‌ಐಎಯು ಅವರನ್ನು ರೈಲಿನಲ್ಲಿ ಮುಂಬಯಿಗೆ ಕೊಂಡೊಯ್ದು, ಮರುದಿನ ಅಲ್ಲಿನ ಎನ್‌ಐಎ ನ್ಯಾಯಾಲಯದಿಂದ ನ್ಯಾಯಾಂಗ ವಶದ ಆದೇಶ ಪಡೆಯಿತು. ಅಂದಿನಿಂದ ಅವರು ಮುಂಬಯಿಯ ಪೂರ್ವ ಭಾಗದಲ್ಲಿರುವ ತಲೋಜ ಜೈಲಿನಲ್ಲಿ ಇದ್ದಾರೆ.

ನವಲಖ ಅವರನ್ನು ಮುಂಬಯಿಗೆ ಕೊಂಡೊಯ್ದ ತರಾತುರಿಯ ಕ್ರಮದಿಂದ ಕಿರಿಕಿರಿಗೆ ಒಳಗಾದ ದಿಲ್ಲಿ ಹೈಕೋರ್ಟ್, ವರ್ಗಾವಣೆಯ ಸಂಪೂರ್ಣ ದಾಖಲೆ ಮತ್ತು ಮುಂಬಯಿಯ ಎನ್‌ಐಎ ನ್ಯಾಯಾಲಯ ನೀಡಿದ ವಾರಂಟ್ ಮಾತ್ರವಲ್ಲ, ದಿಲ್ಲಿಯ ಎನ್ಐಎ ನ್ಯಾಯಾಲಯ ನೀಡಿದ ವರ್ಗಾವಣೆ ಆದೇಶ ಮತ್ತು ಈ ನ್ಯಾಯಾಲಯಗಳಿಗೆ ಅವರ ವೈದ್ಯಕೀಯ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಾಗಿದೆಯೇ ಎಂಬ ಮಾಹಿತಿ ಸಲ್ಲಿಸುವಂತೆ ಆದೇಶಿಸಿತ್ತು.

ಇದಕ್ಕೆ ಜೂನ್ 3ರ ದಿನವನ್ನು ಹೈಕೋರ್ಟ್ ನಿಗದಿಪಡಿಸಿತ್ತು. ಆದರೆ, ಎನ್‌ಐಎಯು ಜೂನ್ 2ರಂದೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ದಿಲ್ಲಿ ಹೈಕೋರ್ಟಿನ ಪೀಠದ ವಿಚಾರಣೆಗೆ ತಡೆಯಾಜ್ಞೆ ಪಡೆಯಿತು. ಸುಪ್ರೀಂಕೋರ್ಟಿನ ಈ ತಡೆಯಾಜ್ಞೆಯು ದಿಲ್ಲಿ ಹೈಕೋರ್ಟ್ ತನ್ನ ಕಾರ್ಯವ್ಯಾಪ್ತಿಯ ಅಧೀನ ನ್ಯಾಯಾಲಯಗಳ ಮೇಲೆ ಹೊಂದಿರುವ ಅಧಿಕಾರವನ್ನೇ ಪ್ರಶ್ನಿಸಿರುವುದರಿಂದ ಕಾನೂನು ವಲಯದಲ್ಲಿ ಅನೇಕರ ಹುಬ್ಬುಗಳನ್ನು ಮೇಲೇರಿಸಿದೆ!

“ಭಾರತೀಯ ಸಂವಿಧಾನದ ಪ್ರಕಾರ ಹೈಕೋರ್ಟ್‌ಗಳೂ ಸಾಂವಿಧಾನಿಕ ನ್ಯಾಯಾಲಯಗಳಾಗಿದ್ದು, ಅವುಗಳ ಆಜ್ಞೆಗಳನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವಾಗ ಎರಡೂ ಕೋರ್ಟ್‌ಗಳು ಒಂದು ಸ್ಥಾನಮಾನ ಹೊಂದಿರುತ್ತವೆ ಮತ್ತು ಯಾವುದೇ ರೀತಿಯಲ್ಲಿ ಹೈಕೋರ್ಟ್‌ಗಳು ಸುಪ್ರೀಂಕೋರ್ಟ್‌ಗಿಂತ ಕೆಳಗೆ ಇಲ್ಲ. ತನ್ನ ಅಧೀನ ನ್ಯಾಯಾಲಯವು ಕಾನೂನು ನಿಯಮಗಳನ್ನು ಪಾಲಿಸಿದೆಯೇ, ಇಲ್ಲವೇ ಎಂದು ವಿಚಾರಿಸುವುದರಿಂದ ಹೈಕೋರ್ಟನ್ನು ತಡೆಯುವಂತಿಲ್ಲ” ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.


ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ತೇಲ್ತುಂಬ್ಡೆ ಹಾಗೂ ನವಲಖ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...