“ದ್ವೇಷದ ಮೂಲಕ ಸತ್ಯದ ಜ್ವಾಲೆಯನ್ನು ನಂದಿಸಲು ಬಿಡಬೇಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಗರಿಕರಿಗೆ ಮನವಿ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮರಾದ 76ನೇ ವರ್ಷದ ದಿನವಾದ ಇಂದು ರಾಹುಲ್ ಈ ಹೇಳಿಕೆ ನೀಡಿದ್ದಾರೆ.
ಎಕ್ಸ್ನಲ್ಲಿ ಮಹಾತ್ಮ ಗಾಂಧಿ ಹುತಾತ್ಮರಾದ ದಿನವನ್ನು ಸ್ಮರಿಸಿಕೊಂಡ ರಾಹುಲ್ ಗಾಂಧಿ, “ಈ ದಿನ, ದ್ವೇಷ ಮತ್ತು ಹಿಂಸೆಯ ಸಿದ್ಧಾಂತವು ನಮ್ಮ ಪ್ರೀತಿಯ ಬಾಪುವನ್ನು ಕಿತ್ತುಕೊಂಡಿತು. ಇಂದು ಅದೇ ಮನಸ್ಥಿತಿಯು ಅವರ ತತ್ವಗಳು ಮತ್ತು ಆದರ್ಶಗಳನ್ನು ನಮ್ಮಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.
आज ही के दिन नफ़रत और हिंसा की विचारधारा ने देश से उनके पूज्य बापू को छीना था।
और आज वही सोच उनके सिद्धांतों और आदर्शों को भी हमसे छीन लेना चाहती है।
पर नफ़रत की इस आंधी में, सत्य और सद्भाव की लौ को बुझने नहीं देना है।
यही गांधी जी को हमारी सच्ची श्रद्धांजलि होगी।… pic.twitter.com/qt10USBauj
— Rahul Gandhi (@RahulGandhi) January 30, 2024
“ದ್ವೇಷದ ಚಂಡಮಾರುತದಲ್ಲಿ, ಸತ್ಯ ಮತ್ತು ಸದ್ಭಾವನೆಯ ಜ್ವಾಲೆಯನ್ನು ನಂದಿಸಲು ನಾವು ಬಿಡಬಾರದು. ಇದು ನಿಜಕ್ಕೂ ಗಾಂಧೀಜಿ ಅವರಿಗೆ ನಾವು ಸಲ್ಲಿಸುವ ಪ್ರಾಮಾಣಿಕ ಗೌರವವಾಗಿದೆ” ಎಂದು ರಾಹುಲ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
“76 ವರ್ಷಗಳ ಹಿಂದೆ, ಈ ದಿನ ದ್ವೇಷವನ್ನು ಹರಡುವ ಶಕ್ತಿಗಳು ಮಹಾತ್ಮ ಗಾಂಧಿಯನ್ನು ಹತ್ಯೆಗೈದವು. ಗಾಂಧಿಯವರ ಸ್ಮರಣಾರ್ಥ ಇಂದು ಬೆಳಗ್ಗೆ ಬಿಹಾರದ ಅರಾರಿಯಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಶಿಬಿರದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಗಾಂಧಿಯ ಜೀವಿತಾವಧಿಯಲ್ಲಿ ಅವರನ್ನು ವಿರೋಧಿಸಿದ, ನಿರಾಕರಿಸಿದ ಮತ್ತು ಅಂತಿಮವಾಗಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಸಿದ್ಧಾಂತ ಮತ್ತು ಅದಕ್ಕೆ ಬದ್ಧವಾಗಿರುವವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಈಗ, ಅವರು ತಮ್ಮ ಪರಂಪರೆಯನ್ನು ಸರಿ ಎಂದು ರುಜು ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಮ್ಮ ಎಕ್ಸ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಿದ್ದಾರೆ.
76 साल पहले आज ही के दिन नफ़रत फ़ैलाने वाली शक्तियों ने महात्मा गांधी की हत्या कर दी थी। उन्हें याद करने के लिए आज सुबह बिहार के अररिया में भारत जोड़ो न्याय यात्रा के कैंप स्थल पर प्रार्थना सभा आयोजित की गई।
उस विचारधारा और उसे मानने वालों के ख़िलाफ़ हमारी लड़ाई जारी रहेगी,… pic.twitter.com/jJwaPteEIo
— Jairam Ramesh (@Jairam_Ramesh) January 30, 2024
ಸೋಮವಾರ ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ ಪಶ್ಚಿಮ ಬಂಗಾಳದಲ್ಲಿ ಪೂರ್ಣಗೊಂಡು ಮಂಗಳವಾರ ಬಿಹಾರಕ್ಕೆ ಪ್ರವೇಶಿಸಿದೆ.
ಜನತಾದಳ (ಯುನೈಟೆಡ್) ಅಧ್ಯಕ್ಷ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಭಾಗವಾಗಿದ್ದ ‘ಮಹಾಘಟಬಂಧನ್’ ಮೈತ್ರಿಯನ್ನು ಕೈಬಿಟ್ಟು ಬಿಜೆಪಿ ನೇತೃತ್ವದ ಎನ್ಡಿಎಗೆ ಮರಳಿದ ಕೇವಲ ಎರಡು ದಿನಗಳ ನಂತರ ಬಿಹಾರಕ್ಕೆ ರಾಹುಲ್ ಯಾತ್ರೆ ಕಾಲಿಟ್ಟಿರುವುದು ಮಹತ್ವ ಪಡೆದುಕೊಂಡಿದೆ.
ಇಂದು (ಜ.30) ರಾಹುಲ್ ಯಾತ್ರೆಯು ಬಿಹಾರದ ಅರಾರಿಯಾ ಜಿಲ್ಲೆಯ ಅಂಬೇಡ್ಕರ್ ಚೌಕ್ನಿಂದ ಪ್ರಾರಂಭಗೊಂಡಿದೆ. ಮಹಾತ್ಮಾ ಗಾಂಧಿ ಹುತಾತ್ಮರಾದ 76 ನೇ ವರ್ಷದ ದಿನದ ಅಂಗವಾಗಿ ಇಂದು ಬೆಳಗ್ಗೆ ಅರಾರಿಯಾದ ಭಾರತ್ ಜೋಡೋ ನ್ಯಾಯ ಯಾತ್ರೆಯ ಶಿಬಿರದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: ಯಾವುದೇ ಶಿಕ್ಷೆಯಾಗಿಲ್ಲ, ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ