ಮಣಿಪುರ ಜನಾಂಗೀಯ ಸಂಘರ್ಷವನ್ನು ಪರಿಹರಿಸದಿದ್ದರೆ, ಅದು ದೇಶಕ್ಕೆ ಭದ್ರತಾ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಭಾನುವಾರ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಎಚ್ಚರಿಸಿದ್ದಾರೆ.
ಪ್ರತಿಪಕ್ಷಗಳ INDIA ಮೈತ್ರಿಕೂಟದ ಸಂಸದರ ನಿಯೋಗವು ಮಣಿಪುರಕ್ಕೆ ಭೇಟಿ ನೀಡಿದ ನಂತರ ಅವರ ಅವಲೋಕನಗಳ ಕುರಿತು ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಜ್ಞಾಪಕ ಪತ್ರವನ್ನು ಸಲ್ಲಿಸಿತು.
ರಾಜ್ಯಪಾಲರೊಂದಿಗಿನ ಸಭೆಯ ಬಳಿಕ ರಾಜಭವನದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಚೌಧರಿ, ”ರಾಜ್ಯಪಾಲರಿಗೆ ನಮ್ಮ ಅವಲೋಕನಗಳ ಬಗ್ಗೆ ತಿಳಿಸಿದೆವು. ಅವರು ಕೂಡ ಅದಕ್ಕೆ ಒಪ್ಪಿಗೆ ನೀಡಿದರು. ಅವರು ಹಿಂಸಾಚಾರದ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಈ ಹಿಂಸಾಚಾರ ನಿಲ್ಲಬೇಕು ಎಂದರೆ ಜನರೊಂದಿಗೆ ಮಾತನಾಡಲು ಸರ್ವಪಕ್ಷ ನಿಯೋಗ ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು. ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಬೇಕು” ಎಂದು ಹೇಳಿದರು.
VIDEO | "MPs from the INDIA alliance met the Governor of Manipur and discussed the situation there. She agreed with us. It is necessary to resolve the issue together," says Congress MP @adhirrcinc after meeting Governor of Manipur Anusuiya Uikey. pic.twitter.com/YhFDWS4i0C
— Press Trust of India (@PTI_News) July 30, 2023
ಭೇಟಿ ನೀಡುವ ಸಂಸದರು ಮಣಿಪುರದ ಬಗ್ಗೆ ತಮ್ಮ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ಚೌಧರಿ ಹೇಳಿದರು.
ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಮಣಿಪುರ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದರು.
ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಜನಾಂಗೀಯ ಗಲಭೆಗಳ ಸಂತ್ರಸ್ತರನ್ನು ಭೇಟಿ ಮಾಡಲು 21 ಸಂಸದರ ಪ್ರತಿಪಕ್ಷಗಳ ನಿಯೋಗ ಶನಿವಾರ ಮಣಿಪುರಕ್ಕೆ ಆಗಮಿಸಿದೆ.
ತಮ್ಮ ಎರಡು ದಿನಗಳ ಪ್ರವಾಸದ ಮೊದಲ ದಿನ, ಅವರು ಇಂಫಾಲ್, ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಮತ್ತು ಚುರಾಚಂದ್ಪುರದ ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಮತ್ತು ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಿದರು.
ಚೌಧರಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪ ನಾಯಕ ಗೌರವ್ ಗೊಗೊಯ್ ಅವರಲ್ಲದೆ, ನಿಯೋಗದಲ್ಲಿ ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜಿ, ಡಿಎಂಕೆಯ ಕನಿಮೋಳಿ, ಆರ್ಎಲ್ಡಿಯ ಜಯಂತ್ ಚೌಧರಿ, ಆರ್ಜೆಡಿಯ ಮನೋಜ್ ಕುಮಾರ್ ಝಾ, ಆರ್ಎಸ್ಪಿ, ಜೆಡಿಯು ಮುಖ್ಯಸ್ಥ ಎನ್ಕೆ ಪ್ರೇಮಚಂದ್ರನ್ ಇದ್ದಾರೆ. ರಂಜನ್ (ಲಾಲನ್) ಸಿಂಗ್, ಅನೀಲ್ ಪ್ರಸಾದ್ ಹೆಗ್ಡೆ (ಜೆಡಿ-ಯು), ಸಿಪಿಐನ ಪಿ ಸಂತೋಷ್ ಕುಮಾರ್ ಮತ್ತು ಸಿಪಿಐ(ಎಂ) ನ ಎ ಎ ರಹೀಮ್ ಇತರರು.
ಮೇ 3 ರಿಂದ ಆರಂಭವಾದ ಈ ಮಣಿಪುರ ಹಿಂಸಾಚಾರದಲ್ಲಿ ಈವರೆಗೂ ಪ್ರತಿಭಟಿಸಲು 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಣಿಪುರ: ‘ಒಂದೇ ಸಭಾಂಗಣದಲ್ಲಿ 500 ಜನರು, ಸ್ನಾನಗೃಹವಿಲ್ಲ,’ -ಹೃದಯ ವಿದ್ರಾವಕವಾಗಿವೆ ಶಿಬಿರಗಳು; INDIA ನಿಯೋಗ