Homeಮುಖಪುಟಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

ಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

- Advertisement -
- Advertisement -

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ ಮಣಿಪುರದ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಆವಕಾಶ ಒದಗಿಸುತ್ತದೆ.

ಇತ್ತೀಚಿನ ವಾರಗಳಲ್ಲಿ ಮಣಿಪುರವು ಎದುರಿಸುತ್ತಿರುವ ಮಾನವೀಯ ದುರಂತ ಮತ್ತು ಸಾಮಾಜಿಕ ತಲ್ಲಣಗಳು- ವಿಭಜನಕಾರಿ ರಾಜಕಾರಣದ ಪರಿಣಾಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ವಿವರಣಾತ್ಮಕ ಜನಾಂಗೀಯ ಪರಿಭಾಷೆಯ ಗೊಂದಲ, ವಿವಿಧ ಸಮುದಾಯಗಳ ಮೂಲಗಳ ಕುರಿತು ದತ್ತಾಂಶ-ಮಾಹಿತಿಗಳ ಕೊರತೆ, ವೈಜ್ಞಾನಿಕವಾದ ಜನಗಣತಿ ನಡೆಯದೇ ಇರುವುದು ಸೇರಿದಂತೆ ಇನ್ನೂ ಹಲವು ಸಂಗತಿಗಳು ಈ ಬಿಕ್ಕಟ್ಟಿಗೆ ತಮ್ಮ ಪಾಲು ಸಲ್ಲಿಸಿವೆ.

ಇತ್ತೀಚಿನ ಹಿಂಸಾತ್ಮಕವಾದ ಘರ್ಷಣೆಗಳು ಮತ್ತು ರಕ್ತಪಾತವು ಮೈತೇಯಿ (Meitei ಅಥವಾ Meiteyi) ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಮುಂದಡಿಯಿಡಲು ಮಣಿಪುರ ಸರಕಾರಕ್ಕೆ ಅನುಮತಿ ನೀಡುವ ಹೈಕೋರ್ಟಿನ ನಿರ್ಧಾರದ ಪರಿಣಾಮವಾಗಿ ಉಂಟಾಯಿತು.

ಈ ಬೇಡಿಕೆ- ಮತ್ತು ಅದಕ್ಕೆ ಈಗಾಗಲೇ ಎಸ್‌ಟಿ ಸ್ಥಾನಮಾನ ಹೊಂದಿರುವ ಗುಂಪುಗಳ ತೀವ್ರ ವಿರೋಧವು- ರಾಜ್ಯದಲ್ಲಿರುವ ಗುಡ್ಡ-ಕಣಿವೆ ಪ್ರತ್ಯೇಕತೆಯಲ್ಲಿ ಮತ್ತು ಈ ಮೈತೇಯಿ ಸಮುದಾಯದವರು ಯಾರು ಎಂಬುದರ ಸುತ್ತ ಇರುವ ಗೊಂದಲದಲ್ಲಿ ದೊಡ್ಡ ಪಾತ್ರ ಹೊಂದಿದೆ.

ಮೈತೇಯಿ (ಮೈತೈ ಅಥವಾ ಮೈತ್‌ಯಿ ಎಂದೂ ಕರೆಯಲಾಗುತ್ತದೆ) ಎಂಬುದು ಸಾಮಾನ್ಯವಾಗಿ ಮಣಿಪುರದ ನಿವಾಸಿಗಳನ್ನು ಕರೆಯಲಾಗುವ ಜನಜನಿತ ಹೆಸರು. ಮಣಿಪುರದಲ್ಲಿ ಮುಖ್ಯವಾಗಿ ಮಾತನಾಡಲಾಗುವ ಭಾಷೆ ಮಣಿಪುರಿ ಮತ್ತು ಅದು ರಾಜ್ಯದ ಅಧಿಕೃತ ಭಾಷೆಯೂ ಹೌದು. ಮತ್ತಿದು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾಷೆಯೂ ಕೂಡಾ.

ಆದರೆ, ಮಣಿಪುರಿ ಭಾಷೆಯನ್ನು ಮಣಿಪುರ ಮಾತ್ರವಲ್ಲದೇ, ಅಸ್ಸಾಂ, ತ್ರಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ಹಾಗೂ ನೆರೆಯ ದೇಶಗಳಾದ ಮಯನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿಯೂ ಮಾತನಾಡಲಾಗುತ್ತದೆ. ಈ ಸಮಾನಾತ್ಮಕವಾದ ಅಂಶವು- ಮಣಿಪುರಿ ಭಾಷೆಯನ್ನು ಮಾತನಾಡುವ ಎಲ್ಲರೂ ಮೈತೇಯಿಗಳು ಎಂಬ ಭಾವನೆಯನ್ನು ಮೂಡಿಸುತ್ತದೆ. ’ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ- ಲೇಖಕರು ಇದರ ಸ್ಥಾಪಕರು)ದ ’ದಿ ಲ್ಯಾಂಗ್ವೇಜಸ್ ಆಫ್ ಮಣಿಪುರ್’ (ಮಣಿಪುರದ ಭಾಷೆಗಳು) ನೀಡಿರುವ ಪರಿಚಯದ ಪ್ರಕಾರ, ಮಣಿಪುರವು, ಸ್ವಭಾವತಃ ಬಹುಭಾಷೆಗಳ, ಹಲವು ಬುಡಕಟ್ಟುಗಳ, ಬಹುಸಂಸ್ಕೃತಿಗಳ ಒಂದು ರಾಜ್ಯ.

ಈ ರಾಜ್ಯದ ಕಣಿವೆಯನ್ನು ಬಿಷ್ಣುಪುರ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಎಂಬ ನಾಲ್ಕು ಆಡಳಿತಾತ್ಮಕ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಅದೇ ರೀತಿಯಲ್ಲಿ, ಗುಡ್ಡಗಾಡು (ಅಥವಾ ಬೆಟ್ಟಗಳನ್ನು) ಪ್ರದೇಶವನ್ನು ಚಂದೇಲ್, ಚೂರಾಚಂದ್‌ಪುರ್, ಸೇನಾಪತಿ, ತಮೆಂಗ್‌ಲಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ರಾಜ್ಯದ ಭೂಪ್ರದೇಶವು 22,327 ಚದರ ಕಿ.ಮೀ. ವಿಸ್ತಾರವಾಗಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ, ವಿವಿಧ ಸಂಸ್ಕೃತಿಗಳನ್ನು ಅನುಸರಿಸುವ ಮೂರು ಡಜನ್ನಿಗೂ ಹೆಚ್ಚು ಬುಡಕಟ್ಟುಗಳಿಗೆ ಮನೆಯಾಗಿದೆ.

ರಾಜ್ಯವು ಮುಖ್ಯವಾಗಿ ಮೈತೇಯಿ, ಕುಕಿ ಮತ್ತು ನಾಗಾಗಳ ವಾಸಸ್ಥಾನವಾಗಿದ್ದು, ಅವು ಟಿಬೆಟೋ-ಬರ್ಮನ್ ಭಾಷಾ ಗುಂಪುಗಳಿಗೆ ಸೇರಿವೆ. ಇನ್ನಷ್ಟು ಪರಿಶೀಲನೆ ನಡೆಸಿದಲ್ಲಿ, ಪೂರ್ವ ಇಂಫಾಲ್ ಜಿಲ್ಲೆಯ ಜಿರಿಬಾಮ್ ಉಪವಿಭಾಗದಲ್ಲಿ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳನ್ನು ಮಾತನಾಡುವವರನ್ನೂ, ಚಂದೇಲ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮೊರೆಹ್ ಪಟ್ಟಣದಲ್ಲಿ ದ್ರಾವಿಡ ಭಾಷೆ ಮಾತಾಡುವವರನ್ನೂ, ರಾಜಧಾನಿ ಇಂಪಾಲ್‌ನಲ್ಲಿ ಹೆಚ್ಚಾಗಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವವರನ್ನೂ ಕಾಣಬಹುದು.

ರಾಜ್ಯದ ಒಳಗೆ ಮಣಿಪುರಿಯನ್ನು ಜನವಾಸವಿರುವ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ರೂಪಗಳಲ್ಲಿ ಮಾತನಾಡಲಾಗುತ್ತದೆ. ಈ ರೂಪಗಳ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ವ್ಯವಹಾರಗಳಲ್ಲಿ ಮೂರು ಲಿಪಿಗಳನ್ನು ಬಳಸಲಾಗುತ್ತದೆ- ಬಂಗಾಳಿ ಲಿಪಿ, ಮೈತೇಯಿ-ಮಾಯೆಕ್ ಲಿಪಿ ಮತ್ತು ರೋಮನ್ ಲಿಪಿ. ಮೈತೇಯಿಗಳು ಬಾಂಗ್ಲಾ (ಬಂಗಾಳಿ) ಲಿಪಿಯನ್ನು ಬಳಸಲು ಆರಂಭಿಸುವುದಕ್ಕೆ ಮೊದಲು ಬರವಣಿಗೆಗೆ ಮೈತೇಯಿ-ಮಾಯೆಕ್ ಲಿಪಿಯನ್ನು ಬಳಸುತ್ತಿದ್ದರು. ಇಂದು, ಸ್ಥಳೀಯ ಎಂದು ಪರಿಗಣಿಸಲಾಗುತ್ತಿರುವ ಮೈತೇಯಿ-ಮಾಯೆಕ್ ಲಿಪಿಯು ಸರಕಾರಿ ಮತ್ತು ಸರಕಾರೇತರ ವ್ಯವಹಾರಗಳಲ್ಲಿ ಬಳಕೆಯಲ್ಲಿ ಮತ್ತೆ ತನ್ನ ನೆಲೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.

ಕೆಲವು ಮೈತೇಯಿ ಸಮುದಾಯಗಳನ್ನು (ಮೈತೇಯಿ ಒಂದು ಏಕರೂಪಿ-ಏಕ ಮೂಲದ ಸಮುದಾಯವಲ್ಲ) ಈಗಾಗಲೇ ಪರಿಶಿಷ್ಟ ಬುಡಕಟ್ಟು ಆಥವಾ ಇತರೆ ಹಿಂದುಳಿದ ವರ್ಗಗಳ ಗುಂಪುಗಳಿಗೆ ಸೇರಿಸಲಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಮಹಾರಾಷ್ಟ್ರದೊಂದಿಗೆ ಹೋಲಿಸಿದರೆ, ಬೇರೆ ರಾಜ್ಯದವರು ಮಣಿಪುರದಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮರಾಠ ಎಂಬುದು ಹಲವು ಜಾತಿ-ಉಪಜಾತಿ, ಜನಾಂಗಿಯ ಗುಂಪುಗಳನ್ನು ಹೊಂದಿರುವ ಒಂದು ಸಾಮಾನ್ಯ ಸಮುದಾಯ. ಅದಕ್ಕೆ ಹೊರತಾಗಿ, ಸಾಮಾನ್ಯವಾಗಿ- ಅದರಲ್ಲೂ ವಿಶೇಷವಾಗಿ ವಸಾಹತುಶಾಹಿ ಕಾಲಘಟ್ಟದ ಸಾಂಸ್ಕೃತಿಕ ಬರಹಗಳಲ್ಲಿ ’ಮರಾಠ’ ಮತ್ತು ’ಮಹಾರಾಷ್ಟ್ರ’ ಎಂಬುದನ್ನು ಜೊತೆಜೊತೆಗೇ ಸೇರಿಸಲಾಗಿದೆ. ಆದರೆ, ಎಲ್ಲಾ ಮಹಾರಾಷ್ಟ್ರೀಯರು ಮರಾಠರಲ್ಲ ಅಥವಾ ಮರಾಠಿ ಭಾಷೆ ಮಾತನಾಡುವವರೆಲ್ಲರೂ ಮರಾಠರಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಆದುದರಿಂದ ಎಸ್‌ಸಿ ಸ್ಥಾನಮಾನ ನೀಡಬೇಕೆಂಬ ಮೈತೇಯಿಗಳ ಬೇಡಿಕೆಯನ್ನು ಮಹಾರಾಷ್ಟ್ರದ ಮರಾಠ ಆರಕ್ಷಣ್ (ಮೀಸಲಾತಿ) ಮೋರ್ಚಾ ಮತ್ತು ರಾಜಸ್ಥಾನದ ಜಾಟ್ ಮೀಸಲಾತಿ ಆಂದೋಲನಗಳಿಗೆ ಹೋಲಿಸಬಹುದು.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?: ಜೈರಾಮ್ ರಮೇಶ್ ಪ್ರಶ್ನೆ

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಈ ಗಲಭೆಗಳ ಪ್ರಾಥಮಿಕ ಜವಾಬ್ದಾರಿಯು ಆಳುವ ಸರಕಾರದ ಹೆಗಲೇರುತ್ತದೆ. ಭಾರತೀಯ ಜನತಾ ಪಕ್ಷವು 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಮಣಿಪುರದಲ್ಲಿ ಸರಕಾರ ರಚಿಸಿತ್ತು. ಸಂಯುಕ್ತ ಜನತಾ ದಳ (ಜೆಡಿ-ಯು) ಆರು ಸ್ಥಾನಗಳನ್ನು ಗೆದ್ದಿತ್ತು. ಇದೀಗ ಜೆಡಿ-ಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ (ಎನ್‌ಡಿಎ) ಹೊರಬಂದಿರುವುದರಿಂದ ಬಿಜೆಪಿಯು ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಚುನಾವಣಾ ಯಶಸ್ಸನ್ನು ಖಾತರಿಪಡಿಸಿಕೊಳ್ಳಲು ಅದು ಮೈತೇಯಿಗಳಿಗೆ ಮೀಸಲಾತಿ ಕೊಡಮಾಡುವುದರ ಜೊತೆಗೆ, ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಎಂದಿನ ಮಾಮೂಲಿ ತಂತ್ರವನ್ನು ಅನುಸರಿಸಿದೆ.

ಈ ಆಳುವ ಸರಕಾರವು ಪ್ರಾಮಾಣಿಕವಾಗಿ ಬಹುಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದೇ ಆಗಿದ್ದಲ್ಲಿ-ಅದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿಷಯವಾಗಿರುವ- ರಾಜ್ಯಮಟ್ಟದ ಸಮುದಾಯಗಳ ಗಣತಿಯನ್ನು ನಡೆಸುತ್ತಿತ್ತು. ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ- ಯಾರ ಹೆಸರಿನಲ್ಲಿ ಅವರು ಅಧಿಕಾರ ಬಯಸುತ್ತಾರೋ, ಅದೇ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಅವಕಾಶ ಒದಗಿಸುತ್ತದೆ.

ಮಣಿಪುರವು ಬಹಳ ದೀರ್ಘಕಾಲದಿಂದಲೂ ಭಾರೀ ಮಿಲಿಟರಿ ಪಡೆಯ ಅಸ್ತಿತ್ವ ಹೊಂದಿರುವ ನಾಗರಿಕ ಪ್ರದೇಶವಾಗಿದೆ. ತೀವ್ರವಾದ ಸ್ವತಂತ್ರ ಮನೋಭಾವದ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿರುವ ಇಲ್ಲಿನ ಜನರ ಮೇಲೆ, ಕೇಂದ್ರ ಸರಕಾರದ ತನ್ನಿಚ್ಛೆಗಳನ್ನು ಹೇರುವುದರ ವಿರುದ್ಧ ದೀರ್ಘಕಾಲದ ಪ್ರತಿಭಟನೆಗಳೂ ಇಲ್ಲಿ ನಡೆಯುತ್ತಾ ಬಂದಿವೆ. ಒಂದು ವೈಜ್ಞಾನಿಕವಾದ ಜನಗಣತಿಯು ಭವಿಷ್ಯದ ರಾಜ್ಯಾಡಳಿತಕ್ಕೆ ಮಣಿಪುರದ ಹಲವು ಜನಾಂಗೀಯ ಮತ್ತು ಭಾಷಾ ಸಮುದಾಯಗಳ ಅಗತ್ಯಗಳನ್ನು ಅಂದಾಜು ಮಾಡಲು ನೆರವಾಗುತ್ತದೆ. ಆದರೆ, ಅಧಿಕಾರದ ಲಾಲಸೆ ಹೊತ್ತಿರುವ ವಿಭಜನಕಾರಿ ರಾಜಕೀಯವು ಅದಕ್ಕೆ ಅವಕಾಶ ನೀಡುವುದಿಲ್ಲ.

ಈ ಹೊತ್ತಿನಲ್ಲಿ ಮಣಿಪುರವು ಬಹುದೊಡ್ಡ ಮಾನವೀಯ ದುರಂತವನ್ನು ಎದುರಿಸುತ್ತಿದೆ. ಅದಕ್ಕೆ- ಸಂತ್ರಸ್ತರ ಜನಾಂಗ, ಭಾಷೆ, ಧರ್ಮಗಳನ್ನು ಮೀರಿ- ಸಮಾಧಾನ, ಆರೈಕೆ, ಕಾಳಜಿಯ ಆಗತ್ಯವಿದೆ. ಆದರೆ, ದೂರಗಾಮಿಯಾಗಿ, ಅದಕ್ಕೆ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಾದ ಅಗತ್ಯವೇನೂ ಇಲ್ಲ. ಅದಕ್ಕೆ ಬೇಕಾಗಿರುವುದು ಯಾವುದೆಂದರೆ ಮತ್ತು ಅದು ಅರ್ಹವಾಗಿರುವುದು ಯಾವುದಕ್ಕೆಂದರೆ, ಸರಿಯಾದ ಸಾಮಾಜಿಕ ತಿಳಿವಳಿಕೆ ಮತ್ತು ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಂಡಿರುವಂಥ ಒಂದು ಸರಕಾರ. ವಿಭಜನಕಾರಿ ರಾಜಕೀಯವು ಈ ಸುಂದರ ರಾಜ್ಯವನ್ನು ಇನ್ನಷ್ಟು ಸಂಕಷ್ಟ, ನೋವು ಮತ್ತು ದುಃಖಕ್ಕೆ ತಳ್ಳಬಹುದು.

ಜಿ.ಎನ್.ದೇವಿ ಮತ್ತು ನಿಪುಣಿ ಕೆ. ಮಾಓ
(ಗಣೇಶ್ ಎನ್. ದೇವಿಯವರು ಭಾಷಾ ವಿದ್ವಾಂಸರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ- ಪಿಎಲ್‌ಎಸ್‌ಐದ ಸ್ಥಾಪಕರು. ನಿಪುಣಿ ಕೆ. ಮಾಓ ಅವರು ಮಣಿಪುರ ’ಪಿಎಲ್‌ಎಸ್‌ಐ’ಯ ಸಂಪಾದಕರು.)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...