Homeಮುಖಪುಟಭಾರತದಲ್ಲಿ ಸಂಪತ್ತಿನ ಅಸಮಾನತೆಯಲ್ಲಿ ಐತಿಹಾಸಿಕ ಮಟ್ಟದಲ್ಲಿ ಹೆಚ್ಚಳ: ವರದಿ

ಭಾರತದಲ್ಲಿ ಸಂಪತ್ತಿನ ಅಸಮಾನತೆಯಲ್ಲಿ ಐತಿಹಾಸಿಕ ಮಟ್ಟದಲ್ಲಿ ಹೆಚ್ಚಳ: ವರದಿ

- Advertisement -
- Advertisement -

ಪ್ಯಾರಿಸ್ ಮೂಲದ ವಿಶ್ವ ಅಸಮಾನತೆಯ ಪ್ರಯೋಗಾಲಯವು(World Inequality Lab) ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ, 1922-2023: ದಿ ರೈಸ್ ಆಫ್ ದಿ ಬಿಲಿಯನೇರ್ ರಾಜ್ ಎಂಬ ಶೀರ್ಷಿಕೆಯಡಿ ವರದಿಯನ್ನು ಬಹಿರಂಗಪಡಿಸಿದ್ದು, ಭಾರತದಲ್ಲಿ ಸಂಪತ್ತಿನ ಅಸಮಾನತೆಯಲ್ಲಿ ಐತಿಹಾಸಿಕವಾಗಿ ಹೆಚ್ಚಳವಾಗಿದೆ ಎಂದು ಹೇಳಿದೆ.

ಭಾರತದ ಜನಸಂಖ್ಯೆಯ ಅಗ್ರ ಶೇ.1ರಷ್ಟು ಜನರು ದೇಶದ ಆದಾಯದ ಹೆಚ್ಚಿನ ಪಾಲು ಹೊಂದಿದ್ದಾರೆ ಎಂದು ವರ್ಲ್ಡ್ ಇನ್ಈಕ್ವಾಲಿಟಿ ಲ್ಯಾಬ್ (ಡಬ್ಲ್ಯುಐಎಲ್)ನ ಅಧ್ಯಯನ ವರದಿಯು ಹೇಳಿದ್ದು, ಒಟ್ಟು ಆದಾಯ ಮತ್ತು ಸಂಪತ್ತಿನಲ್ಲಿ ಅಗ್ರ 1% ಭಾರತೀಯರ ಪಾಲು 2022-23ರಲ್ಲಿ ಅದರ ಅತ್ಯಧಿಕ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.

World Inequality Lab 1922 ಮತ್ತು 2022ರ ನಡುವಿನ ಡೇಟಾವನ್ನು ವಿಶ್ಲೇಷಿಸಿದೆ. ಈ ವೇಳೆ ಸಂಪತ್ತಿನ ಅಸಮಾನತೆಯು ಐತಿಹಾಸಿಕ ಮಟ್ಟದಲ್ಲಿವೆ. ಇದು ಎಷ್ಟರ ಮಟ್ಟಿಗೆ ಎಂದರೆ ಬ್ರಿಟಿಷರ್ ವಶಾಹತು ಶಾಹಿ ಆಡಳಿತಕ್ಕಿಂತ ಹೆಚ್ಚು ಅಸಮಾನವಾಗಿದೆ ಎಂದು ಹೇಳಿದೆ.

2000 ವಿಷವಿಯ ಆರಂಭದಿಂದಲೂ ಭಾರತದಲ್ಲಿ ಸಂಪತ್ತಿನ ಅಸಮಾನತೆ ಗಗನಕ್ಕೇರಿದೆ, 2022-23ರಲ್ಲಿ ಅಗ್ರ 1 ಶೇಕಡಾ ಜನಸಂಖ್ಯೆಯ ಆದಾಯ ಮತ್ತು ಸಂಪತ್ತಿನ ಪಾಲು ಅನುಕ್ರಮವಾಗಿ ಶೇಕಡಾ 22.6 ಮತ್ತು ಶೇಕಡಾ 40.1ಕ್ಕೆ ಏರಿದೆ. 1980ರ ದಶಕದಿಂದ ಭಾರತದಲ್ಲಿ ಅಸಮಾನತೆಯು ತೀವ್ರವಾಗಿ ಹೆಚ್ಚುತ್ತಿದೆ ಮುಖ್ಯವಾಗಿ 2014-15 ಮತ್ತು 2022-23ರ ನಡುವೆ ಸಂಪತ್ತಿನ ಕೇಂದ್ರೀಕರಣದ ವಿಷಯದಲ್ಲಿ ಅಸಮಾನತೆಯ ಹೆಚ್ಚಳವನ್ನು ಗಮನಿಸಿದೆ.

ಈ ಕುರಿತು ಪ್ರಬಂಧವನ್ನು ಥಾಮಸ್ ಪಿಕೆಟ್ಟಿ (ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವರ್ಲ್ಡ್ ಇನ್ಈಕ್ವಾಲಿಟಿ ಲ್ಯಾಬ್), ಲ್ಯೂಕಾಸ್ ಚಾನ್ಸೆಲ್ (ಹಾರ್ವರ್ಡ್ ಕೆನಡಿ ಸ್ಕೂಲ್ ಮತ್ತು ವರ್ಲ್ಡ್‌ ಇನ್ಈಕ್ವಾಲಿಟಿ ಲ್ಯಾಬ್) ಮತ್ತು ನಿತಿನ್ ಕುಮಾರ್ ಭಾರ್ತಿ (ನ್ಯೂಯಾರ್ಕ್ ವಿಶ್ವವಿದ್ಯಾಲಯ ಮತ್ತು ವರ್ಲ್ಡ್ ಇನ್ಈಕ್ವಾಲಿಟಿ ಲ್ಯಾಬ್) ಸಿದ್ದಪಡಿಸಿದ್ದಾರೆ.

1980ರ ದಶಕದ ಆರಂಭದಲ್ಲಿ, ಭಾರತ ಸರ್ಕಾರವು 1991ರಲ್ಲಿ ಉದಾರೀಕರಣಕ್ಕೆ ಕಾರಣವಾದ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದಾಗ, ಅಗ್ರ 1 ಶೇಕಡಾ ಆದಾಯದ ಷೇರುಗಳಲ್ಲಿನ ಕುಸಿತವು ಸ್ಥಗಿತಗೊಂಡಿತ್ತು. 1990ರ ದಶಕದ ಆರಂಭದಲ್ಲಿ, ಅಗ್ರ 1 ಶೇಕಡಾ ಆದಾಯದ ಷೇರುಗಳು ಮುಂದಿನ 30 ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚಿದ್ದು, 2022ರಲ್ಲಿ ಸಾರ್ವಕಾಲಿಕ ಗರಿಷ್ಠ 22.6 ಶೇಕಡಾವನ್ನು ತಲುಪಿದೆ. ಅಸಮಾನತೆಯು ಸ್ವಾತಂತ್ರ್ಯದ ನಂತರ 1980ರ ದಶಕದ ಆರಂಭದವರೆಗೆ ಕಡಿಮೆಯಾಯಿತು, ನಂತರ ಅದು ಏರಲು ಪ್ರಾರಂಭಿಸಿತು ಮತ್ತು 2000 ವಿಷವಿಯ ಆರಂಭದಿಂದ ಗಗನಕ್ಕೇರಿದೆ.

ಆದಾಯಗಳು ಮತ್ತು ಸಂಪತ್ತಿನ ಅತಿಯಾದ ಕೇಂದ್ರೀಕರಣವು ಸಮಾಜ ಮತ್ತು ಸರಕಾರದ ಮೇಲೆ ಅಸಮಾನ ಪ್ರಭಾವಕ್ಕೆ ಕಾರಣವಾಗಬಹುದು ಎಂದು ವರದಿ ಹೇಳಿದ್ದು,ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯ ವಿವಿಧ ಪ್ರಮುಖ ಸಂಸ್ಥೆಗಳ ಋಜುತ್ವವು ರಾಜಿ ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಇದು ಭಾರತವು ಶ್ರೀಮಂತ ಪ್ರಭುತ್ವದತ್ತ ಜಾರುವ ಸಾಧ್ಯತೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿದೆ ಎಂದು ಹೇಳಿದೆ. ಆದಾಯ ಮತ್ತು ಸಂಪತ್ತು ಎರಡನ್ನೂ  ಲೆಕ್ಕ ಹಾಕಲು ತೆರಿಗೆ ಸಂಹಿತೆಯ ಪುನರ್ರಚನೆ ಅಗತ್ಯವಾಗಿದೆ ಎಂದು ವರದಿಯು ತಿಳಿಸಿದೆ.

ಪತ್ರಿಕೆಯ ಸಂಶೋಧನೆ ಪ್ರಬಂಧ ಪ್ರಕಟದ ಬೆನ್ನಲ್ಲಿ 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರಕಾರವನ್ನು ಟೀಕಿಸಿದ ಕಾಂಗ್ರೆಸ್, ಕೇಂದ್ರದ ತನ್ನ ಸರ್ಕಾರವು ಬಡತನವನ್ನು ನಿರ್ಮೂಲನೆ ಮಾಡಲು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರಿಗೆ ಆದಾಯ ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ಅವಿರತವಾಗಿ ಕೆಲಸ ಮಾಡಿದೆ ಎಂದು ಬಿಜೆಪಿ ಸುಳ್ಳು ಹೇಳಿದೆ ಎಂದು ಟೀಕಿಸಿದೆ.

ಇದನ್ನು ಓದಿ: ಯೋಗಿ ಆದಿತ್ಯನಾಥ್‌ಗೆ ಶ್ಲಾಘಿಸಿ, ಮುಸ್ಲಿಮರ ವಿರುದ್ಧ ದ್ವೇಷ ಪೂರಿತ ಹೇಳಿಕೆ: ಬರೇಲಿ ಕೋರ್ಟ್ ಜಡ್ಜ್‌ಗೆ ಹೈಕೋರ್ಟ್‌ ತರಾಟೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...