Homeಕರ್ನಾಟಕಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಫ್ಯಾಕ್ಟ್‌ಚೆಕ್‌: ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ

- Advertisement -
- Advertisement -

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣವನ್ನು ಇಬ್ಬರು ಬಾಲಕಿಯರು ದಾಖಲಿಸಿದರು. ಸ್ವಾಮೀಜಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪ್ರಕರಣ ದಾಖಲಾಗಲು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಪ್ರಮುಖ ಪಾತ್ರ ವಹಿಸಿತು. ಸಂತ್ರಸ್ತ ಮಕ್ಕಳು ಒಡನಾಡಿಯ ಕದ ತಟ್ಟಿದ್ದರಿಂದ ಪ್ರಕರಣ ಹೊರಬಂತು.

ಪ್ರಭಾವಿ ಮಠಾಧೀಶರೊಬ್ಬರ ಮೇಲೆ ಗುರುತರವಾದ ಆರೋಪ ಬಂದ ಬಳಿಕ, ಒಡನಾಡಿ ಸೇವಾ ಸಂಸ್ಥೆಯನ್ನು ದೂಷಿಸುವ ಕೆಲಸವಾಗುತ್ತಿದೆ. ಒಡನಾಡಿಯ ರೂವಾರಿಗಳಾದ ಪರಶು ಹಾಗೂ ಸ್ಟ್ಯಾನ್ಲಿ ಅವರ ಮೇಲೆ ಗುರುತರ ಆರೋಪಗಳನ್ನು ಹೊರಿಸಲಾಗುತ್ತಿದೆ. ಕಳೆದ ಮೂವತ್ತೆರಡು ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ವಿಚಾರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಬೆದರಿಕೆ ಕರೆಗಳೂ ಬರುತ್ತಿರುವ ಕುರಿತು ದೂರು ದಾಖಲಾಗಿದೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಮತಾಂತರ ಮಾಡುವುದೇ ಒಡನಾಡಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಾಗಿದೆ. ಒಡನಾಡಿಗೆ ಹೊರದೇಶಗಳಿಂದ ಹಣ ಬರುತ್ತಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮತಾಂತರ ಹಾಗೂ ಹೊರದೇಶಗಳಿಂದ ಬರುತ್ತಿರುವ ಹಣದ ಕುರಿತ ಆರೋಪಗಳ ಹಿಂದಿನ ಸತ್ಯಗಳೇನು ಎಂದು ತಿಳಿಯಲು ‘ಒಡನಾಡಿ’ ಸಂಸ್ಥೆಯನ್ನು ಹಾಗೂ ‘ಒಡನಾಡಿ’ಯಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಈಗ ಬಂದಿರುವ ಆರೋಪಗಳಿಗೆ ಕಟುಟೀಕೆಗಳನ್ನು ಒಡನಾಡಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರೆ, ಸ್ಟ್ಯಾನ್ಲಿಯವರು ವಿದೇಶದಿಂದ ಹಣದ ಕುರಿತು ಸ್ಪಷ್ಟನೆಗಳನ್ನು ನೀಡಿದರು.

ಈಗ ಕರಾಟೆ ಟೀಚರ್‌ ಆಗಿ ಕೆಲಸ ಮಾಡುತ್ತಿರುವ ‘ಮೋಹನ ಕುಮಾರಿ’ ಎಂಬವರು ಒಡನಾಡಿಯಲ್ಲಿ ಬೆಳೆದವರು. ಚಿಕ್ಕವಯಸ್ಸಿನಲ್ಲಿಯೇ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಮೋಹನಕುಮಾರಿಯನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಒಡನಾಡಿಗೆ ತಂದು ಬಿಟ್ಟರು. ಒಡನಾಡಿಯಲ್ಲಿ ಬೆಳೆದು, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, “ನನಗೆ ತಂದೆ ತಾಯಿ ಇಲ್ಲ ಎಂಬ ನೋವು ಎಂದಿಗೂ ಕಾಡಲಿಲ್ಲ. ಮುಂದೆಯೂ ಕಾಡಲ್ಲ. ಪರಶು ಅಣ್ಣ ಹಾಗೂ ಸ್ಟ್ಯಾನ್ಲಿ ಅಣ್ಣನೇ ನನಗೆ ಸ್ಫೂರ್ತಿ. ನಮ್ಮ ಆಯ್ಕೆಗಳಿಗೆ ಸಂಪೂರ್ಣ ಸ್ವತಂತ್ರ ನೀಡಿದರು. ಇಂಥದ್ದನ್ನೇ ಮಾಡಬೇಕು, ಹೀಗೆ ಇರಬೇಕು ಎಂದು ಯಾವತ್ತೂ ನಿರ್ಬಂಧ ಹೇರಲಿಲ್ಲ” ಎಂದರು.

ಇದನ್ನೂ ಓದಿರಿ: ಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್‌ ಆರೋಪ

“ಮತ ಎಂಬ ಪದವನ್ನು ನಾನು ಒಡನಾಡಿಯಲ್ಲಿ ಕೇಳಿಯೇ ಇರಲಿಲ್ಲ. ಶಾಲೆಗೆ ಸೇರಿದ ಬಳಿಕವೇ ಈ ಧರ್ಮ, ಜಾತಿ ಎಂಬ ಪದಗಳನ್ನು ನಾನು ಮೊದಲ ಬಾರಿಗೆ ಕೇಳಿದ್ದು. ಯಾವುದೇ ದಾಖಲಾತಿಯಲ್ಲಿ ನನ್ನ ಜಾತಿ ಯಾವುದೆಂದು ನಮೂದಿಸಿಲ್ಲ. ಮಾನವ ಧರ್ಮವೇ ಮುಖ್ಯವೆಂದು ಕಲಿಸಿದವರು ನಮ್ಮ ಅಣ್ಣಂದಿರು. ಜಾತಿ, ಮತದ ಬಗ್ಗೆ ಕೂತು ಎಂದಿಗೂ ಒಡನಾಡಿಯಲ್ಲಿ ಚರ್ಚೆ ಮಾಡಿದ್ದೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಧರ್ಮಾಚರಣೆ ಮಾಡುತ್ತೇನೆಂದರೂ ನಮ್ಮ ಅಣ್ಣಂದಿರು ತಡೆ ನೀಡುವವರಲ್ಲ. ಮೈಂಡ್ ವಾಶ್‌ ಮಾಡಿದವರಲ್ಲ. ಜನರನ್ನು ನೋಡುತ್ತಾ, ಶಾಲೆಗೆ ಹೋಗುತ್ತಾ ಈ ಜಾತಿ, ಧರ್ಮ ಅನ್ನೋದು ಹೇಗಿದೆ? ಸಮಾಜವನ್ನು ಹೇಗೆ ಬಾಧಿಸುತ್ತಿವೆ? ಎಂಬುದನ್ನು ತಿಳಿದುಕೊಂಡೆವು. ನಮಗೆ ವಿಶಾಲ ಬದುಕನ್ನು ಕಲಿಸಿದ್ದು ಒಡನಾಡಿ. ನನ್ನ ವಿವಾಹವೂ ಸರಳವಾಗಿ ಆಯಿತು. ರಾಷ್ಟ್ರಕವಿ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ನನ್ನ ವಿವಾಹವನ್ನು ಮಾಡಿಕೊಡಲಾಯಿತು” ಎಂದು ತಿಳಿಸಿದರು.

ಒಡನಾಡಿಯಲ್ಲೇ ಬೆಳೆದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಮತ್ತೊಬ್ಬ ವಿದ್ಯಾರ್ಥಿನಿ ಸರಸ್ವತಿ. ಕರಾಟೆ, ರಂಗಭೂಮಿ, ಯೋಗ ಮೊದಲಾದ ಕ್ಷೇತ್ರಗಳಲ್ಲಿ ಮೈಸೂರಿನಲ್ಲಿ ಸಕ್ರಿಯವಾಗಿರುವ ಅವರು ಒಡನಾಡಿಯ ಜೊತೆಗಿನ ಅನುಭವಗಳನ್ನು ಹಂಚಿಕೊಂಡರು.

“ಯಾವುದೇ ಧರ್ಮದ ಸೀಮಿತ ಚೌಕಟ್ಟನ್ನು ನಮ್ಮ ಒಡಿನಾಡಿಯಲ್ಲಿ ನಾನು ನೋಡಿಲ್ಲ. ಮಾನವ ಧರ್ಮವೇ ಮುಖ್ಯವಾಗಿತ್ತು. ಹಿಂದೂ ವಿರೋಧಿ ಎಂಬುದೆಲ್ಲ ಸುಳ್ಳು. ನಾನು ಸ್ಟಿಕ್ಟರ್‌ ಹಾಕುತ್ತೇನೆ, ಕುಂಕುಮ ಇಡುತ್ತೇನೆ. ಇದಕ್ಕೆ ಯಾವತ್ತೂ ತಡೆ ನೀಡಿದವರಲ್ಲ. ಬಳೆ ತಗೆದುಕೊಳ್ಳಿ ಎಂದು ಗೌರಿ ಹಬ್ಬದ ಸಂದರ್ಭದಲ್ಲಿ ನಮ್ಮ ಅಣ್ಣಂದಿರು ನಮಗೆ ದುಡ್ಡು ಕೊಡುತ್ತಿದ್ದರು. ಯಾವುದೇ ಧರ್ಮಕ್ಕೆ ನಮ್ಮನ್ನು ಅವರು ಅಂಟಿಹಾಕಲಿಲ್ಲ. ನಮ್ಮ ಪ್ರತಿದಿನದ ಪ್ರಾರ್ಥನೆಯೇ ಮಾನವತೆಯನ್ನು ಸಾರುವಂತಿದೆ. ಮನುಷ್ಯತ್ವ ಇರುವ ಮನಸ್ಸೇ ಪ್ರೀತಿ ಇರಲಿ ಪರರಲಿ. ಜನರ ದುಃಖಕ್ಕೆ ನಮ್ಮ ಸಾಂತ್ವವಿರಲಿ. ನಮ್ಮ ನಿಮ್ಮ ನಡುವೆ ಕಂದಕ ಬೇಡ. ಕಂದಗಳು ನಾವು ಗೆದ್ದೇ ಗೆಲ್ಲುತ್ತೇವೆ ವಿಶ್ವವನ್ನು ಎಂದು ಆತ್ಮಸ್ಥೈರ್ಯ ತುಂಬಿದರು” ಎಂದರು.

ಒಡನಾಡಿಯ ಮತ್ತೊಬ್ಬ ಮಗಳಾದ ರಮ್ಯಾ ಎಂಬುವರು ಮಾತನಾಡಿ, “ಒಡನಾಡಿ ನಮಗಾಗಿ ಒಳ್ಳೆಯ ಕೆಲಸಗಳನ್ನು ಮಾಡಿದೆ. ನಾವು ಅದೃಷ್ಟವಂತರು. ಶಿಕ್ಷಣ ಹಾಗೂ ಸುರಕ್ಷತೆ ಎಂದ ತಕ್ಷಣ ನನಗೆ ಒಡನಾಡಿ ನೆನಪಾಗುತ್ತದೆ” ಎಂದರು.

ಹೆಣ್ಣು ಮಕ್ಕಳಷ್ಟೇ ಅಲ್ಲದೇ, ಗಂಡು ಮಕ್ಕಳನ್ನೂ ಒಡನಾಡಿ ಬೆಳೆಸಿದೆ. ಗಣೇಶ ಎಂಬ ವಿದ್ಯಾರ್ಥಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ನಮ್ಮಲ್ಲಿ ಜಾತಿ ಎಂಬ ವಿಚಾರವೇ ಇಲ್ಲ. ಎರಡು ವರ್ಷದ ಮಗುವಿನಿಂದಲೇ ನಾನು ಅಲ್ಲಿ ಬೆಳೆದೆ. ಮಕ್ಕಳಿಗೆ ಜಾತಿಯ ಕರಾಳತೆ ಬೀರಬಾರದೆಂಬುದು ಒಡನಾಡಿಯ ಆಶಯವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಹಿನ್ನೆಲೆಯ ಮಕ್ಕಳು ಅಲ್ಲಿ ಬೆಳೆದಿದ್ದಾರೆ. ಧರ್ಮ ಎಂಬುದು ಅಲ್ಲಿ ಮುಖ್ಯವಾಗಿಯೇ ಇಲ್ಲ. ಇಪ್ಪತ್ತಮೂರು ವರ್ಷ ಒಡನಾಡಿಯಲ್ಲಿಯೇ ಬೆಳೆದ ನಾನೀಗ ನನ್ನದೇ ಬದುಕು ಕಂಡುಕೊಂಡಿದ್ದೇನೆ” ಎಂದು ವಿವರಿಸಿದರು.

ಒಡನಾಡಿಯ ಸ್ಟ್ಯಾನ್ಲಿ ಹೇಳಿದ್ದೇನು?

ಈಗ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಒಡನಾಡಿಯ ಸ್ಟ್ಯಾನ್ಲಿಯವರು, “ನಮ್ಮ ಸಂಸ್ಥೆಯಲ್ಲಿ ಯಾವುದೇ ಧರ್ಮದ ಕುರುಹುಗಳಿಲ್ಲ. ನಾವು ಏನು ಮಾಡಬೇಕೆಂಬ ಸ್ಪಷ್ಟತೆ ಇದೆ. ತನಿಖೆಯನ್ನು ಮುಚ್ಚಿಹಾಕಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣವನ್ನು ಕೈಗೆತ್ತುಕೊಂಡು ಸಮಗ್ರವಾಗಿ ತನಿಖೆ ನಡೆಸಬೇಕಿದೆ” ಎಂದು ಆಗ್ರಹಿಸಿದರು.

ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು? | Posco case aginest Murugha Mutt seer: Role of Mysuru Odanadi Seva Samsthe - Kannada Oneindia
ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ

ಹೊರದೇಶಗಳಿಂದ ಹಣ ಹರಿದುಬರುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, “ಹೊರಗಿನಿಂದ ಹಣ ಬರಬಾರದೆಂದು ಹೇಳಲು ಇವರ್‍ಯಾರು? ಕಳೆದ 32 ವರ್ಷಗಳಿಂದ ಒಡನಾಡಿ ಕೆಲಸ ಮಾಡುತ್ತಿದೆ. ನೂರಾರು ಮಕ್ಕಳು ಬೆಳೆದಿದ್ದಾರೆ. ಹೊರದೇಶದ ಹಣ ಪಡೆಯಲು ಈ ನೆಲದ ಕಾನೂನಿನಲ್ಲಿ ಅವಕಾಶವಿದೆ. ಹಾಗೆಂದು ಸುಖಾಸುಮ್ಮನೆಯ ಯಾರೂ ದುಡ್ಡು ಕೊಡುವುದಿಲ್ಲ” ಎಂದರು.

“ವರ್ಷಕ್ಕೆ ನಾಲ್ಕು ಸಲ ನಮ್ಮ ಹಣದ ಮೂಲವನ್ನು ಸರ್ಕಾರ ಚೆಕ್ ಮಾಡುತ್ತದೆ. ಇದೆಲ್ಲ ಆರೋಪ ಮಾಡುವವರಿಗೆ ತಿಳಿದಿಲ್ಲ. ಒಂದೊಂದು ರೂಪಾಯಿಯ ದಾಖಲೆ ಇರಿಸಿದ್ದೇವೆ. ಸುಖಾಸುಮ್ಮನೆ ಆರೋಪ ಮಾಡಬಾರದು. ಮಠಗಳಿಗೆ ಹೊರದೇಶಗಳಿಂದ ಬರುವ ಹಣದ ಲೆಕ್ಕ ಕೊಡುತ್ತಾರಾ? ನಮಗೆ ಬಂದಿರುವ ಎಲ್ಲ ಹಣದ ಲೆಕ್ಕವಿದೆ” ಎಂದು ಸವಾಲು ಹಾಕಿದರು.

ಹಿಂದೂ ಧರ್ಮ ಒಡೆಯುತ್ತಿದ್ದಾರೆ ಎಂಬುದು ಮುರುಘಾ ಶರಣರ ವಿಚಾರಗಳಿಗೆ ವಿರುದ್ಧವಲ್ಲವೇ?

ಮುರುಘಾ ರಾಜೇಂದ್ರ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾತನಾಡುತ್ತಾ, “ಹಿಂದೂ ಧರ್ಮವನ್ನು ಒಡೆಯಲು ಯತ್ನಿಸಲಾಗಿದೆ’’ ಎಂಬ ಆರೋಪ ಮಾಡಿದ್ದಾರೆ. ಆದರೆ ‘ಹಿಂದೂ’ ಎಂಬ ಗುರಾಣಿಯನ್ನು ಈಗ ಏಕೆ ಹಿಡಿದುಕೊಂಡು ಬರುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅನುಮಾನಿಸಲು ಅವಕಾಶವಿದೆ. ಯಾಕೆಂದರೆ ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರೇ ಈ ಹಿಂದೆ ಸಾಕಷ್ಟು ಸಲ ಇತರ ಧರ್ಮಕ್ಕಿಂತ ‘ಲಿಂಗಾಯತ ಧರ್ಮ’ ಭಿನ್ನ ಎಂಬ ಅಭಿಪ್ರಾಯವನ್ನು ತಾಳಿದ್ದನ್ನು ಕಾಣಬಹುದು.

ಇದನ್ನೂ ಓದಿರಿ: ಮುರುಘಾ ಶರಣರ ಪ್ರಕರಣ: ಒಡನಾಡಿಗೆ ಬೆದರಿಕೆ; ರಕ್ಷಣೆಗಾಗಿ ಪೊಲೀಸ್ ಮೊರೆಹೋದ ಸಂಸ್ಥೆ

ಲಿಂಗಾಯತ ಧರ್ಮ ಹೋರಾಟ ಉಚ್ಚ್ರಾಯದಲ್ಲಿದ್ದ ಅವಧಿಯದು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಲಿಂಗಾಯತವು ಸ್ವತಂತ್ರ ಧರ್ಮ ಹೇಗೆ?’ ಎಂಬ ಶೀರ್ಷಿಕೆಯಲ್ಲಿ ಮುರುಘಾ ಶಿವಮೂರ್ತಿ ಶರಣರು ಲೇಖನ ಬರೆದಿದ್ದರು. “ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಗ ಪುನಃ ಬಲ ಪಡೆದುಕೊಂಡಿದೆ. ಕೆಲವರು ಲಿಂಗಾಯತವು ಹಿಂದೂಧರ್ಮದ ಒಂದು ಪ್ರಭೇದವೆಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರು, ಲಿಂಗಾಯತವು ಸ್ವತಂತ್ರಧರ್ಮ ಆಗುವ ಎಲ್ಲ ಆಶಯಗಳನ್ನು ಹೊಂದಿದೆ ಎಂದು ಧೈರ್ಯವಾಗಿ ಪ್ರತಿಪಾದಿಸತೊಡಗಿದ್ದಾರೆ. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಲಿಂಗಾಯತವು ಸ್ವತಂತ್ರಧರ್ಮ ಹೇಗೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ” ಎಂಬ ಸಾಲುಗಳನ್ನು ಶರಣರು ಬರೆದಿದ್ದರು.

“ಧರ್ಮವೆನಿಸಿಕೊಳ್ಳಲು ಧಾರ್ಮಿಕ ಸಂವಿಧಾನ ಇರಬೇಕು. ಶರಣರ ವಚನಗಳೇ ಲಿಂಗಾಯತ ಧರ್ಮಕ್ಕೆ ಸಂವಿಧಾನ. ಅವುಗಳೇ ಧರ್ಮಗ್ರಂಥ. ಧರ್ಮಕ್ಷೇತ್ರವಾಗಿ ಬಸವಕಲ್ಯಾಣ, ಕೂಡಲಸಂಗಮ, ಉಳವಿ, ಕದಳಿವನ, ಸೊಲ್ಲಾಪುರ ಮತ್ತಿತರ ಶರಣಕ್ಷೇತ್ರಗಳಿವೆ. ಈ ತತ್ತ್ವ-ಸಿದ್ಧಾಂತವನ್ನು ಪ್ರತಿಪಾದಿಸುತ್ತ ಬಂದಿರುವ ಮಠ-ಪೀಠಗಳಿವೆ. ಶ್ರೀಗುರುಬಸವಲಿಂಗಾಯನಮಃ ಎಂಬುದು ಇವರ ಮಂತ್ರ” ಎಂಬ ಅಭಿಪ್ರಾಯ ತಾಳುವ ಮುರುಘಾ ಶರಣರು, ಲಿಂಗಾಯತ ಧರ್ಮ ಇತರ ಧರ್ಮಕ್ಕಿಂತ, ವೈದಿಕ ಆಚರಣೆಗಳಿಗಿಂತ ಹೇಗೆ ಭಿನ್ನ ಎಂದು ನಿರೂಪಿಸಿದ್ದರು. (ಮುರುಘಾ ಶರಣರ ಪೂರ್ಣ ಲೇಖನವನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿ)

“ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸ್ವಾಗತಾರ್ಹ. ಬಸವಾದಿ ಶರಣರ ಹೋರಾಟಗಳಿಗೆ ಗೌರವ, ಘನತೆ ಸಿಗಬೇಕಾದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು”ಎಂದು ಅವರು ಪ್ರತಿಪಾದಿಸಿದ್ದರು. ಇದು ಕೂಡ ‘ವರದಿ’ಯಾಗಿರುವುದನ್ನು ಗಮನಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...