Homeಕರ್ನಾಟಕಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಮತಾಂತರದ ಆರೋಪ ಅಲ್ಲಗಳೆದ ಒಡನಾಡಿ ವಿದ್ಯಾರ್ಥಿಗಳು

ಫ್ಯಾಕ್ಟ್‌ಚೆಕ್‌: ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ

- Advertisement -
- Advertisement -

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣವನ್ನು ಇಬ್ಬರು ಬಾಲಕಿಯರು ದಾಖಲಿಸಿದರು. ಸ್ವಾಮೀಜಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಪ್ರಕರಣ ದಾಖಲಾಗಲು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಪ್ರಮುಖ ಪಾತ್ರ ವಹಿಸಿತು. ಸಂತ್ರಸ್ತ ಮಕ್ಕಳು ಒಡನಾಡಿಯ ಕದ ತಟ್ಟಿದ್ದರಿಂದ ಪ್ರಕರಣ ಹೊರಬಂತು.

ಪ್ರಭಾವಿ ಮಠಾಧೀಶರೊಬ್ಬರ ಮೇಲೆ ಗುರುತರವಾದ ಆರೋಪ ಬಂದ ಬಳಿಕ, ಒಡನಾಡಿ ಸೇವಾ ಸಂಸ್ಥೆಯನ್ನು ದೂಷಿಸುವ ಕೆಲಸವಾಗುತ್ತಿದೆ. ಒಡನಾಡಿಯ ರೂವಾರಿಗಳಾದ ಪರಶು ಹಾಗೂ ಸ್ಟ್ಯಾನ್ಲಿ ಅವರ ಮೇಲೆ ಗುರುತರ ಆರೋಪಗಳನ್ನು ಹೊರಿಸಲಾಗುತ್ತಿದೆ. ಕಳೆದ ಮೂವತ್ತೆರಡು ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ವಿಚಾರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಬೆದರಿಕೆ ಕರೆಗಳೂ ಬರುತ್ತಿರುವ ಕುರಿತು ದೂರು ದಾಖಲಾಗಿದೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಮತಾಂತರ ಮಾಡುವುದೇ ಒಡನಾಡಿ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರವಾಗಿದೆ. ಒಡನಾಡಿಗೆ ಹೊರದೇಶಗಳಿಂದ ಹಣ ಬರುತ್ತಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮತಾಂತರ ಹಾಗೂ ಹೊರದೇಶಗಳಿಂದ ಬರುತ್ತಿರುವ ಹಣದ ಕುರಿತ ಆರೋಪಗಳ ಹಿಂದಿನ ಸತ್ಯಗಳೇನು ಎಂದು ತಿಳಿಯಲು ‘ಒಡನಾಡಿ’ ಸಂಸ್ಥೆಯನ್ನು ಹಾಗೂ ‘ಒಡನಾಡಿ’ಯಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಈಗ ಬಂದಿರುವ ಆರೋಪಗಳಿಗೆ ಕಟುಟೀಕೆಗಳನ್ನು ಒಡನಾಡಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದರೆ, ಸ್ಟ್ಯಾನ್ಲಿಯವರು ವಿದೇಶದಿಂದ ಹಣದ ಕುರಿತು ಸ್ಪಷ್ಟನೆಗಳನ್ನು ನೀಡಿದರು.

ಈಗ ಕರಾಟೆ ಟೀಚರ್‌ ಆಗಿ ಕೆಲಸ ಮಾಡುತ್ತಿರುವ ‘ಮೋಹನ ಕುಮಾರಿ’ ಎಂಬವರು ಒಡನಾಡಿಯಲ್ಲಿ ಬೆಳೆದವರು. ಚಿಕ್ಕವಯಸ್ಸಿನಲ್ಲಿಯೇ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಮೋಹನಕುಮಾರಿಯನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಒಡನಾಡಿಗೆ ತಂದು ಬಿಟ್ಟರು. ಒಡನಾಡಿಯಲ್ಲಿ ಬೆಳೆದು, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, “ನನಗೆ ತಂದೆ ತಾಯಿ ಇಲ್ಲ ಎಂಬ ನೋವು ಎಂದಿಗೂ ಕಾಡಲಿಲ್ಲ. ಮುಂದೆಯೂ ಕಾಡಲ್ಲ. ಪರಶು ಅಣ್ಣ ಹಾಗೂ ಸ್ಟ್ಯಾನ್ಲಿ ಅಣ್ಣನೇ ನನಗೆ ಸ್ಫೂರ್ತಿ. ನಮ್ಮ ಆಯ್ಕೆಗಳಿಗೆ ಸಂಪೂರ್ಣ ಸ್ವತಂತ್ರ ನೀಡಿದರು. ಇಂಥದ್ದನ್ನೇ ಮಾಡಬೇಕು, ಹೀಗೆ ಇರಬೇಕು ಎಂದು ಯಾವತ್ತೂ ನಿರ್ಬಂಧ ಹೇರಲಿಲ್ಲ” ಎಂದರು.

ಇದನ್ನೂ ಓದಿರಿ: ಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್‌ ಆರೋಪ

“ಮತ ಎಂಬ ಪದವನ್ನು ನಾನು ಒಡನಾಡಿಯಲ್ಲಿ ಕೇಳಿಯೇ ಇರಲಿಲ್ಲ. ಶಾಲೆಗೆ ಸೇರಿದ ಬಳಿಕವೇ ಈ ಧರ್ಮ, ಜಾತಿ ಎಂಬ ಪದಗಳನ್ನು ನಾನು ಮೊದಲ ಬಾರಿಗೆ ಕೇಳಿದ್ದು. ಯಾವುದೇ ದಾಖಲಾತಿಯಲ್ಲಿ ನನ್ನ ಜಾತಿ ಯಾವುದೆಂದು ನಮೂದಿಸಿಲ್ಲ. ಮಾನವ ಧರ್ಮವೇ ಮುಖ್ಯವೆಂದು ಕಲಿಸಿದವರು ನಮ್ಮ ಅಣ್ಣಂದಿರು. ಜಾತಿ, ಮತದ ಬಗ್ಗೆ ಕೂತು ಎಂದಿಗೂ ಒಡನಾಡಿಯಲ್ಲಿ ಚರ್ಚೆ ಮಾಡಿದ್ದೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಧರ್ಮಾಚರಣೆ ಮಾಡುತ್ತೇನೆಂದರೂ ನಮ್ಮ ಅಣ್ಣಂದಿರು ತಡೆ ನೀಡುವವರಲ್ಲ. ಮೈಂಡ್ ವಾಶ್‌ ಮಾಡಿದವರಲ್ಲ. ಜನರನ್ನು ನೋಡುತ್ತಾ, ಶಾಲೆಗೆ ಹೋಗುತ್ತಾ ಈ ಜಾತಿ, ಧರ್ಮ ಅನ್ನೋದು ಹೇಗಿದೆ? ಸಮಾಜವನ್ನು ಹೇಗೆ ಬಾಧಿಸುತ್ತಿವೆ? ಎಂಬುದನ್ನು ತಿಳಿದುಕೊಂಡೆವು. ನಮಗೆ ವಿಶಾಲ ಬದುಕನ್ನು ಕಲಿಸಿದ್ದು ಒಡನಾಡಿ. ನನ್ನ ವಿವಾಹವೂ ಸರಳವಾಗಿ ಆಯಿತು. ರಾಷ್ಟ್ರಕವಿ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ನನ್ನ ವಿವಾಹವನ್ನು ಮಾಡಿಕೊಡಲಾಯಿತು” ಎಂದು ತಿಳಿಸಿದರು.

ಒಡನಾಡಿಯಲ್ಲೇ ಬೆಳೆದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ಮತ್ತೊಬ್ಬ ವಿದ್ಯಾರ್ಥಿನಿ ಸರಸ್ವತಿ. ಕರಾಟೆ, ರಂಗಭೂಮಿ, ಯೋಗ ಮೊದಲಾದ ಕ್ಷೇತ್ರಗಳಲ್ಲಿ ಮೈಸೂರಿನಲ್ಲಿ ಸಕ್ರಿಯವಾಗಿರುವ ಅವರು ಒಡನಾಡಿಯ ಜೊತೆಗಿನ ಅನುಭವಗಳನ್ನು ಹಂಚಿಕೊಂಡರು.

“ಯಾವುದೇ ಧರ್ಮದ ಸೀಮಿತ ಚೌಕಟ್ಟನ್ನು ನಮ್ಮ ಒಡಿನಾಡಿಯಲ್ಲಿ ನಾನು ನೋಡಿಲ್ಲ. ಮಾನವ ಧರ್ಮವೇ ಮುಖ್ಯವಾಗಿತ್ತು. ಹಿಂದೂ ವಿರೋಧಿ ಎಂಬುದೆಲ್ಲ ಸುಳ್ಳು. ನಾನು ಸ್ಟಿಕ್ಟರ್‌ ಹಾಕುತ್ತೇನೆ, ಕುಂಕುಮ ಇಡುತ್ತೇನೆ. ಇದಕ್ಕೆ ಯಾವತ್ತೂ ತಡೆ ನೀಡಿದವರಲ್ಲ. ಬಳೆ ತಗೆದುಕೊಳ್ಳಿ ಎಂದು ಗೌರಿ ಹಬ್ಬದ ಸಂದರ್ಭದಲ್ಲಿ ನಮ್ಮ ಅಣ್ಣಂದಿರು ನಮಗೆ ದುಡ್ಡು ಕೊಡುತ್ತಿದ್ದರು. ಯಾವುದೇ ಧರ್ಮಕ್ಕೆ ನಮ್ಮನ್ನು ಅವರು ಅಂಟಿಹಾಕಲಿಲ್ಲ. ನಮ್ಮ ಪ್ರತಿದಿನದ ಪ್ರಾರ್ಥನೆಯೇ ಮಾನವತೆಯನ್ನು ಸಾರುವಂತಿದೆ. ಮನುಷ್ಯತ್ವ ಇರುವ ಮನಸ್ಸೇ ಪ್ರೀತಿ ಇರಲಿ ಪರರಲಿ. ಜನರ ದುಃಖಕ್ಕೆ ನಮ್ಮ ಸಾಂತ್ವವಿರಲಿ. ನಮ್ಮ ನಿಮ್ಮ ನಡುವೆ ಕಂದಕ ಬೇಡ. ಕಂದಗಳು ನಾವು ಗೆದ್ದೇ ಗೆಲ್ಲುತ್ತೇವೆ ವಿಶ್ವವನ್ನು ಎಂದು ಆತ್ಮಸ್ಥೈರ್ಯ ತುಂಬಿದರು” ಎಂದರು.

ಒಡನಾಡಿಯ ಮತ್ತೊಬ್ಬ ಮಗಳಾದ ರಮ್ಯಾ ಎಂಬುವರು ಮಾತನಾಡಿ, “ಒಡನಾಡಿ ನಮಗಾಗಿ ಒಳ್ಳೆಯ ಕೆಲಸಗಳನ್ನು ಮಾಡಿದೆ. ನಾವು ಅದೃಷ್ಟವಂತರು. ಶಿಕ್ಷಣ ಹಾಗೂ ಸುರಕ್ಷತೆ ಎಂದ ತಕ್ಷಣ ನನಗೆ ಒಡನಾಡಿ ನೆನಪಾಗುತ್ತದೆ” ಎಂದರು.

ಹೆಣ್ಣು ಮಕ್ಕಳಷ್ಟೇ ಅಲ್ಲದೇ, ಗಂಡು ಮಕ್ಕಳನ್ನೂ ಒಡನಾಡಿ ಬೆಳೆಸಿದೆ. ಗಣೇಶ ಎಂಬ ವಿದ್ಯಾರ್ಥಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ನಮ್ಮಲ್ಲಿ ಜಾತಿ ಎಂಬ ವಿಚಾರವೇ ಇಲ್ಲ. ಎರಡು ವರ್ಷದ ಮಗುವಿನಿಂದಲೇ ನಾನು ಅಲ್ಲಿ ಬೆಳೆದೆ. ಮಕ್ಕಳಿಗೆ ಜಾತಿಯ ಕರಾಳತೆ ಬೀರಬಾರದೆಂಬುದು ಒಡನಾಡಿಯ ಆಶಯವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಹಿನ್ನೆಲೆಯ ಮಕ್ಕಳು ಅಲ್ಲಿ ಬೆಳೆದಿದ್ದಾರೆ. ಧರ್ಮ ಎಂಬುದು ಅಲ್ಲಿ ಮುಖ್ಯವಾಗಿಯೇ ಇಲ್ಲ. ಇಪ್ಪತ್ತಮೂರು ವರ್ಷ ಒಡನಾಡಿಯಲ್ಲಿಯೇ ಬೆಳೆದ ನಾನೀಗ ನನ್ನದೇ ಬದುಕು ಕಂಡುಕೊಂಡಿದ್ದೇನೆ” ಎಂದು ವಿವರಿಸಿದರು.

ಒಡನಾಡಿಯ ಸ್ಟ್ಯಾನ್ಲಿ ಹೇಳಿದ್ದೇನು?

ಈಗ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಒಡನಾಡಿಯ ಸ್ಟ್ಯಾನ್ಲಿಯವರು, “ನಮ್ಮ ಸಂಸ್ಥೆಯಲ್ಲಿ ಯಾವುದೇ ಧರ್ಮದ ಕುರುಹುಗಳಿಲ್ಲ. ನಾವು ಏನು ಮಾಡಬೇಕೆಂಬ ಸ್ಪಷ್ಟತೆ ಇದೆ. ತನಿಖೆಯನ್ನು ಮುಚ್ಚಿಹಾಕಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣವನ್ನು ಕೈಗೆತ್ತುಕೊಂಡು ಸಮಗ್ರವಾಗಿ ತನಿಖೆ ನಡೆಸಬೇಕಿದೆ” ಎಂದು ಆಗ್ರಹಿಸಿದರು.

ಮುರುಘಾ ಶ್ರೀ ಪ್ರಕರಣ ಬಯಲು ಮಾಡಿದ ಮೈಸೂರಿನ 'ಒಡನಾಡಿ' ಬಗ್ಗೆ ನಿಮಗೆಷ್ಟು ಗೊತ್ತು? | Posco case aginest Murugha Mutt seer: Role of Mysuru Odanadi Seva Samsthe - Kannada Oneindia
ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ

ಹೊರದೇಶಗಳಿಂದ ಹಣ ಹರಿದುಬರುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, “ಹೊರಗಿನಿಂದ ಹಣ ಬರಬಾರದೆಂದು ಹೇಳಲು ಇವರ್‍ಯಾರು? ಕಳೆದ 32 ವರ್ಷಗಳಿಂದ ಒಡನಾಡಿ ಕೆಲಸ ಮಾಡುತ್ತಿದೆ. ನೂರಾರು ಮಕ್ಕಳು ಬೆಳೆದಿದ್ದಾರೆ. ಹೊರದೇಶದ ಹಣ ಪಡೆಯಲು ಈ ನೆಲದ ಕಾನೂನಿನಲ್ಲಿ ಅವಕಾಶವಿದೆ. ಹಾಗೆಂದು ಸುಖಾಸುಮ್ಮನೆಯ ಯಾರೂ ದುಡ್ಡು ಕೊಡುವುದಿಲ್ಲ” ಎಂದರು.

“ವರ್ಷಕ್ಕೆ ನಾಲ್ಕು ಸಲ ನಮ್ಮ ಹಣದ ಮೂಲವನ್ನು ಸರ್ಕಾರ ಚೆಕ್ ಮಾಡುತ್ತದೆ. ಇದೆಲ್ಲ ಆರೋಪ ಮಾಡುವವರಿಗೆ ತಿಳಿದಿಲ್ಲ. ಒಂದೊಂದು ರೂಪಾಯಿಯ ದಾಖಲೆ ಇರಿಸಿದ್ದೇವೆ. ಸುಖಾಸುಮ್ಮನೆ ಆರೋಪ ಮಾಡಬಾರದು. ಮಠಗಳಿಗೆ ಹೊರದೇಶಗಳಿಂದ ಬರುವ ಹಣದ ಲೆಕ್ಕ ಕೊಡುತ್ತಾರಾ? ನಮಗೆ ಬಂದಿರುವ ಎಲ್ಲ ಹಣದ ಲೆಕ್ಕವಿದೆ” ಎಂದು ಸವಾಲು ಹಾಕಿದರು.

ಹಿಂದೂ ಧರ್ಮ ಒಡೆಯುತ್ತಿದ್ದಾರೆ ಎಂಬುದು ಮುರುಘಾ ಶರಣರ ವಿಚಾರಗಳಿಗೆ ವಿರುದ್ಧವಲ್ಲವೇ?

ಮುರುಘಾ ರಾಜೇಂದ್ರ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆಯವರು ಮಾತನಾಡುತ್ತಾ, “ಹಿಂದೂ ಧರ್ಮವನ್ನು ಒಡೆಯಲು ಯತ್ನಿಸಲಾಗಿದೆ’’ ಎಂಬ ಆರೋಪ ಮಾಡಿದ್ದಾರೆ. ಆದರೆ ‘ಹಿಂದೂ’ ಎಂಬ ಗುರಾಣಿಯನ್ನು ಈಗ ಏಕೆ ಹಿಡಿದುಕೊಂಡು ಬರುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅನುಮಾನಿಸಲು ಅವಕಾಶವಿದೆ. ಯಾಕೆಂದರೆ ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರೇ ಈ ಹಿಂದೆ ಸಾಕಷ್ಟು ಸಲ ಇತರ ಧರ್ಮಕ್ಕಿಂತ ‘ಲಿಂಗಾಯತ ಧರ್ಮ’ ಭಿನ್ನ ಎಂಬ ಅಭಿಪ್ರಾಯವನ್ನು ತಾಳಿದ್ದನ್ನು ಕಾಣಬಹುದು.

ಇದನ್ನೂ ಓದಿರಿ: ಮುರುಘಾ ಶರಣರ ಪ್ರಕರಣ: ಒಡನಾಡಿಗೆ ಬೆದರಿಕೆ; ರಕ್ಷಣೆಗಾಗಿ ಪೊಲೀಸ್ ಮೊರೆಹೋದ ಸಂಸ್ಥೆ

ಲಿಂಗಾಯತ ಧರ್ಮ ಹೋರಾಟ ಉಚ್ಚ್ರಾಯದಲ್ಲಿದ್ದ ಅವಧಿಯದು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಲಿಂಗಾಯತವು ಸ್ವತಂತ್ರ ಧರ್ಮ ಹೇಗೆ?’ ಎಂಬ ಶೀರ್ಷಿಕೆಯಲ್ಲಿ ಮುರುಘಾ ಶಿವಮೂರ್ತಿ ಶರಣರು ಲೇಖನ ಬರೆದಿದ್ದರು. “ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಗ ಪುನಃ ಬಲ ಪಡೆದುಕೊಂಡಿದೆ. ಕೆಲವರು ಲಿಂಗಾಯತವು ಹಿಂದೂಧರ್ಮದ ಒಂದು ಪ್ರಭೇದವೆಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರು, ಲಿಂಗಾಯತವು ಸ್ವತಂತ್ರಧರ್ಮ ಆಗುವ ಎಲ್ಲ ಆಶಯಗಳನ್ನು ಹೊಂದಿದೆ ಎಂದು ಧೈರ್ಯವಾಗಿ ಪ್ರತಿಪಾದಿಸತೊಡಗಿದ್ದಾರೆ. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಲಿಂಗಾಯತವು ಸ್ವತಂತ್ರಧರ್ಮ ಹೇಗೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ” ಎಂಬ ಸಾಲುಗಳನ್ನು ಶರಣರು ಬರೆದಿದ್ದರು.

“ಧರ್ಮವೆನಿಸಿಕೊಳ್ಳಲು ಧಾರ್ಮಿಕ ಸಂವಿಧಾನ ಇರಬೇಕು. ಶರಣರ ವಚನಗಳೇ ಲಿಂಗಾಯತ ಧರ್ಮಕ್ಕೆ ಸಂವಿಧಾನ. ಅವುಗಳೇ ಧರ್ಮಗ್ರಂಥ. ಧರ್ಮಕ್ಷೇತ್ರವಾಗಿ ಬಸವಕಲ್ಯಾಣ, ಕೂಡಲಸಂಗಮ, ಉಳವಿ, ಕದಳಿವನ, ಸೊಲ್ಲಾಪುರ ಮತ್ತಿತರ ಶರಣಕ್ಷೇತ್ರಗಳಿವೆ. ಈ ತತ್ತ್ವ-ಸಿದ್ಧಾಂತವನ್ನು ಪ್ರತಿಪಾದಿಸುತ್ತ ಬಂದಿರುವ ಮಠ-ಪೀಠಗಳಿವೆ. ಶ್ರೀಗುರುಬಸವಲಿಂಗಾಯನಮಃ ಎಂಬುದು ಇವರ ಮಂತ್ರ” ಎಂಬ ಅಭಿಪ್ರಾಯ ತಾಳುವ ಮುರುಘಾ ಶರಣರು, ಲಿಂಗಾಯತ ಧರ್ಮ ಇತರ ಧರ್ಮಕ್ಕಿಂತ, ವೈದಿಕ ಆಚರಣೆಗಳಿಗಿಂತ ಹೇಗೆ ಭಿನ್ನ ಎಂದು ನಿರೂಪಿಸಿದ್ದರು. (ಮುರುಘಾ ಶರಣರ ಪೂರ್ಣ ಲೇಖನವನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿ)

“ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸ್ವಾಗತಾರ್ಹ. ಬಸವಾದಿ ಶರಣರ ಹೋರಾಟಗಳಿಗೆ ಗೌರವ, ಘನತೆ ಸಿಗಬೇಕಾದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು”ಎಂದು ಅವರು ಪ್ರತಿಪಾದಿಸಿದ್ದರು. ಇದು ಕೂಡ ‘ವರದಿ’ಯಾಗಿರುವುದನ್ನು ಗಮನಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...