Homeಅಂಕಣಗಳುಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

- Advertisement -
- Advertisement -

ಅಮೃತ ಮಹೋತ್ಸವದ ಪ್ರಚಾರಕ್ಕಾಗಿ ಸರಕಾರ ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೋನೇ ಇಲ್ಲದಂತೆ ಮಾಡಿ ಆ ಜಾಗಕ್ಕೆ ವೀರ ಸಾವರ್ಕರನ ಫೋಟೋವನ್ನ ಬೊಮ್ಮಾಯಿ ಹಾಕಿಸಿದ್ದಾರಂತಲ್ಲಾ. ಇದರಿಂದ ಕುಪಿತಗೊಂಡಿರುವ ಸ್ವಾತಂತ್ರ್ಯವೀರ ಲಿಂಗಾಯಿತರು, ಸಕಲರಿಗೂ ಲೇಸನ್ನ ಬಯಸುವ ದಯವೇ ಧರ್ಮದ ಮೂಲವೆಂದು, ಜಗತ್ತಿಗೆ ಸಾರಿದ ಬಸವಧರ್ಮದಲ್ಲಿ ಹುಟ್ಟಿದ ಈ ಬೊಮ್ಮಾಯಿ ಇತಿಹಾಸವನ್ನು ತಿರುಚಿ ಬಸವಕುಲಕೆ ಅವಮಾನ ಮಾಡಿಬಿಟ್ಟಿದ್ದಾರೆ. ನೆಹರು ಜೈಲಲ್ಲಿ ಇದ್ದಷ್ಟೇ ವರ್ಷ ಪ್ರಧಾನಿಯಾಗಿದ್ದರು. ಯೋಜನೆಗಳ ಮುಖಾಂತರ ಬಡ ಭಾರತವನ್ನ ಅಭಿವೃದ್ಧಿಪಥಕ್ಕೆ ತಂದು ನಿಲ್ಲಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವ ದೇಶದಲ್ಲಿ ಕಾಲೂರುವಂತೆ ಮಾಡಿದರು. ಲೋಕಸಭೆಯಲ್ಲಿ ಅವರನ್ನು ಟೀಕಿಸಿ ಮಾತನಾಡುವುದನ್ನ ಸಹಿಸಿಕೊಂಡರು; ತನ್ನ ಜನ್ಮದಿನವನ್ನ ಮಕ್ಕಳ ದಿನಾಚರಣೆಯನ್ನಾಗಿಸಿದರು; ಅವರು ಬದುಕಿದಷ್ಟೂ ದಿನ ಈ ದೇಶದ ಸರ್ವ ಜನಾಂಗಕ್ಕೂ ಪ್ರಧಾನಿಯಾಗಿದ್ದರೂ. ದಯಾಪರನಾದ ನೆಹರು ವ್ಯಕ್ತಿತ್ವವನ್ನ ದ್ವೇಷಿಸುವ ಬಿಜೆಪಿಗಳು ಎಂದಿನಂತೆ ತಮ್ಮ ಸಂಚಿನಿಂದ ಲಿಂಗಾಯಿತರ ಬೊಮ್ಮಾಯಿಯಿಂದ ನೆಹರುಗೆ ಅವಮಾನ ಮಾಡಿಸಿ ಆ ಮುಖಾಂತರ ಲಿಂಗಾಯಿತರಿಗೇ ಈ ಆರೆಸೆಸ್ಸಿಗರು ಅವಮಾನ ಮಾಡಿಸಿದ್ದಾರೆಂದು ಶರಣ ಸಮೂಹ ಸಿಟ್ಟಾಗಿದೆಯಂತಲ್ಲಾ, ಥೂತ್ತೇರಿ.

****

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರವನ್ನು ಮಾಧುಸ್ವಾಮಿ ಎಂಬ ಮಂತ್ರಿ ’ಇದು ತೆವಳಿಕೊಂಡು ನಡೆಯುತ್ತಿರುವ ಸರಕಾರ; ಅಂತೂ ಹೇಗೋ ದಡಮುಟ್ಟಿ ಮನೆಗೆ ಹೋಗುತ್ತೇವೆ’ ಎಂದು ಬಣ್ಣಿಸಿರುವ ಮಾತನ್ನು ಕರ್ನಾಟಕದ ಜನಸ್ತೋಮ ಇಡಿಯಾಗಿ ಸ್ವೀಕರಿಸಿ ಒಂದು ತಿದ್ದುಪಡಿ ಮಾಡಿಕೊಂಡಿದೆಯಂತಲ್ಲಾ. ಆ ತಿದ್ದುಪಡಿ ಯಾವುದೆಂದರೆ ಇದು ತೆವಳುತ್ತಿರುವ ಸರಕಾರವಲ್ಲಾ, ಕುಂಟುತ್ತಿರುವ ಸರಕಾರ ಎಂದರೆ ಸರಿಯಾಗುತ್ತಿತ್ತು ಎಂದು. ಸದರಿ ಮಾಧುಸ್ವಾಮಿ ಮಾತು ಈವರೆಗೂ ವಿರೋಧಪಕ್ಷಗಳಿಗೇ ಹೊಳೆದಿರಲಿಲ್ಲವಂತಲ್ಲಾ. ಅದಕ್ಕೆ ಕಾರಣ ಸರಕಾರ ತೆವಳುತ್ತಿದೆಯೋ ಕುಂಟುತ್ತಿದೆಯೋ ಎಂಬುದು ಆಡಳಿತದ ಭಾಗವಾಗಿದ್ದವರಿಗೆ ಹೊಳೆಯುತ್ತದೆಯೇ ಹೊರತು, ಹೊರಗಿನವರಿಗೆ ತಿಳಿಯಲಾರದು. ಇಂತಹ ಸರಕಾರ ಜತೆಗಿಟ್ಟುಕೊಂಡು ಸ್ವಾತಂತ್ರ್ಯದ ಅಮೃತೋತ್ಸವಕ್ಕಾಗಿ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರು ಕೈತುಂಬಾ ಬಾವುಟ ಹಿಡಿದು ಮನೆಮನೆಗೆ ಹಂಚುತ್ತಾ ಹೋಗುತ್ತಿರುವಾಗ ಮಳೆಗೆ ಮನೆಬಿದ್ದ ಜಾಗಕ್ಕೆ ಹೋಗಿ, ಮನೆ ಕಳೆದುಕೊಂಡು ಅಳುತ್ತಿದ್ದ ಮಹಿಳೆಗೆ ಬಾವುಟಕೊಟ್ಟು “ಇದನ್ನ ನಿನ್ನ ಮನೆ ಮೇಲಕ್ಕೆ ಕಟ್ಟಕ್ಕ” ಎನ್ನಲಾಗಿ ಆ ಮಹಿಳೆ ಸಿಟ್ಟುಗೊಂಡು “ಅಯ್ಯಾ ನಿನ್ನ ಮನೆಹಾಳಾಗ ನಿನಿಗೇನು ಕಣ್ಣು ಇಂಗಿಹೋಗವಾ? ಮನೆ ಕಳಕಂಡು ಅಳುತಾಯಿದ್ರೆ ಬಾವುಟ ಹಾರಿಸು ಅಂತ ಬಂದಿದ್ದಯಲ್ಲಾ ಥೂ ನಿನ್ನ ಜನ್ಮಕ್ಕೆ” ಅಂದಾಗ ಸಾರಿ ಕಣಕ್ಕ ಎಂದು ಜಾಗ ಖಾಲಿಮಾಡಿದನಂರಲ್ಲಾ, ಥೂತ್ತೇರಿ.

****

ಸಂಘಿಗಳು ನಿಜ ಶ್ರದ್ಧೆಯನ್ನು ತೊರೆದು ಸಂಭ್ರಮವನ್ನ ಸೃಷ್ಟಿಮಾಡಿಕೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಿದ್ದ ಜಲ ಪ್ರಳಯಕ್ಕೆ ದೇಶ ತುತ್ತಾಗಿ ಹೋಗಿದೆ. ಮನೆಯ ಗೋಡೆಗಳು ಕುಸಿದಿವೆ; ಹಸುಗೂಸುಗಳೂ ಅಸುನೀಗಿವೆ; ಸೇತುವೆಗಳು ಕೊಚ್ಚಿಹೋಗಿವೆ; ಗುಡ್ಡಗಳು ಕುಸಿದು ಹೋಗಿವೆ; ಸಂತ್ರಸ್ತ ಜನರ ಕಣ್ಣೀರು ಮಳೆ ಹನಿಗಳೊಂದಿಗೆ ಸೇರಿಹೋಗಿವೆ. ಇಂತಹ ಮಳೆಯ ನಡುವೆ ಶಾಲೆಗೆ ಹೋದ ಹೆಣ್ಣು ಮಗುವೊಂದು ದಬ್ಬೆಯಿಂದ ಕಟ್ಟಿದ ಸೇತುವೆ ಮೇಲೆ ನಡೆದು ಬರುವಾಗ ಆಯತಪ್ಪಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಆ ಮನೆಯಲ್ಲಿ ದುಃಖ ಶಾಶ್ವತವಾಗಿಹೋಯ್ತು. ಈ ಸಂಬಂಧದಾಗಿ ಆ ಪ್ರದೇಶದ ಜನ ನಾಯಕನನ್ನ ಮಾತನಾಡಿಸಿದರೆ ನನ್ನ ಅವಧಿಯಲ್ಲಿ ಸೇತುವೆ ಆಗಿಲ್ಲ ನಿಜ ಆದರೆ ಎಪ್ಪತ್ತು ವರ್ಷ ದೇಶ ಆಳಿದವರು ಏನು ಮಾಡಿದ್ದಾರೆ. ಹೋಗಲಿ ಅವರ ಅವಧಿಯಲ್ಲಿ ಇಂತಹ ಮಳೆ ಬಂದಿತ್ತೆ ಎಂದು ಮಾತನಾಡಿದಾನಲ್ಲಾ. ಈ ಮೂರ್ಖ ಬಿಜೆಪಿ ಎಮ್ಮೆಲ್ಲೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ದೇಶದ ಯಾವುದೇ ಸಮಸ್ಯೆಯನ್ನು ಮುಸುಡಿಗೆ ಹಿಡಿದರೂ ಕೂಡ ಎಪ್ಪತ್ತು ವರ್ಷ ಆಳಿದವರು ಏನು ಮಾಡುತ್ತಿದ್ದರು ಎನ್ನುತ್ತವೆ. ಇದೇ ಮೋದಿ ಕಾಂಗ್ರೆಸ್ಸಿಗೆ ಅರವತ್ತು ವರ್ಷ ಅಧಿಕಾರ ಕೊಟ್ಟಿರಿ, ನೀವು ನನಗೆ ಕೇವಲ ಅರವತ್ತು ದಿವಸ ಕೊಡಿ ಎಂದಿದ್ದರು. ಇಲ್ಲಿ ಕಾಂಗ್ರೆಸ್ಸೇತರ ಮೊರಾರ್ಜಿ, ವಾಜಪೇಯಿ, ದೇವೇಗೌಡರು, ಗುಜ್ರಾಲ್ ಆಡಳಿತವಿದ್ದ ಲೆಕ್ಕ ಈ ಬಿಜೆಪಿಗಳಿಗೇ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.

****

ಈ ಬಿಜೆಪಿಗಳು ಸಾವರ್ಕರ್ ಚಿತ್ರವನ್ನು ಸ್ವತಂತ್ರ ಹೋರಾಟಗಾರರ ಸಾಲಿಗೆ ತಂದು ಅಂಟಿಸತೊಡಗಿವೆ. ಅಂಡಮಾನ್ ದ್ವೀಪದ ಕೊಠಡಿಯಲ್ಲಿರಲಾಗದೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಕೊಟ್ಟು ಭಾರತಕ್ಕೆ ಬಂದು ಪುರೋಹಿತಶಾಹಿ ಧರ್ಮದ ಪುನರುತ್ಥಾನ ಕೈಂಕರ್ಯದಲ್ಲಿ ನಿರತರಾದ ಸಾವರ್ಕರ್ ಮಾನ ಉಳಿಸಲು ಆರೆಸೆಸ್ಸಿಗರು ವೀರ ಪದವನ್ನ ಸೇರಿಸಿದರು. ಅಂಡಮಾನ್ ಜೈಲಿನ ಕೊಠಡಿಯಲ್ಲೇ ಆಯಸ್ಸು ಮುಗಿಸಿ ನೀರು ಪಾಲಾದ ಅಸಂಖ್ಯಾತ ಜನರ್‍ಯಾರು ವೀರರಲ್ಲ. ಸೋತು ಶರಣಾದ ಸಾವರ್ಕರ್ ವೀರ! ಇಂತಹ ವೀರನ ಚಿತ್ರ ತಂದು ಹದಿನೇಳು ವರ್ಷ ಪ್ರಧಾನಿಯಾಗಿದ್ದ ನೆಹರು ಚಿತ್ರದ ಜಾಗದಲ್ಲಿ ಅಂಟಿಸಿವೆ ಮತ್ತು ತಮ್ಮ ಕೃತ್ಯವನ್ನ ಸಮರ್ಥಿಸಿವೆ. ಇತಿಹಾಸವನ್ನೇ ಅಳಿಸಿಹಾಕುವ ಈ ಕಾರ್ಯದ ವಿರುದ್ಧ ಕನ್ನಡದ ಯಾವ ಸಾಹಿತಿಯೂ ತುಟಿಬಿಚ್ಚಿಲ್ಲ. ಬಹುಶಃ ಈ ರಣಮಳೆಯಲ್ಲಿ ಒಳಸೇರಿಕೊಂಡು ಕೃತಿ ರಚನೆಯಲ್ಲಿ ತೊಡಗಿರಬಹುದು. ಇನ್ನ ಪಠ್ಯಪುಸ್ತಕ ತಿದ್ದಿ ದಕ್ಕಿಸಿಕೊಂಡ ತಿಪಟೂರಿನ ನಾಗೇಶ್ ಎಂಬ ಸಚಿವನ ಹಿಂಬಾಲಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಥಾದಲ್ಲಿ ರಾಷ್ಟ್ರಧ್ವಜಕ್ಕಿಂತ ತಮ್ಮ ಸಂಘದ ಧ್ವಜವನ್ನೇ ಎತ್ತರದಲ್ಲಿ ಹಾರಿಸುತ್ತ ಹೋಗಿದ್ದು ನೋಡಿದ ತಿಪಟೂರಿನ ಜನ ಮನುಷ್ಯನಿಗೆ ಹುಚ್ಚು ಕೆರಳಿದರೆ ಏನಾಗುತ್ತವೆ ಎಂಬುದಕ್ಕೆ ಈ ಜನಗಳೇ ಉದಾಹರಣೆಯೆಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...