Homeಅಂಕಣಗಳುಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

- Advertisement -
- Advertisement -

ಅಮೃತ ಮಹೋತ್ಸವದ ಪ್ರಚಾರಕ್ಕಾಗಿ ಸರಕಾರ ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೋನೇ ಇಲ್ಲದಂತೆ ಮಾಡಿ ಆ ಜಾಗಕ್ಕೆ ವೀರ ಸಾವರ್ಕರನ ಫೋಟೋವನ್ನ ಬೊಮ್ಮಾಯಿ ಹಾಕಿಸಿದ್ದಾರಂತಲ್ಲಾ. ಇದರಿಂದ ಕುಪಿತಗೊಂಡಿರುವ ಸ್ವಾತಂತ್ರ್ಯವೀರ ಲಿಂಗಾಯಿತರು, ಸಕಲರಿಗೂ ಲೇಸನ್ನ ಬಯಸುವ ದಯವೇ ಧರ್ಮದ ಮೂಲವೆಂದು, ಜಗತ್ತಿಗೆ ಸಾರಿದ ಬಸವಧರ್ಮದಲ್ಲಿ ಹುಟ್ಟಿದ ಈ ಬೊಮ್ಮಾಯಿ ಇತಿಹಾಸವನ್ನು ತಿರುಚಿ ಬಸವಕುಲಕೆ ಅವಮಾನ ಮಾಡಿಬಿಟ್ಟಿದ್ದಾರೆ. ನೆಹರು ಜೈಲಲ್ಲಿ ಇದ್ದಷ್ಟೇ ವರ್ಷ ಪ್ರಧಾನಿಯಾಗಿದ್ದರು. ಯೋಜನೆಗಳ ಮುಖಾಂತರ ಬಡ ಭಾರತವನ್ನ ಅಭಿವೃದ್ಧಿಪಥಕ್ಕೆ ತಂದು ನಿಲ್ಲಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವ ದೇಶದಲ್ಲಿ ಕಾಲೂರುವಂತೆ ಮಾಡಿದರು. ಲೋಕಸಭೆಯಲ್ಲಿ ಅವರನ್ನು ಟೀಕಿಸಿ ಮಾತನಾಡುವುದನ್ನ ಸಹಿಸಿಕೊಂಡರು; ತನ್ನ ಜನ್ಮದಿನವನ್ನ ಮಕ್ಕಳ ದಿನಾಚರಣೆಯನ್ನಾಗಿಸಿದರು; ಅವರು ಬದುಕಿದಷ್ಟೂ ದಿನ ಈ ದೇಶದ ಸರ್ವ ಜನಾಂಗಕ್ಕೂ ಪ್ರಧಾನಿಯಾಗಿದ್ದರೂ. ದಯಾಪರನಾದ ನೆಹರು ವ್ಯಕ್ತಿತ್ವವನ್ನ ದ್ವೇಷಿಸುವ ಬಿಜೆಪಿಗಳು ಎಂದಿನಂತೆ ತಮ್ಮ ಸಂಚಿನಿಂದ ಲಿಂಗಾಯಿತರ ಬೊಮ್ಮಾಯಿಯಿಂದ ನೆಹರುಗೆ ಅವಮಾನ ಮಾಡಿಸಿ ಆ ಮುಖಾಂತರ ಲಿಂಗಾಯಿತರಿಗೇ ಈ ಆರೆಸೆಸ್ಸಿಗರು ಅವಮಾನ ಮಾಡಿಸಿದ್ದಾರೆಂದು ಶರಣ ಸಮೂಹ ಸಿಟ್ಟಾಗಿದೆಯಂತಲ್ಲಾ, ಥೂತ್ತೇರಿ.

****

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರವನ್ನು ಮಾಧುಸ್ವಾಮಿ ಎಂಬ ಮಂತ್ರಿ ’ಇದು ತೆವಳಿಕೊಂಡು ನಡೆಯುತ್ತಿರುವ ಸರಕಾರ; ಅಂತೂ ಹೇಗೋ ದಡಮುಟ್ಟಿ ಮನೆಗೆ ಹೋಗುತ್ತೇವೆ’ ಎಂದು ಬಣ್ಣಿಸಿರುವ ಮಾತನ್ನು ಕರ್ನಾಟಕದ ಜನಸ್ತೋಮ ಇಡಿಯಾಗಿ ಸ್ವೀಕರಿಸಿ ಒಂದು ತಿದ್ದುಪಡಿ ಮಾಡಿಕೊಂಡಿದೆಯಂತಲ್ಲಾ. ಆ ತಿದ್ದುಪಡಿ ಯಾವುದೆಂದರೆ ಇದು ತೆವಳುತ್ತಿರುವ ಸರಕಾರವಲ್ಲಾ, ಕುಂಟುತ್ತಿರುವ ಸರಕಾರ ಎಂದರೆ ಸರಿಯಾಗುತ್ತಿತ್ತು ಎಂದು. ಸದರಿ ಮಾಧುಸ್ವಾಮಿ ಮಾತು ಈವರೆಗೂ ವಿರೋಧಪಕ್ಷಗಳಿಗೇ ಹೊಳೆದಿರಲಿಲ್ಲವಂತಲ್ಲಾ. ಅದಕ್ಕೆ ಕಾರಣ ಸರಕಾರ ತೆವಳುತ್ತಿದೆಯೋ ಕುಂಟುತ್ತಿದೆಯೋ ಎಂಬುದು ಆಡಳಿತದ ಭಾಗವಾಗಿದ್ದವರಿಗೆ ಹೊಳೆಯುತ್ತದೆಯೇ ಹೊರತು, ಹೊರಗಿನವರಿಗೆ ತಿಳಿಯಲಾರದು. ಇಂತಹ ಸರಕಾರ ಜತೆಗಿಟ್ಟುಕೊಂಡು ಸ್ವಾತಂತ್ರ್ಯದ ಅಮೃತೋತ್ಸವಕ್ಕಾಗಿ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರು ಕೈತುಂಬಾ ಬಾವುಟ ಹಿಡಿದು ಮನೆಮನೆಗೆ ಹಂಚುತ್ತಾ ಹೋಗುತ್ತಿರುವಾಗ ಮಳೆಗೆ ಮನೆಬಿದ್ದ ಜಾಗಕ್ಕೆ ಹೋಗಿ, ಮನೆ ಕಳೆದುಕೊಂಡು ಅಳುತ್ತಿದ್ದ ಮಹಿಳೆಗೆ ಬಾವುಟಕೊಟ್ಟು “ಇದನ್ನ ನಿನ್ನ ಮನೆ ಮೇಲಕ್ಕೆ ಕಟ್ಟಕ್ಕ” ಎನ್ನಲಾಗಿ ಆ ಮಹಿಳೆ ಸಿಟ್ಟುಗೊಂಡು “ಅಯ್ಯಾ ನಿನ್ನ ಮನೆಹಾಳಾಗ ನಿನಿಗೇನು ಕಣ್ಣು ಇಂಗಿಹೋಗವಾ? ಮನೆ ಕಳಕಂಡು ಅಳುತಾಯಿದ್ರೆ ಬಾವುಟ ಹಾರಿಸು ಅಂತ ಬಂದಿದ್ದಯಲ್ಲಾ ಥೂ ನಿನ್ನ ಜನ್ಮಕ್ಕೆ” ಅಂದಾಗ ಸಾರಿ ಕಣಕ್ಕ ಎಂದು ಜಾಗ ಖಾಲಿಮಾಡಿದನಂರಲ್ಲಾ, ಥೂತ್ತೇರಿ.

****

ಸಂಘಿಗಳು ನಿಜ ಶ್ರದ್ಧೆಯನ್ನು ತೊರೆದು ಸಂಭ್ರಮವನ್ನ ಸೃಷ್ಟಿಮಾಡಿಕೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಿದ್ದ ಜಲ ಪ್ರಳಯಕ್ಕೆ ದೇಶ ತುತ್ತಾಗಿ ಹೋಗಿದೆ. ಮನೆಯ ಗೋಡೆಗಳು ಕುಸಿದಿವೆ; ಹಸುಗೂಸುಗಳೂ ಅಸುನೀಗಿವೆ; ಸೇತುವೆಗಳು ಕೊಚ್ಚಿಹೋಗಿವೆ; ಗುಡ್ಡಗಳು ಕುಸಿದು ಹೋಗಿವೆ; ಸಂತ್ರಸ್ತ ಜನರ ಕಣ್ಣೀರು ಮಳೆ ಹನಿಗಳೊಂದಿಗೆ ಸೇರಿಹೋಗಿವೆ. ಇಂತಹ ಮಳೆಯ ನಡುವೆ ಶಾಲೆಗೆ ಹೋದ ಹೆಣ್ಣು ಮಗುವೊಂದು ದಬ್ಬೆಯಿಂದ ಕಟ್ಟಿದ ಸೇತುವೆ ಮೇಲೆ ನಡೆದು ಬರುವಾಗ ಆಯತಪ್ಪಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಆ ಮನೆಯಲ್ಲಿ ದುಃಖ ಶಾಶ್ವತವಾಗಿಹೋಯ್ತು. ಈ ಸಂಬಂಧದಾಗಿ ಆ ಪ್ರದೇಶದ ಜನ ನಾಯಕನನ್ನ ಮಾತನಾಡಿಸಿದರೆ ನನ್ನ ಅವಧಿಯಲ್ಲಿ ಸೇತುವೆ ಆಗಿಲ್ಲ ನಿಜ ಆದರೆ ಎಪ್ಪತ್ತು ವರ್ಷ ದೇಶ ಆಳಿದವರು ಏನು ಮಾಡಿದ್ದಾರೆ. ಹೋಗಲಿ ಅವರ ಅವಧಿಯಲ್ಲಿ ಇಂತಹ ಮಳೆ ಬಂದಿತ್ತೆ ಎಂದು ಮಾತನಾಡಿದಾನಲ್ಲಾ. ಈ ಮೂರ್ಖ ಬಿಜೆಪಿ ಎಮ್ಮೆಲ್ಲೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ದೇಶದ ಯಾವುದೇ ಸಮಸ್ಯೆಯನ್ನು ಮುಸುಡಿಗೆ ಹಿಡಿದರೂ ಕೂಡ ಎಪ್ಪತ್ತು ವರ್ಷ ಆಳಿದವರು ಏನು ಮಾಡುತ್ತಿದ್ದರು ಎನ್ನುತ್ತವೆ. ಇದೇ ಮೋದಿ ಕಾಂಗ್ರೆಸ್ಸಿಗೆ ಅರವತ್ತು ವರ್ಷ ಅಧಿಕಾರ ಕೊಟ್ಟಿರಿ, ನೀವು ನನಗೆ ಕೇವಲ ಅರವತ್ತು ದಿವಸ ಕೊಡಿ ಎಂದಿದ್ದರು. ಇಲ್ಲಿ ಕಾಂಗ್ರೆಸ್ಸೇತರ ಮೊರಾರ್ಜಿ, ವಾಜಪೇಯಿ, ದೇವೇಗೌಡರು, ಗುಜ್ರಾಲ್ ಆಡಳಿತವಿದ್ದ ಲೆಕ್ಕ ಈ ಬಿಜೆಪಿಗಳಿಗೇ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.

****

ಈ ಬಿಜೆಪಿಗಳು ಸಾವರ್ಕರ್ ಚಿತ್ರವನ್ನು ಸ್ವತಂತ್ರ ಹೋರಾಟಗಾರರ ಸಾಲಿಗೆ ತಂದು ಅಂಟಿಸತೊಡಗಿವೆ. ಅಂಡಮಾನ್ ದ್ವೀಪದ ಕೊಠಡಿಯಲ್ಲಿರಲಾಗದೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಕೊಟ್ಟು ಭಾರತಕ್ಕೆ ಬಂದು ಪುರೋಹಿತಶಾಹಿ ಧರ್ಮದ ಪುನರುತ್ಥಾನ ಕೈಂಕರ್ಯದಲ್ಲಿ ನಿರತರಾದ ಸಾವರ್ಕರ್ ಮಾನ ಉಳಿಸಲು ಆರೆಸೆಸ್ಸಿಗರು ವೀರ ಪದವನ್ನ ಸೇರಿಸಿದರು. ಅಂಡಮಾನ್ ಜೈಲಿನ ಕೊಠಡಿಯಲ್ಲೇ ಆಯಸ್ಸು ಮುಗಿಸಿ ನೀರು ಪಾಲಾದ ಅಸಂಖ್ಯಾತ ಜನರ್‍ಯಾರು ವೀರರಲ್ಲ. ಸೋತು ಶರಣಾದ ಸಾವರ್ಕರ್ ವೀರ! ಇಂತಹ ವೀರನ ಚಿತ್ರ ತಂದು ಹದಿನೇಳು ವರ್ಷ ಪ್ರಧಾನಿಯಾಗಿದ್ದ ನೆಹರು ಚಿತ್ರದ ಜಾಗದಲ್ಲಿ ಅಂಟಿಸಿವೆ ಮತ್ತು ತಮ್ಮ ಕೃತ್ಯವನ್ನ ಸಮರ್ಥಿಸಿವೆ. ಇತಿಹಾಸವನ್ನೇ ಅಳಿಸಿಹಾಕುವ ಈ ಕಾರ್ಯದ ವಿರುದ್ಧ ಕನ್ನಡದ ಯಾವ ಸಾಹಿತಿಯೂ ತುಟಿಬಿಚ್ಚಿಲ್ಲ. ಬಹುಶಃ ಈ ರಣಮಳೆಯಲ್ಲಿ ಒಳಸೇರಿಕೊಂಡು ಕೃತಿ ರಚನೆಯಲ್ಲಿ ತೊಡಗಿರಬಹುದು. ಇನ್ನ ಪಠ್ಯಪುಸ್ತಕ ತಿದ್ದಿ ದಕ್ಕಿಸಿಕೊಂಡ ತಿಪಟೂರಿನ ನಾಗೇಶ್ ಎಂಬ ಸಚಿವನ ಹಿಂಬಾಲಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಥಾದಲ್ಲಿ ರಾಷ್ಟ್ರಧ್ವಜಕ್ಕಿಂತ ತಮ್ಮ ಸಂಘದ ಧ್ವಜವನ್ನೇ ಎತ್ತರದಲ್ಲಿ ಹಾರಿಸುತ್ತ ಹೋಗಿದ್ದು ನೋಡಿದ ತಿಪಟೂರಿನ ಜನ ಮನುಷ್ಯನಿಗೆ ಹುಚ್ಚು ಕೆರಳಿದರೆ ಏನಾಗುತ್ತವೆ ಎಂಬುದಕ್ಕೆ ಈ ಜನಗಳೇ ಉದಾಹರಣೆಯೆಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...