Homeಅಂಕಣಗಳುಸಿದ್ದರಾಮಯ್ಯ ರಾವಣನಂತಲ್ಲಾ!

ಸಿದ್ದರಾಮಯ್ಯ ರಾವಣನಂತಲ್ಲಾ!

- Advertisement -
- Advertisement -

ಪಾಪಾಸು ಕಳ್ಳಿಯ ಟಿಸಿಲಿನಂತಿರುವ ಬಿಜೆಪಿಯ ಭಜರಂಗಿ ಪಡೆ ಹಿಜಾಬ್‌ಗೆ ಕೈಹಾಕಿ ಎಳೆದು ನಂತರ, ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಮರ ಅಂಗಡಿಗಳಿರಬಾರದೆಂದು ಬೊಬ್ಬೆಹೊಡೆದ ಕೂಡಲೇ ಕರ್ನಾಟಕದ ತುಂಬೆಲ್ಲಾ ಬೊಬ್ಬೆಯದನಿ ಕೇಳಿತಲ್ಲಾ. ಏಕೆಂದರೆ ಈ ಬಿಜೆಪಿ ಅಥವಾ ಇನ್ನಾವುದೇ ಅದರ ಅಂಗ ಸಂಸ್ಥೆಗಳಿಗೆಲ್ಲಾ ಸ್ವಿಚ್‌ಬೋರ್ಡಿರುವುದು ಒಂದೇ ಜಾಗದಲ್ಲಿ. ಅದನ್ನು ಒತ್ತಿದ ಕೂಡಲೇ ಇಡೀ ನಾಡಿನ ತುಂಬೆಲ್ಲಾ ಒಂದೇ ಗಳಿಗೆಯಲ್ಲಿ ಮತೀಯ ತಲೆಗಳಿಗೆ ವಿದ್ಯುತ್ ಹರಿದಂತಾಗಿ ಶಾರ್ಟ್ ಸರ್ಕ್ಯೂಟ್ ಆಗುವುದು ಹಿಂದಿನಿಂದಲೂ ನಡೆದು ಬಂದಿದೆಯಂತಲ್ಲಾ. ಆದರೇನು ಈಗ ಇಂತಹ ಸ್ವಿಚ್ ಲೈನನ್ನ ಮಾಧ್ಯಮದವರೂ ಎಳೆದುಕೊಂಡು ಇಡೀ ದಿನ ಅಳೆದು, ಸುರಿದು, ಕೇರಿ, ತೂರಿ, ಅಯ್ಯೋಪಾಪಾ ಎಂಬ ಉದ್ಘಾರಕ್ಕೆ ತುತ್ತಾಗಿವೆಯಲ್ಲಾ. ಸಿದ್ದು ಜಗದ್ಗುರುಗಳು ಕೇಸರಿ ಬಟ್ಟೆ ತಲೆ ಮೇಲೆ ಹಾಕುವುದಿಲ್ಲವೆ ಎಂಬ ಮಾತೇ ಕಾರಣವಾಗಿ, ಮಾಧ್ಯಮದವರು ಮನಸೊ ಇಚ್ಛೆ ವದರೀ ವದರೀ ಜಗದ್ಗುರುಗಳನ್ನ ಎಬ್ಬಿಸಿ ಸಿದ್ದು ಮೇಲೆ ದಾಳಿ ಮಾಡಿಸಿದವಲ್ಲಾ. ವಾಸ್ತವವಾಗಿ ರಾಮಚಂದ್ರಾಪುರ ಮಠ, ಉಡುಪಿ ಮಠದ ಯತಿಗಳಿದ್ದವರೆಲ್ಲಾ ಸುಮ್ಮನಿದ್ದು ಎಡೂರಪ್ಪನವರಿಂದ ಧನ ಸಹಾಯ ಪಡೆದ ಧರ್ಮಗುರುಗಳೇ ಸಿದ್ದು ಮೇಲೆ ಬಿದ್ದಿದ್ದು ನೋಡಿ ಈ ಬಿಜೆಪಿಗಳಿಗೆ ಪರಮಾನ್ನ ಉಂಡಷ್ಟು ಖುಷಿಯಾಯ್ತಂತಲ್ಲಾ. ಥೂತ್ತೇರಿ.

*******

ಇನ್ನ ಬಿಜೆಪಿ ಪಾರ್ಟಿಯ ಅಧ್ಯಕ್ಷ ನಳೀನ್ ಕಟೀಲು ಎಂಬ ಬೃಹಸ್ಪತಿಗಳು ಸಿದ್ದುವನ್ನು ರಾವಣನಿಗೆ ಹೋಲಿಸಿದ್ದಾರೆ. ದಕ್ಷಿಣ ಕನ್ನಡದ ಈತ ಯಕ್ಷಗಾನವನ್ನು ನೋಡಿಯಾದರೂ ರಾವಣನ ಬಗ್ಗೆ ತಿಳಿದುಕೊಳ್ಳಬೇಕಿತ್ತು. ವಾಸ್ತವವಾಗಿ ಸಿದ್ದುಗೆ ರಾವಣನನ್ನು ಹೋಲಿಸಿದ್ದೇ ಸರಿಯಿಲ್ಲವೆಂಬುದು ರಾವಣಾಭಿಮಾನಿಗಳ ಅಭಿಪ್ರಾಯ. ರಾವಣ ಅಪ್ಪಟ ಶಿವಭಕ್ತ, ಸಂಗೀತಗಾರ, ವೀಣೆ ಶೇಷಣ್ಣನಿಗಿಂತ ಒಳ್ಳೆ ವೈಣಿಕ, ಒಳ್ಳೆಯ ನೃತ್ಯಪಟು. ಅಜೇಯನೆನಿಸಿಕೊಂಡಿದ್ದ ಒಳ್ಳೆ ಆಡಳಿತಗಾರ ಕುಬೇರನನ್ನ ಸೋಲಿಸಿ ಪುಷ್ಪಕ ವಿಮಾನವನ್ನ ಪಡೆದವನು. ಭುಜಂಗ ಸ್ತ್ರೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ
ರಾಜಲಕ್ಷಣದಿಂದ ಶೋಭಿತನಾಗಿದ್ದ ತನ್ನ ರಾಜ್ಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದ ಪ್ರಥಮ ದೊರೆ. ಲಂಕೆಯನ್ನ ರಕ್ಷಿಸಲು ಲಂಕಿಣಿ ನಿಲ್ಲಿಸಿದ್ದ. ದಂಡಕಾರಣ್ಯ ರಕ್ಷಿಸಲು ತಾಟಕಿ ನೇಮಿಸಿದ್ದ. ಲಂಕೆಯ ಹೆಬ್ಬಾಗಿಲು ಕಾಯಲು ಸಿಂಹಿಣಿ ನೇಮಿಸಿದ್ದ. ಅಶೋಕ ವನ ನೋಡಿಕೊಳ್ಳಲು ತ್ರಿಜಟಿಯನ್ನು ಬಿಟ್ಟಿದ್ದ. ನಮ್ಮ ಪುರಾಣಕಾಲದ ರಾವಣನೆ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದವನು. ಇಂತಹ ವಿಪ್ರೋತ್ತಮನಿಗೆ ಕುರುಬ ಸಮುದಾಯದವರ ಪೈಕಿಯಾದ ಸಿದ್ದರಾಮಯ್ಯನವರನ್ನ ಹೋಲಿಸಬಾರದಿತ್ತೆಂದು ರಾಮಾಯಣ ಪ್ರಿಯ ವಿಪ್ರೊತ್ತಮರು ಕಟಿಲರ ಬಗ್ಗೆ ಕೆಂಡಾಮಂಡಲವಾಗಿ ದ್ದಾರಂತಲ್ಲಾ. ಥೂತ್ತೇರಿ.

ನಳಿನ್

*******

ಪುರಾಣಪ್ರಿಯರು ರಾಜಕೀಯ ವಿಶ್ಲೇಷಕರ ಪ್ರಕಾರ ಸಿದ್ದು ಪ್ರೊತ್ಸಾಹಿಸಿದ್ದು ಒಂದೆರಡು ಮಹಿಳೆಯರನ್ನ ಮಾತ್ರ. ಆ ಪೈಕಿ ಜಯಮಾಲ ಮಂಜುಳ ಮಾನಸೆ, ಕೆ.ಆರ್ ಪೇಟೆ ಮೀನಾಕ್ಷಿ ಮತ್ತಿನ್ನಿಬ್ಬರು ಮಹಿಳಾ ಮಣಿಗಳನ್ನು ಬಿಟ್ಟರೆ ರಾವಣನಂತೆ ಇಡೀ ರಾಜ್ಯ ನೋಡಿಕೊಳ್ಳಲು ಮಹಿಳೆಯರನ್ನ ನೇಮಿಸಲಿಲ್ಲ. ಈ ಹೋಲಿಕೆ ತಪ್ಪು. ಇನ್ನ ಸಿದ್ದು ರಂಗದ ಕುಣಿತಕ್ಕೆ ಮೀಸಲೇ ಹೊರತು ನೃತ್ಯಪಟುವಲ್ಲ. ಇನ್ನು ವೀಣೆಗೂ ತಂಬೂರಿ ಸರೋಟ್‌ಗೂ ವ್ಯತ್ಯಾಸ ಸಿದ್ದುರವರಿಗೆ ಗೊತ್ತೋ ಇಲ್ಲವೋ ಅವರೇ ಬಲ್ಲರು. ಒಳ್ಳೆ ಆಡಳಿತಗಾರ ಎಂಬುದನ್ನ ಒಪ್ಪಿಕೊಳ್ಳಬೇಕು. ಇನ್ನು ಅವರ ಬಜೆಟ್ ಮಂಡನೆ ಭುಜಂಗ ಸ್ತ್ರೋತ್ರಕ್ಕೆ ಸಮ ಅನ್ನಬಹುದು. ಸದನದಲ್ಲಿ ಅಗ್ನಿಯಂತೆ ಜ್ವಲಿಸಿದರೂ ಜೊತೆಯಲ್ಲಿ ಕುಳಿತು ಹೊಟ್ಟೆತುಂಬಾ ಭೋಜನ ಬಾರಿಸುವ ವ್ಯಕ್ತಿ. ರಾವಣನಂತೆ ರಾಜ ಲಕ್ಷಣವೇನೂ ಸಿದ್ದು ಮುಖದಲ್ಲಿಲ್ಲ. ಇನ್ನ ಕುಬೇರನನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದ ರಾವಣನಿಗೆ ಸಿದ್ದು ಹೋಲಿಸುವುದಾದರೆ, ದೇವು ಫ್ಯಾಮಿಲಿಯನ್ನ ಮೂಲೆಗೆ ಸರಿಸಿ ವಿರೋಧಪಕ್ಷದ ಸಾರಥ್ಯ ಪಡೆದದ್ದು. ಸೀತಾಪಹರಣದಂತ ಕೃತ್ಯ ಎಸಗಿದವರಲ್ಲ. ಆದ್ದರಿಂದ ಕಟೀಲರ ವ್ಯಾಖ್ಯಾನಕ್ಕೆ ಇತ್ತು ಸಿದ್ದು ಅಭಿಮಾನಿಗಳು ಮತ್ತು ಅತ್ತ ವಿಪ್ರೋತ್ತಮರು ಶ್ಯಾನೆ ಸಿಟ್ಟಾಗಿದ್ದಾರಂತಲ್ಲಾ.

********

ಕಟೀಲರ ಇನ್ನೊಂದು ಮಾತು, ರಾಮ ಜನರನ್ನು ನಂಬುತ್ತಿದ್ದ ಎಂಬುದು. ಇದರ ಅನಾಹುತವೆಂದರೆ ಅಗಸನ ಮಾತನ್ನು ನಂಬಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದು, ಮೊದಲು ಹನ್ನೆರಡು ವರ್ಷ ವನವಾಸ, ಆ ನಂತರ ಮತ್ತೆ ವನವಾಸ ಅನುಭವಿಸಿದ ಸೀತೆ ಕಡೆಗೆ ಸಾಕಪ್ಪ ಈ ರಾಮನ ಸಹವಾಸ ಎಂದು ತವರು ಮನೆಗೆ ಹೋಗಿ ತರಕಾರಿ ಬೆಳೆದುಕೊಂಡು ಕಾಲ ಹಾಕಿದಳಲ್ಲಾ. ಈ ಸಾಲುಗಳ ಬಗ್ಗೆ ಅನುಮಾನವಿದ್ದವರು ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಓದುವುದು ಒಳ್ಳೆಯದು. ಅಂದ ಹಾಗೆ ಅವರಣವನ್ನು ತಲೆಮೇಲೆ ಹೊತ್ತುಕೊಂಡು ಮಾರಿದೆ ಸಂಘಪರಿವಾರ ಸಮೂಹ ಉತ್ತರಕಾಂಡದ ಬಗ್ಗೆ ಉಸಿರೆತ್ತಿಲ್ಲವಂತಲ್ಲಾ. ಇದೆಲ್ಲಕಿಂತ ಮಜಾ ಅಂದರೆ ಬಷೀರಣ್ಣನವರು ರಾಮಾಯಣವನ್ನು ವ್ಯಾಖ್ಯಾನಿಸಿರುವ ಪರಿ ಭೈರಪ್ಪನವರಿಗೆ ಹತ್ತಿರವಾಗಿದೆಯಲ್ಲಾ. “ನೋಡಿ ಸಾರ್ ಒಬ್ಬ ಮನುಷ್ಯ ತಂಗಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ರಾಜ್ಯನೂ ಕಳಕೊಂಡ. ತಂದೆ ಮಾಡಿದ ಕೆಲ್ಸಕ್ಕೆ ರಾಜ್ಯ ಬಿಟ್ಟು ಬಂದ ರಾಮ ದೊಡ್ಡವುನೊ, ರಾವಣ ದೊಡ್ಡವುನೊ, ನೀವೇ ಹೇಳಿ ಸಾರ್. ಪಾಪ ಶೂರ್ಪನಕಿ ಸ್ಟೋರಿ ಈ ಕಾಲದಲ್ಲಿ ಅಸಿಡ್ ದಾಳಿಗೆ ತುತ್ತಾಗಿ ಬುರ್ಖಾ ಹಾಯ್ಕಂಡು ಓಡಾಡ್ತರಲ್ಲ, ಅಂತ ಹೆಂಗಸರ ಕತೆ ಆಗಿರಬೌದು, ಯಾವುದಾದ್ರು ಹುಡುಗಿ ಲವ್ ಮಾಡು ಅಂದ್ರೆ ಆಗಲ್ಲ ಸ್ವಲ್ಪ ಪ್ರಾಬ್ಲಂ ಅನ್ನಬೇಕು ಸಾರ್! ಮೂಗುಕುಯ್ದಾಕ್‌ಬುಡದ” ಎಂದು ಚಿಂತಾಕ್ರಾಂತರಾದರಲ್ಲಾ. ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...