ಜಮ್ಮು ಮತ್ತು ಕಾಶ್ಮೀರದ 20 ಕ್ಕೂ ಹೆಚ್ಚು ರಾಜಕೀಯ ನಾಯಕರು, ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ಗೆ ಸೇರ್ಪಡೆಗೊಂಡವರಲ್ಲಿ ಹೆಚ್ಚಿನವರು ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದವರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಮತ್ತು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ಉಪಸ್ಥಿತರಿದ್ದರು.
ಮಾಜಿ ಸಚಿವರು, ಎರಡು ಬಾರಿ ಶಾಸಕರು, ಎಎಪಿಯ ಎಸ್ಸಿ / ಎಸ್ಟಿ ಮತ್ತು ಒಬಿಸಿ ವಿಭಾಗದ ಮುಖ್ಯಸ್ಥರಾಗಿದ್ದ ಯಶ್ಪಾಲ್ ಕುಂದಲ್ ಕಾಂಗ್ರೆಸ್ಗೆ ಸೇರಿದವರಲ್ಲಿ ಒಬ್ಬರಾಗಿದ್ದರು. ಜೆಕೆಪಿಸಿಸಿಯ ಮಾಜಿ ಉಪಾಧ್ಯಕ್ಷ ಹಾಜಿ ಅಬ್ದುಲ್ ರಶೀದ್ ದಾರ್ ಆಜಾದ್ ಪಕ್ಷದಿಂದ ಕಾಂಗ್ರೆಸ್ಗೆ ಮರಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಮ್ಮು& ಕಾಶ್ಮೀರದ ನಾಯಕರ ಪಟ್ಟಿ: ನರೇಶ್ ಕೆ ಗುಪ್ತಾ (ಡಿಪಿಎಪಿ), ಶಾಮ್ ಲಾಲ್ ಭಗತ್ (ಡಿಪಿಎಪಿ), ನಮ್ರತಾ ಶರ್ಮಾ (ಅಪ್ನಿ ಪಾರ್ಟಿ), ಸೈಮಾ ಜಾನ್ (ಡಿಪಿಎಪಿ), ಶಹಜೆಹಾನ್ ದಾರ್ (ಡಿಪಿಎಪಿ), ಫಾರೂಕ್ ಅಹ್ಮದ್ (ಎಎಪಿ), ತರಂಜಿತ್ ಸಿಂಗ್ ಟೋನಿ, ಗಜಾನ್ಫರ್ ಅಲಿ, ಸಂತೋಷ್ ಮಜೋತ್ರಾ (ಡಿಪಿಎಪಿ ), ರಜನಿ ಶರ್ಮಾ (ಡಿಪಿಎಪಿ), ನಿರ್ಮಲ್ ಸಿಂಗ್ ಮೆಹ್ತಾ (ಡಿಪಿಎಪಿ), ಮದನ್ ಲಾಲ್ ಚಲೋತ್ರಾ , ಹಮಿತ್ ಸಿಂಗ್ ಬತ್ತಿ (ಎಎಪಿ), ರಮೇಶ್ ಪಂಡೋತ್ರ (ಎಎಪಿ), ವೈದ್ ರಾಜ್ ಶರ್ಮಾ (ಎಎಪಿ), ಮನ್ದೀಪ್ ಚೌಧರಿ (ಎಎಪಿ), ನಜೀರ್ ಅಹ್ಮದ್ ಔಕಾಬ್, ಮಹೇಶ್ವರ ವಿಶ್ವಕರ್ಮ ಮತ್ತು ಜಂಗ್ ಬಹದ್ದೂರ್ ಶರ್ಮಾ (ಡಿಪಿಎಪಿ) ಅವರು ಕಾಂಗ್ರೆಸ್ ಸೇರಿದ ನಾಯಕರ ಪಟ್ಟಿಯಲ್ಲಿದ್ದಾರೆ.
ಇದನ್ನು ಓದಿ: ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು? ಹೇಗೆ?