ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಚುನಾವಣೆಗೂ ಮುನ್ನವೇ 22 ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿ ಅಡಗಿಸಿಟ್ಟಿದ್ದರು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.
ಬುಧವಾರ ಕಾಂಗ್ರೆಸ್ನ ‘ಪ್ರಜಾ ಪಾಲನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಾರಿಗೂ ಗೊತ್ತಿಲ್ಲದಂತೆ ಕೆಸಿಆರ್ 22 ಕಾರುಗಳನ್ನು ಖರೀದಿಸಿ ವಿಜಯವಾಡದಲ್ಲಿ ಅಡಗಿಸಿಟ್ಟಿದ್ದರು. ನಾನು ಸಿಎಂ ಆಗಿ 10 ದಿನಗಳವರೆಗೆ ಈ ವಿಚಾರ ಗೊತ್ತಿರಲಿಲ್ಲ. ಬಳಿಕ ಅಧಿಕಾರಿಯೊಬ್ಬರು ನನ್ನ ಗಮನಕ್ಕೆ ತಂದರು. ಕೆಸಿಆರ್ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಮನೆಗೆ ಹೋದರು. ಆದರೆ, ಕಾರುಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಎಲ್ಲಾ ಕಾರುಗಳು ಸರ್ಕಾರದ ಸ್ವತ್ತು ಎಂದು ಹೇಳಿದ್ದಾರೆ.
Previous BRS govt bought 22 Toyota Land Cruisers hoping KCR would become CM again: Revanth Reddy
Addressing a press conference after launching the 'Praja Palana' public outreach programme, CM #RevanthReddy said, ''After I assumed charge as Chief Minister, I told officials not… pic.twitter.com/ywUswEhXgD
— Sudhakar Udumula (@sudhakarudumula) December 27, 2023
ಕಾಂಗ್ರೆಸ್ ಸರ್ಕಾರವನ್ನು ಹಿಂಬಾಲಿಸಲು ಬಿಆರ್ಎಸ್ ಶ್ಯಾಡೋ ಟೀಂ ರಚಿಸಲಿದೆ ಎಂಬ ಮಾಜಿ ಸಚಿವ ಕೆಟಿಆರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ರೇವಂತ್ ರೆಡ್ಡಿ, ಸದನದಲ್ಲಿ ಪ್ರತಿಪಕ್ಷ ಸರ್ಕಾರಕ್ಕೆ ಸಲಹೆ ನೀಡಿ, ಕಾರ್ಯವೈಖರಿಗಳನ್ನು ಪರಿಶೀಲನೆ ನಡೆಸುತ್ತಿರುವಾಗ ಶ್ಯಾಡೋ ಟೀಂ ಮಾಡುವ ಅನಿವಾರ್ಯತೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಸೋತರೂ, ಗೆದ್ದರೂ ನಿಮ್ಮ ಜೊತೆ ಮಾಜಿ ಮಂತ್ರಿಗಳಿದ್ದಾರೆ. ಅವರು ಶ್ಯಾಡೋ ಮಂತ್ರಿಗಳಾಗಿ ಕೆಲಸ ಮಾಡಲಿ. ಅವರು ಸಚಿವರಾಗಿದ್ದಾಗ ಕೆಲಸ ಮಾಡಿಲ್ಲ, ಈಗಲಾದರೂ ಮಾಡಲಿ ಎಂದು ಕೆಟಿಆರ್ಗೆ ರೇವಂತ್ ರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.
ಕೆಟಿಆರ್ ಏನೇನೋ ಮಾತನಾಡುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸೋತ ನೋವಿನಲ್ಲಿ ಜನರು ಹಲವು ರೀತಿಯಲ್ಲಿ ಮಾತನಾಡುತ್ತಾರೆ. ಅವರು ಪ್ರತಿಪಕ್ಷವಾಗಿ ಸರ್ಕಾರಕ್ಕೆ ಸಲಹೆ ನೀಡುವ ಅವಕಾಶವಿದೆ, ಅದನ್ನು ಮಾಡಲಿ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ರಾಜ್ಯದ ಪ್ರಮುಖ ವಿಷಯಗಳಲ್ಲಿ ಒಂದಾದ ಟಿಎಸ್ಪಿಎಸ್ಸಿ ಪರೀಕ್ಷೆಯ ಕುರಿತು ಮಾತನಾಡಿದ ಸಿಎಂ, ಪರೀಕ್ಷಾ ಮಂಡಳಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಿರ್ಧಾರ ಈಗ ರಾಜ್ಯಪಾಲರ ಬಳಿ ಇದೆ ಎಂದಿದ್ದಾರೆ.
ಇದನ್ನೂ : ಯತ್ನಾಳ್ ಹಿಟ್ ಆ್ಯಂಡ್ ರನ್ ಮಾಡದೆ ದಾಖಲೆ ಒದಗಿಸಲಿ: ಸಿಎಂ ಸಿದ್ದರಾಮಯ್ಯ