ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ಒಂದೇ ಚಾನೆಲ್ ಆಗಿ ವಿಲೀನಗೊಳಿಸಲಾಗಿದ್ದು, ಇನ್ನು ಮುಂದೆ ಇದನ್ನು `ಸಂಸದ್ ಟಿವಿ’ ಎಂದು ಕರೆಯಲಾಗುತ್ತದೆ. ಚಾನೆಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನು ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ನೇಮಿಸಾಲಾಗಿದೆ.
ಸಂಸದ ಟಿವಿಗೆ ಎರಡು ಚಾನೆಲ್ಗಳಿರಳಿದ್ದು, ಲೋಕಸಭೆ ಮತ್ತು ರಾಜ್ಯಸಭಾ ಅಧಿವೇಶನಗಳು ಈ ಚಾನೆಲ್ಗಳು ನೇರ ಪ್ರಸಾರ ಮಾಡುತ್ತವೆ. ಆಡಳಿತಾತ್ಮಕ ಉದ್ದೇಶಗಳಿಗಾಗಿ ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಫೀಕರ್ ಓಂ ಬಿರ್ಲಾ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಗೆ ಬೆಂಬಲ ಘೋಷಿಸಿದ ತೇಜಸ್ವಿ ಯಾದವ್
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು 2020 ರ ಜೂನ್ ತಿಂಗಳಲ್ಲೇ ಎರಡು ಚಾನೆಲ್ಗಳ ವಿಲೀನವನ್ನು ಪರಿಶೀಲಿಸಲು ರಚಿಸಿದ ಸಮಿತಿಯು ‘ಹೆಚ್ಚು ದೃಡವಾದ ಸಂಪಾದಕೀಯ ನೀತಿಯನ್ನು ಪ್ರಸ್ತಾಪಿಸಿದೆ’ ಎಂದು ವರದಿ ಮಾಡಿತ್ತು.
ಸಂಸತ್ತಿನ ಅಧಿವೇಶನ ಇಲ್ಲದಿದ್ದಾಗ, ಎರಡು ಚಾನೆಲ್ಗಳು “ದೊಡ್ಡ ಪ್ರಮಾಣದಲ್ಲಿ ಸಾಮಾನ್ಯ ವಿಷಯವನ್ನು” ಪ್ರಸಾರ ಮಾಡುತ್ತವೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ನನ್ನನ್ನು ಬಂಧಿಸಲು ಲಿಂಗಾಯತ IPS ಅಧಿಕಾರಿಗಳನ್ನು ಕಳುಹಿಸಿದ್ದರು: ಯತ್ನಾಳ್ ಆರೋಪ