- Advertisement -
- Advertisement -
ನಾಲ್ಕು ದಿನಗಳ ಹಿಂದೆ ತಾನೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನಾವಿಸ್ರವರು ಬಹುಮತ ಸಾಬೀತುಪಡಿಸಲು ಸುಪ್ರೀಂ ತಾಕೀತು ಮಾಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದಾರೆ.
ಇದಕ್ಕೂ ಒಂದು ಗಂಟೆ ಮೊದಲೇ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ರವರು ಸಹ ರಾಜಿನಾಮೆ ನೀಡಿದ್ದರು. ಅಲ್ಲಿಗೆ ಹಲವು ದಿನಗಳಿಂದ ಸರ್ಕಾರ ರಚನೆಯ ಕುರಿತು ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಿದೆ.
ಇಂದು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತಾಡಿದ ದೇವೇಂದ್ರ ಫಡ್ನವಿಸ್ರವರು ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಎಂದು ತಿಳಿಸಿ ರಾಜಿನಾಮೆಯನ್ನು ಘೋಷಿಸಿದ್ದಾರೆ.
ನಿನ್ನೆಯವರೆಗೂ 170 ಶಾಸಕರ ಬೆಂಬಲ ಇದೆ ಎಂದು ಘೋಷಿಸಿಕೊಂಡಿದ್ದ ಬಿಜೆಪಿ ಈಗ ಬಹುಮತ ಸಾಬೀತು ಪಡಿಸುವ ಸಮಯ ಬಂದಕೂಡಲೇ ಅವರು ಹಿಂಜರಿದು ರಾಜಿನಾಮೆ ನೀಡಿದ್ದಾರೆ.