ಗಾಂಧಿ ಕೊಂದ ಗೊಡ್ಸೆಯನ್ನು ದೇಶಭಕ್ತ ಎಂದು ಸಂಸತ್ತಿನಲ್ಲಿ ಹೇಳಿದ್ದ ಪ್ರಗ್ಯಾ ಠಾಕೂರ್ ಹೇಳಿಕೆಗೆ ಸಂಸತ್ತಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಕಲಾಪದಿಂದ ಹೊರನಡೆದಿವೆ.
ಯಾರಾದರೂ ನಾಥುರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಪರಿಗಣಿಸಿದರೆ, ನಮ್ಮ ಪಕ್ಷ ಅದನ್ನು ಖಂಡಿಸುತ್ತದೆ. ಮಹಾತ್ಮ ಗಾಂಧಿ ನಮಗೆ ವಿಗ್ರಹ, ಅವರು ನಮ್ಮ ಮಾರ್ಗದರ್ಶಕ ಬೆಳಕು ಮತ್ತು ಹಾಗೇ ಉಳಿಯುತ್ತಾರೆ ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಗೋಡ್ಸೆ ಬಗ್ಗೆ ಹೇಳಿಕೆ: ಸಂಸತ್ತಿನ ರಕ್ಷಣಾ ಸಮಿತಿಯಿಂದ ಪ್ರಗ್ಯಾ ಠಾಕೂರ್ ಹೊರಕ್ಕೆ…
ಲೋಕಸಭೆಯಲ್ಲಿ ಬಿಜೆಪಿಯ ಪ್ರಗ್ಯಾ ಠಾಕೂರ್ರ ಹೇಳಿಕೆಯ ಕುರಿತು ಎಐಎಂಐಎಂನ ಓವೈಸಿ ಪ್ರತಿಕ್ರಿಯಿಸಿ, “ನಾಥುರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಪ್ರಗ್ಯಾ ಕರೆಯುತ್ತಾರೆ. ಈಗೆ ಕರೆಯುತ್ತಿರುವಾಗ ಇದೇ ಮೊದಲ ಬಾರಿಯಲ್ಲ. ಅವರು ಗಾಂಧಿಯ ಶತ್ರು ಮತ್ತು ಗಾಂಧಿ ಕೊಲೆಗಾರರ ಬೆಂಬಲಿಗರು ಎಂದು ಇದು ಎತ್ತಿ ತೋರಿಸುತ್ತದೆ. ನಾನು ಸ್ಪೀಕರ್ಗೆ ಆಯ್ಕೆ ನೀಡುತ್ತೇನೆ, ಏನಾಗುತ್ತದೆ ಎಂದು ನೋಡೋಣ” ಎಂದಿದ್ದಾರೆ.
ಕಾಂಗ್ರೆಸ್ನ ಎಆರ್ ಚೌಧರಿ ಮಾತನಾಡಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ನಾಯಕರು ತ್ಯಾಗ ಮಾಡಿದ ಪಕ್ಷ ಕಾಂಗ್ರೆಸ್ ಅನ್ನು ಭಯೋತ್ಪಾದಕ ಪಕ್ಷ ಎಂದು ಬಿಜೆಪಿ ಸಂಸದ ಪ್ರಜ್ಞಾ ಠಾಕೂರ್ ಕರೆಯುತ್ತಿದ್ದರು. ಈಗ ಮಹಾತ್ಮ ಗಾಂಧಿಯ ಕೊಲೆಗಾರನನ್ನು ದೇಶಭಕ್ತ ಎನ್ನುತ್ತಿದ್ದಾರೆ. ಏನಾಗುತ್ತಿದೆ? ಈ ಬಗ್ಗೆ ಸದನವು ಮೌನವಾಗಿರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ: ಅವರು ಬಿಜೆಪಿ ಸಂಸದ ಪ್ರಜ್ಞಾ ಠಾಕೂರ್ ಹೇಳಿದ್ದನ್ನು ದಾಖಲೆಯಿಂದ ಹೊರಹಾಕಲಾಗಿದೆ. ಅದು ದಾಖಲೆಯಲ್ಲಿಲ್ಲದಿದ್ದರೆ ಚರ್ಚೆ ಹೇಗೆ? ಎಂದುಪ್ರತಿಕ್ರಿಯಿಸಿದ್ದಾರೆ.