Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

ಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

- Advertisement -
- Advertisement -

ರೈತಾಪಿ ಜನಗಳಿಗೆ ಸಂಬಂಧಪಟ್ಟ ಮೋದಿಯವರ 3 ಕಾಯ್ದೆಗಳನ್ನು ಸರ್ವೋಚ್ಚ ನ್ಯಾಯಾಲಯ ತಡೆ ಹಿಡಿದಿದೆ. ರೈತರೊಡನೆ ಸಮಾಲೋಚನೆ ಮಾಡಲು ಒಂದು ತಜ್ಞರ ಸಮಿತಿ ರಚಿಸಬೇಕೆಂದು ನ್ಯಾಯಾಲಯ ಈ ಹಿಂದೆಯೇ ಹೇಳಿದ್ದರೂ, ಇದುವರೆಗೆ ಸರ್ಕಾರವೇ ಸಂಧಾನ ಸಭೆಗಳನ್ನು ನಡೆಸುತ್ತಾ ಕಾಲ ಕಳೆದಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಠಿಣವಾದ ಮಾತುಗಳನ್ನಾಡಿದೆ. ರೈತರ 26ರ ಟ್ರ್ಯಾಕ್ಟರ್ ಮೆರವಣಿಗೆ ರದ್ದು ಮಾಡಲು ಕೋರಿದ ಅರ್ಜಿಯನ್ನು ವಜಾಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ. ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯವೆಂದರೂ ಒಪ್ಪತಕ್ಕ ಮಾತೇ.

ಮೋದಿಯವರು ಈ ಮೂರು ರೈತ ವಿರೋಧಿ ಆರ್ಡಿನೆಸ್ಸ್‌ಗಳನ್ನು ಜಾರಿ ಮಾಡುವುದಕ್ಕೆ ಮೊದಲೇ ಏನೇನು ತಯಾರಿ ನಡೆಸಿದ್ದರು ಎಂಬುದನ್ನು ತಿಳಿಯೋಣ. ಹರಿಯಾಣದಲ್ಲಿ ಕೈಗಾರಿಕೆ ಸ್ಥಾಪಿಸುವ ನೆಪಹೂಡಿ, ಒಂದೊಂದು ಗ್ರಾಮದಲ್ಲಿ 100-150ರಿಂದ ಹಿಡಿದು 500 ಎಕರೆವರೆಗೆ, ಎರಡು ವರ್ಷಗಳ ಹಿಂದಿನಿಂದಲೇ ಅಪಾರ ಹಣ ಕೊಟ್ಟು ರೈತರಿಂದ ಅದಾನಿ ಜಮೀನನ್ನು ಕೊಳ್ಳುತ್ತಾ ಬಂದಿದ್ದಾರೆ. ಭತ್ತ ಮತ್ತು ಗೋಧಿ ಅಧಿಕವಾಗಿ ಬೆಳೆಯುವ ಸ್ಥಳಕ್ಕೆ ಹತ್ತಿರವಿರುವ ರೈಲ್ವೆ ವ್ಯವಸ್ಥೆಯ ಖಾಸಗೀಕರಣಕ್ಕೆ ನಿರ್ಧಾರ ಮಾಡಿರುವುದಲ್ಲದೆ, ಅದಾನಿಯವರ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಕೆಲವು ಮಾರ್ಗಗಳನ್ನು ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ಕಂಟೈನರ್ ಇರುವ ಗೂಡ್ಸ್ ವ್ಯಾಗನ್‌ಗಳನ್ನು ತಯಾರಿಸಲು ಅವರಿಗೆ ಅನುಮತಿ ನೀಡಿದ್ದಾರೆ. 2020ರ ಆರಂಭದಲ್ಲೇ ರೈಲ್ವೆ ಸಚಿವಾಲಯದಲ್ಲಿ ಅದಾನಿ ಅವರನ್ನು ಕೂರಿಸಿಕೊಂಡು ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಸಂಚು ನಡೆಸಿದ್ದಾರೆ. ಅಂಬಾನಿಯವರ ಸಂಸ್ಥೆ ಈ ದಿನಸಿಗಳನ್ನೆಲ್ಲ ಕೊಳ್ಳುವ ತಯಾರಿಯಲ್ಲಿದ್ದಾರೆಂದು ಇತ್ತೀಚೆಗೆ ಬಹಿರಂಗಗೊಂಡಿದೆ. ಈ ಇಬ್ಬರು ಕೋಟ್ಯಾಧಿಪತಿಗಳನ್ನು ಕೂಡಿಕೊಳ್ಳಲು ಟಾಟಾ ಕಂಪನಿಯವರೂ ತವಕ ವ್ಯಕ್ತಪಡಿಸಿದ್ದಾರೆ. ಈ ಆಹಾರ ಧಾನ್ಯಗಳ ವ್ಯಾಪಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಕಂಪನಿಗಳೂ, ಕಾರ್ಪೊರೇಟ್‌ಗಳೂ ಸಹಭಾಗಿತ್ವ ಪಡೆಯಲು ಮುಂದೆ ಬಂದಿವೆ.

ಈ ಕಾನೂನುಗಳು ಜಾರಿಗೆ ಬರುವುದಕ್ಕೆ ಎಷ್ಟೋ ಮೊದಲಿನಿಂದಲೂ ಗುತ್ತಿಗೆ ಕೃಷಿ ಅನಧಿಕೃತವಾಗಿ ನಡೆಯುತ್ತಲೇ ಇದೆ. ಅದರಿಂದ ರೈತರು ನಷ್ಟ ಅನುಭವಿಸಿದ್ದು ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವೇನಲ್ಲ. ಈ ವಿಷಯ ಸರ್ಕಾರದ ಗಮನದಲ್ಲಿದ್ದರೂ ಮೋದಿಯವರು ಈ ಕೃಷಿ ಗುತ್ತಿಗೆ ಕಾನೂನು ರೈತರಿಗೆ ಲಾಭದಾಯಕ ಮತ್ತು ಕಾರ್ಪೊರೇಟ್ ಕಂಪನಿಗಳಿಗೂ ಲಾಭದಾಯಕ ಎಂದು ಸುಳ್ಳು ಹೇಳುತ್ತಿದ್ದಾರೆಯೇ? ಈ ಕಾನೂನು ಅನುಷ್ಠಾನದ ನಂತರ ರೈತರು ಮತ್ತು ಕಾರ್ಪೊರೇಟ್ ಕಂಪನಿಗೂ ವಿವಾದ ಎದ್ದರೆ, ಆಗ ಉಭಯತ್ರರೂ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಮುಂದೆ ತಮ್ಮ ಅಹವಾಲನ್ನು ಮಂಡಿಸಬೇಕು. ಅಲ್ಲಿ ಸಮಾಧಾನಕರವಾದ ತೀರ್ಪು ಬಂದಿದೆ ಎಂದು ಇವರಿಗೆ ಅನಿಸಿದರೆ ಅವರು ಅಂತಿಮ ತೀರ್ಮಾನಕ್ಕಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಜಿಲ್ಲಾಧಿಕಾರಿಗಳ ತೀರ್ಪೇ ಅಂತಿಮ. ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುಂಚೆ ರೈತರು ಇಂತಹ ಪ್ರಸಂಗ ಬಂದಾಗ ಸಿವಿಲ್ ಕೋರ್ಟಿಗೆ ಹೋಗುವ ಅವಕಾಶವಿತ್ತು. ಈ ಹೊಸ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ರಚಿಸಲಾಗಿದೆ.

ಕಂದಾಯ ಇಲಾಖೆ ಎಷ್ಟು ಕುಲಗೆಟ್ಟಿದೆ ಎಂಬ ವಿಚಾರ ಪ್ರತಿ ರೈತನಿಗೂ ಗೊತ್ತು. ಲಂಚ ಕೊಟ್ಟಲ್ಲದೆ ಯಾವ ಕೆಲಸವೂ ಅಲ್ಲಿ ಆಗುವುದಿಲ್ಲ ಇಂತಹ ಇಲಾಖೆಯ ತೀರ್ಪು ಅಂತಿಮ ಎಂದ ಮೇಲೆ ರೈತರಿಗೆ ನ್ಯಾಯ ದೊರಕುವುದಾದರೂ ಹೇಗೆ? ಮೋದಿ ಪೋಷಿತ ಶ್ರೀಮಂತ ವರ್ಗದ ಪರ ನ್ಯಾಯ ಮಾರಾಟವಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ? ಇದರಿಂದ ರೈತರಿಗೆ ಈ ಕಾನೂನಿಂದ ನೆರವು ಸಿಗುತ್ತದೆ ಎಂಬ ಭ್ರಮೆಯನ್ನು ಕಳಚಿ ಹಾಕಬೇಕಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿ ಯಾವುದು ಎಂಬುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಈಗ ಅದನ್ನು ಮೀರಿ ಈ ಶಾಸನ ರಚಿಸಲಾಗಿದೆ ಎಂಬುದು ನನ್ನ ಅನಿಸಿಕೆ. ರೈತರಿಗೆ ಸಿಗುತ್ತಿದ್ದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಇದೆ ಈ ಕರಾಳ ಶಾಸನ.

ಗುತ್ತಿಗೆ ಹಿಡಿದ ಒಂದು ಕಾರ್ಪೊರೇಟ್ ಕಂಪೆನಿ ಜಮೀನನ್ನು ಹಿಡಿತಕ್ಕೆ ತೆಗೆದುಕೊಂಡಂತೆಯೇ, ಆ ಜಮೀನನ್ನೆಲ್ಲ ವ್ಯವಸಾಯಕ್ಕೆ ಬಳಸುವುದಾದರೆ ಅದು ಸಹಜವಾಗಿ ತನ್ನ ಎಲ್ಲ ಕೆಲಸಕ್ಕೂ ಆಧುನಿಕ ರೀತಿಯ ಯಂತ್ರಗಳನ್ನೆ ಬಳಸಬೇಕಾಗುತ್ತದೆ. ಉಳುವುದು, ಕಾಳು ಚೆಲ್ಲುವುದು, ಗೊಬ್ಬರ, ಕೀಟನಾಶ ಎಲ್ಲವನ್ನು ಯಂತ್ರಗಳ ಸಹಾಯದಿಂದಲೇ ಮಾಡಬೇಕಾಗುವುದು ಅನಿವಾರ್ಯ. ಹಾಗೆಯೇ ಫಸಲು ಕುಯ್ಯುವುದು ಅದನ್ನು ಒಣಗಿಸುವುದು, ಕಾಳಿನ ಭಾಗವನ್ನು ಹುಲ್ಲನ್ನು ಬೇರ್ಪಡಿಸುವುದು, ಕಾಳನ್ನು ಪ್ರತ್ಯೇಕಗೊಳಿಸುವುದು, ಗಾಳಿಯ ಸಹಾಯದಿಂದ ಕಾಳನ್ನು ತೂರಿ ಹೊಟ್ಟನ್ನು ಪ್ರತ್ಯೇಕಿಸುವುದು ಎಲ್ಲದಕ್ಕೂ ಯಂತ್ರದ ಉಪಯೋಗ ಮಾಡುವುದು ಅನಿವಾರ್ಯವಾಗುತ್ತದೆ. ಯಂತ್ರವೇ ಈ ಎಲ್ಲ ಕೆಲಸ ಮಾಡುವುದರಿಂದ ಕೆಲವೇ ಜನ ವ್ಯವಸಾಯ ಕೆಲಸಗಾರರ ಆವಶ್ಯಕತೆ ಇರುತ್ತದೆ. ಹಳ್ಳಿಯಲ್ಲಿ ಅನಾದಿ ಕಾಲದಿಂದ ವ್ಯವಸಾಯ ಕಾರ್ಮಿಕರಾಗಿ ಉಳಿದಿರುವ ಈ ನಿರುದ್ಯೋಗಿ ಹತಭಾಗ್ಯರು ವಲಸೆ ಹೋಗಿ ಬೇರೆ ಕೆಲಸ ಹುಡುಕಬೇಕಾಗುವುದರ ಅನಿವಾರ್ಯತೆಯನ್ನು ಈ ಕಾನೂನು ಸೃಷ್ಟಿ ಮಾಡಿದೆ. ಭಾರತ ವ್ಯವಸಾಯ ಪ್ರಧಾನ ದೇಶವಾಗಿ ಇದುವರೆಗೂ ಇತ್ತು. ಮೋದಿ ಅವರು ಇಡೀ ವ್ಯವಸಾಯ ವ್ಯವಸ್ಥೆಯನ್ನು ಶ್ರೀಮಂತರ ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸುವ ಮೂಲಕ ಭಾರತವನ್ನು ಅಮೆರಿಕ ಮಾಡುವ ಗುತ್ತಿಗೆ ಹಿಡಿದಿದ್ದಾರೆ.

ಅಮೆರಿಕ ಒಂದು ಉದ್ಯಮಶೀಲ ರಾಷ್ಟ್ರವಾಗಿದ್ದು, ವ್ಯವಸಾಯದಲ್ಲಿ ತೊಡಗಿರುವ ಹಿಡಿ ಮಂದಿಯ ಕೈಯಲ್ಲಿ ಸಾವಿರ ಸಾವಿರ ಎಕರೆ ಜಮೀನು ಇದೆ. ಅವರ ಮನೆಯವರೇ ಸೇರಿಕೊಂಡು ಕೆಲವರೇ ಕಾರ್ಮಿಕರ ಸಹಾಯದಿಂದ ವ್ಯವಸಾಯದಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್ ಸಹಾಯದಿಂದ ಬೀಜ ಬಿತ್ತಿ ಉಳಿದ ಎಲ್ಲ ಕೆಲಸಗಳಿಗೂ ಟ್ರ್ಯಾಕ್ಟರ್ ಕಟ್ಟಿಂಗ್ ಮಿಷನ್, ಹಾರ್ವೆಸ್ಟಿಂಗ್ ಮಿಷನ್, ಡ್ರೈಯರ್ ಎಲ್ಲವನ್ನು ಅವರು ಬಳಸುತ್ತಾರೆ. ಮೋದಿ ಕನಸು ಬಹುಶಃ ಮುಂದೊಂದು ದಿನ ಭಾರತವನ್ನು ಉದ್ಯಮಶೀಲ ರಾಷ್ಟ್ರವನ್ನಾಗಿ ಮಾಡುವುದಿರಬಹುದು. ಮೋದಿ ಅವರದು ಉಳ್ಳವರ ಅಭಿವೃದ್ಧಿಯೇ ಹೊರತು ಬಡವರ ಬದುಕನ್ನು ಹಸನು ಮಾಡುವುದಲ್ಲ. ಈ ಕೃಷಿ ಕಾಯ್ದೆಗಳು ಲಕ್ಷಾಂತರ ಮಂದಿ ಕೃಷಿ ಕಾರ್ಮಿಕರ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳಲಿವೆ.
Socialistic societyಯನ್ನಾಗಿ ಪರಿವರ್ತಿಸುವ, ಭಾರತವನ್ನು ಸಮಸಮಾಜವನ್ನಾಗಿ ಪರಿವರ್ತಿಸುವ, ಸರ್ವಜನರೂ ಸುಖವಾಗಿ dignityಇಂದ ಬದುಕುವ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ರಾಷ್ಟ್ರದ ಚುಕ್ಕಾಣಿ ಹಿಡಿಯುವವರ ಕೈಲಿರಬೇಕು ಎಂಬ ಆಶಯವನ್ನು ನಾವು ಪ್ರಜೆಗಳು ಹೊಂದಿದ್ದವು. ಈಗ ಆ ಕನಸು ಭಗ್ನವಾಗುವ ಸನ್ನಿವೇಶವನ್ನು ಪ್ರಭುತ್ವ ನಿರ್ಮಾಣ ಮಾಡುತ್ತಿದೆ.

ಈ 70 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಬಹಳ ಪ್ರಗತಿಯನ್ನು ಸಾಧಿಸಿದ್ದವು. ಪಿ. ಸುಬ್ರಹ್ಮಣ್ಯಂ ವ್ಯವಸಾಯ ಮಂತ್ರಿಗಳಾಗಿದ್ದಾಗ ವ್ಯವಸಾಯ ಕ್ರಾಂತಿ, ಹಾಲಿನ ಕ್ರಾಂತಿ ಮುಂತಾದ ಗ್ರಾಮೀಣ ಜನರ ಬದುಕು ಹಸನಾಗುವಂತೆ ಮಾಡಿದರು. ಭಾರತ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಯಿತು. ರಫ್ತಿಗೂ ಅವಕಾಶವಾಯಿತು. ನೆಹರು ಕಾಲದಲ್ಲಿ ವಿಜ್ಞಾನದಲ್ಲಿ ಭಾರತ ದಾಪುಗಾಲು ಹಾಕಿತು. ಜನಸಾಮಾನ್ಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡ ಯೋಜನೆಗಳು ವಾಂಚಿತ ಫಲ ನೀಡಿದವು. ಚಂದ್ರಲೋಕ, ಮಂಗಳ ಗ್ರಹಗಳನ್ನು ಅಧ್ಯಯನ ಮಾಡುವ ಸಾಹಸ ಮಾಡಲಾಯಿತು. ಅಸ್ಪೃಶ್ಯತೆ ನಿವಾರಣೆ ಉದ್ಯೋಗ ಸೃಷ್ಟಿಯ ಕೆಲಸಗಳನ್ನು ಮಾಡಲಾಯಿತು. ಆದರೆ ಅವು ಇನ್ನೂ ಪೂರ್ಣವಾಗಿ ಪರಿಹಾರವಾಗಿಲ್ಲ.

ಮೋದಿ ಸರ್ಕಾರ ಅವನ್ನೆಲ್ಲ ಮುಂದುವರೆಸಬೇಕಾಗಿತ್ತು. ಆದರೆ ನಾವು ಭಾರತೀಯರು ಈಗ ಆರ್ಥಿಕ ಅಸ್ಥಿರತೆ, ನಿರುದ್ಯೋಗ, ಆಹಾರ ಅಭದ್ರತೆ, ಕೃಷಿಯ ಅಸ್ಥಿರತೆಯಲ್ಲಿ ಸಿಲುಕಿದ್ದೇವೆ. ಮೋದಿ ಸರ್ಕಾರ ಈ ಜ್ವಲಂತ ಪ್ರಶ್ನೆಗಳಿಗೆ ಪರಿಹಾರ ಹುಡುಕುವ ಬದಲು ಅವನ್ನು ಬಂಡವಾಳಶಾಹಿ ವ್ಯವಸ್ಥೆಗೆ ಕೈಗೊಪ್ಪಿಸುತ್ತಿದ್ದಾರೆ. ಆದರೆ ಇದು ಬಡವರ ಮತ್ತು ಮಧ್ಯಮ ವರ್ಗದವರ ಅರಿವಿಗೆ ಬಾರದಿರುವುದು ದುರದೃಷ್ಟ.


ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆ: ತೊಂದರೆಗೊಳಗಾದವರಿಗೆ ರಕ್ಷಣೆ ಅಗತ್ಯವೆಂದ IMF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....