Homeಮುಖಪುಟಕರಾವಳಿಯ ಸಾರಾತಾಯಿ

ಕರಾವಳಿಯ ಸಾರಾತಾಯಿ

- Advertisement -
- Advertisement -

ಸಾರಾ ಅಬೂಬಕ್ಕರ್ ಅಂದರೆ ನನ್ನ ಮೊದಲ ನೆನಪು ಬಾಲ್ಯದಲ್ಲಿ ಕೇಳಿದ ರೇಡಿಯೊ ನಾಟಕ ’ಚಂದ್ರಗಿರಿಯ ತೀರದಲ್ಲಿ’. ಆ ದಿನಗಳಲ್ಲಿ ಅದು ಎಷ್ಟು ಅರ್ಥವಾಗಿತ್ತೀ ಬಿಟ್ಟಿತ್ತೋ, ಆದರೆ ತಟ್ಟಿತ್ತು. ಅಂದಿನಿಂದ ನಾನು ಸಾರಾ ಅಭಿಮಾನಿಯಾದೆ. ’ಚಂದ್ರಗಿರಿಯ ತೀರದಲ್ಲಿ’ ಮೂಲ ಕೃತಿ ಹಾಗು ಇತರ ಹಲವು ಕಥನಗಳನ್ನು ಓದಿದ್ದು ನಂತರದ ದಿನಗಳಲ್ಲಿ. ಆದರೆ, ’ಚಂದ್ರಗಿರಿಯ ತೀರದಲ್ಲಿ’ ಕೃತಿ ನನ್ನನ್ನು ಹಸಿ ಮಣ್ಣಿನಲ್ಲಿ ನೆಟ್ಟ ಗಿಡ ಎಂದೇ ಹೇಳಬೇಕು.

ಅದು 2013 ಜೂನ್ ತಿಂಗಳು. ನನ್ನ ಕಥಾಸಂಕಲನ ’ದೂರತೀರಕ್ಕೆ’ ಮಾಸ್ತಿ ಕಥಾ ಪುರಸ್ಕಾರ ಸಂದಿತ್ತು. ಆ ವರ್ಷದ ಜೀವಮಾನದ ಮಾಸ್ತಿ ಸಾಹಿತ್ಯ ಪ್ರಶಸ್ತಿಗೆ ಸಾರಾ ಅಬೂಬಕ್ಕರ್ ಆಯ್ಕೆ ಆಗಿದ್ದರು. ಸಮಾರಂಭಕ್ಕೆ ಅವರು ಮಂಗಳೂರಿಂದ ಬೆಂಗಳೂರಿಗೆ ಹೊರಟರು. ನಾನು ಕಾಸರಗೋಡಿಂದ ಬೆಂಗಳೂರಿಗೆ ಹೊರಟೆ. ಆಗ ನಮ್ಮಿಬ್ಬರ ನಡುವೆ ಮೊದಲ ಬಾರಿಗೆ ದೂರವಾಣಿ ಮಾತು ನಡೆಯಿತು. ’ಎಲ್ಲಿ ಉಳಕೊಳ್ಳುವ ವ್ಯವಸ್ಥೆ’ ಎಂಬ ಮಾತು ಸಹಜವಾಗಿಯೇ ಬಂತು. ನಾನು ’ಅಲ್ಲಿ ತಮ್ಮನ ಮನೆ ಇದೆ; ಉಳಕೊಳ್ಳುವ ವ್ಯವಸ್ಥೆ ಬೇಡ ಅಂದಿರುವೆ ಅಂದೆ. ಅಂದು ಸಾರಾ ಏನೂ ಹೇಳಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರದ ಮಾತುಕತೆಯಲ್ಲಿ, ’ಇಂತಹ ಕಾರ್ಯಕ್ರಮಗಳಿಗೆ ಪರ ಊರಿಗೆ ಹೋಗುವಾಗ, ಎಷ್ಟೇ ಪ್ರಿಯರಾದರೂ ಯಾವುದೇ ಬಂಧುಗಳ ಮನೆ ನೆಚ್ಚಿಕೊಳ್ಳಬಾರದು. ಆಯೋಜಕರು ಮಾಡುವ ವ್ಯವಸ್ಥೆ ಪಡೆದುಕೊಳ್ಳಬೇಕು. ಅದು ನಮ್ಮ ಹಕ್ಕಿನದು. ಕೆಲವೊಮ್ಮೆ ನಮ್ಮ ಬರವಣಿಗೆ, ನಮ್ಮ ಬರಹದ ಮಹತ್ವ, ನಮಗಿರುವ ಗೌರವ ನಮ್ಮ ಆ ಬಂಧುಗಳಿಗೆ ಅರ್ಥವಾಗುವುದಿಲ್ಲ. ಇನ್ನು ಕೆಲವೊಮ್ಮೆ ಅರ್ಥ ಆದರೂ ಅವರಿಗದು ಬೇಕಿರುವುದಿಲ್ಲ. ಅದ್ಯಾವುದು ಅಲ್ಲದಿದ್ದರೆ ಕೆಲವೊಮ್ಮೆ ನಮ್ಮ ಸಮಯಕ್ಕೆ ಆವರ ಮನೆಯ ವ್ಯವಸ್ಥೆ ಇರುವುದಿಲ್ಲ.

ನಾವು ಏನೂ ಹೇಳಲಾಗುವುದಿಲ್ಲ. ಅಲ್ಲಿ ಹೊಂದಿಕೊಂಡಿರಬೇಕಷ್ಟೆ. ನಮ್ಮ ಮುಖ್ಯ ಕಾರ್ಯಕ್ರಮ ಅಸ್ತವ್ಯಸ್ತ ಆಗುವ ಸಾಧ್ಯತೆ ಇರುತ್ತದೆ. ಸಭೆಯಲ್ಲಿ ನಾವು ಮಾತಾಡುವುದಿರುತ್ತದೆ. ಅದಕ್ಕೂ ಮೊದಲು ನಮಗೊಂದಿಷ್ಟು ತಯಾರಿ, ಏಕಾಂತ ಬೇಕಾಗುತ್ತದೆ. ಇದನ್ನೆಲ್ಲ ನಮ್ಮ ಕುಟುಂಬದವರೇ ಆದರೂ, ನಮ್ಮ ಬಗ್ಗೆ ಅವರಿಗೆ ಎಷ್ಟೇ ಪ್ರೀತಿ ವಿಶ್ವಾಸ ಇದ್ದರೂ ನಾವು ಹೆಣ್ಣುಮಕ್ಕಳಾದ್ದರಿಂದ ಹಾಗೆಲ್ಲ ನಿರೀಕ್ಷೆ ಮಾಡಲಾಗುವುದಿಲ್ಲ. ಬಂಧುಗಳ ಮನೆಯ ಭೇಟಿ ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿ ನನ್ನ ಪಾಲಿಗೆ ಸಾರಾ ತಾಯಿ ಆಗಿಬಿಟ್ಟರು. ಪರಿಚಯವಾದ ಆರಂಭದಲ್ಲೊಮ್ಮೆ, ಮಾತಿನ ನಡುವೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ ಎನ್ನುತ್ತಾ ಅವರು ಬೇಸರಿಸಿಕೊಂಡಿದ್ದರು. ಅವರ ನೇರ ನಡೆ, ಸರಳತೆ ನನಗಂತೂ ಖುಷಿಯಾಗಿತ್ತು. ನನ್ನ ಬರವಣಿಗೆ ನಿರಂತರವಾಗಿಲ್ಲದಿರುವುದರಿಂದ, ಗೊತ್ತಿಲ್ಲದಿರುವುದು ಸಹಜವೇ. ಅದನ್ನೇ ಅವರಿಗೆ ಹೇಳಿದಾಗ, “ಕಥೆಯನ್ನೆ ಬರಿಬೇಕು ಅಂತ ಅಂದುಕೊಳ್ಬೇಡಿ. ಏನಾದರೂ ಹೇಳಬೇಕಾದಾಗ ಲೇಖನವೊ, ಅಭಿಪ್ರಾಯವೋ ಯಾವುದಾದರೂ ಒಂದು ರೂಪದಲ್ಲಿ ಬರೆದುಬಿಡಿ ಅಷ್ಟೆ”

ಮುಂದೆ 2015ರಲ್ಲಿ ನನ್ನ ’ಜೋಗತಿ ಜೋಳಿಗೆ’ ಕಥಾ ಸಂಕಲನಕ್ಕೆ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಾರಾ ಅವರ ಹೆಸರಿನಲ್ಲಿ ಕೊಡುವ ಸಾರಾ ಅಬೂಬಕ್ಕರ್ ಸಾಹಿತ್ಯ ದತ್ತಿ ಪುರಸ್ಕಾರ ಬಂತು. ಅವರ ಸಮ್ಮುಖದಲ್ಲೇ ಸಮಾರಂಭ ನಡೆಯಿತು. ಅವರು ನನ್ನ ಕಥಾ ಸಂಕಲನ ತರಿಸಿ ಓದಿ ಬಹಳ ಇಷ್ಟಪಟ್ಟಿದ್ದರು. ಕಥೆಗಳ ಬಗ್ಗೆ ಮತ್ತೆಮತ್ತೆ ಫೋನಿನಲ್ಲಿ ಮಾತಾಡಿದರು. ’ಸೈತಾನನ ಬಲೆ’ ಕಥೆಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಿ ಎಂದಾಗ ಸಾರ್ಥಕವೆನಿಸಿತ್ತು. ಮುಂದೆ ಅದೇ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಬಹಳ ಖುಷಿ ಪಟ್ಟಿದ್ದರು. ಆಗಲೂ, “ಕಥೆ ಬರೆಯಲಾಗದಿದ್ದಾಗ ಬೇರೆ ಏನಾದರೂ ಬರೆಯಿರಿ” ಎನ್ನಲು ಮರೆತಿರಲಿಲ್ಲ. ಹೀಗೆ ಫೋನ್ ಸಂಭಾಷಣೆಯ ನೆನಪು ಎದೆಯೊಳಗೆ. 2018ರ ನಂತರ ನನಗೆ ಅವರನ್ನು ಭೇಟಿ ಮಾಡಲಾಗಲೇ ಇಲ್ಲ.

ಅನುಪಮಾ ಪ್ರಸಾದ್
ಬರಹಗಾರ್ತಿ


ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...