Homeಮುಖಪುಟಕರಾವಳಿಯ ಸಾರಾತಾಯಿ

ಕರಾವಳಿಯ ಸಾರಾತಾಯಿ

- Advertisement -
- Advertisement -

ಸಾರಾ ಅಬೂಬಕ್ಕರ್ ಅಂದರೆ ನನ್ನ ಮೊದಲ ನೆನಪು ಬಾಲ್ಯದಲ್ಲಿ ಕೇಳಿದ ರೇಡಿಯೊ ನಾಟಕ ’ಚಂದ್ರಗಿರಿಯ ತೀರದಲ್ಲಿ’. ಆ ದಿನಗಳಲ್ಲಿ ಅದು ಎಷ್ಟು ಅರ್ಥವಾಗಿತ್ತೀ ಬಿಟ್ಟಿತ್ತೋ, ಆದರೆ ತಟ್ಟಿತ್ತು. ಅಂದಿನಿಂದ ನಾನು ಸಾರಾ ಅಭಿಮಾನಿಯಾದೆ. ’ಚಂದ್ರಗಿರಿಯ ತೀರದಲ್ಲಿ’ ಮೂಲ ಕೃತಿ ಹಾಗು ಇತರ ಹಲವು ಕಥನಗಳನ್ನು ಓದಿದ್ದು ನಂತರದ ದಿನಗಳಲ್ಲಿ. ಆದರೆ, ’ಚಂದ್ರಗಿರಿಯ ತೀರದಲ್ಲಿ’ ಕೃತಿ ನನ್ನನ್ನು ಹಸಿ ಮಣ್ಣಿನಲ್ಲಿ ನೆಟ್ಟ ಗಿಡ ಎಂದೇ ಹೇಳಬೇಕು.

ಅದು 2013 ಜೂನ್ ತಿಂಗಳು. ನನ್ನ ಕಥಾಸಂಕಲನ ’ದೂರತೀರಕ್ಕೆ’ ಮಾಸ್ತಿ ಕಥಾ ಪುರಸ್ಕಾರ ಸಂದಿತ್ತು. ಆ ವರ್ಷದ ಜೀವಮಾನದ ಮಾಸ್ತಿ ಸಾಹಿತ್ಯ ಪ್ರಶಸ್ತಿಗೆ ಸಾರಾ ಅಬೂಬಕ್ಕರ್ ಆಯ್ಕೆ ಆಗಿದ್ದರು. ಸಮಾರಂಭಕ್ಕೆ ಅವರು ಮಂಗಳೂರಿಂದ ಬೆಂಗಳೂರಿಗೆ ಹೊರಟರು. ನಾನು ಕಾಸರಗೋಡಿಂದ ಬೆಂಗಳೂರಿಗೆ ಹೊರಟೆ. ಆಗ ನಮ್ಮಿಬ್ಬರ ನಡುವೆ ಮೊದಲ ಬಾರಿಗೆ ದೂರವಾಣಿ ಮಾತು ನಡೆಯಿತು. ’ಎಲ್ಲಿ ಉಳಕೊಳ್ಳುವ ವ್ಯವಸ್ಥೆ’ ಎಂಬ ಮಾತು ಸಹಜವಾಗಿಯೇ ಬಂತು. ನಾನು ’ಅಲ್ಲಿ ತಮ್ಮನ ಮನೆ ಇದೆ; ಉಳಕೊಳ್ಳುವ ವ್ಯವಸ್ಥೆ ಬೇಡ ಅಂದಿರುವೆ ಅಂದೆ. ಅಂದು ಸಾರಾ ಏನೂ ಹೇಳಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರದ ಮಾತುಕತೆಯಲ್ಲಿ, ’ಇಂತಹ ಕಾರ್ಯಕ್ರಮಗಳಿಗೆ ಪರ ಊರಿಗೆ ಹೋಗುವಾಗ, ಎಷ್ಟೇ ಪ್ರಿಯರಾದರೂ ಯಾವುದೇ ಬಂಧುಗಳ ಮನೆ ನೆಚ್ಚಿಕೊಳ್ಳಬಾರದು. ಆಯೋಜಕರು ಮಾಡುವ ವ್ಯವಸ್ಥೆ ಪಡೆದುಕೊಳ್ಳಬೇಕು. ಅದು ನಮ್ಮ ಹಕ್ಕಿನದು. ಕೆಲವೊಮ್ಮೆ ನಮ್ಮ ಬರವಣಿಗೆ, ನಮ್ಮ ಬರಹದ ಮಹತ್ವ, ನಮಗಿರುವ ಗೌರವ ನಮ್ಮ ಆ ಬಂಧುಗಳಿಗೆ ಅರ್ಥವಾಗುವುದಿಲ್ಲ. ಇನ್ನು ಕೆಲವೊಮ್ಮೆ ಅರ್ಥ ಆದರೂ ಅವರಿಗದು ಬೇಕಿರುವುದಿಲ್ಲ. ಅದ್ಯಾವುದು ಅಲ್ಲದಿದ್ದರೆ ಕೆಲವೊಮ್ಮೆ ನಮ್ಮ ಸಮಯಕ್ಕೆ ಆವರ ಮನೆಯ ವ್ಯವಸ್ಥೆ ಇರುವುದಿಲ್ಲ.

ನಾವು ಏನೂ ಹೇಳಲಾಗುವುದಿಲ್ಲ. ಅಲ್ಲಿ ಹೊಂದಿಕೊಂಡಿರಬೇಕಷ್ಟೆ. ನಮ್ಮ ಮುಖ್ಯ ಕಾರ್ಯಕ್ರಮ ಅಸ್ತವ್ಯಸ್ತ ಆಗುವ ಸಾಧ್ಯತೆ ಇರುತ್ತದೆ. ಸಭೆಯಲ್ಲಿ ನಾವು ಮಾತಾಡುವುದಿರುತ್ತದೆ. ಅದಕ್ಕೂ ಮೊದಲು ನಮಗೊಂದಿಷ್ಟು ತಯಾರಿ, ಏಕಾಂತ ಬೇಕಾಗುತ್ತದೆ. ಇದನ್ನೆಲ್ಲ ನಮ್ಮ ಕುಟುಂಬದವರೇ ಆದರೂ, ನಮ್ಮ ಬಗ್ಗೆ ಅವರಿಗೆ ಎಷ್ಟೇ ಪ್ರೀತಿ ವಿಶ್ವಾಸ ಇದ್ದರೂ ನಾವು ಹೆಣ್ಣುಮಕ್ಕಳಾದ್ದರಿಂದ ಹಾಗೆಲ್ಲ ನಿರೀಕ್ಷೆ ಮಾಡಲಾಗುವುದಿಲ್ಲ. ಬಂಧುಗಳ ಮನೆಯ ಭೇಟಿ ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿ ನನ್ನ ಪಾಲಿಗೆ ಸಾರಾ ತಾಯಿ ಆಗಿಬಿಟ್ಟರು. ಪರಿಚಯವಾದ ಆರಂಭದಲ್ಲೊಮ್ಮೆ, ಮಾತಿನ ನಡುವೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ ಎನ್ನುತ್ತಾ ಅವರು ಬೇಸರಿಸಿಕೊಂಡಿದ್ದರು. ಅವರ ನೇರ ನಡೆ, ಸರಳತೆ ನನಗಂತೂ ಖುಷಿಯಾಗಿತ್ತು. ನನ್ನ ಬರವಣಿಗೆ ನಿರಂತರವಾಗಿಲ್ಲದಿರುವುದರಿಂದ, ಗೊತ್ತಿಲ್ಲದಿರುವುದು ಸಹಜವೇ. ಅದನ್ನೇ ಅವರಿಗೆ ಹೇಳಿದಾಗ, “ಕಥೆಯನ್ನೆ ಬರಿಬೇಕು ಅಂತ ಅಂದುಕೊಳ್ಬೇಡಿ. ಏನಾದರೂ ಹೇಳಬೇಕಾದಾಗ ಲೇಖನವೊ, ಅಭಿಪ್ರಾಯವೋ ಯಾವುದಾದರೂ ಒಂದು ರೂಪದಲ್ಲಿ ಬರೆದುಬಿಡಿ ಅಷ್ಟೆ”

ಮುಂದೆ 2015ರಲ್ಲಿ ನನ್ನ ’ಜೋಗತಿ ಜೋಳಿಗೆ’ ಕಥಾ ಸಂಕಲನಕ್ಕೆ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಾರಾ ಅವರ ಹೆಸರಿನಲ್ಲಿ ಕೊಡುವ ಸಾರಾ ಅಬೂಬಕ್ಕರ್ ಸಾಹಿತ್ಯ ದತ್ತಿ ಪುರಸ್ಕಾರ ಬಂತು. ಅವರ ಸಮ್ಮುಖದಲ್ಲೇ ಸಮಾರಂಭ ನಡೆಯಿತು. ಅವರು ನನ್ನ ಕಥಾ ಸಂಕಲನ ತರಿಸಿ ಓದಿ ಬಹಳ ಇಷ್ಟಪಟ್ಟಿದ್ದರು. ಕಥೆಗಳ ಬಗ್ಗೆ ಮತ್ತೆಮತ್ತೆ ಫೋನಿನಲ್ಲಿ ಮಾತಾಡಿದರು. ’ಸೈತಾನನ ಬಲೆ’ ಕಥೆಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಿ ಎಂದಾಗ ಸಾರ್ಥಕವೆನಿಸಿತ್ತು. ಮುಂದೆ ಅದೇ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಬಹಳ ಖುಷಿ ಪಟ್ಟಿದ್ದರು. ಆಗಲೂ, “ಕಥೆ ಬರೆಯಲಾಗದಿದ್ದಾಗ ಬೇರೆ ಏನಾದರೂ ಬರೆಯಿರಿ” ಎನ್ನಲು ಮರೆತಿರಲಿಲ್ಲ. ಹೀಗೆ ಫೋನ್ ಸಂಭಾಷಣೆಯ ನೆನಪು ಎದೆಯೊಳಗೆ. 2018ರ ನಂತರ ನನಗೆ ಅವರನ್ನು ಭೇಟಿ ಮಾಡಲಾಗಲೇ ಇಲ್ಲ.

ಅನುಪಮಾ ಪ್ರಸಾದ್
ಬರಹಗಾರ್ತಿ


ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...