Homeಮುಖಪುಟ’ಸಾಲ್ ಮುಬಾರಕ್‌’ ಪದ ಬಳಕೆಗೆ ಆಕ್ಷೇಪ: ಟ್ರೋಲ್‌‌ಗೊಳಗಾದ ಮೋದಿ ಸಮರ್ಥಕ ಮೋಹನ್‌ದಾಸ್‌ ಪೈ!‌

’ಸಾಲ್ ಮುಬಾರಕ್‌’ ಪದ ಬಳಕೆಗೆ ಆಕ್ಷೇಪ: ಟ್ರೋಲ್‌‌ಗೊಳಗಾದ ಮೋದಿ ಸಮರ್ಥಕ ಮೋಹನ್‌ದಾಸ್‌ ಪೈ!‌

ಇನ್ಫೋಸಿಸ್‌‌‌ನ ಮಾಜಿ ನಿರ್ದೇಶಕರೂ ಆಗಿರುವ ಅವರು ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಟ್ರೋಲ್ ಮಾಡಲು ಹೋಗಿ ತಾನೆ ನೆಗೆಪಾಟಲಿಗೀಡಾಗಿದ್ದಾರೆ.

- Advertisement -
- Advertisement -

ಬಿಜೆಪಿ ಹಾಗೂ ಪ್ರಧಾನಿ ಮೋದಿಯ ಸಮರ್ಥಕ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್‌ ಪೈ, ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಟ್ರೋಲ್ ಮಾಡಲು ಹೋಗಿ ತಾನೆ ನೆಗೆಪಾಟಲಿಗೀಡಾಗಿದ್ದಾರೆ.

ದೀಪಾವಳಿ ಹಿನ್ನಲೆಯಲ್ಲಿ ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ದೀಪಾವಳಿಗೆ ಶುಭಾಶಯ ಕೋರಿ ಕೊನೆಯಲ್ಲಿ “ಸಾಲ್ ಮುಬಾರಕ್”(ಹೊಸವರ್ಷದ ಶುಭಾಶಯ) ಎಂದಿದ್ದರು.

ಆದರೆ ಅದರಲ್ಲಿರುವ “ಸಾಲ್ ಮುಬಾರಕ್” ಎಂಬ ಪದ ಮೋಹನ್‌ದಾಸ್‌ ಪೈ ಅವರಿಗೆ ಅನ್ಯವಾಗಿ ಕಂಡಿದ್ದು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಭಾರತದಲ್ಲಿ ಯಾರೂ ದೀಪಾವಳಿಗೆ ’ಸಾಲ್ ಮುಬಾರಕ್’ ಎಂದು ಶುಭಾಶಯ ಕೊರುವುದಿಲ್ಲ, ಈ ’ನಕಲಿ’ ಶುಭಾಶಯವನ್ನು ಎಲ್ಲಿಂದ ಆಯ್ಕೆ ಮಾಡಿಕೊಂಡಿರಿ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!

ದೀಪಾವಳಿಯ ಮರುದಿನ ಗುಜರಾತಿಗಳಿಗೆ ಹೊಸ ವರ್ಷವಾಗಿದ್ದು ಅದನ್ನು ಧರ್ಮಾತೀತವಾಗಿ ಆಚರಿಸುತ್ತಾರೆ. ಈ ಹಿನ್ನಲೆಯಲ್ಲಿ ಅಮೆರಿಕದ ನೂತರ ಚುನಾಯಿತ ಅಧ್ಯಕ್ಷರುಗಳ ಟ್ವೀಟ್‌ಗಳು ಬಂದಿದೆ. ಅಷ್ಟೇ ಅಲ್ಲದೆ ಸ್ವತಃ ಗುಜರಾತಿನವರಾದ ಪ್ರಧಾನಿ ಮೋದಿ ಕೂಡಾ ಹಲವು ವರ್ಷಗಳಿಂದ ’ಸಾಲ್ ಮುಬಾರಕ್’ ಎಂದೇ ಶುಭಾಶಯ ಕೋರಿದ್ದಾರೆ. ಆದರೆ ಇದರ ಅರಿವಿಲ್ಲದ ಮೋಹನ್‌ದಾಸ್‌ ಪೈ ಯಾವುದೊ ಪೂರ್ವಾಗ್ರದಿಂದ ’ಸಾಲ್ ಮುಬಾರಕ್‌‌’ ಎಂಬ ಪದವನ್ನು ಆಕ್ಷೇಪಣೆ ಮಾಡಿ ಟ್ರೋಲ್‌‌ಗೆ ಒಳಗಾಗಿದ್ದಾರೆ.

 

ಇದೀಗ ಮೋಹನ್‌ದಾಸ್‌ ಪೈ ಅವರನ್ನು ಟ್ವಿಟ್ಟರಿಗರು ತರಾಟೆಗೆ ಪಡೆದು, ಟ್ರೋಲ್ ಮಾಡುತ್ತಿದ್ದಾರೆ. ಪತ್ರಕರ್ತೆ ಸಂಧ್ಯಾ, “ಮಾನ್ಯ ಪೈ ಅವರೇ, ಕುಟುಂಬ ಹಾಗೂ ಸ್ನೇಹಿತರ ಸುತ್ತ ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳುವುದು ಸರಿ. ಯಾಕೆಂದರೆ ಅವರಿಗೆ ನಿಮ್ಮ ಬಗ್ಗೆ ಗೊತ್ತಿದೆ. ಆದರೆ ಅದನ್ನು ಅಮೆರಿಕದ ಚುನಾಯಿತ ಉಪಾಧ್ಯಕ್ಷೆಯ ಮುಂದೆ ಮಾಡಬೇಕೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಪತ್ರಕರ್ತೆ ಸುಜಾತ ಆನಂದನ್, ಹಿಲರಿ ಕ್ಲಿಂಟನ್ ಅವರ  “ಸಾಲ್ ಮುಬಾರಕ್” ಶುಭಾಶಯವಿರುವ ಟ್ವೀಟನ್ನು ರೀಟ್ವೀಟ್ ಮಾಡಿ, “ಮೋಹನ್ ದಾಸ್ ಪೈ ಅವರೆ ಇದು ನಿಮಗಾಗಿ ಪ್ರೀತಿಯಿಂದ, ಅಂಕಲ್ ’ಪಿ’ ಆಕಾಶದಲ್ಲಿದ್ದಾರೆ” ಎಂದು ಚುಚ್ಚಿದ್ದಾರೆ.

ಉದ್ಯಮಿ ಸುಭಜಿತ್ ರಾಯ್, “ಸಾಲ್ ಮುಬಾರಕ್ ಎನ್ನುವುದು ಗುಜರಾತಿಗಳ ಶುಭಾಶಯ. ಗುಜರಾತಿ ಹೊಸ ವರ್ಷದ ಶುಭಕೋರಲು ಬಳಸಲಾಗುತ್ತದೆ, ಇದು ದೀಪಾವಳಿಯ ನಂತರದ ದಿನ ಬರುರುತ್ತದೆ. ನಿಮಗಿದು ತಿಳಿದಿರಲಿ ಎಂದು ಹಾರೈಸುತ್ತೇನೆ” ಎಂದು ಸಾಲ್ ಮುಬಾರಕ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್‌ಗೊಳಗಾದ ಬೆಂಗಳೂರು ಎಡಿಟರ್ಸ್‌ ಗಿಲ್ಡ್!

ಸಾಮಾಜಿಕ ಕಾರ್ಯಕರ್ತೆ ಸಂಜುಕ್ತಾ ಬಸು ಪ್ರಧಾನಿ ಮೋದಿ ಈ ಹಿಂದೆ ಸಾಲ್ ಮುಬಾರಕ್ ಎಂದು ಶುಭಾಶಯ ಕೋರಿರುವ ಟ್ವೀಟ್‌‌ನ ಸ್ಕ್ರೀನ್ ಶಾರ್ಟ್ ಹಾಕಿ, “ಇದು ತುಂಬಾ ಕೆಟ್ಟದಾಗಿದೆ. ಮೊದಿ ಪ್ರತಿ ವರ್ಷ ಸಾಲ್ ಮುಬಾರಕ್ ಹೇಳುತ್ತಾರೆ. ಪಾಪಾದ ಮೋಹನ್ ದಾಸ್ ಜೊ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಬಗ್ಗೆ ಮಾತನಡುತ್ತಿರಲು ಕಾರಣ, ಅವರಿಬ್ಬರು ’ನಮಸ್ತೆ ಟ್ರಂಪ್ ಮತ್ತು ಹೌಡಿ ಮೋದಿ’ಯನ್ನು ಸೋಲಿಸಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಪನ್ಸ್ಟಾರ್‌ ಎನ್ನುವ ಟ್ವಿಟ್ಟರ್‌ ಹ್ಯಾಂಡಲ್, “ಕ್ಷಮಿಸಿ ಮೋಹನ್‌ದಾಸ್‌ ಪೈ, ಭಾರತದ ಕೆಲವರು ಸಾಲ್ ಮುಬಾರಕ್‌ ಎಂದೇ ಶುಭಾಶಯ ಕೋರಿದ್ದಾರೆ. ಬಹುಷಃ ಕಮಲಾ ಹ್ಯಾರಿಸ್ ಆ ’ನಕಲಿ ಶುಭಾಶಯ’ ವನ್ನು ಇಲ್ಲಿಂದಲೇ ತೆಗೆದು ಕೊಂಡಿದ್ದಾರೆ” ಎಂದು ಪ್ರಧಾನಿ ಮೋದಿ ಮಾಡಿರುವ ಟ್ವೀಟ್‌‌ನ ಸ್ಕ್ರೀನ್ ಶಾರ್ಟ್ ಹಾಕಿದ್ದಾರೆ.

ಇದನ್ನೂ ಓದಿ: ಸಿವಿಲ್ ವಾರ್‌ ಸುದ್ದಿ: ಭಾರತೀಯ ಮಾಧ್ಯಮವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಯರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...