Homeಮುಖಪುಟ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

‘ಕ್ರೂರಿಯ ಬಾಯಲ್ಲಿ ಮಾನವೀಯತೆ’ : ಗುಂಪುಹತ್ಯೆ ನಮ್ಮದಲ್ಲ ಎಂದರು ಮೋಹನ್‌ ಭಾಗವತ್

- Advertisement -
- Advertisement -

‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ನುಡಿಗಟ್ಟು ಕೆಳಸಮುದಾಯಗಳನ್ನು ನಿಕೃಷ್ಟವಾಗಿ ಕಂಡಿದೆ. ಭೂತಗಳು ಕೆಳಜಾತಿ ಆರಾಧ್ಯ ದೈವ. ಅಂತ ದೈವಗಳು ಕನಿಷ್ಟ, ಭಗವದ್ಗೀತೆ ಶ್ರೇಷ್ಟ ಎಂಬಂತೆ ಬಿಂಬಿಸಿಕೊಂಡು ಬಂದಿರುವುದನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಭೂತಗಳು ಬಹುಜನರ ರಕ್ಷಕರು. ಈ ಕಾರಣಕ್ಕಾಗಿಯೇ ಭೂತದ ಬಾಯಲ್ಲಿ ಭಗವದ್ಗೀತೆ ನುಡಿಗಟ್ಟು ಹುಟ್ಟಿಕೊಂಡಂತಿದೆ. ಸಹಜವಾಗಿಯೇ ಇಂತಹ ನುಡಿಗಟ್ಟನ್ನು ಎಲ್ಲರೂ ಅಪ್ರಜ್ಞಾಪೂರ್ವಕವಾಗಿ ಬಳಸುವುದು ರೂಢಿಯಲ್ಲಿದೆ. ಹಾಗಾಗಿಯೇ ನಾನು ‘ಕ್ರೂರಿಯ ಬಾಯಲ್ಲಿ ಮಾನವೀಯತೆ’ ಎಂಬುದಾಗಿ ಹೇಳುತ್ತೇನೆ. ಕೊಲ್ಲುವ ಕ್ರೂರಿಗಳು ಬದಲಾಗುತ್ತಾರೆ. ಮಾನಸಿಕ ಕ್ರೂರಿಗಳು ನಿತ್ಯವೂ ಕೊಲ್ಲುತ್ತಾರೆ. ಮಾನಸಿಕ ಕ್ರೂರಿಗಳು ಬದಲಾಗುವುದಿಲ್ಲ. ಮಾನಸಿಕ ಕ್ರೌರ್ಯತ್ವ ಸತ್ತರೂ ಅದರ ಶನಿಸಂತಾನ ಹಾಗೆ ಉಳಿದುಹೋಗುತ್ತದೆ.

ಕರ್ಮಠವಾದಿ ಆರ್‌ಎಸ್‍ಎಸ್ ನೀತಿಗಳೇ ದ್ವಂದ್ವ. ಅದರ ಮುಖ್ಯಸ್ಥರು ಇದರಿಂದ ಹೊರತಲ್ಲ. ನುಡಿದಂತೆ ನಡೆಯದ, ನಡೆದಂತೆ ನುಡಿಯದ ಮನಸ್ಥಿತಿ ಅವರದ್ದು. ಅವರಲ್ಲಿ ನಡೆಗೂ ನುಡಿಗೂ ಸಾಮ್ಯತೆಯನ್ನು ಕಾಣಲು ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಸಂಸ್ಕೃತಿ ವಕ್ತಾರರಂತೆ ಕಂಡರೂ ಆಳದಲ್ಲಿ ಅವರು ಆಗಿಲ್ಲ. ‘ವಸುದೈವಂ ಕುಟುಂಬಕಂ’ ಎಂದು ಉಚ್ಚರಿಸಿದರೂ ಹಾಗೆ ನಡೆಯಲೊಲ್ಲರು. ವಿಭಜಕ ಪ್ರವೃತ್ತಿ, ಅರಾಜಕತೆ ಸೃಷ್ಟಿಸುವುದನ್ನೇ ವೃತ್ತಿ ಪ್ರವೃತ್ತಿಯಾಗಿಸಿಕೊಂಡಿರುವ ಆರ್‌ಎಸ್‍ಎಸ್ ಮುಖಂಡರಿಗೆ ಮಾನವೀಯತೆ ಪರಿಕಲ್ಪನೆಯೇ ಗೊತ್ತಿಲ್ಲ ಎಂದು ಹೇಳಬಹುದು.

ಇಷ್ಟೆಲ್ಲ ಹೇಳಲು ಕಾರಣವಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಆಡಿರುವ ಮಾತುಗಳು ಸುಳ್ಳಿಗೆ ಹಿಡಿದ ಕನ್ನಡಿಯಾಗಿವೆ. ‘ಗುಂಪು ಹತ್ಯೆ’ ಪಾಶ್ಚಿಮಾತ್ಯ ದೇಶದ ಪರಿಕಲ್ಪನೆ. ನಮ್ಮ ನೀತಿಶಾಸ್ತ್ರಗಳಲ್ಲಿ ಇಂತಹ ಗುಂಪುಹತ್ಯೆಗಳಿಗೆ ಅವಕಾಶವಿಲ್ಲ. ಆದರೆ ದೇಶವನ್ನು ಕೆಣಕಲು ಭಾರತೀಯ ಸಂದರ್ಭದಲ್ಲಿ ಇದನ್ನು ಬಳಸಬಾರದು. ಗುಂಪುಹತ್ಯೆ ಪ್ರತ್ಯೇಕ ಧಾರ್ಮಿಕ ಪಠ್ಯದಿಂದ ಬಂದಿದೆ. ಅದನ್ನು ಭಾರತೀಯರ ಮೇಲೆ ಹೇರಬಾರದು’ ಎಂದು ಹೇಳಿದ್ದಾರೆ. ಅಂದರೆ ದೇಶದಲ್ಲಿ ಗುಂಪು ಹತ್ಯೆ ನಡೆಯುತ್ತಿರುವಾಗ ಬಂದ ಇಂತಹ ಮಾತುಗಳು ಹಸಿ ಸುಳ್ಳನ್ನೇ ವಿಜೃಂಭಿಸಿದೆ.

ಬ್ರಾಹ್ಮಣರ ಮಾತನ್ನು ಕೇಳಿಯೇ ರಾಮ ವಾಲಿಯನ್ನು ಕೊಂದಿದ್ದು, ಶಂಭೂಕನನ್ನು ಹತ್ಯೆಗೈದಿದ್ದು. ರಾವಣನ ಮೇಲೆ ಯುದ್ದ ಸಾರಿದ್ದು, ಅಣ್ಣತಮ್ಮಂದಿರಲ್ಲಿ ದ್ವೇಷವನ್ನು ಹುಟ್ಟು ಹಾಕಿದ್ದು, ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲ ಕೃಷ್ಣ ಹತ್ತು ಅವತಾರಗಳನ್ನು ಎತ್ತಿದ್ದು, ಎಲ್ಲಿ ಭೂಸುರರಾದ ಬ್ರಾಹ್ಮಣರಿಗೆ ಅಡ್ಡಿಯಾದಾಗ ಮಾತ್ರ ಧರ್ಮಕ್ಕೆ ಚ್ಯುತಿ ಬಂತು. ಇಂತಹ ಸಂದರ್ಭಗಳಲ್ಲಿ ಬಹುಜನರ ನಂಬಿಕೆಗಳಿಗೆ ಬೆಲೆ ಕೊಡಲೇ ಇಲ್ಲ. ಇಂತಹದ್ದೇ ಮಾತುಗಳ ಮೋಹನ್ ಭಾಗವತ್ ಅವರಿಂದ ಬರುತ್ತವೆ. ಆರ್‌ಎಸ್‍ಎಸ್ ಹಿಡೆನ್ ಅಜೆಂಡಾಗಳಿಗೆ ಪ್ರತಿರೋಧ ಕೇಳಿಬಂದಾಗ ಇದು ನಮ್ಮದಲ್ಲ ಎಂಬ ಸಂಸ್ಕೃತಿ ಅವರಿಗೆ ನೆನಪಾಗುತ್ತದೆ. ದೇಶದಲ್ಲಿ ಮುಸ್ಲಿಮರು, ದಲಿತರು ಮತ್ತು ಕೆಳ ಜಾತಿಗಳ ಜನರ ಹತ್ಯೆಗಳಿಗೆ ಶ್ರೇಷ್ಟತೆಯ ಲಕ್ಷಣಗಳೇ ಕಾರಣವಾಗಿದ್ದರೂ ಅವನ್ನು ಸುತಾರಾಂ ಒಪ್ಪಲು ಭಾಗವತ್ ಸಿದ್ದರಿಲ್ಲ.

ಆರ್‌ಎಸ್‍ಎಸ್ ಮೂಲ ಬೀಜವೇ ಒಡಕಿನದು. ಮುಸ್ಲಿಮರು, ಕಮ್ಯುನಿಸ್ಟರು ಮತ್ತು ಪ್ರಗತಿಪರರನ್ನು ಮುಗಿಸುವುದೇ ಹಿಂದುತ್ವದ ಉದ್ದೇಶ. ಅಖಂಡರಾಷ್ಟ್ರದ ಪರಿಕಲ್ಪನೆಯಲ್ಲಿ ಈ ಮೂರು ವರ್ಗದ ಜನ ಹಿಂದೂತ್ವದ ಅಡಿಯಾಳಾಗಿರಬೇಕು ಎಂಬುದೇ ಆಗಿದೆ. ಪಾಶ್ಚಿಮಾತ್ಯರನ್ನು ಅನುಕರಣೆ ಮಾಡಿ ನಮ್ಮ ಸಂಸ್ಕೃತಿ ಹಾಳಾಗಿದೆ ಎಂದು ಬಿಂಬಿಸುವುದರ ಭಾಗವೇ ಇದಾಗಿದೆ. ಇಂಗ್ಲೀಷ್ ಕಲಿಯದಿದ್ದರೆ, ಇಲ್ಲಿಗೆ ಆಧುನಿಕತೆ ಕಾಲಿಡದೇ ಇದ್ದರೆ ಮೂಲನಿವಾಸಿಗಳು ಹಿಂದೂತ್ವವಾದಿಗಳ ಗುಲಾಮರಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

ಇಲ್ಲಿಯೇ ಹುಟ್ಟಿದ ಬೌದ್ಧಧರ್ಮವನ್ನು ಸಹಿಸದ ಆರ್‌‌ಎಸ್‍ಎಸ್ ಅದರ ಮೂಲೋತ್ಪಾಟನೆಗೆ ಶಪಥ ಮಾಡಿತು. ಅದರ ಮುಂದುವರಿದ ರೂಪ ಮುಸ್ಲಿಮರು ಮತ್ತು ದಲಿತರ ಮೇಲಿನ ದಾಳಿಯಾಗಿದೆ. ಇದರಿಂದ ಬೇಸತ್ತ ದಲಿತರು ಅನಿವಾರ್ಯವಾಗಿ ಬೌದ್ಧ ಧಮ್ಮ ಅನುಸರಿಸುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯಂಥ ಮಹನೀಯರ ಮಾರ್ಗದಲ್ಲಿ ನಡೆಯುತ್ತಿರುವ ಮೂಲನಿವಾಸಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಹುದ್ದೆಗಳನ್ನು ಹಿಡಿದಿದ್ದಾರೆ. ಇದನ್ನು ಸಹಿಸಲು ಭಾಗವತ್‍ಗೆ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಮೋಹನ್ ಭಾಗವತ್ ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಲಿಷ್ಠ ಭಾರತವಾಗಲು ಬಿಡುತ್ತಿಲ್ಲ. ಗುಂಪು ಹತ್ಯೆಯಂತಹ ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ’ ಎಂದು ಹಸೀ ಸುಳ್ಳು ಹೇಳುತ್ತಾರೆ.

ಹಿಂದೂಗಳೆಲ್ಲ ಒಂದು ಎಂದು ಹೇಳುತ್ತಲೇ ವರ್ಣಾಶ್ರಮ ವ್ಯವಸ್ಥೆಯನ್ನು ಮುಂದುವರಿಸುತ್ತಾ, ಜಾತಿ ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರ್‌ಎಸ್‍ಎಸ್ ಅಧಿಕಾರ ಹಿಡಿದು ಈ ದೇಶದ ಜನರನ್ನು ಗುಲಾಮರನ್ನಾಗಿಸಿಕೊಳ್ಳಲು ಸುಳ್ಳುಗಳ ಜಾಲವನ್ನು ಹೆಣೆಯುತ್ತಿದೆ. ಇದನ್ನು ನಂಬುತ್ತಿರುವ ಯುವ ಸಮೂಹ ಗುಂಪು ಹಲ್ಲೆ, ಗುಂಪು ಹತ್ಯೆಯಲ್ಲಿ ತೊಡಗಿದೆ. ಬಲಪಂಥೀಯ ಸಂಘಟನೆಗಳ ಜನರೇ ನೇರವಾಗಿ ಗುಂಪು ಹತ್ಯೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಮೇಲಿನ ಆರೋಪ ತೊಡೆದುಕೊಳ್ಳಲು ಆರ್‌ಎಸ್‍ಎಸ್ ಗುಂಪು ಹತ್ಯೆಗಳಿಗೆ ಪ್ರೇರಣೆ ಪಾಶ್ಚಿಮಾತ್ಯರದ್ದು ಎಂದು ಹೇಳುತ್ತಿದೆ. ಇದನ್ನು ಮೂರ್ಖರು ನಂಬುಬೇಕು ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...