Homeಮುಖಪುಟಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

- Advertisement -
- Advertisement -

’ಒಂದು ಸಾಹಿತ್ಯ ಕೃತಿ ಕೊಡುವ ಅನುಭೂತಿ, ಒಳನೋಟ ಮತ್ತು ತಿಳಿವಳಿಕೆಯನ್ನು ಸಿನಿಮಾ ಕೂಡ ಕೊಡಬೇಕು… ಇದನ್ನು ನಾನು ನನ್ನ ಸಿನಿಮಾಗಳಲ್ಲಿ ಸಾಧಿಸಲು ಪ್ರಯತ್ನಿಸುತ್ತೇನೆ’ – ಇವು ಇವತ್ತಿಗೆ ವಿಷ್ಯುವಲ್ ಮಾಸ್ಟರ್ ಎಂದು ಗುರುತಿಸುವ ಟರ್ಕಿಯ ಪ್ರಸಿದ್ಧ ಸಿನಿಮಾ ನಿರ್ದೇಶಕ ನೂರಿ ಬಿಲ್ಗೆ ಸೆಲಾನ್‌ನ ಮಾತುಗಳು. ಸಿನಿಮಾ ಸಾಹಿತ್ಯಕ್ಕಿಂತ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿದೆ ಎಂದು ಚರ್ಚಿಸುವಾಗಲೆ ಈ ಮಾತನ್ನು ಬಿಲ್ಗೆ ಹೇಳುತ್ತಾನೆ. ಸಾಹಿತ್ಯ ಸಿನಿಮಾಗೆ ಮುತ್ತಜ್ಜ ಆಗಿರುವುದರಿಂದ, ಸಾಹಿತ್ಯ ಕೃತಿಗಳನ್ನು ಆಧರಿಸಿ ಹಲವಾರು ಸಿನಿಮಾಗಳು ಬಂದಿವೆ. ಆದರೆ ಸುಮಾರು ಸಂದರ್ಭದಲ್ಲಿ ಆ ಕೃತಿ ಕೊಟ್ಟ ಅನುಭೂತಿಯನ್ನ ಸಿನಿಮಾ ಕೊಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ಕೃತಿಯ ಆಶಯವನ್ನ ಸಿನಿಮಾ ದಾರಿ ತಪ್ಪಿಸಿರುವುದೂ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಹಿತ್ಯ ಕೃತಿಯನ್ನು ದೃಶ್ಯಕ್ಕೆ ಅಳವಡಿಸುವಾಗ ಮಾಡಿಕೊಳ್ಳಬೇಕಾದ ಬದಲಾವಣೆಗಳೆ ಹಲವರಿಗೆ ಸವಾಲಿನ ಕೆಲಸವಾಗಿರುತ್ತದೆ. ಜಗತ್ತಿನಾದ್ಯಂತ ದೊಡ್ಡ ಮಟ್ಟದ ಓದುಗರನ್ನು ಹೊಂದಿರುವ ಜಪಾನಿ ಸಾಹಿತಿ ಹರುಕಿ ಮುರಾಕಮಿಯ ಸಣ್ಣ ಕಥೆ ‘Drive My Car’ ಆಧರಿಸಿ ಅದೇ ಹೆಸರಿನಲ್ಲಿ ಬಂದ ಈ ಸಿನಿಮಾ, ಒಂದು ಸಾಹಿತ್ಯ ಕೃತಿ ವ್ಯಕ್ತಪಡಿಸುವ ಆಶಯಕ್ಕೆ ಎಳ್ಳಷ್ಟು ಧಕ್ಕೆ ಬರದ ಹಾಗೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬಂತೆ ದೃಶ್ಯರೂಪಕ್ಕೆ ಅಳವಡಿಸಿರುವುದಕ್ಕೆ ಬಹಳ ಒಳ್ಳೆಯ ಉದಾಹರಣೆ. ಉತ್ತಮ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಜಾನಿ ಕ್ಯಾಂಪಿಯನ್‌ಳ ’ದ ಪವರ್ ಆಫ್ ದ ಡಾಗ್’ ಕೂಡ ಮತ್ತೊಂದು ಉದಾಹರಣೆ. (ಇದು ಥಾಮಸ್ ಸಾವೆಜ್ ಬರೆದ ಇದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ)

ಡ್ರೈವ್ ಮೈ ಕಾರ್ ಸಿನಿಮಾ ಬಿಡುಗಡೆಗೊಂಡ ದಿನದಿಂದ ಹಿಡಿದು ನಿನ್ನೆಯ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದವರೆಗೂ ಇದರ ಕುರಿತು ಪ್ರಶಂಸೆಯ ಮಾತುಗಳು ಬರುತ್ತಲೇ ಇವೆ. ಕಾನ್‌ನಿಂದ ಆಸ್ಕರ್‌ವರೆಗೂ ಈ ಸಿನಿಮಾ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಒಂದು ಯಶಸ್ವಿ ಸಿನಿಮಾ ಜೊತೆ ಅದಕ್ಕೆ ಪ್ರೇರಣೆಯಾದ ಸಾಹಿತ್ಯ ಕೃತಿ ಮತ್ತು ಅದರ ಕರ್ತೃ ಸಿನಿಮಾದಷ್ಟೆ ಚರ್ಚೆ ಆಗುವುದು ಬಹಳ ಅಪರೂಪ. ಡ್ರೈವ್ ಮೈ ಕಾರ್ ಸಿನಿಮಾ ಇದಕ್ಕೆ ಕೊಂಚ ಅಪವಾದ. ಈ ಮೊದಲು ಮುರಾಕಮಿಯ ಕತೆ ಮತ್ತು ಕಾದಂಬರಿಗಳನ್ನು ಆಧಾರವಾಗಿಟ್ಟುಕೊಂಡು ಬಹಳಷ್ಟು ಸಿನಿಮಾಗಳು ಬಂದಿವೆ. 2017ರಲ್ಲಿ ತೆರೆಕಂಡ ಲೀ ಚಾಂಗ್ ಡಾಂಗ್ ನಿರ್ದೇಶನದ ’ಬರ್ನಿಂಗ್’ ಸಿನಿಮಾ ಹೊರತುಪಡಿಸಿ ಇನ್ಯಾವ ಸಿನಿಮಾಗಳಿಗೂ ಇಷ್ಟು ಚರ್ಚೆ ಆಗಲಿಲ್ಲ ಮತ್ತು ಮನ್ನಣೆಯೂ ಸಿಗಲಿಲ್ಲ. ಬರ್ನಿಂಗ್ ಸಿನಿಮಾ ಚರ್ಚೆ ಸಂದರ್ಭದಲ್ಲೂ ಮುರಾಕಮಿ ಹೆಸರು ಮತ್ತು ಅವನ ಕೃತಿಗಳ ಬಗ್ಗೆ ಚರ್ಚೆ ಆಗಿದ್ದು ಅಷ್ಟಾಗಿ ಇಲ್ಲ. ಡ್ರೈವ್ ಮೈ ಕಾರ್ ಸಿನಿಮಾ, ಸಂಬಂಧಿಸಿದಂತೆ ಮಾತ್ರ ಏಕೆ ಮುರಾಕಮಿಯ ಬಗ್ಗೆ ಇಷ್ಟು ಪ್ರಸ್ತಾಪ, ಚರ್ಚೆಯೆಲ್ಲಾ ಆಗುತ್ತಿದೆ ಎಂದು ಯೋಚಿಸುವಾಗ ನನಗೆ ಅನಿಸಿದ್ದು: ಡ್ರೈವ್ ಮೈ ಕಾರ್ ’ಮೆನ್ ವಿಥೌಟ್ ವುಮೆನ್’ ಕಥಾ ಸಂಕಲನದಲ್ಲಿರುವ ಕೆಲವೆ ಪುಟಗಳ ಒಂದು ಸಣ್ಣ ಕಥೆ. ನಿರ್ದೇಶಕ ರಿಸುಕೆ ಹಮಿಗುಚಿ ಈ ಕಥೆಯನ್ನ ಯಾವ ಪರಿಯಲ್ಲಿ ವಿಸ್ತರಿಸಿಕೊಂಡಿದ್ದಾನೆ ಅಂದರೆ, ಮುರಾಕಮಿಯ ಇತರೆ ಕಥೆಯಲ್ಲಿನ ಹಲವಾರು ಸಂಗತಿಗಳು ಈ ಸಿನಿಮಾದಲ್ಲಿ ಸಾವಯವವಾಗಿ ಮೇಳೈಸಿ ಬಂದಿವೆ. ಮುರಾಕಮಿ ತನ್ನ ಕಥೆಗಳಲ್ಲಿ ಹೇಳಲು ಬಯಸುವ ಅಲೋಚನೆಯ ಸಾರವನ್ನ ಹಮಿಗುಚಿ ಪ್ರೇಕ್ಷಕನಿಗೆ ದಾಟಿಸಿದ್ದಾನೆ. ಕೇವಲ ಒಂದು ಕಥೆಯಲ್ಲಿನ ಘಟನೆ ಮತ್ತು ಸಂಗತಿಯನ್ನು ಹೇಳುವುದು ಮಾತ್ರವಲ್ಲ ಕೃತಿಕಾರನ ಹಲವು ಕೃತಿಗಳ ಮೂಲ ಅಲೋಚನೆಯನ್ನೇ ಪ್ರೇಕ್ಷಕನಿಗೆ ದಾಟಿಸಿದ್ದಾನೆ ಅನಿಸುತ್ತದೆ.

ಡ್ರೈವ್ ಮೈ ಕಾರ್

ಮನುಷ್ಯ ಮನುಷ್ಯನ ನಡುವೆ ಸಂಬಂಧ ಬೆಸೆಯುವುದಾಗಲಿ, ಮನುಷ್ಯ ತನ್ನ ಮುರಿದ ಬದುಕನ್ನು ಮರು ಕಟ್ಟಿಕೊಳ್ಳುವುದಾಗಲಿ- ಅದು ಯಾವ ಕಾಲಕ್ಕೂ ಮನುಷ್ಯ ಸಹಜ ಸ್ಪಂದನೆ ಮತ್ತು ಮಾನವೀಯತೆಯಿಂದ ಮಾತ್ರ ಸಾಧ್ಯ ಅನಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಮತ್ತು ಆ ಹಂತಕ್ಕೆ ತಲುಪುವ ಪ್ರಯಾಣ ಭಿನ್ನವಾಗಿರುತ್ತದೆ ಅಷ್ಟೆ. ಆಧುನಿಕ ಮತ್ತು ನಗರೀಕರಣ ಸಮಾಜದ ಸಂಕೀರ್ಣ ವ್ಯವಸ್ಥೆಯಲ್ಲಿ ಬದುಕು ಅನಿಶ್ಚಿತವಾಗಿದೆ. ಮನುಷ್ಯ ಮನುಷ್ಯನ ನಡುವೆ ಅಂತರ ಹೆಚ್ಚಾಗಿದೆ. ಮನುಷ್ಯ ತನ್ನ ಸಾಮುದಾಯಿಕ ಬದುಕಿನಿಂದ ವಿಮುಖನಾಗಿದ್ದಾನೆ. ಒಮ್ಮೆ ಬಿರುಕುಗೊಂಡ ಬದುಕನ್ನು ಮತ್ತೆ ಕೂಡಿಸಿಕೊಂಡು ಹೊಸ ಚೇತನದೊಂದಿಗೆ ಪರಸ್ಪರ ಗೌರವಗಳೊಂದಿಗೆ ಮರುಕಟ್ಟಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಬಹಳ ಸಂಕೀರ್ಣವಾದ ಈ ಆಧುನಿಕ ಸಮಾಜ ಮತ್ತು ವ್ಯವಸ್ಥೆಯೊಳಗೆ ಮನುಷ್ಯ ತನ್ನನ್ನು ತಾನು ಮರು ಮೌಲ್ಯಮಾಪನ ಮಾಡಿಕೊಳ್ಳುವ, ಪರಸ್ಪರ ಗೌರವಗಳೊಂದಿಗೆ, ಮಾನವೀಯತೆಯ ಮುಖಾಂತರ ತಮ್ಮ ಬದುಕುಗಳನ್ನು ಗಟ್ಟಿಗೊಳಿಸಿಕೊಳ್ಳುವ ಆಳದ ಆಶಯ ಡ್ರೈವ್ ಮೈ ಕಾರ್ ಸಿನಿಮಾದು.

ಈ ಸಿನಿಮಾದಲ್ಲಿ ಎರಡು ಪ್ರಧಾನ ಪಾತ್ರಗಳಾದ ಕಫುಕ ಮತ್ತು ವಟಾರಿ – ಈ ಇಬ್ಬರ ನಡುವೆ ಬೆಳೆಯುವ ಒಂದು ವಿಶೇಷವಾದ ಸಂಬಂಧದ ಪ್ರಯಾಣವಾಗಲಿ, ಸಿನಿಮಾದೊಳಗೆ ಬರುವ ಆಂಟೊನ್ ಚೆಕಾವ್ ರಚಿತ ’ಅಂಕಲ್’ ವನ್ಯ ನಾಟಕದ ಸಂಗತಿ ಮತ್ತು ಪಾತ್ರಗಳಾಗಲಿ, ಮೇಲೆ ಚರ್ಚಿಸಿದ ಆಶಯದ ಪೂರಕವಾಗಿಯೇ ಅಭಿವ್ಯಕ್ತಿಗೊಂಡಿದೆ. ಇದು ದೇಶ ಭಾಷೆಗಳ ಗಡಿಗಳನ್ನು ಮೀರಿದ್ದು. ಅದಕ್ಕಾಗಿಯೇ ಈ ಸಿನಿಮಾದಲ್ಲಿ ಬರುವ ’ಅಂಕಲ್’ ವನ್ಯ ನಾಟಕದಲ್ಲಿ, ಪಾತ್ರಗಳ ದೇಶ ಭಾಷೆ ಭಿನ್ನವಾಗಿದೆ. ನಾಟಕದ ಸಂಭಾಷಣೆಯನ್ನು ಆ ಪಾತ್ರಗಳು ತಮ್ಮದೇ ಭಾಷೆಯಲ್ಲಿ ಪ್ರಸ್ತುತಪಡಿಸುತ್ತವೆ.

ಡ್ರೈವ್ ಮೈ ಕಾರ್ ಕಥೆಯಲ್ಲಿನ, ಬಹಳ ಪ್ರಬುದ್ಧ ಮತ್ತು ಅಷ್ಟೇ ನಿರ್ಲಿಪ್ತವಾಗಿರುವ ವಟಾರಿಯಳ ಪಾತ್ರ ಮತ್ತು ಕಾರ್ ಡ್ರೈವಿಂಗ್‌ನಲ್ಲಿ ಅವಳಿಗಿರುವ ಕೌಶಲ್ಯದ ವಿವರಗಳನ್ನು ಹಮಿಗುಚಿ ದೃಶ್ಯಗಳಲ್ಲಿ ಹೇಗೆ ಕಟ್ಟಿಕೊಟ್ಟಿರಬಹುದೆಂಬುದರ ಬಗ್ಗೆ ತುಂಬಾ ಕುತೂಹಲವಿತ್ತು. ಬಹಳ ಸಶಕ್ತವಾಗಿ ಈ ಪಾತ್ರ ಮೂಡಿಬಂದಿದೆ. ಈ ಪಾತ್ರದಲ್ಲಿ ಟೊಕೊ ಮಿಉರಿ ಬಹಳ ಅದ್ಭುತವಾಗಿ ನಟಿಸಿದ್ದಾಳೆ.

ನಿರ್ದೇಶಕ ರಿಸುಕೆ ಹಮಿಗುಚಿ

ಹಮಿಗುಚಿ ಜಪಾನ್ ದೇಶದ ಹೊಸ ತಲೆಮಾರಿನ ಸಿನಿಮಾ ನಿರ್ದೇಶಕ. ಸಾಕಷ್ಟು ಕಿರು ಚಿತ್ರ ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಹಮಿಗುಚಿ ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘Asako I & II’ 2018ರಲ್ಲಿ ತೆರೆಕಂಡಿತು. ಇದು ಕಾನ್ ಚಿತ್ರೋತ್ಸವದಲ್ಲಿ ಪಡೆದ ಮನ್ನಣೆ ಒಳಗೊಂಡಂತೆ ಜಾಗತಿಕವಾಗಿ ಹೆಸರು ತಂದುಕೊಟ್ಟಿತು. 2021ರಲ್ಲಿ ತೆರೆಕಂಡ Wheel of Fortune and Fantacy ಕೂಡ ಹಮಿಗುಚಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿತು. ಮುರಾಕಮಿ ಕಥೆಯನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಕಥೆಗೆ ಒಗ್ಗಿಸಿ ಅದನ್ನು ಇನ್ನೊಂದು ಹಂತಕ್ಕೆ ದಾಟಿಸಿ ದೃಶ್ಯದಲ್ಲಿ ಕಟ್ಟಿರುವ ಹಮಿಗುಚಿಯ ಸಾಮರ್ಥ್ಯ ಮತ್ತು ದೃಶ್ಯ ಮಾಧ್ಯಮದ ಸಾಧ್ಯತೆ ಕುರಿತ ಅವನಿಗಿರುವ ಅರಿವು ಮಾತ್ರ ಅಸಾಧ್ಯವೆಂಬಂತೆ ಕಾಣುತ್ತದೆ. ಹಮಿಗುಚಿಗೆ ತನ್ನದೇ ಆದ ಒಂದು ಶೈಲಿ ಇದೆ.

ರಿಸುಕೆ ಹಮಿಗುಚಿ

2020ರಲ್ಲಿ ದಕ್ಷಿಣ ಕೊರಿಯಾದ ನಿರ್ದೇಶಕ ಬಾಂಗ್ ಜೂನ್-ಹೊನ ’ಪ್ಯಾರಸೈಟ್’ ಸಿನಿಮಾ ಆಸ್ಕರ್ ಪ್ರಶಸ್ತಿಯ ಸಂಪ್ರದಾಯವನ್ನ ಮುರಿದು, ಮೊದಲ ಬಾರಿಗೆ ನಾನ್-ಇಂಗ್ಲಿಷ್ ಸಿನಿಮಾವೊಂದು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದೇ ಇತಿಹಾಸವನ್ನು ಹಮಿಗುಚಿಯ ಡ್ರೈವ್ ಮೈ ಕಾರ್ ಕೂಡ ಮುಂದುವರೆಸುತ್ತದೆ ಎಂಬ ದಟ್ಟವಾದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಕಾನ್‌ನಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈಗಾಗಲೆ ಮೂರು ಪ್ರಶಸ್ತಿಗಳನ್ನು ಪಡೆದಿದ್ದ ಈ ಸಿನಿಮಾ ಆಸ್ಕರ್‌ನಲ್ಲೂ ನಾಲ್ಕು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಕೊನೆಗೆ ಪ್ರಶಸ್ತಿ ದಕ್ಕಿದ್ದು ಮಾತ್ರ ’ಉತ್ತಮ ವಿದೇಶಿ ಚಿತ್ರ’ ಎಂಬ ಒಂದೇ ಒಂದು ಕೆಟಗರಿಯಲ್ಲಿ. ಕನಿಷ್ಟ Best Screenplay Adaptation ವಿಭಾಗದಲ್ಲಾದರೂ ಮತ್ತೊಂದು ಪ್ರಶಸ್ತಿ ಸಿಗಬೇಕಾಗಿತ್ತು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನೂ ಓದಿ: ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...