ಇಂದು 17ನೇ ಪ್ರವಾಸಿ ದಿನದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಇಂಧೋರ್ಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಹೂಡಿಕೆದಾರರ ಶೃಂಗಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಪಾದಚಾರಿ ಮಾರ್ಗಗಳಿಗೆ ತ್ರಿವರ್ಣ ಬಣ್ಣ ಬಳಿದಿರುವ, ಒಣ ಹುಲ್ಲಿಗೆ ಹಸಿರು ಬಣ್ಣ ಬಳಿಯುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಾರ್ಯಕ್ರಮ ನಡೆಸುವ ಸ್ಥಳದ ಗೋಡೆಗಳಿಗೆ ಹೊಸದಾಗಿ ಸುಣ್ಣ ಬಣ್ಣ ಬಳಿಯಲಾಗಿದೆ. ಅಲ್ಲದೆ ಒಣಗಿಹೋದ ನೆಲ ಹುಲ್ಲಿನ ರಾಶಿಗೆ ಹಸಿರು ಬಣ್ಣ ಬಳಿಯುವ ಮೂಲಕ ‘ಪ್ರೆಶ್’ ಎಂದು ತೋರಿಸಲು ಕಾರ್ಮಿಕರು ಪರದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಐಡಿಯಾ ಕೊಟ್ಟವರು ಯಾರು? ಒಂದು ವೇಳೆ ಹಸುಗಳೇನಾದರು ನಿಜ ಹುಲ್ಲು ಎಂದು ತಿಂದುಬಿಟ್ಟರೆ ಗತಿಯೇನು ಎಂಬ ಟೀಕೆಗಳು ವ್ಯಕ್ತವಾಗಿವೆ.
Grass is for cows…
The greening of Indore just before the Pravasi Bharatiya Diwas and investor summit. What an endearing environmental initiative!! The beating heart of Incredible India…other cities will go green with envy :))#MadhyaPradesh pic.twitter.com/2Wg6V4p0HK
— Sunil Menon (@kazhugan) January 7, 2023
ಮತ್ತೊಂದು ವೈರಲ್ ವಿಡಿಯೋದಲ್ಲಿ ರಸ್ತೆಯ ಪಾದಚಾರಿ ರಸ್ತೆಗಳಿಗೆ ಭಾರತದ ತ್ರಿವರ್ಣ ಬಣ್ಣವನ್ನು ಬಳಿಯಲಾಗಿದೆ. ಆ ಬಣ್ಣದ ಮೇಲೆ ಜನರು ಓಡಾಡುವುದರಿಂದ ಭಾರತದ ಧ್ವಜಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ತೆಲಂಗಾಣ ರಾಜ್ಯದ ಸಚಿವ ಯತೀಶ್ ರೆಡ್ಡಿ ಆ ವಿಡಿಯೋವನ್ನು ಟ್ವೀಟ್ ಮಾಡಿ, ಇದು ದೇಶಕ್ಕೆ ಮಾಡಿದ ಅವಮಾನವಲ್ಲವೇ ಎಂದು ಪ್ರಶ್ನಿಸಿದ್ದಾರೆ.
Pavement is painted with tricolor to welcome the PM!
Is this not an insult? pic.twitter.com/PaBp6bFrDl
— YSR (@ysathishreddy) January 8, 2023
ಇದನ್ನೂ ಓದಿ; ನಾನು ಹಿಂದೂ, ಆದರೆ ಹಿಂದುತ್ವ ರಾಜಕೀಯವನ್ನು ವಿರೋಧಿಸುತ್ತೇನೆ; ಸಿದ್ದರಾಮಯ್ಯ