ಪ್ರಧಾನಿ ಮೋದಿ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ? ಎಂದು ಜನರು ಪ್ರಶ್ನಿಸುತ್ತಿರುವುದಾಗಿ ರಾಹುಲ್ ಗಾಂಧಿ ಜೊತೆ ಪ್ರಸ್ತುತ ಮಣಿಪುರದಲ್ಲಿರುವ, ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ತೆರಳಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ರಾಹುಲ್ ಗಾಂಧಿ ಮಣಿಪುರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು. ಮಣಿಪುರಕ್ಕೆ ಬಂದು ಜನರನ್ನು ಭೇಟಿಯಾಗುವಂತೆ ಪ್ರಧಾನಿಯನ್ನು ಒತ್ತಾಯಿಸಬೇಕೆಂದು ಜನರು ಬಯಸಿದ್ದಾರೆ. ಇಲ್ಲಿ ನೆರೆದಿದ್ದ ಜನ ಸಂಖ್ಯೆಯನ್ನು ನೀವು ನೋಡಿರಬಹುದು. ಶಾಲೆ, ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗದವರು ಮತ್ತು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಕುಂದುಕೊರತೆಗಳನ್ನು ರಾಹುಲ್ ಗಾಂಧಿ ಆಲಿಸಿದ್ದಾರೆ ಎಂದಿದ್ದಾರೆ.
#WATCH | During the second day of Congress's Bharat Jodo Nyay Yatra, Congress General Secretary in-charge Communications, Jairam Ramesh says, "People are asking us why PM Modi has not visited Manipur? Everyone wants Rahul Gandhi to raise this issue in the parliament and ask PM… pic.twitter.com/9dfqMhzlE5
— ANI (@ANI) January 15, 2024
ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ಬಲಿಷ್ಠ ಸರ್ಕಾರದ ಅವಶ್ಯಕತೆಯಿದೆ. ಕಳೆದ ಎಂಟು ತಿಂಗಳಿನಿಂದ ಇಲ್ಲಿ ಆಡಳಿತದ ಕೊರತೆ ಉಂಟಾಗಿದೆ. ಇಬ್ಬರು ಮಂತ್ರಿಗಳು ರಹಸ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಣಿಪುರದಲ್ಲಿ ಇಲ್ಲ. ಮಣಿಪುರದ ಜನರು ಸಹಾನುಭೂತಿ ಮತ್ತು ಶಕ್ತಿಯುತವಾದ ಸರ್ಕಾರವನ್ನು ಬಯಸುತ್ತಿದ್ದಾರೆ. ನಿಮ್ಮ ಪಕ್ಷ (ಬಿಜೆಪಿ) ಮಣಿಪುರದಲ್ಲಿ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿದೆ. ನೀವು(ಬಿಜೆಪಿಯವರು) ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತೀರಿ. ಹಾಗಾದರೆ ಇಲ್ಲಿನ ಜನರು ಯಾಕೆ ನರಳ್ತಿದ್ದಾರೆ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಜನವರಿ 14ರಂದು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಮಣಿಪುರದಲ್ಲಿ ಚಾಲನೆ ನೀಡಲಾಗಿದ್ದು, 110 ಜಿಲ್ಲೆಗಳ ಮೂಲಕ 67 ದಿನಗಳಲ್ಲಿ 6,700 ಕಿಲೋಮೀಟರ್ ದೂರವನ್ನು ಈ ಯಾತ್ರೆ ಕ್ರಮಿಸಲಿದೆ. ಕಾಂಗ್ರೆಸ್ನ ಘಟಾನುಘಟಿ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ನ್ಯಾಯ ಯಾತ್ರೆ Day-2: ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಬಯಸುತ್ತೇನೆ; ಜನರ ಜೊತೆ ರಾಹುಲ್ ಗಾಂಧಿ ಸಂವಾದ