ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವು ಸುಳ್ಳು ಹೇಳುವುದರಲ್ಲಿ ಪರಿಣಿತರು ಎಂದು ಕಾಂಗ್ರೆಸ್ ಕಿಡಿಕಾರಿದೆ.
”ಭಾರತದ ಗಡಿಯಲ್ಲಿ ಚೀನಾದ ಅತಿಕ್ರಮಣ ಮುಂದುವರಿದಿದೆ, ಚೀನಾದ ವಿಚಾರದಲ್ಲಿ ದೇಶದ ಜನರು ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತಾರೆ. ಆ ಪ್ರಶ್ನೆಗಳಿಗೆ ಅವುಗಳಿಗೆ ಉತ್ತರಿಸಿ” ಎಂದು ಕಾಂಗ್ರೆಸ್ 10 ಪ್ರಶ್ನೆಗಳನ್ನೊಳಗೊಂಡ ಟ್ವೀಟ್ ಮಾಡಿದೆ.
PM मोदी और उनकी सरकार एक चीज में माहिर है- झूठ बोलने में।
चीन की भारतीय सीमा में घुसपैठ लगातार जारी है, चीन के मुद्दे पर देश के आपसे कुछ सवाल हैं – जवाब दीजिए।
1. चीनी अतिक्रमण पर आप चुप क्यों हैं, PM मोदी ने चीन को क्लीन चिट क्यों दी?
2. लद्दाख में अप्रैल 2020 वाली यथास्थिति…— Congress (@INCIndia) August 7, 2023
1. ಚೀನಾದ ಅತಿಕ್ರಮಣದ ಬಗ್ಗೆ ಏಕೆ ಮೌನವಾಗಿರುವಿರಿ, ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದು ಏಕೆ?
2. ಲಡಾಖ್ನಲ್ಲಿ 2020ರ ಏಪ್ರಿಲ್ನಲ್ಲಿದ್ದ ಯಥಾಸ್ಥಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ?
3. ಗಸ್ತು ಕೇಂದ್ರಗಳು ಬಫರ್ ವಲಯಗಳಾಗಿ ಯಾಕೆ ಮಾರ್ಪಟ್ಟವು?
4. ಚೀನಾ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಬಗ್ಗೆ ಮೋದಿ ಸರಕಾರ ಮೌನವಾಗಿರುವುದೇಕೆ?
5. ಚೀನಾದ ರೈಲು ಮಾರ್ಗವನ್ನು ಹಾಕುವುದರಿಂದ ದೇಶಕ್ಕೆ ಏನು ಅಪಾಯ?
6. ಚೀನಾವು ಭಾರತದ ಅಧಿಕೃತ ಪ್ರದೇಶವನ್ನು ಎಷ್ಟು ಪ್ರವೇಶಿಸಿದೆ?
7. ಪಿಎಂ ಕೇರ್ ಫಂಡ್ಗೆ ಚೀನಾದ ಯಾವ ಕಂಪನಿ ಎಷ್ಟು ಹಣವನ್ನು ನೀಡಿದೆ?
8. ಪ್ರಧಾನಿ ಮೋದಿ 18 ಬಾರಿ ಚೀನಾ ನಾಯಕರನ್ನು ಭೇಟಿ ಮಾಡಿದ್ದು ಏಕೆ, ಅದರ ಪರಿಣಾಮಗಳು ಏನು?
9. ಬಿಜೆಪಿ ನಾಯಕರು ಯಾವ ತರಬೇತಿಗಾಗಿ ಚೀನಾಕ್ಕೆ ಹೋಗುತ್ತಾರೆ?
10. ಚೀನಾದೊಂದಿಗಿನ ದೇಶದ ವ್ಯಾಪಾರ ಕೊರತೆಯು $100 ಬಿಲಿಯನ್ ಏಕೆ ದಾಟಿದೆ?
ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆ ರದ್ದು: ಇಂದಿನಿಂದ ಕಲಾಪದಲ್ಲಿ ಭಾಗಿ